Connect with us

National - International

ರಾಜ್ಯದ ಮಾವು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸುವಂತೆ ಮಾಜಿ ಪ್ರಧಾನಿ ಎಚ್‌ಡಿಡಿ ಪ್ರಧಾನಿ ಮೋದಿಗೆ ಪತ್ರ

Published

on

ನವದೆಹಲಿ: ಕರ್ನಾಟಕ ರಾಜ್ಯದಲ್ಲಿ ಮಾವು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುವಂತೆ ಆಗ್ರಹಿಸಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಬೆಲೆ ಕೊರತೆ ಪಾವತಿ ಯೋಜನೆ ಮತ್ತು ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ ಅಡಿಯಲ್ಲಿ ರಾಜ್ಯದ ಮಾವು ಸಂಗ್ರಹಿಸಲು ಕೇಂದ್ರ ಸರ್ಕಾರವೂ ನಾಫೆಡ್‌ಗೆ ಸೂಚಿಸಬೇಕೆಂದು ಮನವಿ ಮಾಡಿದ್ದಾರೆ.

ರೈತರಿಂದ ನೇರ ಖರೀದಿ ಅಥವಾ ರೈತ ಉತ್ಪಾದನಾ ಸಂಸ್ಥೆಗಳಿಂದ ನೇರವಾಗಿ ಖರೀದಿಸುವುದರಿಂದ ನ್ಯಾಯಯುತ ಬೆಲೆಗಳನ್ನು ಖಚಿತಪಡಿಸಿಕೊಳ್ಳುವ ಮೂಲಕ ರೈತರಿಗೆ ಬೆಂಬಲ ನೀಡಿದಂತಾಗುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪತ್ರದಲ್ಲಿ ಏನಿದೆ?

Continue Reading

National - International

ಫಿಫಾ ವಿಶ್ವಕಪ್ 2026: ಪ್ರಿ-ಕ್ವಾರ್ಟರ್ ಫೈನಲ್ ಆರಂಭ; ಕ್ವಾರ್ಟರ್ ಫೈನಲ್‌ಗೆ 16 ತಂಡಗಳ ಹೋರಾಟ ತೀವ್ರ

Published

on

ನವದೆಹಲಿ: ಫಿಫಾ ವಿಶ್ವಕಪ್ 2026 ಟೂರ್ನಿಯ ರೌಂಡ್ ಆಫ್ 32 ಪಂದ್ಯಗಳು ಅಂತ್ಯಗೊಂಡಿದ್ದು, ಗೆಲುವು ಸಾಧಿಸಿದ 16 ತಂಡಗಳು ಇದೀಗ ಪ್ರಿ-ಕ್ವಾರ್ಟರ್ ಫೈನಲ್ (ರೌಂಡ್ ಆಫ್ 16) ಹಂತಕ್ಕೆ ಪ್ರವೇಶಿಸಿವೆ. ಜುಲೈ 4ರಿಂದ ಜುಲೈ 8ರವರೆಗೆ ನಡೆಯಲಿರುವ ಈ ನಾಕೌಟ್ ಪಂದ್ಯಗಳಲ್ಲಿ ಗೆಲ್ಲುವ ಎಂಟು ತಂಡಗಳು ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆಯಲಿವೆ.

ಈ ಬಾರಿಯ ವಿಶ್ವಕಪ್‌ನಲ್ಲಿ ಆತಿಥೇಯ ರಾಷ್ಟ್ರಗಳಾದ ಅಮೆರಿಕ, ಮೆಕ್ಸಿಕೋ ಮತ್ತು ಕೆನಡಾ ಮೂರು ತಂಡಗಳೂ ಪ್ರಿ-ಕ್ವಾರ್ಟರ್ ಫೈನಲ್‌ಗೆ ತಲುಪಿ ಗಮನ ಸೆಳೆದಿವೆ. ಹಾಲಿ ಚಾಂಪಿಯನ್ ಅರ್ಜೆಂಟೀನಾ, ಬ್ರೆಜಿಲ್, ಫ್ರಾನ್ಸ್, ಇಂಗ್ಲೆಂಡ್, ಸ್ಪೇನ್ ಮತ್ತು ಪೋರ್ಚುಗಲ್ ಸೇರಿದಂತೆ ಬಲಿಷ್ಠ ತಂಡಗಳು ಕೂಡ ಮುಂದಿನ ಹಂತದಲ್ಲಿ ಸೆಣಸಲಿವೆ.

ಇನ್ನೊಂದೆಡೆ, ಜರ್ಮನಿ ಮತ್ತು ನೆದರ್ಲ್ಯಾಂಡ್ಸ್‌ನಂತಹ ಬಲಿಷ್ಠ ತಂಡಗಳು ರೌಂಡ್ ಆಫ್ 32ರಲ್ಲೇ ಸೋತು ಟೂರ್ನಿಯಿಂದ ನಿರ್ಗಮಿಸಿರುವುದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

ಪ್ರಿ-ಕ್ವಾರ್ಟರ್ ಫೈನಲ್ ವೇಳಾಪಟ್ಟಿ (IST)

  • ಜುಲೈ 4: ಕೆನಡಾ vs ಮೊರಾಕೊ – ರಾತ್ರಿ 10:30
  • ಜುಲೈ 5: ಪರಾಗ್ವೆ vs ಫ್ರಾನ್ಸ್ – ಬೆಳಗಿನ ಜಾವ 2:30
  • ಜುಲೈ 6: ಬ್ರೆಜಿಲ್ vs ನಾರ್ವೆ – ಬೆಳಗಿನ ಜಾವ 1:30
  • ಜುಲೈ 6: ಮೆಕ್ಸಿಕೋ vs ಇಂಗ್ಲೆಂಡ್ – ಬೆಳಗಿನ ಜಾವ 5:30
  • ಜುಲೈ 7: ಪೋರ್ಚುಗಲ್ vs ಸ್ಪೇನ್ – ರಾತ್ರಿ 12:30
  • ಜುಲೈ 7: ಅಮೆರಿಕ vs ಬೆಲ್ಜಿಯಂ – ಬೆಳಗಿನ ಜಾವ 5:30
  • ಜುಲೈ 7: ಅರ್ಜೆಂಟೀನಾ vs ಈಜಿಪ್ಟ್ – ರಾತ್ರಿ 9:30
  • ಜುಲೈ 8: ಸ್ವಿಟ್ಜರ್ಲೆಂಡ್ vs ಕೊಲಂಬಿಯಾ – ಬೆಳಗಿನ ಜಾವ 1:30

ನಾಕೌಟ್ ಹಂತದ ನಿಯಮಗಳು

ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಡ್ರಾಗೆ ಅವಕಾಶವಿಲ್ಲ. ನಿಗದಿತ 90 ನಿಮಿಷಗಳಲ್ಲಿ ಫಲಿತಾಂಶ ಹೊರಬರದಿದ್ದರೆ 30 ನಿಮಿಷಗಳ ಹೆಚ್ಚುವರಿ ಸಮಯ ನೀಡಲಾಗುತ್ತದೆ. ಹೆಚ್ಚುವರಿ ಸಮಯದಲ್ಲೂ ಸಮಬಲ ಮುಂದುವರಿದರೆ ಪೆನಾಲ್ಟಿ ಶೂಟೌಟ್ ಮೂಲಕ ವಿಜೇತರನ್ನು ನಿರ್ಧರಿಸಲಾಗುತ್ತದೆ.

48 ತಂಡಗಳೊಂದಿಗೆ ಆರಂಭವಾದ ವಿಶ್ವಕಪ್‌ನಲ್ಲಿ ಇದೀಗ ಕೇವಲ 16 ತಂಡಗಳು ಉಳಿದಿದ್ದು, ಚಾಂಪಿಯನ್ ಪಟ್ಟಕ್ಕಾಗಿ ಜಿದ್ದಾಜಿದ್ದಿನ ಪೈಪೋಟಿ ಆರಂಭವಾಗಿದೆ. ಈ ಬಾರಿಯ ವಿಶ್ವಕಪ್ ಟ್ರೋಫಿ ಯಾರ ಪಾಲಾಗಲಿದೆ ಎಂಬುದು ಜುಲೈ 19ರಂದು ನಡೆಯಲಿರುವ ಫೈನಲ್ ಪಂದ್ಯದ ಬಳಿಕ ತಿಳಿಯಲಿದೆ.

Continue Reading

National - International

ವಿಶ್ವಕಪ್ ಬಳಿಕ ನಿವೃತ್ತಿ: ಸಹೋದರಿ ಹೇಳಿಕೆ ನಿರಾಕರಿಸಿದ ಕ್ರಿಸ್ಟಿಯಾನೊ ರೊನಾಲ್ಡೋ

Published

on

ನ್ಯೂಯಾರ್ಕ್: ಈ ಬಾರಿಯ ಫಿಫಾ ವಿಶ್ವಕಪ್ ರೊನಾಲ್ಡೋಗೆ ಕೊನೆಯ ಟೂರ್ನಿಯಾಗಬಹುದು ಎಂದಿದ್ದ ಸಹೋದರಿ ಕಟಿಯಾ ಅವೆರೋ ಹೇಳಿಕೆಯನ್ನು ಪೋರ್ಚುಗಲ್‌ನ ಸ್ಟಾರ್ ಫುಟ್‌ಬಾಲರ್ ಕ್ರಿಸ್ಟಿಯಾನೊ ರೊನಾಲ್ಡೋ ನಿರಾಕರಿಸಿದ್ದಾರೆ.

ಪೋರ್ಚುಗಲ್ ಮಾಧ್ಯಮವೊಂದರ ಜೊತೆ ಮಾತನಾಡಿದ್ದ ರೊನಾಲ್ಡೊ ಸಹೋದರಿ ಕಟಿಯಾ ಅವೇರೋ, ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ ಇದು ರೊನಾಲ್ಡೊ ಅವರ ಕೊನೆಯ ಟೂರ್ನಿ. ಹಾಗಾಗಿ ಅವರು ಮೈದಾನದಲ್ಲಿ ಆಡುತ್ತಿರುವುದನ್ನು ನಾವೆಲ್ಲರೂ ಸಂಭ್ರಮಿಸಬೇಕು ಎಂದು ಹೇಳಿದ್ದರು. ಇದೀಗ ಅವರ ಹೇಳಿಕೆ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ರೊನಾಲ್ಡೊ, ನಿವೃತ್ತಿಯ ವದಂತಿಗಳಿಗೆ ಸ್ವತಃ ತೆರೆ ಎಳೆದಿದ್ದಾರೆ.

“ಯಾವುದೇ ಕಾರಣಕ್ಕೂ ಆತುರದಲ್ಲಿ ನಿವೃತ್ತಿಯ ನಿರ್ಧಾರ ಕೈಗೊಳ್ಳುವುದಿಲ್ಲ. ವಿಶ್ವಕಪ್‌ನಲ್ಲಿ ಗೆಲುವು ಅಥವಾ ಸೋಲು ಏನೇ ಆದರೂ, ಅದರ ಬಳಿಕ ನಿವೃತ್ತಿಯ ಬಗ್ಗೆ ಯೋಚಿಸಲು ಸಾಕಷ್ಟು ಸಮಯವಿದೆ. ನನ್ನ ಕುಟುಂಬದ ಸದಸ್ಯರ ಜೊತೆ ಚರ್ಚಿಸಿದ ಬಳಿಕವಷ್ಟೇ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ” ಎಂದು ತಿಳಿಸಿದ್ದಾರೆ.

Continue Reading

National - International

‘ಸಿಎಂ ವಿಜಯ್ ಸರ್ಕಾರ 5 ವರ್ಷ ಉಳಿಯಲ್ಲ; 3-6 ತಿಂಗಳಲ್ಲಿ ಪತನವಾಗುತ್ತೆ’- ಎಂ.ಕೆ ಸ್ಟಾಲಿನ್ ಭವಿಷ್ಯ

Published

on

ಚೆನ್ನೈ: ಸಿಎಂ ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ 5 ವರ್ಷಗಳ ವರೆಗೆ ಉಳಿಯುವುದಿಲ್ಲ. 3 ರಿಂದ 6 ತಿಂಗಳಲ್ಲಿ ಪತನವಾಗುತ್ತದೆ ಎಂದು ಮಾಜಿ ಸಿಎಂ ಹಾಗೂ ಡಿಎಂಕೆ ಪಕ್ಷದ ಅಧ್ಯಕ್ಷ ಎಂ.ಕೆ ಸ್ಟಾಲಿನ್ ಭವಿಷ್ಯ ನುಡಿದಿದ್ದಾರೆ.

ಪ್ರಸ್ತುತ ರಾಜಕೀಯ ಬೆಳವಣಿಗೆ ಕುರಿತು ಡಿಎಂಕೆ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, “ವಿಜಯ್ ಅವರ ಸರ್ಕಾರ ಮೈತ್ರಿ ಪಕ್ಷಗಳ ಬೆಂಬಲದಿಂದಷ್ಟೇ ಬದುಕುಳಿದಿದೆ. ಈ ಸರ್ಕಾರ 5 ವರ್ಷ ಪೂರ್ಣಗೊಳ್ಳುವುದಿಲ್ಲ. ವಿಜಯ್ ಅವದ್ದು ಅಲ್ಪಸಂಖ್ಯಾತ ಸರ್ಕಾರವಾಗಿದ್ದು, ಮುಂದಿನ 3 ರಿಂದ 6 ತಿಂಗಳ ಒಳಗೆ ಪತನಗೊಳ್ಳಬಹುದು” ಎಂದಿದ್ದಾರೆ.

“ಆಡಳಿತಾರೂಢ ಟಿವಿಕೆ ಸ್ವತಂತ್ರವಾಗಿ ಆಡಳಿತ ನಡೆಸಲು ಪೂರ್ಣ ಜನಾದೇಶ ಹೊಂದಿಲ್ಲ. ಅಗತ್ಯ 118 ಬಹುಮತದ ಪೈಕಿ 108 ಸ್ಥಾನಗಳನ್ನ ಮಾತ್ರ ಗಳಿಸಿದೆ. ಈ ಚುನಾವಣೆಯಲ್ಲಿ ಜನ ಡಿಎಂಕೆ ಸರ್ಕಾರ ರಚಿಸಬೇಕೆಂದೇ ಮತ ಚಲಾಯಿಸಿದ್ದರು. ಆದ್ರೆ ನಮ್ಮ ಮೈತ್ರಿಕೂಟದ ಭಾಗವಾಗಿದ್ದ ಕೆಲ ಪಕ್ಷಗಳ ತಂತ್ರ ಹಾಗೂ ಅವರ ಜೊತೆಗಿನ ಹೊಂದಾಣಿಕೆಯಿಂದ ಟಿವಿಕೆ ಸರ್ಕಾರ ಜೀವಂತವಾಗಿದೆ” ಎಂದು ತಿಳಿಸಿದ್ದಾರೆ.

“ಇದೊಂದು ಅಲುಗಾಡುವ ಸೆಟಪ್, ಈ ವಾಹನ ಯಾವ ಜಂಕ್ಷನ್ ಅಥವಾ ತಿರುವಿನಲ್ಲಿ ತನ್ನ ಸಮತೋಲನ ಕಳೆದುಕೊಂಡು ಹಠಾತ್ ಸ್ಥಗಿತಗೊಳ್ಳುತ್ತೋ ಗೊತ್ತಿಲ್ಲ. ಆದ್ದರಿಂದ ಚುನಾವಣೆಗಳು ಯಾವುದೇ ಸಮಯದಲ್ಲಿ ಬರಬಹುದು. 5 ವರ್ಷಗಳ ಕಾಲ ಕಾಯುವ ಅಗತ್ಯವಿಲ್ಲ” ಎಂದು ಹೇಳಿದ್ದಾರೆ.

Continue Reading

Trending

error: Content is protected !!