Connect with us

Chamarajanagar

ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ ಚುನಾವಣೆ

Published

on

ಯಳಂದೂರು ಜನವರಿ 20

ಯಳಂದೂರು ತಾಲ್ಲೂಕಿನ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ ಗೆ ಆಡಳಿತ ಮಂಡಳಿಯ ಸದಸ್ಯರ ಆಯ್ಕೆಗೆ ಇಂದು ಚುನಾವಣೆ ನಡೆಯಿತು…

ಒಟ್ಟು ಹದಿನೈದು ಸ್ಥಾನಗಳು ಇದ್ದು ಒಂದು ನಾಮ ನಿರ್ದೇಶನ ಸ್ಥಾನ ಹೊರತು ಪಡಿಸಿ ಹದಿನಾಲ್ಕು ಸ್ಥಾನಗಳಲ್ಲಿ ಏಳು ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ಆಗಿರುತ್ತಾರೆ ಇನ್ನೂಳಿದ ಏಳು ಸ್ಥಾನಗಳಿಗೆ ಜೂನಿಯರ್ ಕಾಲೇಜು ನಲ್ಲಿ ಸಾಲಗಾರರ ಕ್ಷೇತ್ರಕ್ಕೆ ಹದಿಮೂರು ಅಭ್ಯರ್ಥಿಗಳು ಸ್ಪರ್ಧಿಸಿದ್ದು
ಮತ್ತು ಸಾಲಗಾರರಲ್ಲದ ಕ್ಷೇತ್ರಕ್ಕೆ ಆರು ಅಭ್ಯರ್ಥಿಗಳು ಸ್ಪರ್ಧಿಸಿದ್ದು,

ಚುಣಾವಣೆಯಲ್ಲಿ ಸಾಲಗಾರರ ಕ್ಷೇತ್ರಕ್ಕೆ ದಾಸನಹುಂಡಿ ಸತೀಶ್, ಹೊನ್ನೂರು ಹೆಚ್ ಪಿ ಮಲ್ಲಣ್ಣ, ಚಾಮಲಪುರ ರಾಜಶೇಖರ್, ಕೋಮಾರನಪುರ ರಾಜಮ್ಮ,
ವೈ ಕೆ ಮೋಳೆ ಗೌರಮ್ಮ,ಗೌಡಹಳ್ಳಿ ರಶ್ಮಿ ಎಸ್, ಅಭ್ಯರ್ಥಿಗಳು ವಿಜೇತರಾಗಿದ್ದಾರೆ, ಸಾಲಗಾರರಲ್ಲದ ಕ್ಷೇತ್ರಕ್ಕೆ ಹೊನ್ನೂರು ಸಿದ್ದಪ್ಪಸ್ವಾಮಿ ವಿಜೇತರಾಗಿದ್ದರೆ.
ಅವಿರೋಧವಾಗಿ ಅಗರ ಕೆ ಲಿಂಗರಾಜು, ಬನ್ನಿಸಾರಿಗೆ ವಿ ಸೋಮಣ್ಣ, ಯರಗಂಬಳ್ಳಿ ವೃಷವೇಂದ್ರ ಪಿ
ಬೂದಿತಿಟ್ಟು ಸತೀಶ ಜಿ, ಕೆಸ್ತೂರು ಕೆ ಎಂ ಶಿವಣ್ಣ, ಯಳಂದೂರು ವೈ ಎಸ್ ಭೀಮಪ್ಪ, ಮೆಲ್ಲಹಳ್ಳಿ ನಿರಂಜನ್ ಮೂರ್ತಿ ಎಂ ಪಿ ಆಯ್ಕೆಯಾದರು….
ಈ ಸಂದರ್ಭದಲ್ಲಿ ಎನ್ ದಿವಾಕರ್ ದಸನಹುಂಡಿ ಜಿಲ್ಲಾ ಕಾರ್ಯದರ್ಶಿ

ವಿಜೇತರಾದ ಅಭ್ಯರ್ಥಿಗಳಿಗೆ ಸಿಹಿ ಹಂಚಿ ಸಂಭ್ರಮಿಸಿದರು

Continue Reading

Chamarajanagar

ಅಂಜುಮನ್-ಎ-ಇಸ್ಲಾಮಿಯಾ ವಕ್ಫ್ ಸಂಸ್ಥೆಯ ಮಹಾಸಭೆ ಸದಸ್ಯರ ನೊಂದಣಿಗೆ ವೇಳಾಪಟ್ಟಿ ಪ್ರಕಟ

Published

on

ಚಾಮರಾಜನಗರ: ಕೊಳ್ಳೇಗಾಲ ನಗರದ ಅಂಜುಮನ್-ಎ-ಇಸ್ಲಾಮಿಯಾ ವಕ್ಸ್ ಸಂಸ್ಥೆಯ ಮಹಾಸಭೆ (ಜನರಲ್ ಬಾಡಿ) ಸದಸ್ಯರ ನೊಂದಣಿಗಾಗಿ ಅಧಿಸೂಚನೆ ಹೊರಡಿಸಲಾಗಿದ್ದು, ಸದಸ್ಯರ ನೊಂದಣಿ ಅಂತಿಮಗೊಳಿಸುವ ಸಂಬಂಧ ವೇಳಾಪಟ್ಟಿ ಪ್ರಕಟಿಸಲಾಗಿದೆ.

ಮಹಾಸಭೆಯ (ಜನರಲ್ ಬಾಡಿ) ಸದಸ್ಯರ ನೊಂದಣಿ ಅಧಿಸೂಚನೆಯನ್ನು ಡಿಸೆಂಬರ್ 10 ರಂದು ಪ್ರಕಟಿಸಲಾಗಿದೆ. ಸದಸ್ಯರ ನೋಂದಣಿಗಾಗಿ ಅರ್ಜಿಯನ್ನು ನೀಡುವ ಹಾಗೂ ಪಡೆಯುವ ದಿನಾಂಕವನ್ನು ಡಿಸೆಂಬರ್ 15 ರಿಂದ 2026ರ ಜನವರಿ 5ರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಿಗದಿ ಮಾಡಲಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಪಡೆಯುವ ಕಡೆಯ ದಿನಾಂಕ 2026ರ ಜನವರಿ 5 ಆಗಿದೆ. (ಕಡೆಯ ದಿನಾಂಕದಂದು ಅರ್ಜಿಗಳನ್ನು ವಿತರಿಸಲಾಗುವುದಿಲ್ಲ, ಭರ್ತಿ ಮಾಡಿದ ಅರ್ಜಿಯನ್ನು ಸ್ವೀಕೃತಿಗೆ ಮಾತ್ರ ಅವಕಾಶವಿರುತ್ತದೆ).

ಸದಸ್ಯರ ಕರಡು ಪಟ್ಟಿಯನ್ನು 2026ರ ಜನವರಿ 12ರಂದು ಪ್ರಕಟಿಸಲಾಗುತ್ತದೆ. ಸದಸ್ಯರ ಕರಡು ಪಟ್ಟಿಗೆ ಆಕ್ಷೇಪಣೆ ಮತ್ತು ಸಲಹೆಗಳನ್ನು ಜನವರಿ 12 ರಿಂದ 18ರವರೆಗೆ ಸಲ್ಲಿಸಬಹುದಾಗಿದೆ. ಆಕ್ಷೇಪಣೆ ಸಲಹೆಗಳಿದ್ದಲ್ಲಿ ಜನವರಿ 19ರಂದು ಪರಿಶೀಲನೆ ನಡೆಸಲಾಗುತ್ತದೆ. ಸದಸ್ಯರ ಅಂತಿಮ ಪಟ್ಟಿಯನ್ನು ಜನವರಿ 22ರಂದು ಪ್ರಕಟಿಸಲಾಗುವುದು ಎಂದು ಜಿಲ್ಲಾ ವಕ್ಫ್ ಅಧಿಕಾರಿ ಯು. ಆಸೀಫ್ ಖಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

Chamarajanagar

ಡಿ.13ರಂದು ಚಾಮರಾಜನಗರ ಪಟ್ಟಣ ಸೇರಿ ವಿವಿಧೆಡೆ ವಿದ್ಯುತ್ ವ್ಯತ್ಯಯ

Published

on

ಚಾಮರಾಜನಗರ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ಚಾಮರಾಜನಗರ, ಹರದನಹಳ್ಳಿ ಮತ್ತು ಬೇಗೂರು ಉಪವಿಭಾಗಗಳ ವ್ಯಾಪ್ತಿಯಲ್ಲಿ 3ನೇ ತ್ರೈಮಾಸಿಕ ನಿರ್ವಹಣೆ ಕಾಮಗಾರಿಯನ್ನು ಡಿಸೆಂಬರ್ 13 ರಂದು ಹಮ್ಮಿಕೊಂಡಿರುವುದರಿಂದ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಕೋಡಿಮೋಳೆ, ಚಾಮರಾಜನಗರ ಟೌನ್-1, ಜಿಲ್ಲಾಧಿಕಾರಿಗಳ ಕಚೇರಿ, ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣ, ರೈಲ್ವೆ ಬಡಾವಣೆ, ಕೆ.ಹೆಚ್.ಪಿ. ಕಾಲೋನಿ, ಪೊಲೀಸ್ ಕ್ವಾರ್ಟಸ್, ಜೂನಿಯರ್ ಕಾಲೇಜ್, ಗುಂಡ್ಲುಪೇಟೆ ರಸ್ತೆ, ಮಾದಾಪುರ, ದೊಡ್ಡರಾಯಪೇಟೆ, ಮಂಗಲ, ಕಾಗಲವಾಡಿ, ಹರದನಹಳ್ಳಿ, ಬೇಡರಪುರ, ಟಿ.ಕೆ ಮೋಳೆ, ಶಿವಪುರ, ರಾಮಸಮುದ್ರ, ಕರಿನಂಜನಪುರ, ಕೋರ್ಟ್ ರಸ್ತೆ, ಗೂಳಿಪುರ, ಹೊಂಗನೂರು ಹಾಗೂ ಕಬ್ಬಳ್ಳಿ, ಸೋಮಳ್ಳಿ, ಪಡಗೂರು, ಬಲಚವಾಡಿ, ನಿಟ್ರೆ, ಅಗತಗೌಡನಹಳ್ಳಿ ಮತ್ತು ಮೂಡ್ನಾಕೂಡು, ಮುಕ್ಕಡಹಳ್ಳಿ, ಉಡಿಗಾಲ, ಕಲ್ಪುರ, ದೇವಲಾಪುರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಸಾರ್ವಜನಿಕರು ನಿಗಮದ ಜೊತೆ ಸಹಕರಿಸಬೇಕು. ವಿದ್ಯುತ್ ಸಂಬಂಧಿತ ದೂರು ಮತ್ತು ಸಹಾಯಕ್ಕಾಗಿ ಗ್ರಾಹಕರು ಉಚಿತ ದೂ.ಸಂ 1912 ಗೆ ಕರೆ ಮಾಡುವಂತೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

Chamarajanagar

ಡಿ.13ರಂದು ಚಾಮರಾಜನಗರ ಪಟ್ಟಣ ಸೇರಿ ವಿವಿಧೆಡೆ ವಿದ್ಯುತ್ ವ್ಯತ್ಯಯ

Published

on

ಚಾಮರಾಜನಗರ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ಚಾಮರಾಜನಗರ, ಹರದನಹಳ್ಳಿ ಮತ್ತು ಬೇಗೂರು ಉಪವಿಭಾಗಗಳ ವ್ಯಾಪ್ತಿಯಲ್ಲಿ 3ನೇ ತ್ರೈಮಾಸಿಕ ನಿರ್ವಹಣೆ ಕಾಮಗಾರಿಯನ್ನು ಡಿಸೆಂಬರ್ 13 ರಂದು ಹಮ್ಮಿಕೊಂಡಿರುವುದರಿಂದ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಕೋಡಿಮೋಳೆ, ಚಾಮರಾಜನಗರ ಟೌನ್-1, ಜಿಲ್ಲಾಧಿಕಾರಿಗಳ ಕಚೇರಿ, ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣ, ರೈಲ್ವೆ ಬಡಾವಣೆ, ಕೆ.ಹೆಚ್.ಪಿ. ಕಾಲೋನಿ, ಪೊಲೀಸ್ ಕ್ವಾರ್ಟಸ್, ಜೂನಿಯರ್ ಕಾಲೇಜ್, ಗುಂಡ್ಲುಪೇಟೆ ರಸ್ತೆ, ಮಾದಾಪುರ, ದೊಡ್ಡರಾಯಪೇಟೆ, ಮಂಗಲ, ಕಾಗಲವಾಡಿ, ಹರದನಹಳ್ಳಿ, ಬೇಡರಪುರ, ಟಿ.ಕೆ ಮೋಳೆ, ಶಿವಪುರ, ರಾಮಸಮುದ್ರ, ಕರಿನಂಜನಪುರ, ಕೋರ್ಟ್ ರಸ್ತೆ, ಗೂಳಿಪುರ, ಹೊಂಗನೂರು ಹಾಗೂ ಕಬ್ಬಳ್ಳಿ, ಸೋಮಳ್ಳಿ, ಪಡಗೂರು, ಬಲಚವಾಡಿ, ನಿಟ್ರೆ, ಅಗತಗೌಡನಹಳ್ಳಿ ಮತ್ತು ಮೂಡ್ನಾಕೂಡು, ಮುಕ್ಕಡಹಳ್ಳಿ, ಉಡಿಗಾಲ, ಕಲ್ಪುರ, ದೇವಲಾಪುರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಸಾರ್ವಜನಿಕರು ನಿಗಮದ ಜೊತೆ ಸಹಕರಿಸಬೇಕು. ವಿದ್ಯುತ್ ಸಂಬಂಧಿತ ದೂರು ಮತ್ತು ಸಹಾಯಕ್ಕಾಗಿ ಗ್ರಾಹಕರು ಉಚಿತ ದೂ.ಸಂ 1912 ಗೆ ಕರೆ ಮಾಡುವಂತೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

Trending

error: Content is protected !!