Connect with us

Special

ಇದೊಂದು ಕಾರ್ಡ್ ಇದ್ರೆ ಸಾಕು ಸರ್ಕಾರದಿಂದ ಪಡೆಯಬಹುದು 2 ಲಕ್ಷ ರೂ. ಪ್ರಯೋಜನ

Published

on

ನಮ್ಮ ದೇಶದಲ್ಲಿ ಬೇರೆ ಬೇರೆ ಪ್ರದೇಶದಲ್ಲಿ ಬೇರೆ ಬೇರೆ ವರ್ಗದ ಜನ (different kind of people) ವಾಸಿಸುತ್ತಾರೆ. ಅದರಲ್ಲೂ ಬಡತನ ರೇಖೆಗಿಂತ ಕೆಳಗಿರುವವರು ಕಾರ್ಮಿಕರು (workers) ಕೃಷಿ ಕೆಲಸ ಮಾಡುವ ರೈತರು ಹೀಗೆ ಬೇರೆ ಬೇರೆ ವಲಯಗಳಲ್ಲಿ ದುಡಿಯುವ ಜನರು ಇದ್ದಾರೆ

ಇಂಥವರಿಗೆ ಸಾಮಾಜಿಕ ಭದ್ರತೆಯನ್ನು ಕಲ್ಪಿಸಿ ಕೊಡುವ ಸಲುವಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ಕೂಡ ಪರಿಚಯಿಸುತ್ತವೆ.

ಅಸಂಘಟಿತ ವಲಯದ ಕಾರ್ಮಿಕರಿಗೆ ಈ ಅನುಕೂಲ! (Help for unorganised sector workers)

ಕಟ್ಟಡಗಳಲ್ಲಿ ಕೆಲಸ ಮಾಡುವ ಹಾಗೂ ಇತರ ಸಣ್ಣಪುಟ್ಟ ಸ್ವಂತ ಉದ್ಯಮ ಹೊಂದಿರುವಂತಹ ಅಸಂಘಟಿತ ವಲಯದ ಕಾರ್ಮಿಕರಿಗೆ ಅನುಕೂಲವಾಗಲು ಸರ್ಕಾರ ಹಲವು ಕ್ರಮ ಕೈಗೊಂಡಿದೆ.

ಅವುಗಳಲ್ಲಿ ಇ – ಶ್ರಮ್ ಕಾರ್ಡ್ (E-shram Card) ವಿತರಣೆ ಕೂಡ ಒಂದು. ಇದರಿಂದ ದೇಶಾದ್ಯಂತ ಕೋಟ್ಯಾಂತರ ಜನರಿಗೆ ಅನುಕೂಲವಾಗಿದೆ, ಸರಕಾರದ ಯಾವುದೇ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಇದೊಂದು ಕಾರ್ಡ್ ಇದ್ದವರು ಸುಲಭವಾಗಿ ಸರ್ಕಾರದ ಸಹಾಯ ಪಡೆಯಬಹುದಾಗಿದೆ.

ಇ – ಶ್ರಮ್ ಕಾರ್ಡ್ ಬೆನಿಫಿಟ್ಸ್ (E-shram Card benefits)

ದೇಶದಲ್ಲಿ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವವರಿಗಾಗಿ ಸಾಮಾಜಿಕ ಭದ್ರತೆ ಹಾಗೂ ಆರ್ಥಿಕ ನೆರವು ಒದಗಿಸುವ ಸಲುವಾಗಿ 2021 ರಲ್ಲಿ ಕೇಂದ್ರ ಸರ್ಕಾರ ಈ ಯೋಜನೆಯನ್ನು ಆರಂಭಿಸಿತು.

ಇ – ಶ್ರಮ್ ಪೋರ್ಟಲ್ (E- shram web portal) ಆರಂಭವಾಗುತ್ತಿದ್ದ ಹಾಗೆ ಸುಮಾರು 28,60,20,000 ಅಸಂಘಟಿತ ವಲಯದ ಕಾರ್ಮಿಕರು ನೋಂದಣಿ (unorganised sector worker registration) ಮಾಡಿಸಿಕೊಂಡಿದ್ದಾರೆ.

ಈ ಒಂದು ಯೋಜನೆಯ ಮೂಲಕ ಬೀದಿ ವ್ಯಾಪಾರಿಗಳು ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಟ್ಟಡ ಕಾರ್ಮಿಕರು, ವಲಸೆ ಕಾರ್ಮಿಕರು ಕಟ್ಟಡ ನಿರ್ಮಾಣದಲ್ಲಿ ತೊಡಗಿರುವ ಕಾರ್ಮಿಕರು ಹೀಗೆ ಹಲವು ಅಸಂಘಟಿತ ವಲಯದ ಕಾರ್ಮಿಕರು ಪ್ರಯೋಜನ ಪಡೆಯಬಹುದಾಗಿದೆ.

ಇನ್ನು ನಿಮ್ಮ ಬಳಿ ಇದೊಂದು ಇ – ಶ್ರಮ್ ಕಾರ್ಡ್ ಇದ್ರೆ ಸರ್ಕಾರದಿಂದ ಕಾರ್ಮಿಕರಿಗಾಗಿಯೇ ಬಿಡುಗಡೆಯಾಗುವ ಎಲ್ಲಾ ಯೋಜನೆಗಳ ಪ್ರಯೋಜನಗಳು ಕೂಡ ಆದ್ಯತೆಯ ಮೇರೆಗೆ ಮೊದಲಿಗೆ ಲಭ್ಯವಾಗುತ್ತದೆ.

ಉದಾಹರಣೆಗೆ ಪ್ರಧಾನ ಮಂತ್ರಿ ಶ್ರಮಯೋಗಿ ಮನ್ ಧನ್ (pm shramayogi Yogi man dhan scheme) ಯೋಜನೆ, ನ್ಯಾಷನಲ್ ಪೆನ್ಷನ್ ಸ್ಕೀಮ್ ಫಾರ್ ಟ್ರೇಡರ್ಸ್ (National pension scheme for traders), ಡಿಜಿಸಕ್ಷಮ್ (Digisaksham) ಮೊದಲಾದ ಯೋಜನೆಯ ಅಡಿಯಲ್ಲಿ ಸರ್ಕಾರವೇ ಪಿಂಚಣಿ ಸೌಲಭ್ಯವನ್ನು ಕೂಡ ಒದಗಿಸಿಕೊಡುತ್ತದೆ

ಇದಕ್ಕಾಗಿ ಅಸಂಘಟಿತ ವಲಯದ ಕಾರ್ಮಿಕರು ಹೂಡಿಕೆ ಮಾಡಬೇಕಾಗಿರುವ ಮೊತ್ತ ಬಹಳ ಕಡಿಮೆ, ಪ್ರತಿ ತಿಂಗಳು 50 ರಿಂದ ರೂ.100 ಗಳನ್ನು ಹೂಡಿಕೆ ಮಾಡಿದರು ಕೂಡ ನಿವೃತ್ತಿ ಸಮಯದಲ್ಲಿ ಅಂದರೆ 60 ವರ್ಷದ ನಂತರ ಉಚಿತವಾಗಿ 3000 ವರೆಗೆ ಪಿಂಚಣಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

2,00,000 ಆರೋಗ್ಯ ವಿಮೆ! (Health insurance up to 2 lakh)

ಸಾಮಾನ್ಯವಾಗಿ ಆರೋಗ್ಯ ವಿಮೆಯನ್ನು ಯಾರು ಮಾಡಿಸುವುದಿಲ್ಲ, ಅದರಲ್ಲೂ ಅಸಂಘಟಿತ ವಲಯದ ಕಾರ್ಮಿಕರಿಗೆ ಆರೋಗ್ಯ ವಿಮೆ ಮಾಡಿಸಲು ಹಣ ಖರ್ಚು ಮಾಡಲು ಸಾಧ್ಯವಿಲ್ಲ.. ಈ ಹಿನ್ನೆಲೆಯಲ್ಲಿ ಸರ್ಕಾರವೇ ವಿಮಾ ಸೌಲಭ್ಯದ (insurance) ಅಡಿಯಲ್ಲಿ ಅಪಘಾತವಾದರೆ ಹಾಗೂ ಕೃಷಿ ಕಾರ್ಮಿಕರು ಮರಣ ಹೊಂದಿದರೆ ರೂಪಾಯಿ ಎರಡು ಲಕ್ಷದ ವರೆಗೆ ವಿಮಾ ಸೌಲಭ್ಯವನ್ನು ನೀಡುತ್ತದೆ.

ಇ – ಶ್ರಮ್ ನೋಂದಣಿಗೆ ಬೇಕಾಗಿರುವ ಅರ್ಹತೆಗಳು! (Eligibility)

16 ರಿಂದ 59 ವರ್ಷ ವಯಸ್ಸಿನವರು ಅರ್ಜಿ ಸಲ್ಲಿಸಬಹುದು. ಸ್ವಂತ ಉದ್ಯಮ ಮಾಡುವ ಬೀದಿ ವ್ಯಾಪಾರಿಗಳು ಅಸಂಘಟಿತ ವಲಯದ ಕಾರ್ಮಿಕರು ಮಾತ್ರವಲ್ಲದೆ ಇ ಪಿ ಎಫ್ ಓ (EPFO) ಹಾಗೂ ಇ ಎಸ್ ಐ ಸಿ (ESIC) ಇಲ್ಲದ ಸಂಘಟಿತ ಕಾರ್ಮಿಕರು ಕೂಡ ಈ ಯೋಜನೆಯ ಭಾಗವಾಗಬಹುದು.

ಇ – ಶ್ರಮ್ ನೊಂದಣಿ ಮಾಡಿಕೊಳ್ಳುವುದು ಹೇಗೆ? (How to register)

ಇದಕ್ಕಾಗಿ ಸರ್ಕಾರದ ಅಧಿಕೃತ ವೆಬ್ಸೈಟ್ https://register.eshram.gov.in/#/user/self ಮೇಲೆ ಕ್ಲಿಕ್ ಮಾಡಿ ನೋಂದಣಿ ಮಾಡಿಕೊಳ್ಳಲು ಅರ್ಜಿ ಫಾರಂ ತೆರೆದುಕೊಳ್ಳುತ್ತದೆ. ಇಲ್ಲಿ ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.

ಮೊಬೈಲ್ ಗೆ ಒಂದು ಓಟಿಪಿ ಕಳುಹಿಸಲಾಗುತ್ತಿದೆ. ನಮೂದಿಸಿ ವೇರಿಫೈ ಮಾಡಿ ಬಳಿಕ ಕೇಳಿರುವ ಮಾಹಿತಿಗಳು ಭರ್ತಿ ಮಾಡಿ. ನಿಮ್ಮ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ನಿಮಗೆ ಒಂದು UIN ನಂಬರ್ ನೀಡಲಾಗುತ್ತದೆ. ಈ ಐಡಿ ಮೂಲಕ ನೀವು ಸರ್ಕಾರದ ಮೀಸಲಾಗಿರುವ ಪ್ರಯೋಜನ ಪಡೆಯಬಹುದು.

Special

ಫಾಸ್ಟ್ ಫುಡ್ ವಾಹನ ಖರೀದಿಸಲು ಸರ್ಕಾರದಿಂದ ಸಹಾಯಧನಕ್ಕಾಗಿ ಅರ್ಜಿ ಅಹ್ವಾನ: ಅರ್ಜಿ ಸಲ್ಲಿಸುವುದು ಹೇಗೆ?

Published

on


Fast Food Mobile Canteen by Karnataka Government : ಸ್ವಂತ ಉದ್ಯಮ ಆರಂಭಿಸಬೇಕು ಎಂಬ ಕನಸನ್ನು ಇಟ್ಟುಕೊಂಡಿರುವ ಯುವಕ ಯುವತಿಯರಿಗೆ ಸಹಾಯ ಮಾಡಲು ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯಿಂದ ವಿಶೇಷ ಘಟಕ ಯೋಜನೆಯ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಉಚಿತ ತರಬೇತಿಯೊಂದಿಗೆ ಮೊಬೈಲ್ ಕ್ಯಾಂಟೀನ್ ಖರೀದಿಸಲು ಸಬ್ಸಿಡಿ ನೀಡುತ್ತಿದ್ದಾರೆ.

ಕರ್ನಾಟಕ ಸರ್ಕಾರದ ಈ ಯೋಜನೆಗಾಗಿ ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳ ವಿವರ, ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲಾತಿಗಳು ವಿವರ ಹಾಗೂ ಇತರೆ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಇದಕ್ಕಾಗಿ ಇರಬೇಕಾದ ಅರ್ಹತೆಗಳೇನು?

ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಉಚಿತ ತರಬೇತಿ ಹಾಗೂ ಮೊಬೈಲ್ ಕ್ಯಾಂಟೀನ್ ಖರೀದಿಸಲು ಇರುವ ಸಬ್ಸಿಡಿಗಾಗಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು.
* ಕರ್ನಾಟಕ ರಾಜ್ಯದ ಕಾಯಂ ನಿವಾಸಿಯಾಗಿದ್ದು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡ ವರ್ಗದವರಾಗಿರಬೇಕು.
* ಕನಿಷ್ಠ 10ನೇ ತರಗತಿ ಪಾಸ್ ಆಗಿದ್ದು ಅಭ್ಯರ್ಥಿಯು 20 ರಿಂದ 40 ವರ್ಷದ ಒಳಗಿನ ಅಭ್ಯರ್ಥಿಗಳಾಗಿರಬೇಕು.


* ಲಘು ವಾಹನದ ಚಾಲನಾ ಪರವಾನಗಿ ಹೊಂದಿರಬೇಕು.

* ನಗರ ಪ್ರದೇಶದಲ್ಲಿ ವಾಸಿಸುತ್ತಿರುವ ಅಭ್ಯರ್ಥಿಗಳ ಆದಾಯವು 2 ಲಕ್ಷ ರೂಪಾಯಿ ಒಳಗಿರಬೇಕು ಹಾಗೂ ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿರುವ ಅಭ್ಯರ್ಥಿಗಳ ಆದಾಯವು 1.5 ಲಕ್ಷ ರೂ. ಒಳಗಿರಬೇಕು.

ಅರ್ಜಿ ಸಲ್ಲಿಸಲು ಈ ದಾಖಲಾತಿಗಳು ಕಡ್ಡಾಯ :

* ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಆಧಾರ್ ಕಾರ್ಡ್
* ಫೋಟೋ
* ಬ್ಯಾಂಕ್ ಪಾಸ್ ಬುಕ್
* 50ರೂ. ಬಾಂಡ್ ಪೇಪರ್

ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಕೊನೆಯ ದಿನಾಂಕ ಯಾವಾಗ?

ಈ ಯೋಜನೆಗಾಗಿ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಏಪ್ರಿಲ್ 15 ನೇ ತಾರೀಖಿನ ಒಳಗಾಗಿ ಎಲ್ಲ ದಾಖಲಾತಿಗಳೊಂದಿಗೆ ನಿಮ್ಮ ಹತ್ತಿರದ ಪ್ರವಾಸೋದ್ಯಮ ಇಲಾಖೆ ಕಚೇರಿಗೆ ಭೇಟಿ ನೀಡಿ ಅರ್ಜಿ ನಮೂನೆ ಪಡೆದು ಅರ್ಜಿ ಸಲ್ಲಿಸಬೇಕು.

Continue Reading

Special

ರಾಜ್ಯದ ನರ್ಸಿಂಗ್ ವಿದ್ಯಾರ್ಥಿಗಳಿಗಾಗಿ ಸರ್ಕಾರದಿಂದ ಹೊಸ ಯೋಜನೆ : ವಿದೇಶದಲ್ಲಿ ಉದ್ಯೋಗ ಮಾಡುವ ಅವಕಾಶ

Published

on

Jobs in Foreign for Karnataka Nursing Students :
ಕರ್ನಾಟಕ ರಾಜ್ಯದ ನರ್ಸಿಂಗ್ ವಿದ್ಯಾರ್ಥಿಗಳಿಗೆ ವಿದೇಶಗಳಲ್ಲಿ ಉದ್ಯೋಗಾವಕಾಶವನ್ನು ಹೆಚ್ಚಿಸುವ ಸಲುವಾಗಿ ಕರ್ನಾಟಕ ಸರ್ಕಾರ ವಿನೂತನ ಪ್ರಯತ್ನವನ್ನು ಜಾರಿಗೆಗೊಳಿಸಲು ಸಿದ್ದವಾಗಿದೆ.

ಹಾಗಿದ್ದರೆ ಯಾವುದು ಈ ಯೋಜನೆ? ಇದರ ಲಾಭಗಳೇನು? ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವರಾದಂತಹ ಡಾ. ಶರಣಪ್ರಕಾಶ್‌ ಪಾಟೀಲ್‌ ರವರು ತಿಳಿಸಿರುವ ಪ್ರಕಾರ, ಕರ್ನಾಟಕ ರಾಜ್ಯದ ನರ್ಸಿಂಗ್ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದಲ್ಲಿ ಉದ್ಯೋಗವಕಾಶಗಳನ್ನು ಹೆಚ್ಚಿಸಲು ಎಲ್ಲಾ ನರ್ಸಿಂಗ್ ಕಾಲೇಜುಗಳಲ್ಲಿ ವಿದೇಶಿ ಭಾಷಾ ಪ್ರಯೋಗಾಲಯಗಳ ಮುಖಾಂತರ ವಿದೇಶಿ ಭಾಷಾ ತರಬೇತಿಯನ್ನು ನೀಡಲು ಮುಂದಾಗಿದೆ.

ಇದರಿಂದ ನರ್ಸಿಂಗ್ ವಿದ್ಯಾರ್ಥಿಗಳಿಗೆ ಆಗುವ ಪ್ರಯೋಜನಗಳೇನು?

ನರ್ಸಿಂಗ್ ಓದುತ್ತಿರುವ ವಿದ್ಯಾರ್ಥಿಗಳ ವಿದೇಶಿ ಭಾಷೆಗಳನ್ನು ಕಲಿಯುವುದರ ಮುಖಾಂತರ ಅವರಿಗೆ ಜಾಗತಿಕ ಮಟ್ಟದಲ್ಲಿ ಉದ್ಯೋಗವಕಾಶಗಳು ಸಿಗುವ ಸಾಧ್ಯತೆ ಹೆಚ್ಚಾಗಲಿದೆ. ಇದರಿಂದ ಇವರಿಗೆ ಸುಲಭವಾಗಿ ಕೆಲಸ ಸಿಗುವುದು.

ಯಾವಾಗ ಆರಂಭವಾಗಲಿದೆ?

ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವರಾದಂತಹ ಡಾ. ಶರಣಪ್ರಕಾಶ್‌ ಪಾಟೀಲ್‌ ಈ ಯೋಜನೆಯನ್ನು ಘೋಷಣೆ ಮಾಡಿದ್ದು, ಶೀಘ್ರದಲ್ಲಿಯೆ ಇದು ಅನುಷ್ಠಾನಕ್ಕೆ ಬರಲಿದ್ದು, ಕಾಯ್ದು ನೋಡಬೇಕಾಗಿದೆ.

Continue Reading

Special

ಆಸ್ತಿ ಮಾಲೀಕರಿಗೆ ಸರ್ಕಾರದಿಂದ ಮನೆ ಬಾಗಿಲಿಗೆ ಬರಲಿದೆ ಉಚಿತ ಖಾತಾ : ಸರ್ಕಾರದಿಂದ ವಿನೂತನ ವ್ಯವಸ್ಥೆ

Published

on

free Katha to at your Doorstep : ಕರ್ನಾಟಕ ರಾಜ್ಯ ಸರ್ಕಾರವು ಕಂದಾಯ ಇಲಾಖೆಯಲ್ಲಿ ಹೊಸದೊಂದು ವಿನೂತನ ವ್ಯವಸ್ಥೆಯನ್ನು ದೇಶದಲ್ಲಿಯೇ ಮೊದಲ ಬಾರಿಗೆ ಜಾರಿ ಮಾಡಿದ್ದು, ಈ ವ್ಯವಸ್ಥೆಯ ಕಾರ್ಯಕ್ರಮವನ್ನು ಡಿ. ಕೆ. ಶಿವಕುಮಾರ್ ಅವರು ಶೀಘ್ರದಲ್ಲಿಯೇ ಚಾಲನೆ ಮಾಡಲಿದ್ದಾರೆ.

ಈ ವ್ಯವಸ್ಥೆ ಸದ್ಯಕ್ಕೆ ಯಾವ ಯಾವ ನಗರಗಳಲ್ಲಿ ಜಾರಿಯಾಗಲಿದೆ? ಇದರ ಅನುಕೂಲಗಳೇನು? ಮನೆ ಬಾಗಿಲಿಗೆ ಪಡೆಯುವುದು ಹೇಗೆ ಎಂಬ ಇತ್ಯಾದಿ ಮಾಹಿತಿ ಇಲ್ಲಿದೆ..

ಯಾವ ಯಾವ ನಗರಗಳಲ್ಲಿ ಹಾಗೂ ಯಾವಾಗಿನಿಂದ ಇದು ಜಾರಿಯಾಗಲಿದೆ?

ಸದ್ಯಕ್ಕೆ ಮನೆ ಬಾಗಿಲಿಗೆ ಉಚಿತ ಇ-ಖಾತೆ ನೀಡುವ ಯೋಜನೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪ್ಲಾನ್ ಮಾಡಿಕೊಂಡಿದ್ದು, ಮನೆ ಮನೆಗೆ ಇ-ಖಾತೆಯನ್ನು ವಿತರಿಸಲಿದೆ. ಇದಕ್ಕಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಇದು ಏಪ್ರಿಲ್ ತಿಂಗಳಿನಿಂದ ಆರಂಭವಾಗಲಿದ್ದು, ಇದು ಭಾರತ ದೇಶದಲ್ಲಿಯೇ ಮೊದಲ ವಿನೂತನ ವ್ಯವಸ್ಥೆ ಎಂಬ ಹೆಗ್ಗಳಿಕೆ ಪಡೆಯಲಿದೆ.

ಈಗಾಗಲೇ ಲಕ್ಷಾಂತರ ಆಸ್ತಿ ದಾಖಲೆಗಳು ಡಿಜಿಟಲೀಕರಣಗೊಂಡಿದ್ದು, ಇದನ್ನು ಪಡೆಯಲು ನಾಗರಿಕರು ಉತ್ಸುಕದಲ್ಲಿದ್ದಾರೆ.

ಅರ್ಜಿ ಸಲ್ಲಿಕೆ ಹೇಗೆ?

ಇ-ಖಾತಾ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ನಂತರ ಇ-ಖಾತಾಗಾಗಿ ಕಾಯಿರಿ ಎಂದು ಬಿಬಿಎಂಪಿ ಕೊರಿಕೊಂಡಿದ್ದು, ಕಚೇರಿಗಳಿಗೆ ಭೇಟಿ ನೀಡಿ ಕಾಯಬೇಡಿ ಎಂದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇದ್ದಲ್ಲಿ ಈ ಕೆಳಗಿನ ಸಹಾಯವಾಣಿಗೆ ಕರೆ ಮಾಡಲು ಸೂಚಿಸಿದೆ.

ಸಹಾಯವಾಣಿ – 9480683695

Continue Reading

Trending

error: Content is protected !!