Connect with us

Special

ಅರಣ್ಯ ರಕ್ಷಣೆಗಾಗಿ ದೂರ ಸಂವೇದಿ ತಂತ್ರಜ್ಞಾನ

Published

on

ಕಾಡ್ಗಿಚ್ಚೆಂಬ ಕೆಂಬೂತವನ್ನು ತಡೆಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯು ದೂರ ಸಂವೇದಿ ತಂತ್ರಜ್ಞಾನವನ್ನು ಮತ್ತೊಷ್ಟು ಅಭಿವೃದ್ಧಿ ಪಡಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಇತ್ತೀಚೆಗೆ ಜಾಗತಿಕ ತಾಪಮಾನದಿಂದಾಗಿ ಹೆಚ್ಚುತ್ತಿರುವ ಕಾಡ್ಗಿಚ್ಚು ಲೆಕ್ಕವಿಲ್ಲದಷ್ಟು ಅರಣ್ಯ ಪ್ರದೇಶವನ್ನು ದಹಿಸುತ್ತಿದೆ. ಕಾಡ್ಗಿಚ್ಚಿಗೆ ಬ್ರೇಕ್ ಹಾಕಲು ಅರಣ್ಯ ಇಲಾಖೆ ಅಗ್ನಿವೀರರನ್ನು ಹಾಗೂ ಡ್ರೋನ್ ಕ್ಯಾಮೆರಾಗಳನ್ನು ಅಳವಡಿಸಿದರೂ ಪ್ರಯೋಜನವಾಗುತ್ತಿಲ್ಲ. ಈ ಸಮಸ್ಯೆಯನ್ನು ಹತೋಟಿಗೆ ತರುವಲ್ಲಿ ದೂರ ಸಂವೇದಿ ತಂತ್ರಜ್ಞಾನವು ಸಹಕಾರಿಯಾಗಲಿದೆ.

2023 ರಲ್ಲಿ ಕೆನಡಾ ದೇಶವು ಅತಿ ಹೆಚ್ಚು ಕಾಡ್ಗಿಚ್ಚಿಗೆ ತುತ್ತಾಗಿರುವ ದೇಶವಾಗಿದೆ. ಸುಮಾರು18 ಮಿಲಿಯನ್ ಹೆಕ್ಟೇರ್ ಪ್ರದೇಶ ನಾಶವಾಗಿದೆ. ಎನ್.ಸಿ.ಇ.ಐ ವರದಿಯ ಅನುಸಾರ 2023 ರ ಸಾಲಿನಲ್ಲಿ ವಿಶ್ವದಾದ್ಯಂತ ಸುಮಾರು 55,571 ಸ್ಥಳಗಳಲ್ಲಿ ಕಾಡ್ಗಿಚ್ಚು ಸಂಭವಿಸಿದ್ದು, ಆ ಪೈಕಿ 2,633,636 ಎಕರೆಯಷ್ಟು ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಇನ್ನೂ ಕರ್ನಾಟಕವೊಂದರಲ್ಲೇ ಸುಮಾರು 3793.13 SQ ಕಿಲೋಮೀಟರ್ ನಷ್ಟು ಅರಣ್ಯ ಪ್ರದೇಶ ನಾಶವಾಗಿದೆ. ಇದರಿಂದ ಸುಮಾರು 2170 ಮೆಗಾಟನ್ ನಷ್ಟು ಇಂಗಾಲ ಹೊರಸುಸುವಿಕೆ ಉಂಟಾಗಿದ್ದು, ಆ ಪೈಕಿ ಶೇ. 22ರಷ್ಟು ಕೆನಡಾದಲ್ಲಿ ಸಂಭವಿಸಿದ ಕಾಡ್ಗಿಚ್ಚಿನಿಂದ ಬಿಡುಗಡೆಯಾಗಿದೆ. ಈ ಹಿಂದೆ ಕಾಡ್ಗಿಚ್ಚು ಸಂಭವಿಸಿದರೆ ಅದು ದುಪ್ಪಟ್ಟಾಗುವವರೆಗೂ ಗಮನಕ್ಕೆ ಬರುತ್ತಿರಲಿಲ್ಲ. ಆದರೆ ದೂರ ಸಂವೇದಿ ತಂತ್ರಜ್ಞಾನದಿಂದಾಗಿ ಅತ್ಯಂತ ವೇಗವಾಗಿ ಉಪಗ್ರಹದ ಮೂಲಕ ಕಾಡ್ಗಿಚ್ಚು ಸಂಭವಿಸಿದ ಸ್ಥಳ ಯಾವುದು ಎಂಬ ಮಾಹಿತಿ ಅರಣ್ಯ ಇಲಾಖೆಗೆ ದೊರೆಯುತ್ತದೆ.

ದೂರ ಸಂವೇದಿ ತಂತ್ರಜ್ಞಾನ ಎಂಬುದು ಉಪಗ್ರಹದ ನೆರವಿನಿಂದ ಮಾಹಿತಿ ನೀಡುವ ತಂತ್ರಜ್ಞಾನವಾಗಿದೆ. ಈ ತಂತ್ರಜ್ಞಾನವು ಹಲವು ವರ್ಷಗಳಿಂದ ಬಳಕೆಯಾಗುತ್ತಿದೆ. ಈ ಹಿಂದೆ ನಾಸಾದಿಂದ ಕಾಡ್ಗಿಚ್ಚಿನ ಮಾಹಿತಿ ಮೊದಲು ಇಸ್ರೋದ ರಾಷ್ಟ್ರೀಯ ದೂರ ಸಂವೇದಿ ಕೇಂದ್ರಕ್ಕೆ ಬಂದು ಅಲ್ಲಿಂದ ಭಾರತೀಯ ಅರಣ್ಯ ಸರ್ವೇಕ್ಷಣಾ ಇಲಾಖೆಗೆ ಬರುತ್ತಿತ್ತು. ನಂತರ ಆಯಾ ರಾಜ್ಯಗಳಿಗೆ ಮಾಹಿತಿ ತಲುಪುತ್ತಿತ್ತು. ಈ ಪ್ರಕಿಯೆ ನಡೆಯಲು ಸಮಯವನ್ನು ತೆಗೆದುಕೊಳ್ಳುತ್ತಿದ್ದರಿಂದ ಶೀಘ್ರವಾಗಿ ಮಾಹಿತಿ ತಿಳಿಯಲು ಕಷ್ಟವಾಗುತ್ತಿತ್ತು. ಆದರೆ ಈಗ ನೇರವಾಗಿ ನಾಸಾದಿಂದ ಇಸ್ರೋದ ಎನ್.ಆರ್.ಎ.ಸಿ ಗೆ ಬಂದ ಮಾಹಿತಿ ಕೆ.ಎಸ್.ಆ.ರ್.ಎಸ್.ಸಿ ಗೆ ಬರುತ್ತದೆ. ನಂತರ ಮಾಹಿತಿ ಶೀಘ್ರವಾಗಿ ಅರಣ್ಯ ಇಲಾಖೆಯ ಸಂಬಂಧಿತ ವಲಯಕ್ಕೆ ರವಾನೆಯಾಗುತ್ತದೆ. ಈ ಮೂಲಕ ತಕ್ಷಣವೇ ಸ್ಪಂದಿಸಿ ಬೆಂಕಿ ನಂದಿಸಲು ಸಾಧ್ಯವಾಗುವ ಮುಖೇನ ಹೆಚ್ಚಿನ ಅರಣ್ಯ ನಾಶವನ್ನು ತಡೆಯುತ್ತದೆ. ಈ ತಂತ್ರಜ್ಞಾನದಲ್ಲಿ ಕಾಡ್ಗಿಚ್ಚಿನ ಅಲರ್ಟ್ ಬಂದ ನಂತರ ಫೀಡ್ ಬ್ಯಾಕ್ ಹಾಕಲು ಅವಕಾಶವಿದೆ. ಅಗ್ನಿಯನ್ನು ನಂದಿಸುತ್ತಿರುವ ಚಿತ್ರಗಳನ್ನು ಸಹ ಅಪ್ಲೋಡ್ ಮಾದುವುದರ ಜೊತೆಗೆ ಅಗ್ನಿ ನಿಯಂತ್ರಣಕ್ಕೆ ಬಂದಿದೆಯೋ ಇಲ್ಲವೋ ಎಂಬ ಮಾಹಿತಿಯು ಲಭ್ಯವಾಗಲಿದೆ ಎಂಬುದು ತಜ್ಞರು ಸ್ಪಷ್ಟಪಡಿಸುತ್ತಾರೆ.

ಈ ತಂತ್ರಜ್ಞಾನದ ಮೂಲಕ ಅರಣ್ಯ ರಕ್ಷಣೆಗೆ ಹೆಚ್ಚಿನ ಸಹಕಾರ ಸಿಗಲಿದ್ದು, ಇದರ ಅಭಿವೃದ್ಧಿ ಕಾರ್ಯ ಶೀಘ್ರವಾಗಿ ನಡೆಯಬೇಕಿದೆ.

Continue Reading
Click to comment

Leave a Reply

Your email address will not be published. Required fields are marked *

Special

14.21 ಲಕ್ಷ ರೈತರಿಗೆ ಬೆಳೆ ಹಾನಿ ಪರಿಹಾರ ವಿತರಣೆ: ರಾಜ್ಯ ಸರ್ಕಾರದ ಮಹತ್ವದ ಘೋಷಣೆ

Published

on

ರಾಜ್ಯದಲ್ಲಿ ಹಲವಾರು ಜಿಲ್ಲೆಗಳಲ್ಲಿ ಸಂಭವಿಸಿದ ಅತಿಯಾದ ಮಳೆ ಬಿರುಗಾಳಿ ಬರ ಪರಿಸ್ಥಿತಿಯಿಂದಾಗಿ ರೈತರು ಎದುರಿಸಿದ ಆರ್ಥಿಕ ನಷ್ಟಕ್ಕೆ ಪರಿಹಾರ ನೀಡಲು ಸರ್ಕಾರ ದೊಡ್ಡ ಮಟ್ಟದ ಕ್ರಮ ಕೈಗೊಂಡಿದೆ. ಕೃಷಿ ಮತ್ತು ಆದಾಯ ನಷ್ಟಕ್ಕೆ ಒಳಗಾದ 14.21 ಲಕ್ಷ ರೈತರಿಗೆ ಪರಿಹಾರ ಮೊತ್ತ ಬಿಡುಗಡೆ ಮಾಡಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಪರಿಹಾರಕ್ಕೆ ಮುಖ್ಯ ಕಾರಣ:
* ಬೆಳೆ ನಾಶ
* ಮಣ್ಣು ಕೊಚ್ಚಿ ಹೋಗುವುದು
* ನೀರಿನ ಕೊರತೆ
* ಅತಿಯಾದ ಮಳೆಯ ಪರಿಣಾಮದ ಹಾವಳಿ
ಇವುಗಳಿಂದ ರೈತರಿಗೆ ದೊಡ್ಡ ಮಟ್ಟದ ಹಾನಿ ಸಂಭವಿಸಿತ್ತು.

ಪರಿಹಾರ ಪಡೆಯಲು ಅರ್ಹರು:
•ಸಂಬಂಧಿತ ತಾಲೂಕಿನಲ್ಲಿ ನೈಜವಾಗಿ ಬೆಳೆ ಹಾನಿ ದೃಢಪಟ್ಟ ರೈತರು
•FRUITS / e-Kshana / Parihara ಪೋರ್ಟ್‌ಲಲ್ಲಿ ನೋಂದಣಿ ಹೊಂದಿರುವವರು
•ಭೂಮಿ ಹೊಂದಿರುವ ರೈತರು

ಸಚಿವರ ಹೇಳಿಕೆ:
ಕಂದಾಯ ಸಚಿವರು ತಿಳಿಸಿದಂತೆ “ರೈತರು ಸಂಕಷ್ಟದಲ್ಲಿರುವಾಗ ಸರ್ಕಾರ ಕೈಕಟ್ಟಿ ಕೂತಿರುವುದಿಲ್ಲ. ಶೀಘ್ರವಾದ ಪರಿಹಾರ ವಿತರಣೆಯ ಮೂಲಕ ಕೃಷಿಕ ಕುಟುಂಬಗಳಿಗೆ ನೆರವಾಗಿ ಅವರ ಜೀವನೋಪಾಯವನ್ನು ಬಲಪಡಿಸುವುದು ನಮ್ಮ ಧ್ಯೇಯ.”

ಯಾವ ದಾಖಲೆಗಳನ್ನು ಪರಿಶೀಲಿಸಲಾಗುವುದು?
•RTC / ಭೂ ಹಕ್ಕಿನ ದಾಖಲೆ
•ಬೆಳೆ ನಾಶದ ಪಂಚನಾಮಾ
•FRUITS ID
•ಬ್ಯಾಂಕ್ ಖಾತೆ ಮಾಹಿತಿಗಳು

ಪರಿಹಾರ ಪಡೆಯಲು ರೈತರು ಏನು ಮಾಡಬೇಕು?
•ರೈತರು ಯಾವುದೇ ಹೊಸ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ.
* ತಮ್ಮ FRUITS ಪೋರ್ಟಲ್ ವಿವರಗಳನ್ನು ಪರಿಶೀಲಿಸಬೇಕು
* ಬ್ಯಾಂಕ್ ಖಾತೆ ಆಧಾರ್–DBT ಲಿಂಕ್ ಇದ್ದರೆ ಹಣ ನೇರವಾಗಿ ಜಮೆಯಾಗುತ್ತದೆ
* ಮೊತ್ತ ಜಮೆಯಾದ ನಂತರ SMS ಮೂಲಕ ಮಾಹಿತಿ ಬರುತ್ತದೆ

ಅಧಿಕೃತ ವೆಬ್‌ಸೈಟ್‌:
•FRUITS ಪೋರ್ಟಲ್:
https://fruits.karnataka.gov.in
•ಕೃಷಿ ಸಂಬಂಧಿತ ಮಾಹಿತಿ: https://raitamitra.karnataka.gov.in

ರಾಜ್ಯ ಸರ್ಕಾರದ ಈ ಹೆಜ್ಜೆ ಬೆಳೆ ನಷ್ಟದಿಂದ ಬೇಸತ್ತುಬಿಟ್ಟ ರೈತರಿಗೆ ಧೈರ್ಯ ತುಂಬುವಂತದ್ದಾಗಿದೆ. ರೈತ ಕುಟುಂಬಗಳು ಸಂಕಷ್ಟದಿಂದ ಹೊರಬರಲು ಇದು ಪ್ರಮುಖ ನೆರವಿನ ಕೈ ಆಗಿದೆ ಎಂದು ಹೇಳಬಹುದು.

Continue Reading

Special

2025-26 ನೇ ಸಾಲಿನ “ಉತ್ತಮ ಸಾವಯವ ಕೃಷಿಕ” ಪ್ರಶಸ್ತಿಗೆ ಅರ್ಜಿ ಆಹ್ವಾನ

Published

on

ಕರ್ನಾಟಕ ಜೀವವೈವಿಧ್ಯ ಮಂಡಳಿ (Karnataka Biodiversity Board) 2025-26ನೇ ಸಾಲಿನ “ಉತ್ತಮ ಜೀವವೈವಿಧ್ಯ / ಸಾವಯವ ಕೃಷಿಕ ಪ್ರಶಸ್ತಿ”ಗಾಗಿ ಅರ್ಜಿ ಆಹ್ವಾನಿಸಿದೆ. ನೈಸರ್ಗಿಕ ಹಾಗೂ ಪರಿಸರ ಸ್ನೇಹಿ ಕೃಷಿಯನ್ನು ಉತ್ತೇಜಿಸಲು, ಮಣ್ಣಿನ ಆರೋಗ್ಯ ಕಾಪಾಡುವ ರೈತರನ್ನು ಸನ್ಮಾನಿಸಲು ಈ ಪ್ರಶಸ್ತಿ ಪ್ರತಿ ವರ್ಷ ನೀಡಲಾಗುತ್ತದೆ.

ಪ್ರಶಸ್ತಿ ಯಾವ ವಿಭಾಗಗಳಲ್ಲಿ ಲಭ್ಯ?
•ಜೀವವೈವಿಧ್ಯ ಸಂರಕ್ಷಣೆ
•ಸಾವಯವ–ಪಾರಂಪರಿಕ ಕೃಷಿ ಪದ್ಧತಿ ಅನುಸರಿಸುವ ಅತ್ಯುತ್ತಮ ರೈತ
•ಅತ್ಯುತ್ತಮ ಜೀವವೈವಿಧ್ಯ ನಿರ್ವಹಣಾ ಸಮಿತಿ
•ಜೀವವೈವಿಧ್ಯ ವಿಷಯದ ಅತ್ಯುತ್ತಮ ಫೋಟೋ/ವೀಡಿಯೊ
•“ವೈದ್ಯ ಶರಣ ಸಂಗಣ್ಣ” ವಿಶೇಷ ಪ್ರಶಸ್ತಿ

ಬಹುಮಾನದ ವಿವರ:
ಪ್ರತಿ ಆಯ್ಕೆಗೊಂಡ ವಿಜೇತರಿಗೆ 50,000 ರೂ. ನಗದು ಬಹುಮಾನ ಹಾಗೂ ಅಧಿಕೃತ ಪ್ರಶಸ್ತಿ ಪ್ರಮಾಣಪತ್ರ

ಅರ್ಹತೆ:
•ಕರ್ನಾಟಕ ರಾಜ್ಯದಲ್ಲಿ ವಾಸಿಸುವ ವೈಯಕ್ತಿಕ ರೈತರು, ಮಹಿಳಾ ರೈತರು, ಸಂಘಗಳು ಮತ್ತು ಸಂಸ್ಥೆಗಳು.
•ಕನಿಷ್ಠ ಮೂರು ವರ್ಷಗಳಿಂದ ಜೈವಿಕ/ಪಾರಂಪರಿಕ ಕೃಷಿ ಪದ್ಧತಿಗಳನ್ನು ಅನುಸರಿಸಿರುವವರು.
•ಸರ್ಕಾರದ ನೌಕರರು, ಇಲಾಖೆಗಳ ಸಿಬ್ಬಂದಿ ಹಾಗೂ ಹಿಂದೆ ಈ ಪ್ರಶಸ್ತಿ ಪಡೆದವರು ಅರ್ಹರಲ್ಲ.

ಅರ್ಜಿ ಸಲ್ಲಿಸುವ ವಿಧಾನ:
•ಅರ್ಜಿ ನಿಗದಿತ ನಮೂನೆಯನ್ನು ವೆಬ್‌ಸೈಟ್‌ ಮೂಲಕ ಡೌನ್‌ಲೋಡ್‌ ಮಾಡಿ ಭರ್ತಿ ಮಾಡಬೇಕು.
•ಎಲ್ಲಾ ದಾಖಲೆಗಳನ್ನು ಸೇರಿಸಿ, ಮುಚ್ಚಿದ ಲಕೋಟೆಯಲ್ಲಿ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು:
[ಕರ್ನಾಟಕ ಜೀವವೈವಿಧ್ಯ ಮಂಡಳಿ,
ನೆಲ ಮಹಡಿ, ವನವಿಕಾಸ ಕಟ್ಟಡ,
18ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು – 560003]

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 31 ಡಿಸೆಂಬರ್ 2025

ಅಧಿಕೃತ ವೆಬ್‌ಸೈಟ್‌: kbb.karnataka.gov.in

ಜೈವಿಕ ಕೃಷಿಯನ್ನು ನಿಷ್ಠೆಯಿಂದ ಅನುಸರಿಸುತ್ತಿರುವವರಿಗೆ ಇದು ದೊಡ್ಡ ಅವಕಾಶ. ಈ ಪ್ರಶಸ್ತಿ ರೈತರ ಕೆಲಸಕ್ಕೆ ಗೌರವ ನೀಡುವುದಷ್ಟೇ ಅಲ್ಲ, ರಾಜ್ಯದಲ್ಲಿ ಪರಿಸರ ಸಂರಕ್ಷಣೆಗೆ ಸಹ ಸಹಕಾರಿಯಾಗುತ್ತದೆ.

Continue Reading

Special

ಮಹಿಳೆಯರಿಗೆ ಸರ್ಕಾರದಿಂದ ಉಚಿತ ಹೊಲಿಗೆ ಯಂತ್ರ: ಇಲ್ಲಿದೆ ಸಂಪೂರ್ಣ ಮಾಹಿತಿ!

Published

on

ಕರ್ನಾಟಕ ಸರ್ಕಾರ ಮಹಿಳೆಯರ ಸ್ವಾವಲಂಬನೆಯನ್ನು ಹೆಚ್ಚಿಸಲು ಮತ್ತು ಮನೆಯಲ್ಲೇ ಆದಾಯ ಸಂಪಾದಿಸಲು ಪ್ರೋತ್ಸಾಹ ನೀಡುವ ಉದ್ದೇಶದಿಂದ ಉಚಿತ ಹೊಲಿಗೆ ಯಂತ್ರ ಯೋಜನೆ ಅನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಬಡ ಮತ್ತು ಅಶಕ್ತ ಮಹಿಳೆಯರಿಗೆ ಹೊಲಿಗೆ ಯಂತ್ರ ನೀಡಲಾಗುತ್ತದೆ, ಇದರಿಂದ ಅವರು ಕೆಲಸ ಮಾಡಿ ಕುಟುಂಬದ ಆರ್ಥಿಕ ಸ್ಥಿತಿಯನ್ನು ಸುಧಾರಿಸಬಹುದು.

ಅರ್ಹತೆ:
•ಕರ್ನಾಟಕ ರಾಜ್ಯದ ನಿವಾಸಿ ಮಹಿಳೆ ಆಗಿರಬೇಕು
•BPL / APL ಬಡಕುಟುಂಬದ ಸದಸ್ಯರಾಗಿರಬೇಕು
•ವಯಸ್ಸು ಸಾಮಾನ್ಯವಾಗಿ 20 ರಿಂದ 45 ವರ್ಷಗಳ ನಡುವೆ
•ಹೊಲಿಗೆ ಕೆಲಸ ಕಲಿಯುವ ಇಚ್ಛೆ ಅಥವಾ ಈಗಾಗಲೇ ಮೂಲಭೂತ ಹೊಲಿಗೆ ಕೌಶಲ್ಯ ಇರಬೇಕು
•ವಿಧವೆ, ವಿಚ್ಛೇದಿತ ಅಥವಾ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಆದ್ಯತೆ

ಅರ್ಜಿಯನ್ನು ಹೇಗೆ ಸಲ್ಲಿಸಬೇಕು?
•ಹತ್ತಿರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (WCD) ಕಚೇರಿಗೆ ಭೇಟಿ.
•ಅಲ್ಲಿ ಲಭ್ಯವಿರುವ ಉಚಿತ ಹೊಲಿಗೆ ಯಂತ್ರ ಅರ್ಜಿ ಫಾರ್ಮ್ ಪಡೆಯಿರಿ
•ನಂತರ ಅಗತ್ಯ ದಾಖಲೆಗಳನ್ನು ಸೇರಿಸಿ ಅರ್ಜಿ ಪೂರ್ಣಗೊಳಿಸಬೇಕು.

ಪ್ರಮುಖ ದಾಖಲೆಗಳು:
•ಆಧಾರ್ ಕಾರ್ಡ್
•ರೇಷನ್ ಕಾರ್ಡ್ (BPL / APL)
•ವಾಸಸ್ಥಳ ಪ್ರಮಾಣ ಪತ್ರ
•ಆದಾಯ ಪ್ರಮಾಣ ಪತ್ರ
•ಪಾಸ್‌ಪೋರ್ಟ್ ಗಾತ್ರದ ಫೋಟೋ
•ಬ್ಯಾಂಕ್ ಖಾತೆ ಪಾಸ್‌ಬುಕ್ ಪ್ರತಿಗೆ
•ಹೊಲಿಗೆ ತರಬೇತಿ ಪಡೆದಿದ್ದರೆ ಅದರ ಪ್ರಮಾಣ ಪತ್ರ (ಐಚ್ಛಿಕ)

ಉಚಿತ ಹೊಲಿಗೆ ಯಂತ್ರ ಯೋಜನೆ ಮಹಿಳೆಯರು ತಮ್ಮ ಕಾಲ ಮೇಲೆ ನಿಲ್ಲಲು, ಸ್ವಂತ ಆದಾಯ ಸಂಪಾದಿಸಲು, ಮತ್ತು ಮನೆದಲ್ಲಿ ಕುಳಿತು ಕೆಲಸ ಮಾಡಲು ಅತ್ಯುತ್ತಮ ಅವಕಾಶ.ಅಗತ್ಯವಿರುವವರು ಇದನ್ನು ಸದುಪಯೋಗಪಡಿಸಿಕೊಳ್ಳಿರಿ.

Continue Reading

Trending

error: Content is protected !!