Connect with us

Politics

ಮೈತ್ರಿ ಘೋಷಣೆ ಬೆನ್ನಲ್ಲೇ ಯೋಗೇಶ್ವರ್ ವಿರುದ್ಧ ಏಕ ವಚನದಲ್ಲಿ ವಾಗ್ದಾಳಿ ನಡೆಸಿದ ಸಂಸದ ಸುರೇಶ್

Published

on

ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ವಿಚಾರದ ಬೆನ್ನಲ್ಲೇ ಸಂಸದ ಡಿ.ಕೆ.ಸುರೇಶ್ , ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ್ ವಿರುದ್ಧ ಏಕ ವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಮಾಕಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಡಿ.ಕೆ.ಸುರೇಶ್,
ವೈಯಕ್ತಿಕ ಲಾಭಕ್ಕೆ ಮೆಡಿಕಲ್ ಕಾಲೇಜು ಸ್ಥಳಾಂತರ‌ ಮಾಡಿಕೊಳ್ಳುತ್ತಿದ್ದಾರೆ ಎಂಬ ಯೋಗೇಶ್ವರ್ ಆರೋಪಕ್ಕೆ ಸಂಸದ ಡಿ.ಕೆ.ಸುರೇಶ್, ಯೋಗೇಶ್ವರ್ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

ಅವನಿಗೆ ಮಾಡುವುದಕ್ಕೆ ಬೇರೆ ಏನೂ ಕೆಲಸ ಇಲ್ಲ.., ಅದಕ್ಕೆ ಹೀಗೆ ಮಾತನಾಡುತ್ತಿದ್ದಾನೆ. ಅವನು ಬಿಡದಿಯಲ್ಲಿ ರಿಯಲ್ ಎಸ್ಟೇಟ್ ಹೆಸರಲ್ಲಿ ಜನರಿಗೆ ಟೋಪಿ ಹಾಕಿದ್ದಾನೆ. ಮೆಗಾ ಸಿಟಿ ಮಾಡುತ್ತೇನೆ ಅಂಥ ಜನಕ್ಕೆ ಟೋಪಿಹಾಕಿದ್ದಾನೆ. ಅದನ್ನ ಮರೆತು ಹೋಗಿದ್ದಾನಾ ಕೇಳಿ? ರಿಯಲ್ ಎಸ್ಟೇಟ್ ದಂಧೆ ಮಾಡಬೇಕಾದ ಅನಿವಾರ್ಯ ನಮಗಿಲ್ಲ.
ಮೆಡಿಕಲ್ ಕಾಲೇಜು ಕನಕಪುರದಲ್ಲೂ ಆಗುತ್ತೆ, ರಾಮನಗರದಲ್ಲೂ ಆಗುತ್ತೆ. ಇವರೆಲ್ಲ ಕೆಲಸ ಇಲ್ಲ ಅಂಥ ಬಂದು ಹೀಗೆ ಗೊಂದಲ ಮಾಡುತ್ತಿದ್ದಾರೆ. ನಮ್ಮ ಜನ
ಇಬ್ಬರನ್ನೂ ಉಗಿದು ಆಚೆ ಇಟ್ಟಿದ್ದಾರೆ ಎಂದು ಯೋಗೇಶ್ವರ್ ಹಾಗೂ ಪರೋಕ್ಷವಾಗಿ ಮಾಗಡಿ ಶಾಸಕ ಎ.ಮಂಜುನಾಥ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ಯಡಿಯೂರಪ್ಪ ಅವರನ್ನ ಇವನು ಬ್ಲಾಕ್ ಮೇಲೆ ಮಾಡಿದ್ದ. ಅದ್ಯಾವುದೋ ಸಿಡಿ ಇಟ್ಟುಕೊಂಡು ಸರ್ಕಾರ ಕಿತ್ತಿದ್ದಾಯಿತು. ಈಗ ಕಾಂಗ್ರೆಸ್ ಸರ್ಕಾರ ತೆಗೆತೀನಿ ಅಂತ ಹೇಳುತ್ತಿದ್ದಾನೆ. ಬರೀ ಸರ್ಕಾರ ಬೀಳಿಸೋ ಕೆಲಸ ಮಾತ್ರಾನ ಈತ ಮಾಡೋದು? ಇವನು ಜನರಿಗೋಸ್ಕರ ಏನು ಮಾಡಿದ್ದಾನೆ. ಯೋಗೇಶ್ವರ್ ನಾಲಗೆ ಬಿಗಿ ಹಿಡಿದುಕೊಳ್ಳಲಿ ಎಂದು ಎಚ್ಚರಿಸಿದರು.

ಈ ಹಿಂದೆ ಸಿಡಿ ಇಟ್ಟುಕೊಂಡು ಎಲ್ಲಾ ಮಠಗಳಿಗೂ ಓಡಾಡುತ್ತಿದ್ದಾನೆ ಅಂಥ ಮಾಧ್ಯಮಗಳಲ್ಲಿ ಬಂದಿತ್ತು.

ಯಡಿಯೂರಪ್ಪ ಸರ್ಕಾರದಲ್ಲಿ ಸಿಡಿ ಇದೆ ಅಂತ ಒಡಾಡುತ್ತಿದ್ದ. ಸಮ್ಮಿಶ್ರ ಸರ್ಕಾರ ಹೋಗಲು ಕಾರಣ ಯಾರು.? ಸರ್ಕಾರ ತೆಗೆದೆ ಅಂಥ, ಬಾಂಬೆ ಬಾಯ್ಸ್ ಸೃಷ್ಟಿ ಮಾಡ್ದೆ ಅಂಥ ಅವನೇ ಹೇಳಿಕೊಂಡಿದ್ದಾನೆ.‌
ನನಗೆ ಮಂತ್ರಿ ಸ್ಥಾನ ಕೊಟ್ಟಿಲ್ಲ ಅಂತ ಹೇಳ್ಕೊಂಡಿದ್ದವರು ಯಾರು? ಮೊದಲು ಅವನ ಹಿನ್ನಲೆ ಬಗ್ಗೆ ಚರ್ಚೆ ಮಾಡಿಕೊಳ್ಳಲಿ.ವಿರೋಧ ಪಕ್ಷದ ಸಲಹೆಗಳನ್ನ ಸಕಾರಾತ್ಮಕವಾಗಿ ಸ್ವೀಕಾರ ಮಾಡುತ್ತೇವೆ. ಆದರೆ, ಬಾಯಿಗೆ ಬಂದಹಾಗೆ ಮಾತನಾಡಿದರೆ ನಾವು ಕೇಳಲ್ಲ ಎಂದು ಯೋಗೇಶ್ವರ್ ಗೆ ವಾರ್ನಿಂಗ್ ನೀಡಿದರು.

Continue Reading
Click to comment

Leave a Reply

Your email address will not be published. Required fields are marked *

Politics

ಉತ್ತರದಲ್ಲಿ ಮೋದಿ ಹವಾ – ದಕ್ಷಿಣದಲ್ಲಿ ರಾಹುಲ್ ಗಾಳಿ.

Published

on

ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ.

3 ರಾಜ್ಯಗಳಲ್ಲಿ ಬಿಜೆಪಿ ತ್ರಿವಿಕ್ರಮ.
ತೆಲಂಗಾಣದಲ್ಲಿ ಕೈ ಹಿಡಿದ ಮತದಾರ.

ಮಧ್ಯ ಪ್ರದೇಶ
ಒಟ್ಟು ಸ್ಥಾನ -230
ಬಿಜೆಪಿ-164
ಕಾಂಗ್ರೆಸ್=64


..
ರಾಜಸ್ಥಾನ
ಒಟ್ಟು ಸ್ಥಾನ -199
ಬಿಜೆಪಿ-112
ಕಾಂಗ್ರೆಸ್ -71


..
ಛತ್ತೀಸ್ ಘಡ
ಒಟ್ಟು ಸ್ಥಾನ -90
ಬಿಜೆಪಿ-53
ಕಾಂಗ್ರೆಸ್-35
..

ತೆಲಂಗಾಣ
ಒಟ್ಟು ಸ್ಥಾನ -119
ಕಾಂಗ್ರೆಸ್-65
ಬಿಆರ್ ಎಸ್
ಬಿಜೆಪಿ -9
..
ಲೋಕಸಭಾ ಚುನಾವಣೆ ಗೆ ಮುನ್ನ ಸೆಮಿ ಫೈನಲ್ ಚುನಾವಣೆ ಎಂದೇಬಿಂಬಿಸಲಾಗಿದ್ದ ದೇಶದ ಪ್ರಮುಖ ರಾಜ್ಯಗಳ ಚುನಾವಣೆ.

ಉತ್ತರದಲ್ಲಿ ಕಮಲ ಪಕ್ಷದ ಕಮಾಲ್.
ತೆಲಂಗಾಣದಲ್ಲಿ ಆಡಳಿತ ವಿರೋಧಿ ಅಲೆಯ ಲಾಭ ಪಡೆದ ಕಾಂಗ್ರೆಸ್.
ತೆಲಂಗಾಣದಲ್ಲಿ ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಹೊಂದಿದ್ದರು.
ಉಳಿದ 3 ರಾಜ್ಯಗಳಲ್ಲಿ ಹಿಂದೂ ಪರ ಹೇಳಿಕೆಗಳು ಬಿಜೆಪಿ ಭರ್ಜರಿ ಗೆಲುವಿಗೆ ಕಾರಣ ಆದವು.

Continue Reading

Politics

Telangana Election: ತೆಲಂಗಾಣದಲ್ಲಿ BJPಯನ್ನು ಗೆಲ್ಲಿಸಿದ ಕಾಂಗ್ರೆಸ್ !!

Published

on

Telangana Election: ಇಡೀ ದೇಶವೇ ಪಂಚರಾಜ್ಯ ಚುನಾವಣೆಗಳ ಫಲಿತಾಂಶದತ್ತ ದೃಷ್ಟಿ ನೆಟ್ಟಿದೆ. ಇಂದು ಕೇವಲ 4 ರಾಜ್ಯಗಳತ ಎಣಿಕೆ ನಡೆಯುತ್ತಿದ್ದರೂ ಭಾರೀ ಕುತೂಹಲ ಕೆರಳಿಸಿದೆ. ಅಚ್ಚರಿಯಂತೆ ಹಿನ್ನಡೆ, ಮುನ್ನಡೆಗಳು ಆಗುತ್ತಿವೆ. ಊಹಿಸದಂತೆ ತೆಲಂಗಾಣದಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತದ ಗೆಲುವು ಸಾಧಿಸಿ ದಾಖಲೆ ಬರೆದಿದೆ. ಆದರೆ ಎಲ್ಲಿ ಕಾಂಗ್ರೆಸ್ ತಾನು ಗೆಲ್ಲುವುದರೊಂದಿಗೆ ಬಿಜೆಪಿಯನ್ನೂ ಗೆಲ್ಲಿಸಿಬಿಟ್ಟಿದೆ. ಅರೆ ಏನಪ್ಪಾ ಇದು ಹೊಸ ಸುದ್ದಿ ಅಂತೀರಾ?! ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಲೆಕ್ಕಾಚಾರ .

ಹೌದು, ಮಧ್ಯಪ್ರದೇಶ , ರಾಜಸ್ಥಾನ ಹಾಗೂ ಛತ್ತೀಸಗಡದಲ್ಲಿ ಬಿಜೆಪಿ ಅಭೂತಪೂರ್ವ ಗೆಲವು ಉದಾಖಲಿಸಿದೆ. ಅಂತೆಯೇ ತೆಲಂಗಾಣದಲ್ಲಿ(Telangana Election) ಎಲ್ಲರೂ ಊಹಿಸಿದಂತೆ ಕಾಂಗ್ರೆಸ್ ಭರ್ಜರಿ ಗೆಲುವೊಂದಿಗೆ ಇತಿಹಾಹ ಸೃಷ್ಟಿಸಿದೆ. ಅಲ್ಲದೆ ದಕ್ಷಿಣ ಭಾರತದಲ್ಲಿ ಎರಡನೇ ರಾಜ್ಯದಲ್ಲಿ ತನ್ನ ಅಧಿಪತ್ಯ ಸಾಧಿಸಿದೆ. ಗ್ಯಾರಂಟಿಗಳು ಕೊನೆಗೂ ಕಾಂಗ್ರೆಸ್ ಗೆ ಜಯಭೇರಿ ತಂದಿವೆ. ಆದರೆ ಈ ನಡುವೆ ಕಾಂಗ್ರೆಸ್ ಗೆಲುವು ಬಿಜೆಪಿಗೂ ಲಾಭವನ್ನು ತಂದಿದೆ.

ಕಾಂಗ್ರೆಸ್ ಗೆಲುವು ಬಿಜೆಪಿಗೆ ಲಾಭ !!

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನು ಸೋಲಿಸಲು ಪ್ರತಿಪಕ್ಷಗಳೆಲ್ಲವೂ ಸೇರಿ ‘ಇಂಡಿಯಾ’ ಮೈತ್ರಿ ಕೂಟವನ್ನು ರಚಿಸಿಕೊಂಡಿವೆ. ಇದರಲ್ಲಿ ಕಾಂಗ್ರೆಸ್ ಹಾಗೂ ಕೆಲವೊಂದು ಪ್ರಮುಖ ಪಕ್ಷಗಳನ್ನು ಬಿಟ್ಟರೆ ಉಳಿದವೆಲ್ಲವೂ ಪ್ರಾದೇಶಿಕ ಪಕ್ಷಗಳು. ಮೋದಿ ಹವಾ ಮುಂದೆ ಕಾಂಗ್ರೆಸ್ ಸೇರಿ ಎಲ್ಲಾ ಪಕ್ಷಗಳ ವರ್ಚಸ್ಸು ಕಮ್ಮಿಯಾಗುತ್ತಿರುವದರಿಂದ ಎಲ್ಲವೂ ‘ಇಂಡಿಯಾ’ ಕೂಟ ಸೇರಿವೆ. ಆದರೆ ಹೀಗೆ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಂದೊಂದು ರಾಜ್ಯವನ್ನು ಗೆಲ್ಲುತ್ತಾ ಬಂದಂತೆ ಅಲ್ಲಿನ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ಗೆ ವಿರುದ್ಧವಾಗುತ್ತವೆ. ಅದರಲ್ಲೂ ದಕ್ಷಿಣ ಭಾರತ ಪ್ರಾದೇಶಿಕ ಪಕ್ಷಗಳ ನಾಡು ಆದ್ದರಿಂದ ಇದು ಸಂಭವಿಸುದು ಪಕ್ಕಾ ಎನ್ನಲಾಗುತ್ತೆ.

ಅಲ್ಲದೆ ತನ್ನ ಗೆಲುವಿನ ಪ್ರಾಬಲ್ಯದಿಂದ ಲೋಕಸಭಾ ಚುನಾವಣೆಯಲ್ಲಿ ಹೆಚ್ಟಿನ ಕ್ಷೇತ್ರಗಳನ್ನು ಕೇಳಬಹುದು. ಇದು ಪ್ರಾಧೇಶಿಕ ಪಕ್ಷಗಳ ಅಸ್ತಿತ್ವವನ್ನೇ ಕಸಿದಂತೆ. ಕರ್ನಾಟಕದಲ್ಲೂ ಕಾಂಗ್ರೆಸ್ ಹಾಗೂ ಜೆಡಿಎಸ್ ಮೊದಲು ಮೈತ್ರಿ ಮಾಡಿಕೊಂಡಿದ್ದವು. ಬಳಿಕ ಬೇರೆ ಬೇರೆಯಾದವು. ಅದರಲ್ಲೂ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಬಳಿಕವಂತೂ ಹಾವು ಮುಂಗುಸಿಯಾಗಿದವು. ಇದೀಗ ತೆಲಂಗಾಣದಲ್ಲೂ ಅದೇ ಪರಿಸ್ಥಿತಿ ಉಂಟಾಗಬಹುದು. ಯಾವ ಮೈತ್ರಿ ಸೇರದೆ ತಟಸ್ಥವಾಗಿರುವ ಕೆಸಿಆರ್ ಪಾರ್ಟಿ ಕಾಂಗ್ರೆಸ್ ದೋಸ್ತಿ ತೊರೆದು, ರಾಜ್ಯದಲ್ಲಿ ಅದನ್ನು ಎದುರಿಸಲು NDA ಮೈತ್ರಿ ಸೇರಬಹುದು. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿಗೆ ಈ ಬಿರುಕಿನಿಂದ ನೇರವಾಗಿ ಲಾಭವಾಗಬಹುದು. ಇದು ಬಿಜೆಪಿಗೆ ದೊಡ್ಡ ಲಾಭ ಆಗುತ್ತದೆ. ಕಾಂಗ್ರೆಸ್ ತಾನು ಗೆಲ್ಲುವುದರೂಂದಿಖೆ ಸುಲಭವಾಗಿ ಬಿಜೆಪಿಯನ್ನು ಗೆಲ್ಲಿಸಿದಂತಾಗಿದೆ.

Continue Reading

Hassan

ಹಾಸನ : ಇಂದು ತವರು ಜಿಲ್ಲೆಗೆ ಮಾಜಿಪ್ರಧಾನಿ ಎಚ್.ಡಿ.ದೇವೇಗೌಡರು ಭೇಟಿ

Published

on

ಸಂಸದರು, ಶಾಸಕರು, ಮಾಜಿಶಾಸಕರು, ಮಾಜಿ ಜಿ.ಪಂ., ತಾ.ಪಂ. ಅಧ್ಯಕ್ಷರು, ಮಾಜಿ ಸದಸ್ಯರು, ನಗರಸಭೆ, ಪುರಸಭೆ ಹಾಲಿ, ಮಾಜಿ ಅಧ್ಯಕ್ಷರು, ಹಾಲಿ, ಮಾಜಿ ಸದಸ್ಯರು, ಹಾಲಿ, ಮಾಜಿ ಗ್ರಾ.ಪಂ. ಅಧ್ಯಕ್ಷರು ಹಾಗೂ ಸದಸ್ಯರುಗಳ ಸಭೆ ಕರೆದಿರುವ ಎಚ್.ಡಿ.ದೇವೇಗೌಡರು

ಹೊಳೆನರಸೀಪುರ ತಾಲ್ಲೂಕಿನ, ಹಳೇಕೋಟೆ ಹೋಬಳಿ, ಶ್ರೀರಾಮದೇವರಕಟ್ಟೆಯಲ್ಲಿ ಮ.12.15 ಕ್ಕೆ ನಡೆಯಲಿರುವ ಸಭೆ

ಮಾಜಿಪ್ರಧಾನಿ ಎಚ್.ಡಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆ

ಮುಂಬರುವ, ತಾ.ಪಂ., ಜಿ.ಪಂ., ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಸಭೆ ಕರೆದಿರುವ ಮಾಜಿಪ್ರಧಾನಿ ಎಚ್.ಡಿ.ದೇವೇಗೌಡರು

ಸಭೆಯಲ್ಲಿ ಭಾಗಲಿರುವ ಜಿಲ್ಲೆಯ ಎಲ್ಲಾ ಶಾಸಕರು, ಮುಖಂಡರು

Continue Reading

Trending