Connect with us

Manglore

ಧರ್ಮಸ್ಥಳ ಪ್ರಕರಣ: ಬುರುಡೆ ಗ್ಯಾಂಗ್‌ ವಿರುದ್ಧ ಸೆಕ್ಷನ್‌ಗಳ ಸುರಿಮಳೆ

Published

on

ಬೆಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದವರೇ ಆರೋಪಿಗಳಾಗಿದ್ದಾರೆ ಎಂದು ವಿಶೇಷ ತನಿಖಾ ತಂಡದ (SIT) ವರದಿಯಲ್ಲಿ ಬುರುಡೆ ಗ್ಯಾಂಗ್ ಷಡ್ಯಂತ್ರ್ಯ ಬಯಲಿಗೆ ಬಂದಿದೆ.

ಈ ಪ್ರಕರಣಕ್ಕ ಸಂಬಂಧಿಸಿದಂತೆ   ಎಸ್‌ಐಟಿ ಅಧಿಕಾರಿಗಳು ತನಿಖೆ ನಡೆಸಿ ನ.20 ರಂದು ಬೆಳ್ತಂಗಡಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ತನಿಖಾ ಪ್ರಾಥಮಿಕ ವರದಿ ಸಲ್ಲಿಸಿತ್ತು. ಈ ತನಿಖಾ ವರದಿಯಲ್ಲಿ 6 ಮಂದಿ ಯಾವ ರೀತಿ ನ್ಯಾಯಾಲಯದ  ದಾರಿ ತಪ್ಪಿಸಿದ್ದಾರೆ ಎಂಬುದನ್ನು ಎಳೆ ಎಳೆಯಾಗಿ ಉಲ್ಲೇಖಿಸಲಾಗಿದೆ. ಹೀಗಾಗಿ ಬುರುಡೆ ಗ್ಯಾಂಗ್ ಸದಸ್ಯರ ಮೇಲೆ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ ಗಳ ಸುರಿಮಳೆ ಹೊರಿಸಲಾಗಿದೆ.

ಈ ಕೃತ್ಯದ ಆರೋಪಿಗಳು ಯಾರು ಯಾರು?
1. ಎ1 – ಚಿನ್ನಯ್ಯ
2. ಎ2 – ಮಹೇಶ್‌ ಶೆಟ್ಟಿ ತಿಮರೋಡಿ
3. ಎ3 – ಗಿರೀಶ್‌ ಮಟ್ಟಣ್ಣನವರ್‌
4. ಎ4 – ವಿಠಲ ಗೌಡ
5. ಎ5 – ಜಯಂತ್‌ ಟಿ
6. ಎ6 – ಸುಜಾತ ಭಟ್‌

ಯಾವ ಸೆಕ್ಷನ್‌ ಹಾಕಲಾಗಿದೆ?

1. BNS 211(ಎ) – Criminal Intimidation / ಅಪರಾಧಿಕ ಬೆದರಿಕೆ
ಯಾರಾದರೂ ಮತ್ತೊಬ್ಬ ವ್ಯಕ್ತಿಗೆ ಹಾನಿ ಮಾಡುವುದಾಗಿ, ಸಾವು, ಗಾಯ, ಆಸ್ತಿ ನಾಶ, ಮಾನಹಾನಿ, ಅಥವಾ ಯಾವುದೇ ಅನಿಷ್ಟ ಪರಿಣಾಮ ಉಂಟುಮಾಡುವುದಾಗಿ ಉದ್ದೇಶಪೂರ್ವಕವಾಗಿ ಬೆದರಿಸುವುದು.

2.BNS 230 – Wrongful Restraint / ಅನ್ಯಾಯವಾದ ನಿರ್ಬಂಧ
ಯಾವ ವ್ಯಕ್ತಿಯೂ ತನ್ನ ಇಚ್ಚೆಯಂತೆ ತೆರಳಬೇಕಾದ ದಾರಿಗೆ ಅಡ್ಡಿ ಉಂಟುಮಾಡಿ, ಆ ವ್ಯಕ್ತಿಯನ್ನು ಉದ್ದೇಶಪೂರ್ವಕ ತಡೆಯುವುದು.

3. BNS 231 – Wrongful Confinement / ಅನ್ಯಾಯವಾದ ಬಂಧನ
ವ್ಯಕ್ತಿಯ ಚಲನವಲನವನ್ನು ಸಂಪೂರ್ಣವಾಗಿ ನಿಯಂತ್ರಿಸಿ, ಒಬ್ಬರನ್ನು ನಿಯಂತ್ರಿತ ಸ್ಥಳದಲ್ಲಿ ಬಲವಂತವಾಗಿ ಇರಿಸುವುದು.

4. BNS 229 – Force / ಬಲ ಪ್ರಯೋಗ
ಯಾವ ವ್ಯಕ್ತಿಗೆ ಅವನ ಇಚ್ಛೆಗೆ ವಿರುದ್ಧವಾಗಿ ಯಾವುದಾದರೂ ವಸ್ತು, ಬಲ, ಒತ್ತಡ, ದಬ್ಬಾಳಿಕೆ ನಡೆಸುವುದು.

5. BNS 227 – Assault / ದಾಳಿ
ಯಾರಿಗಾದರೂ ಶಾರೀರಿಕ ಹಾನಿ ಮಾಡುವ ಉದ್ದೇಶದ ಸೂಚನೆ ನೀಡುವುದು.

6. BNS 228 – Criminal Force / ಅಪರಾಧಿಕ ಬಲ ಬಳಕೆ
ಉದ್ದೇಶಪೂರ್ವಕವಾಗಿ,ಅಪಮಾನ / ಹಾನಿ / ಭಯ ಹುಟ್ಟಿಸುವುದು.

7. BNS 240 – Extortion / ದಬ್ಬಾಳಿಕೆ ಮೂಲಕ ಹಣ/ಆಸ್ತಿ ಪಡೆಯುವುದು
ಹಾನಿ ಮಾಡುವುದಾಗಿ, ಭಯ ಹುಟ್ಟಿಸಿ ಹಣ/ಆಸ್ತಿ/ಕಾಗದ/ಮೌಲ್ಯಾವಸ್ತು ನೀಡುವಂತೆ ಬೆದರಿಸುವುದು.

8. BNS 236 – False Declaration / ತಪ್ಪು ಘೋಷಣೆ ಸಲ್ಲಿಸುವುದು
ಕೋರ್ಟ್‌ ಅಥವಾ ಅಧಿಕಾರಿಗಳ ಮುಂದೆ ತಿಳಿದಿದ್ದೂ ತಪ್ಪು ಮಾಹಿತಿ ನೀಡಿ ನಂಬಲರ್ಹ ಮಾಹಿತಿಯನ್ನು ಘೋಷಣೆ ಮೂಲಕ ಉಲ್ಲೇಖಿಸುವುದು.

9. BNS 233 – Cheating / ಮೋಸ
ಒಬ್ಬರನ್ನು ತಪ್ಪಾಗಿ ನಂಬಿಸಿ, ಮತಿಭ್ರಮೆಯಲ್ಲಿ, ವಂಚನೆ ಮಾಡಿ, ಆಸ್ತಿ/ಹಣ/ಲಾಭ ಮಾಡುವುದು.

10. BNS 248 – Criminal Breach of Trust / ನಂಬಿಕೆ ದ್ರೋಹ
ನಂಬಿಸಿ ದುರುಪಯೋಗಪಡಿಸಿಕೊಳ್ಳುವುದು.

11. BNS 336(4) – Public Nuisance endangering public life  ಸಾರ್ವಜನಿಕ ಜೀವನವನ್ನ ಅಪಾಯಕ್ಕೆ ಸಿಲುಕಿಸುವ ಕಿರಿಕಿರಿ
ಸಾರ್ವಜನಿಕ ಸ್ಥಳದಲ್ಲಿ,ಸಾರ್ವಜನಿಕರ ಜೀವ/ಆರೋಗ್ಯ/ಸುರಕ್ಷತೆಗೆ ಹಾನಿ ಉಂಟುಮಾಡುವ ಯಾವುದೇ ಕೃತ್ಯ.

12. BNS 61(2) – Common Intention / ಸಹ ಉದ್ದೇಶ
ಎರಡು ಅಥವಾ ಹೆಚ್ಚು ಜನರು ಒಂದು ಸಾಮೂಹಿಕ ಉದ್ದೇಶದಿಂದ ಒಂದೇ ಅಪರಾಧವನ್ನು ಸೇರಿ ಮಾಡಿದರೆ,ಪ್ರತಿಯೊಬ್ಬರೂ ಪೂರ್ಣ ಅಪರಾಧಕ್ಕೆ ಜವಾಬ್ದಾರರು.

Continue Reading

Manglore

ದ.ಕ.ಜಿಲ್ಲೆಯಲ್ಲಿ ಪ್ರತೀಕಾರದ ಕೊಲೆಗೆ ಕುಮ್ಮಕ್ಕು: 16 ಇನ್ಸ್ಟ್‌ಗ್ರಾಮ್‌ ಪೇಜ್‌ಗಳ ವಿರುದ್ಧ FIR ದಾಖಲು

Published

on

ಮಂಗಳೂರು: ಸದ್ಯ ಮಂಗಳೂರಿನಲ್ಲಿ ಕೋಮು ಸಂಘರ್ಷವಿಲ್ಲದೆ ಶಾಂತವಾಗಿದೆ. ಖಡಕ್ ಪೊಲೀಸ್ ಅಧಿಕಾರಿಗಳಿಂದ ಜನತೆ ನೆಮ್ಮದಿಯಿಂದಿದ್ದಾರೆ. ಆದರೆ ವಿಘ್ನ ಸಂತೋಷಿಗಳು, ಸೋಶಿಯಲ್ ಮಿಡಿಯಾದಲ್ಲಿ ಮತ್ತೆ ಕೋಮು ಸಂಘರ್ಷಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ.

ಇದು ಮತ್ತೆ ರಿವೆಂಜ್ ಕಿಲ್ಲಿಂಗ್ ಯುಗ ಮರಳುತ್ತಿದೆಯೇ ಎನ್ನುವ ಆತಂಕ ಹುಟ್ಟು ಹಾಕುವಂತಿದೆ. ಆದ್ದರಿಂದ ಪೊಲೀಸ್ ಇಲಾಖೆ ಸಾಮಾಜಿಕ ಜಾಲತಾಣದ ಮೇಲೆ ನಿಗಾಯಿಟ್ಟು, ಪ್ರತಿಕಾರದ ವಿಷ ಕಾರುವ 16 ಇನ್ಸ್ಟ್‌ಗ್ರಾಮ್‌ ಪೇಜ್‌ಗಳ ವಿರುದ್ಧ ಎಫ್ಐಆರ್ ದಾಖಲಿಸಿದೆ.

ಇತ್ತೀಚೆಗೆ ನಡೆದ ಸುಹಾಸ್ ಶೆಟ್ಟಿ ಹಾಗೂ ರೆಹಮಾನ್‌ ಹತ್ಯೆಯಿಂದ ದ.ಕ.ಜಿಲ್ಲೆ ಆತಂಕಕ್ಕೀಡಾಗಿತ್ತು‌. ತಕ್ಷಣ ಎಚ್ಚೆತ್ತ ಸರ್ಕಾರವೂ  ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಿ, ಮಂಗಳೂರು ಕಮೀಷನರ್ ಆಗಿ ಸುಧೀರ್ ಕುಮಾರ್ ರೆಡ್ಡಿ ಮತ್ತು ದ.ಕ.ಜಿಲ್ಲಾ ಎಸ್‌ಪಿಯಾಗಿ ಅರುಣ್ ಕುಮಾರ್ ಅವರನ್ನು ನೇಮಿಸಿತ್ತು. ಖಡಕ್ ಪೊಲೀಸ್ ಆಫೀಸರ್‌ಗಳು, ಎಲ್ಲವನ್ನು ಕಂಟ್ರೋಲ್‌ಗೆ ತಂದಿದ್ದರು. ಅದರಲ್ಲೂ ಸೋಶಿಯಲ್ ಮೀಡಿಯಾದಲ್ಲಿ ಕೋಮು ಸಂಘರ್ಷಕ್ಕೆ ಕಿಡಿ ಹಚ್ಚುವರನ್ನು ಹಿಡಿದು ಕೇಸ್ ಕೂಡ ಹಾಕಲಾಗಿತ್ತು.

ಸದ್ಯ ತಣ್ಣಗಾಗಿದ್ದ ಕರಾವಳಿಯಲ್ಲಿ ಮತ್ತೆ ತಲ್ಲಣ ಸೃಷ್ಟಿಸಲು ಕೆಲವು ಕಿಡಿಗೇಡಿಗಳು ಮತ್ತೆ ಕ್ಯಾತೆ ತೆಗೆಯಲು ಶುರು ಹಚ್ಚಿದ್ದಾರೆ. ಕೋಮು ಸಂಘರ್ಷ ಉಂಟಾಗಲು ಇನ್‌ಸ್ಟಾಗ್ರಾಂಗಳಲ್ಲಿ ಪ್ರಚೋದನೆ ನೀಡುತ್ತಿದ್ದಾರೆ.

ಆದ್ದರಿಂದ ‘Target 900’, ‘team target boys’, ‘immu bai’ ಎಂಬ ಇನ್ಸ್ಟಾಗ್ರಾಮ್ ಪೇಜ್‌ಗಳಲ್ಲಿ “Revenge is loading”, “target set one by one” ಎಂಬಂಥಾ ಎಚ್ಚರಿಕೆ ಸಂದೇಶಗಳನ್ನು ಪೋಸ್ಟ್ ಮಾಡಲಾಗುತ್ತಿದೆ. ಕಲಾಯಿ ಅಶ್ರಫ್ ಹತ್ಯೆಗೆ ಪ್ರತಿಕಾರ ಬಗ್ಗೆ ಕಲಾಯಿ ಅಶ್ರಫ್ ಹತ್ಯೆಯ ಪ್ರಮುಖ ಆರೋಪಿ, ಸದ್ಯ ಜೈಲುನಲ್ಲಿರುವ ಭರತ್ ಕುಮ್ಡೇಲ್‌ಗೆ ಎಚ್ಚರಿಕೆ ನೀಡಲಾಗುತ್ತಿದೆ. ಇತ್ತೀಚೆಗೆ ಕೇರಳದಲ್ಲಿ ಹತ್ಯೆಯಾದ ರೌಡಿಶೀಟರ್ ನೌಫಾಲ್ ಹತ್ಯೆಗೂ ಪ್ರತಿಕಾರವಾಗಿ We are not forgot revange . we are waiting for revange ಎಂದು ಎಚ್ಚರಿಕೆ ನೀಡಲಾಗುತ್ತಿದೆ.

ಸದ್ಯ ಪೊಲೀಸರು, ಪ್ರತೀಕಾರದ ಸಂದೇಶ ಪೋಸ್ಟ್ ಮಾಡುವವರ ವಿರುದ್ಧ ಸಮರ ಸಾರಿದ್ದು, ಪ್ರಚೋದನಾಕಾರಿ ಪೋಸ್ಟ್ ಹಾಕುತ್ತಿದ್ದ 16 ಇನ್‌ಸ್ಟಾಗ್ರಾಮ್ ಎಫ್ಐಆರ್ ವಿರುದ್ಧ ದಾಖಲಿಸಲಾಗಿದೆ. ಅಲ್ಲದೇ, ಆಯಕಟ್ಡಿನ ಜಾಗಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ‌.

Continue Reading

Manglore

ಎಕ್ಸಲೆ೦ಟ್ ಪ.ಪೂ.ಕಾಲೇಜಿನಲ್ಲಿ ಜರುಗಿದ 14ನೇ ವಾರ್ಷಿಕೋತ್ಸವ

Published

on

ಮೂಡುಬಿದಿರೆ: ಇಲ್ಲಿನ ಎಕ್ಸಲೆ೦ಟ್ ಪದವಿಪೂರ್ವ ಕಾಲೇಜಿನಲ್ಲಿ ಹದಿನಾಲ್ಕನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಆತಿಥಿಯಾಗಿ ಆಗಮಿಸಿದ ಬಾಗಲಕೋಟೆ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್‌ ಆಗಿರುವ ಡಾ. ಔದ್ರಾಮ ಮಾತನಾಡಿ, ನಾವು ಕಾರ್ಯದಲ್ಲಿ ಸಾಗಬೇಕೇ ಹೊರತು ಕಾರಣದಲ್ಲಿ ಅಲ್ಲ ಎ೦ಬ ಕಲಾ೦ ಮಾತು ಯುವರಾಜರು ಎಕ್ಸಲೆ೦ಟ್ ಮೂಲಕ ನಿಜ ಮಾಡಿಸಿದ್ದಾರೆ. ಜ್ಞಾನ ಯಜ್ಞದ ಮೂಲಕ ಪ್ರತಿಯೋರ್ವ ವಿದ್ಯಾರ್ಥಿ ಜೀವನ ನಡೆಗಳನ್ನು ಪವಿತ್ರವಾಗಿಸಿಕೊಳ್ಳಿ, ಶಿಕ್ಷಣದ ಜೊತೆ ಶಿಸ್ತು, ರಾಷ್ಟ್ರೀಯ ಚಿ೦ತನೆ, ಸ೦ಸ್ಕಾರದ ಮೂಲಕ ಕನಸುಗಳನ್ನು ಪೋಷಿಸಿದಾಗ ಪ್ರತಿಯೋರ್ವನ ವ್ಯಕ್ತಿತ್ವವೂ ವಿಕಸನವಾಗುತ್ತದೆ. ಜ್ಞಾನದ ತವರೂರಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಕ್ಸಲೆ೦ಟ್ ಸ೦ಸ್ಥೆ ಜ್ಞಾನ ದೇಗುಲದ ಗರ್ಭಗುಡಿಯಾಗಿದೆ. ಕರ್ಮಣ್ಯೇ ವಾಧಿಕಾರಸ್ತೆ ಎ೦ಬ ಗೀತೆಯ ಮಾತಿನ೦ತೆ ನಿಮಗೆ ಕರ್ತವ್ಯವೇ ಗೀತೆಯಾಗಲಿ. ನಿಮ್ಮ ಪ್ರಜ್ಞೆಯೇ ನಿಮಗೆ ದೇವರಾಗಲಿ ಎ೦ದರು.


ಎಕ್ಸಲೆ೦ಟ್ ವಿದ್ಯಾಸ೦ಸ್ಥೆ ಪ್ರಾಯೋಜಕತ್ವದಲ್ಲಿ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮರ್ಮು ಅವರಿ೦ದ ಬಿಡುಗಡೆಗೊಳಿಸಲಾದ ರಾಣಿ ಚೆನ್ನಭೈರಾದೇವಿಯ ಅ೦ಚೆ ಚೀಟಿಯ ಬ್ರಹತ್ ಗಾತ್ರದ ಚಿತ್ರವನ್ನು ಸ೦ಸ್ಥೆಯ ಅಧ್ಯಕ್ಷ ಯುವರಾಜ ಜೈನ್ ಅವರಿಗೆ ಹಸ್ತಾ೦ತರಿಸುತ್ತಾ ಮತ್ತು ಗ್ಲಿ೦ಪ್ಸಸ್ ಆಫ್‌ ಗೇರುಸೊಪ್ಪಾ ದ ಪೋಸ್ಟ್ಲ್ ಪಿಕ್ಚರ್ ಕಾರ್ಡುಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಪುತ್ತೂರು ವಿಭಾಗದ ಪೋಸ್ಟ್ ಆಫೀಸ್‌ ಸುಪರಿ೦ಟೆ೦ಡೆ೦ಟ್ ಆಗಿರುವ ರವೀ೦ದ್ರ ನಾಯ್ಕ ಎ೦. ಮಾತನಾಡಿ, ಎಕ್ಸಲೆ೦ಟ್ ಸ೦ಸ್ಥೆಯ ಪ್ರಾಯೋಜಕತ್ವವು ಈಸ್ ಸ೦ಸ್ಥೆ ಇತಿಹಾಸ, ಸಾಧಕರನ್ನು ಹೇಗೆ ಗುರುತಿಸುತ್ತದೆ ಎ೦ಬುದನ್ನು ಹೇಳುತ್ತದೆ ಎಂದರು.

ಬಿಡುಗಡೆಯಾದ ಪೋಸ್ಟ್ ಕಾರ್ಡುಗಳಲ್ಲಿ ರಾಣಿ ಚೆನ್ನಭೈರಾದೇವಿ, ವೇಣೂರು ಮಸ್ತಕಾಭಿಷೇಕ, ರಾಣಿ ಅಬ್ಬಕ್ಕ, ವರ೦ಗದ ಬಸದಿ, ಜೈನ್ ತೀರ್ಥ೦ಕರರು ಮು೦ತಾದವು ಸ೦ಸ್ಥೆಯ ಪ್ರಾಯೋಜಕತ್ವದ ಮೂಲಕ ನೆಲದ ಚರಿತ್ರೆ, ಸ೦ಸ್ಕೃತಿ ಅ೦ತಾರಾಷ್ಟ್ರೀಯ ಮಟ್ಟಕ್ಕೆ ತಲುಪಿದೆ. ಆ ಪ್ರಯತ್ನಕ್ಕೆ ಬಲ, ಬೆ೦ಬಲ ನೀಡಿದ ಎಕ್ಸಲೆ೦ಟ್ ಸ್ತುತ್ಯರ್ಹ ಎ೦ದರು.

ಎಕ್ಸಲೆ೦ಟ್ ವಿದ್ಯಾ ಸ೦ಸ್ಥೆಯ ಪೂರ್ವ ವಿದ್ಯಾರ್ಥಿ ಮದನ್ ವೈ ಮಾತನಾಡುತ್ತಾ ಕಲಿತ ವಿದ್ಯಾ ಸ೦ಸ್ಥೆಗೆ ಆಹ್ವಾನವನ್ನು ಪಡೆದು ಬರುವುದು ನನಗೆ ಬಹಳ ಹೆಮ್ಮೆಯ ವಿಷಯ. ಎಕ್ಸಲೆ೦ಟ್ ನಲ್ಲಿರುವ ಉಪನ್ಯಾಸಕರು ಮತ್ತು ಇಲ್ಲಿ ಇದ್ದ ವ್ಯವಸ್ಥೆ, ಮೌಲ್ಯಗಳು ನನಗೆ ಸಾಧನೆ ಮಾಡಲು ಸಾಧ್ಯವಾಯಿತು. ಕೋವಿಡ್ ನ ಒತ್ತಡದ ಸ೦ದರ್ಭವನ್ನು ಮೀರಿ ನಾನು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಪಡೆಯುವಲ್ಲಿ ಎಕ್ಸಲೆ೦ಟ್ ನ ಕೊಡುಗೆ ಬಹಳಷ್ಟು ಇದೆ. ಇ೦ದಿನ ಸ೦ದರ್ಭದಲ್ಲಿ ಕೃತಕ ಬುದ್ಧಿಮತ್ತೆ ನಮ್ಮ ಉದ್ಯೋಗಕ್ಕೆ ದೊಡ್ಡ ಸವಾಲು ಎ೦ದೆನಿಸಿದರೂ ನಮ್ಮ ಅಸ್ತಿತ್ವಕ್ಕೆ ದೊಡ್ಡ ಸಮಸ್ಯೆಯೇನೂ ಆಗುವುದಿಲ್ಲ. ಪ್ರತಿಭಾವ೦ತರಿಗೆ ಇನ್ನು ಮು೦ದೆಯೂ ಅವಕಾಶವಿದೆ ಎ೦ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊ೦ಡು ಮಾತನಾಡಿದ ಸ೦ಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್ ಮಾತನಡುತ್ತಾ ನ೦ಬಿಕೆಯ ನೆಲೆ ನೆಮ್ಮದಿಯ ಸೆಲೆ. ಇತರರ ಋಣಾತ್ಮಕ ಪ್ರಚೋದನೆಗಳಿಗೆ ಕಿವಿಕೊಡದೆ ಧನಾತ್ಮಕ ಹೆಜ್ಜೆಗಳೊ೦ದಿಗೆ ಮು೦ದುವರೆಯಿರಿ. ಸೋಲುಗಳನ್ನು ಮೆಟ್ಟಿ ನಿಲ್ಲುವುದರಲ್ಲಿ ನಿಮ್ಮ ಕಾರ್ಯದಕ್ಷತೆಯಿದೆ. ಕನಸುಗಳು ನಿಮಗಾಗಿ ಕಾಯುತ್ತಿದೆ. ಆಲೋಚನೆಗಳೊ೦ದಿಗೆ ಮು೦ದುವರೆದು ಕಾರ್ಯರೂಪಕ್ಕಿಳಿದರೆ ಕನಸು ನನಸಾಗುತ್ತದೆ ಎ೦ದರು.

ಈ ಸ೦ದರ್ಭದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಶೈಕ್ಷಣಿಕವಾಗಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸ೦ಸ್ಥೆಯ ವತಿಯಿ೦ದ ಸನ್ಮಾನಿಸಲಾಯಿತು. ಕಲಾ ಸಾಧಕ ತಿಲಕ್ ಕುಲಾಲ್ ಅವರನ್ನು ಗೌರವಿಸಲಾಯಿತು. ಕಾರ್ಯದರ್ಶಿ ರಶ್ಮಿತಾ ಜೈನ್ ಉಪಸ್ಥಿತರಿದ್ದರು.

ಎಕ್ಸಲೆ೦ಟ್ ಮೂಡುಬಿದಿರೆ ರಾಷ್ಟçಪತಿ ಭವನದಲ್ಲಿ ಬಿಡುಗಡೆಯಾದ ರಾಣಿ ಚೆನ್ನಭೈರಾದೇವಿಯ ಅ೦ಚೆ ಚೀಟಿ ಕಾರ್ಯಕ್ರಮದ ವೀಡಿಯೋ ತುಣುಕನ್ನು ಈ ಸ೦ದರ್ಭದಲ್ಲಿ ಪ್ರದರ್ಶಿಸಲಾಯಿತು.

ವಿದ್ಯಾರ್ಥಿ ಪ್ರತಿನಿಧಿ ಮಮತಾ ಸ್ವಾಗತಿಸಿದರು. ಪ್ರಾ೦ಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ವಾರ್ಷಿಕ ವರದಿಯನ್ನು ವಾಚಿಸಿದರು. ಉಪನ್ಯಾಸಕಿ ಶ್ರದ್ಧಾ ಸಾಧಕ ವಿದ್ಯಾರ್ಥಿಗಳ ಪಟ್ಟಿಯನ್ನು ವಾಚಿಸಿದರು. ಉಪನ್ಯಾಸಕರಾದ ವೈಷ್ಣವಿ, ರ೦ಜಿತ್ ಜೈನ್, ಪರೀಕ್ಷಿತ್ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿ ಪ್ರತಿನಿಧಿ ಸುವಿತ್ ಭ೦ಡಾರಿ ವ೦ದಿಸಿದರು. ಉಪನ್ಯಾಸಕ ವಿಕ್ರಮ ನಾಯಕ್ ಕೆ. ನಿರೂಪಿಸಿದರು.

Continue Reading

Manglore

ಜಿಲ್ಲಾಮಟ್ಟದ ಹಾಕಿ ಪಂದ್ಯಾಟ : ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಅಗತ್ಯ ರಾಜ್ಯಮಟ್ಟಕ್ಕೆ ಆಯ್ಕೆ

Published

on

ಪುತ್ತೂರು: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಹಾಗೂ ಜೈನ ಪದವಿಪೂರ್ವ ಕಾಲೇಜು ಮೂಡಬಿದ್ರೆ ಇದರ ಸಹಯೋಗದಲ್ಲಿ ನಡೆದ ಜಿಲ್ಲಾಮಟ್ಟದ ಹಾಕಿ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದು, ಅವರಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ಅಗತ್ಯ ಎಂಬ ವಿಧ್ಯಾರ್ಥಿ ಬಳ್ಳಾರಿಯಲ್ಲಿ ನಡೆಯುವ ರಾಜ್ಯಮಟ್ಟದ ಹಾಕಿ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್ ವಿ ಎಸ್, ಡಾ. ಜ್ಯೋತಿ ಕುಮಾರಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿದ್ದಾರೆ. ಇವರನ್ನು ಕಾಲೇಜಿನ ಆಡಳಿತಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ, ಉಪನ್ಯಾಸಕೇತರ ವೃಂದದವವರು ಅಭಿನಂದಿಸಿರುತ್ತಾರೆ.

Continue Reading

Trending

error: Content is protected !!