Connect with us

Hassan

ಇಂದು ಹೊಳೆನರಸೀಪುರ ಜೆಎಂಎಫ್ ಸಿ ಕೋರ್ಟ್ ಗೆ ಹಾಜರುಪಡಿಸಿದ್ದ ಪೊಲೀಸರು

Published

on

ಹಾಸನ – ಅತ್ಯಾಚಾರ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರೊ ವಕೀಲ ದೇವರಾಜೇಗೌಡ ಪೊಲೀಸ್ ಕಸ್ಟಡಿ ವಿಸ್ತರಣೆ

ಮೇ 14 ರಂದು ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದ ಹೊಳೆನರಸೀಪುರ ನಗರ ಪೊಲೀಸರು

ಇಂದು ಹೊಳೆನರಸೀಪುರ ಜೆಎಂಎಫ್ ಸಿ ಕೋರ್ಟ್ ಗೆ ಹಾಜರುಪಡಿಸಿದ್ದ ಪೊಲೀಸರು

ಹೆಚ್ಚಿನ ವಿಚಾರಣೆ ಗಾಗಿ ಮತ್ತೊಂದು ದಿನ ಪೊಲೀಸ್ ಕಸ್ಟಡಿಗೆ ಮನವಿ ಮಾಡಿದ್ದ ಪೊಲೀಸರು

ಪೊಲೀಸರ ಮನವಿಯಂತೆ ದೇವರಾಜೇಗೌಡ ಮತ್ತೆ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ

ನಾಳೆ ಮತ್ತೆ ನ್ಯಾಯಾಲಯ ದ ಮುಂದೆ ಹಾಜರುಪಡಿಸಲು ಸೂಚಿಸಿ ಆದೇಶ

ಇಂದೂ ಹೊಳೆನರಸೀಪುರ ನಗರ ಪೊಲೀಸರಿಂದ ವಿಚಾರಣೆ ಎದುರಿಸಲಿರೊ ದೇವರಾಜೇಗೌಡ

ಅತ್ಯಾಚಾರ ಆರೋಪದಲ್ಲಿ ಮೇ 11 ರಂದು ದೇವರಾಜೇಗೌಡ ಬಂದಿಸಿದ್ದ ಹೊಳೆನರಸೀಪುರ ನಗರ ಠಾಣೆ ಪೊಲೀಸರು

Continue Reading
Click to comment

Leave a Reply

Your email address will not be published. Required fields are marked *

Hassan

ಡಾ.ಬಾಬು ಜಗಜೀವನ್ ರಾಮ್ ಸಮುದಾಯ ಭವನ ಉದ್ಘಾಟನೆ

Published

on

ವರದಿ ಸತೀಶ್ ಚಿಕ್ಕಕಣಗಾಲು
ಆಲೂರು: ಸಮುದಾಯ ಭವನಗಳು ಸದಾ ಚಟುವಟಿಕೆ ಕೇಂದ್ರಗಳಾಗಬೇಕು, ಮಹಿಳಾ ಸ್ವಸಹಾಯ ಸಂಘದವರು ಭವನದಲ್ಲೇ ತಮ್ಮ ಕಾರ್ಯಚಟುವಟಿಕೆ ನಡೆಸಿ ಸದ್ಬಳಕೆ ಮಾಡಿಕೊಳ್ಳಿ ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು.

ತಾಲ್ಲೂಕಿನ ದೊಡ್ಡಕಣಗಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕವಳಿಕೆರೆ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿದ್ದ ಡಾ.ಬಾಬು ಜಗಜೀವನ್ ರಾಮ್ ಸಮುದಾಯ ಭವನನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಸಿರುಕ್ರಾಂತಿಯ ಹರಿಕಾರ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ ರಾಮ್ ಅವರು ಸುದೀರ್ಘ ಕಾಲ ಕೇಂದ್ರ ಸಚಿವರಾಗಿ ವಿವಿಧ ಖಾತೆಗಳನ್ನ ನಿರ್ವಹಣೆ ಮಾಡಿ ದೇಶಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಕಾರ್ಮಿಕ ಸಚಿವರಾಗಿದ್ದ ಸಂದರ್ಭದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳಿಗೆ ಅಲ್ಲದೆ ಎಲ್ಲ ಕಾರ್ಮಿಕರಿಗು ಅನುಕೂಲವಾಗುವ ಸುಧಾರಣೆಗಳನ್ನು ಜಾರಿಗೆ ತಂದರು. ಕಾರ್ಮಿಕರಿಗೆ ವಿಮಾ ಸೌಲಭ್ಯವನ್ನು ಕಲ್ಪಿಸಿದ ಹೆಗ್ಗಳಿಕೆ ಸಲ್ಲುತ್ತದೆ ಇಂದು ಅವರ ಹೆಸರಿನಲ್ಲಿ ಗ್ರಾಮೀಣ ಭಾಗದ ಪ್ರದೇಶದಲ್ಲಿ ಸಮುದಾಯ ಭವನಗಳು ನಿರ್ಮಾಣಗೊಳ್ಳುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಸಂತಸ ವ್ಯಕ್ತಪಡಿಸಿದರು.

ಮಾಜಿ ಶಾಸಕ ಹೆಚ್ ಕೆ ಕುಮಾರಸ್ವಾಮಿ ಮಾತನಾಡಿ, ಡಾ.ಬಾಬು ಜಗಜೀವನ್ ರಾಮ್ ರವರು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳಿಗಾಗಿ ಆಯೋಗವನ್ನು ನೇಮಕ ಮಾಡಿದರು. ವಿಮಾನಯಾನ ಸಚಿವರಾಗಿದ್ದ ಅವಧಿಯಲ್ಲಿ ಖಾಸಗೀಕರಣಗೊಂಡಿದ್ದ ವಿಮಾನ ಸೇವೆ ರಾಷ್ಟ್ರೀಕರಣ ಗೊಳಿಸಿ, ಬ್ಯಾಂಕುಗಳ ರಾಷ್ಟ್ರೀಕರಣಕ್ಕೆ ಇಂದಿರಾ ಗಾಂಧಿಯವರಿಗೆ ಸಲಹೆ ನೀಡಿದ್ದರು. ರಕ್ಷಣಾ ಸಚಿವರಾಗಿದ್ದ ಸಂದರ್ಭದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು ಎಂದು ಹೇಳಿದರು.

ಡಿ.ಎಸ್.ಎಸ್ ಜಿಲ್ಲಾ ಸಂಚಾಲಕ ಸಂದೇಶ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರು ಆಗಿದ್ದ ಬಾಬು ಜಗಜೀವನ ರಾಮ್ ಅವರು ರಕ್ಷಣಾ ಸಚಿವರು ಹಾಗೂ ಕೃಷಿ ಸಚಿವರಾಗಿದ್ದ ಅವಧಿಯಲ್ಲಿ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. ಕೃಷಿಯಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿಸಿದಲ್ಲದೇ, ಹಲವು ವಿನೂತನ ಸುಧಾರಣಾ ಕ್ರಮಗಳನ್ನು ಜಾರಿಗೆ ತಂದು ಹಸಿರುಕ್ರಾಂತಿಯ ಹರಿಕಾರರೆಂದೇ ಕರೆಯಲ್ಪಟ್ಟರು ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಮಾದಿಗ ದಂಡವರ ಸಮಿತಿಯ ಜಿಲ್ಲಾ ಅಧ್ಯಕ್ಷ ವೆಂಕಟಯ್ಯ, ತಾಲೂಕು ಅಧ್ಯಕ್ಷ ಪುಟ್ಟರಾಜು, ಹಿರಿಯ ದಲಿತ ಮುಖಂಡರಾದ ಅರಸಪ್ಪ, ಆಲೂರು ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶಿವಣ್ಣ,
ದೊಡ್ಡಕಣಗಾಲು ಗ್ರಾಮ ಪಂಚಾಯಿತಿ ಸದಸ್ಯೆ ಸುಧಾ ನಾಗೇಂದ್ರ, ಮಾಜಿ ಅಧ್ಯಕ್ಷರಾದ ಈರಣ್ಣಗೌಡ, ಧರ್ಮ ಆನಂದ್ ಸೇರಿದಂತೆ ಗ್ರಾಮದ ಹಿರಿಯ ಮುಖಂಡರು ಹಾಜರಿದ್ದರು.

ಪೋಟೋ ಕ್ಯಾಪ್ಶನ್: ತಾಲ್ಲೂಕಿನ ದೊಡ್ಡಕಣಗಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕವಳಿಕೆರೆ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿದ್ದ ಡಾ.ಬಾಬು ಜಗಜೀವನ್ ರಾಮ್ ಸಮುದಾಯ ಭವನನ್ನು ಶಾಸಕ ಸಿಮೆಂಟ್ ಮಂಜು ಉದ್ಘಾಟಿಸಿ ಮಾತನಾಡಿದರು.

Continue Reading

Hassan

ಯಾವುದೇ ಭಯವಿಲ್ಲದೇ ಧರ್ಮದ ಪರ ಹೋರಾಟಕ್ಕೆ ಕೈಗೊಳ್ಳಿ : ಮುನೇಗೌಡ ಇಂದವಿ ಕರೆ

Published

on

ಹಾಸನ: ಧರ್ಮದ ಪರವಾಗಿ ಹೋರಾಟ ಮಾಡುವವರಿಗೆ ಒಂದು ಭಯದ ವಾತವರಣ ಸೃಷ್ಠಿ ಆಗುತ್ತಿರುವುದನ್ನು ನಿವಾರಿಸಲು ಹಾಗೂ ಯಾವುದೇ ಭಯವಿಲ್ಲದೇ ಧರ್ಮದ ಪರ ಹೋರಾಟಕ್ಕೆ ಕೈಗೊಳ್ಳಿ ನಿಮ್ಮ ಜೊತೆ ಹಿಂದೂಪರ ಒಕ್ಕೂಟ ಜೊತೆಯಲ್ಲಿದೆ ಎಂದು ಒಕ್ಕೂಟದ ಮುಖಂಡ ಮುನೇಗೌಡ ಇಂದವಿ ತಿಳಿಸಿದರು.

ನಗರದ ಎಂ.ಜಿ. ರಸ್ತೆ ಬಳಿ ಇರುವ ಶ್ರೀ ರಾಮ ಮಂದಿರದ ಆವರಣದಲ್ಲಿ ಹಿಂದೂ ಪರ ಒಕ್ಕೂಟಗಳ ಸಂಘಟನೆ ರಚನೆ ಕುರಿತು ನಡೆದ ಸಭೆಯ ವೇಳೆ ಮಾಧ್ಯಮದೊಂದಿಗೆ ಮಾತನಾಡಿ, ನಾವು ಹಾಸನ ಜಿಲ್ಲೆಯಲ್ಲಿ ಹಿಂದೂಪರ ಸಂಘಟನೆಯಿಂದ ಸಭೆ ಕರೆದಿದ್ದು, ರಾಜ್ಯಾಧ್ಯಂತ ಇರುವ ವಿವಿಧ ಸಂಘಟನೆಗಳ ಎಲ್ಲಾ ಪ್ರಮುಖರನ್ನು ಒಂದೆಡೆಗೆ ತರಬೇಕು. ಎಲ್ಲೆಡೆ ಒಂದೆಡೆ ಸೇರಿ ಸಾಮೂಹಿಕ ಕಾರ್ಯಕ್ರಮ ಹೋರಾಟ ಮಾಡಬೇಕು. ಹಿಂದುಪರ ಹೋರಾಟಗಾರರನ್ನು ರಕ್ಷಣೆ ಮಾಡಬೇಕು. ಕಾನೂನು ನೆರವು, ಅವಶ್ಯಕತೆ ಇದ್ದಾಗ ಆರ್ಥಿಕ ಎಲ್ಲಾ ನೆರವು ಕೊಡುವ ಉದ್ದೇಶ ಇಟ್ಟುಕೊಂಡು ಹಿಂದೂಪರ ಸಂಘಟನೆಯಿಂದ ಒಕ್ಕೂಟ ರಚನೆ ಮಾಡಲಾಗಿದೆ. ಜಿಲ್ಲೆಯ ಬಹುತೇಕ ಕಡೆ ಸಭೆ ಮಾಡಲಾಗಿದ್ದು, ಹಿಂದೂಪರ ಸಂಘಟನೆಗಳ ಎಲ್ಲಾರೂ ಕೈಜೋಡಿಸುತ್ತಿದ್ದಾರೆ ಎಂದರು. ಕಾರ್ಯಕರ್ತರ ರಕ್ಷಣೆ ಮಾಡದಿದ್ರೆ, ಹೋರಾಟಗಾರರ ರಕ್ಷಣೆ

ಮಾಡದಿದ್ದರೇ ನಮ್ಮ ಧರ್ಮದ ಪರವಾಗಿ ಹೋರಾಟ ಮಾಡುವವರಿಗೆ ಒಂದು ಭಯದ ವಾತವರಣ ಸೃಷ್ಠಿ ಆಗುತಿತ್ತು. ಅದನ್ನ ನಿವಾರಿಸಲು ಕಾರ್ಯಕರ್ತರ ಜೊತೆ ನಾವು ಇದ್ದೇವೆ, ಇಡೀ ಹಿಂದೂ ಸಮಾಜ ನಿಮ್ಮೊಂದಿಗೆ ಇದ್ದು, ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ ಇದೆ ಎನ್ನುವ ಸಾಂಕೇತಿಕ ಕೂಗನ್ನು ಕೊಡುವದಕ್ಕಾಗಿ ನೂತನ ಸಂಘಟನೆ ತರಲಾಗಿದೆ. ಯಾವುದೇ ಭಯವಿಲ್ಲದೇ ಧರ್ಮದ ಪರ ಹೋರಾಟಕ್ಕೆ ಕೈಗೊಳ್ಳಿ, ಅಗತ್ಯವಿದ್ದಾಗ ಎಲ್ಲಾ ಹಿಂದೂಪರ ಒಕ್ಕೂಟ ಆ ಸ್ಥಳಕ್ಕೆ ಬರುವ ಪ್ರಯತ್ನ ಮಾಡಲಾಗುವುದು ಎಂದು ವಿಶ್ವಾಸವ್ಯಕ್ತಪಡಿಸಿದರು. ಯುದ್ಧ ಇನ್ನಷ್ಟು ದಿವಸ ನಡೆದು ಪಾಕಿಸ್ತಾನಕ್ಕೆ ಬುದ್ದಿ ಕಲಿಸಬೇಕಾಗಿತ್ತು. ಅಲ್ಲಿರುವವರು ಸಾರ್ವಜನಿಕರಂತ ಇಲ್ಲ. ಎಲ್ಲಾ ಉಗ್ರಗಾಮಿಗಳು. ಇವರನ್ನೆಲ್ಲಾ ಒಂದು ಮಟ್ಟಕ್ಕೆ ನಿರ್ನಾಮ ಮಾಡಿದ್ದರೇ ಒಂದಷ್ಟು ನಿಮ್ಮದಿ ಬದುಕನ್ನು ಕಾಣಬಹುದಿತ್ತು ಎಂಬುದು ನನ್ನ ಉದ್ದೇಶವಾಗಿದೆ. ಮೋದಿ ನಡೆ ಬಗ್ಗೆ ನಾವು ಪ್ರಶ್ನೆ ಮಾಡುವುದಕ್ಕೆ ಆಗುವುದಿಲ್ಲ. ಒಬ್ಬ ಚಿಂತಕ, ದೇಶ ಹಾಗೂ ಧರ್ಮವನ್ನು ರಕ್ಷಣೆ ಮಾಡುವಂತಹವರು. ಕೆಲ ಅನಿವಾರ್ಯಕಾರಣಗಳು ಒತ್ತಡ ಬಂದಿರಬಹುದು. ಮುಂದಿನ ದಿನಗಳಲ್ಲಿ ಇನ್ನಷ್ಟು ಬಲವಾಗಿ ನಿಲ್ಲುತ್ತಾರೆ ಎನ್ನುವ ನಂಬಿಕೆ ಇದೆ ಎಂದರು.

ರಾಷ್ಟ್ರ ರಕ್ಷಣೆ ಸೇನೆ ಸುರೇಶ್ ಗೌಡ ಮಾತನಾಡಿ, ಹಾಸನದಲ್ಲಿ ಹಿಂದುಪರ ಸಂಘಟನೆಗಳ ಮುಖಂಡರು ಎಲ್ಲಾ ಸೇರಿದ್ದೇವೆ. ನಾವು ಸತತ ಒಂದು ತಿಂಗಳಿನಿಂದ ಎಲ್ಲಾ ಸಣ್ಣ ಸಣ್ಣ ಹಿಂದು ಸಂಘಟನೆಗಳ ಮುಖಂಡರುಗಳನ್ನು ಭೇಟಿ ಮಾಡಿ ಅವರವರ ಸಂಘಟನೆಗಳಲ್ಲಿ ಪ್ರತ್ಯೇಕವಾಗಿ ಅವರದೆಯಾದ ಶೈಲಿಯಲ್ಲಿ, ಸಿದ್ಧಾಂತದಲ್ಲಿ ಹಿಂದುಪರ ಕೆಲಸ ಮಾಡುತ್ತಿದ್ದು, ಕಾರ್ಯಕರ್ತರುಗಳಿಗೆ ತೊಂದರೆಗಳಾದಗ ಏನಾದರೂ ಆರ್ಥಿಕ ಬೆಂಬಲವಿಲ್ಲದೇ ಸಮಸ್ಯೆಗಳಾದಗ ಅವರನ್ನು ಕಾಯಲು ಪ್ರತಿ ಜಿಲ್ಲೆಯಲ್ಲೂ ಕೂಡ ಚಿಕ್ಕಚಿಕ್ಕ ಸಂಘಟನೆಗಳ ಎಲ್ಲಾರನ್ನು ಸೇರಿಸಿ ಹಿಂದೂ ಪರ ಒಕ್ಕೂಟಗಳ ಸಂಘಟನೆ ರಚನೆ ಮಾಡಲಾಗಿದೆ. ಇದಕ್ಕೆಲ್ಲಾ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ ಎಂದರು. ಎಲ್ಲಾರೂ ದೇಶಕ್ಕೆ, ಧರ್ಮಕ್ಕೊಸ್ಕರ ದುಡಿದಿರುವಂತಹವರು ೨೦ ರಿಂದ ೨೫ ವರ್ಷಗಳ ಕಾಲ ಅನುಭವ ಇರುವವರು ನಮ್ಮ ಒಕ್ಕೂಟದಲ್ಲಿ

ಸೇರಿದ್ದಾರೆ. ಹೊರಗೆ ದೇಶ ದ್ರೋಹಿಗಳನ್ನು ಈ ಸೈನಿಕರು ಕಾಪಾಡುತ್ತಾರೆ. ಈ ದೇಶದ ಒಳಗೆ ಇರುವಂತಹ ಧರ್ಮ ದ್ರೋಹಿಗಳನ್ನು ಮಟ್ಟ ಹಾಕಬೇಕೆಂದರೇ ನಮ್ಮಂತಹ ಹಿಂದೂ ಮುಖಂಡರು ಎಲ್ಲಾ ಒಗ್ಗಟ್ಟಾಗಿ ದುಷ್ಟರಿಗೆ ಪಾಠ ಕಲಿಸಲು ನಾವೆಲ್ಲಾ ಸೇರಿ ಒಕ್ಕೂಟ ರಚನೆ ಮಾಡಿಕೊಂಡಿದ್ದೇವೆ. ಹಾಸನದಲ್ಲಿ ನಾವುಗಳು ಸೇರಿ ಸಭೆ ಮಾಡಲಾಗಿದ್ದು, ಕಾರ್ಯಕರ್ತರ ಬೆಂಬಲದೊಂದಿಗೆ ಮುಂದೆ ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಕರೆ ನೀಡಿದರು.

ಇದೆ ವೇಳೆ ಗೋಪಾಲ್, ಅನಂತ್, ಮಾರಣ ಪಾಳೇಗಾರ್, ತುಮಕೂರಿನ ಮಂಜು ಭಾರ್ಗವ್, ಧರ್ಮ ನಾಯಕ್, ಪ್ರಸಾದ್, ಭರತ್ ಇತರರು ಉಪಸ್ಥಿತರಿದ್ದರು.

Continue Reading

Hassan

ಜಮೀನನ್ನು ಹರಾಜು ಮಾಡದೇ ಓಟಿ.ಎಸ್ ಮೂಲಕ ಸಾಲ ಮರುಪಾವತಿಗೆ ಅವಕಾಶ ನೀಡಿ: ರೈತ ಸಂಘ ಪ್ರತಿಭಟನೆ

Published

on

ಹಾಸನ: ಕಾವೇರಿ ಗ್ರಾಮೀಣ ಬ್ಯಾಂಕಿನಲ್ಲಿ ಸಾಲವನ್ನು ಪಡೆದ ಶಾಂತೇಗೌಡರು ನಂತರ ಮೃತರಾಗಿದ್ದು, ನಂತರ ಅವರ ಮಗನಾದ ಜಿ.ಎಸ್. ಶಿವಕುಮಾರ್ ರವರಿಗೆ ಓಟಿ.ಎಸ್. ಮುಖಾಂತರ ಮರುಪಾವತಿ ಮಾಡಲು ಅವಕಾಶ ಮಾಡಿಕೊಟ್ಟು ಹಾಗೂ ಜಮೀನನ್ನು ಹರಾಜು ಹಾಕದೆ ಬಗೆಹರಿಸಿಕೊಡುವಂತೆ ಆಗ್ರಹಿಸಿ ನಗರದ ಕೆ.ಆರ್. ಪುರಂನಲ್ಲಿರುವ ಕಾವೇರಿ ಗ್ರಾಮೀಣ ಬ್ಯಾಂಕ್ ಮುಂದೆ ರೈತರು ಪ್ರತಿಭಟಿಸಿ ಆಕ್ರೋಶವ್ಯಕ್ತಪಡಿಸಿದರು.

ಇದೆ ವೇಳೆ ರೈತರ ಸಂಘದ ಜಿಲ್ಲಾಧ್ಯಕ್ಷ ಮೂರ್ತಿ ಕಣಾಗಲ್ ಮಾಧ್ಯಮದೊಂದಿಗೆ ಮಾತನಾಡಿ, ದಿವಂಗತ ಶಾಂತೇಗೌಡ ರವರು ಮಾಡಿದ್ದ ಸಾಲವನ್ನು ಅವರು ತೀರಿಹೋದ ನಂತರ ಅವರ ಮಗನಾದ ಜಿ.ಎಸ್.ಶಿವಕುಮಾರ ಕಟ್ಟಲು ಬದ್ದರಾಗಿದ್ದು, ಓ.ಟಿ.ಎಸ್. ಮಾಡಿಕೊಡಿ ಎಂದು ೨೦೨೫ ಜನವರಿ ತಿಂಗಳಲ್ಲಿ ಅಡಗೂರು ಶಾಖೆಗೆ ಹೋಗಿ ಕೇಳಿದಾಗ ಅವರು ೧೩ ಲಕ್ಷ ಹಣವನ್ನು ಕಟ್ಟಿ ಎಂದು ಹೇಳಿರುತ್ತಾರೆ. ಆಗ ಶಿವಕುಮಾರ್ ೭ ಲಕ್ಷ ಕಟ್ಟುವುದಾಗಿ ಹೇಳಿರುತ್ತಾರೆ. ನಂತರ ಅವರು ಹಾಸನದ ಮುಖ್ಯ ಕಛೇರಿಗೆ ಹೋಗಿ ಎಂದು ಹೇಳಿದರು. ಆಗ ಶಿವಕುಮಾರ್ ಮುಖ್ಯ ಕಛೇರಿಗೆ ಹೋದಾಗ ವ್ಯವಸ್ಥಾಪಕರು ಕಛೇರಿಯಲ್ಲಿ ಇಲ್ಲ ಎಂದು ಹೇಳಿದರು. ಆಗ ಶಿವಕುಮಾರ್ ಪುನಃ ಹೋದಾಗ ಲೋನ್ ಸೆಕ್ಷನ್ ನವರು ೨೦ ಲಕ್ಷ ರೂ ಕಟ್ಟಿ ಎಂದು ಹೇಳಿದರು. ಆಗ ಶಿವಕುಮಾರ್ ಪ್ರಾದೇಶಿಕ ವ್ಯವಸ್ಥಾಪಕರನ್ನು ಭೇಟಿ ಮಾಡುತ್ತೇನೆ ಎಂದು

ಹೇಳಿದೆನು. ಅವರು ಸಿಗದ ಕಾರಣ ಮತ್ತೆ ಹೋದಾಗ ಪ್ರಾದೇಶಿಕ ವ್ಯವಸ್ಥಾಪಕರು ಸಿಗಲಿಲ್ಲ ಆದ ಕಾರಣ ಶಿವಕುಮಾರ್ ಓ.ಟಿ.ಎಸ್. ಮುಖಾಂತರ ಬಗೆಹರಿಸಲು ಬದ್ದನಿದ್ದರೂ ಸಹ ಹಣ ಕಟ್ಟಿಸಿಕೊಳ್ಳದೆ ಅವರ ತಂದೆಯವರ ಹೆಸರಿನಲ್ಲಿರುವ ಜಮೀನನ್ನು ಹರಾಜು ಹಾಕಲು ಬ್ಯಾಂಕಿನವರು ಹೊರಟಿದ್ದಾರೆ. ಆದ್ದರಿಂದ ತಾವುಗಳು ಜಮೀನನ್ನು ಹರಾಜು ಹಾಕದ ಹಾಗೆ ತಡೆಹಿಡಿದು ಇವರ ಕುಟುಂಬ ಬೀದಿಪಾಲು ಆಗದ ಹಾಗೆ ಮಾಡಿ ಸದರಿ ಶಿವಕುಮಾರ್‌ರವರಿಗೆ ನ್ಯಾಯ ಕೊಡಿಸಬೇಕಾಗಿ ಕೋರುತ್ತೇನೆ ಎಂದು ಮನವಿ ಮಾಡಿದರು.

೨೦೨೫ ಮೇ ೫ ರಂದು ಸಂಘದ ವತಿಯಿಂದ ಬ್ಯಾಂಕಿನ ಮುಂಭಾಗ ಧರಣಿ ಮಾಡಿದ ಸಂದರ್ಭದಲ್ಲಿ ಸಹ ಓ.ಟಿ.ಎಸ್. ಮುಖಾಂತರ ಬಗೆಹರಿಸಿಕೊಡುವುದಾಗಿ ಹೇಳಿದ್ದರು. ಅವರೂ ಸಹ ಇದುವರೆಗೆ ಯಾವುದೇ ಓ.ಟಿ.ಎಸ್. ಕೊಡದೆ ಜಮೀನನ್ನು ಇದೆ ತಿಂಗಳು ೨೮ ರಂದು ಹರಾಜು ಹಾಕಲು ಹೊರಟಿದ್ದಾರೆ. ಪುನಃ ಶಿವಕುಮಾರ್ ದಿನಾಂಕ:೧೦.೦೫.೨೦೨೫ರಂದು ಪ್ರಾದೇಶಿಕ ಕಛೇರಿಗೆ ಹೋಗಿ ಈ ಬಗ್ಗೆ ಕೇಳಿದಾಗ ಅವರು ೬೦ ಲಕ್ಷ ಕಟ್ಟಿ ಎಂದು ನೋಟೀಸು ನೀಡಿರುತ್ತಾರೆ. ಆದ್ದರಿಂದ ದಯಮಾಡಿ ಲೇಟ್ ಶಾಂತೇಗೌಡ ಬಿನ್ ಲೇಟ್ ಮಲ್ಲೇಗೌಡ ಇವರ ಜಮೀನು ಹರಾಜು ಹಾಕದಾಗೆ ತಡೆಹಿಡಿದು ಶಿವಕುಮಾರ್ ರವರಿಗೆ ಓಟಿ.ಎಸ್ ಮುಖಾಂತರ ಸಾಲ ತೀರುವಳಿ ಮಾಡಿಸಿಕೊಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಬಿಟ್ಟಗೌಡನಹಳ್ಳಿ ಮಂಜು, ಆಲದಹಳ್ಳಿ ಶಶಿಧರ್, ರಾಜಣ್ಣ, ಶಿವಕುಮಾರ್, ಶೋಮಶೇಖರ್, ಪಾಲಾಕ್ಷ, ಶಂಕ ಮಂಜಣ್ಣ, ಮನು ಇತರರು ಉಪಸ್ಥಿತರಿದ್ದರು.

 

Continue Reading

Trending

error: Content is protected !!