Connect with us

Crime

ಎರಡು ಮಕ್ಕಳ ತಾಯಿಯ ಮೃತದೇಹ ಪ್ರಿಯಕರನೊಂದಿಗೆ ಬಾವಿಯಲ್ಲಿ ಪತ್ತೆ

Published

on

ಮೂಡುಬಿದಿರೆ: ಎರಡು ಮಕ್ಕಳ ತಾಯಿಯ ಮೃತದೇಹ ಪ್ರಿಯಕರನೊಂದಿಗೆ ಬಾವಿಯಲ್ಲಿ ಪತ್ತೆ

 

ಮೂಡುಬಿದಿರೆ: ದ.ಕ.ಜಿಲ್ಲೆಯ ಮೂಡಬಿದಿರೆ ತಾಲೂಕಿನ ಬಡಗಮಿಜಾರು ಮರಕಡ ಎಂಬಲ್ಲಿ ಎರಡು ಮಕ್ಕಳ ತಾಯಿಯ ಮೃತದೇಹ ಆಕೆಯ ಪ್ರಿಯಕರನೊಂದಿಗೆ ಬಾವಿಯಲ್ಲಿ ಪತ್ತೆಯಾಗಿದೆ.

ಬಡಗಮಿಜಾರು ನಿವಾಸಿ ವಿವಾಹಿತೆ ನಮಿಕ್ಷಾ ಶೆಟ್ಟಿ (29)ಹಾಗೂ ಆಕೆಯ ಪ್ರಿಯಕರ ಬಾಗಲಕೋಟೆ ಮೂಲದ, ಸದ್ಯ ನಿಡ್ಡೋಡಿ ನಿವಾಸಿ ಪ್ರಶಾಂತ್ ಮೃತಪಟ್ಟವರು.

ನಮೀಕ್ಷಾ ಶೆಟ್ಟಿಗೆ ಮದುವೆಯಾಗಿದ್ದು, ಇಬ್ಬರು ಪುಟ್ಟ ಗಂಡು ಮಕ್ಕಳಿದ್ದಾರೆ. ಇವರ ಪತಿ ಸತೀಶ್ ಪೂನಾದಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ನಮೀಕ್ಷಾ ಶೆಟ್ಟಿಗೆ ಪತಿಯೊಂದಿಗೆ ಸಂಸಾರ ಸರಿ ಬಾರದೆ ತನ್ನ ಮಕ್ಕಳೊಂದಿಗೆ ತವರು ಮನೆಯಲ್ಲಿಯೇ ವಾಸವಾಗಿದ್ದರು‌. ಈ ನಡುವೆ, ನಮೀಕ್ಷಾ ಶೆಟ್ಟಿಗೆ ಇನ್‌ಸ್ಟಾಗ್ರಾಂ ಮೂಲಕ ಪ್ರಶಾಂತ್‌ನ ಪರಿಚಯವಾಗಿದೆ. ಪ್ರಶಾಂತ್‌ಗೆ ಮದುವೆಯಾಗಿ ವಿಚ್ಛೇದನ ಆಗಿದೆ.

ಪ್ರಿಯಕರ ಪ್ರಶಾಂತ್ ಆಗಾಗ ನಮೀಕ್ಷಾ ಶೆಟ್ಟಿ ಮನೆಗೆ ಬಂದು ಹೋಗುತ್ತಿದ್ದ ಎನ್ನಲಾಗಿದೆ. ಬುಧವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಂದಿದ್ದು, ಈ ಸಂದರ್ಭ ಇಬ್ಬರ ನಡುವೆ ಜಗಳವಾಗಿದೆ. ಈ ವೇಳೆ ಆಕೆ ಬಾವಿಗೆ ಹಾರಿದ್ದಾಳೆ. ಇದರ ಬೆನ್ನಿಗೆ ಪ್ರಶಾಂತ್ ತಾನೂ ಬಾವಿಗೆ ಹಾರಿದ್ದಾನೆ ಎಂದು ಹೇಳಲಾಗುತ್ತಿದೆ. ಅಗ್ನಿಶಾಮಕ ಸಿಬ್ಬಂದಿ ಮೃತದೇಹವನ್ನು ಬಾವಿಯಿಂದ ಮೇಲೆತ್ತಿದ್ದಾರೆ. ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

Crime

ಜೀಪ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ : ಎಲ್‌ಎಲ್‌ಬಿ ವಿದ್ಯಾರ್ಥಿ ಸ್ಥಳದಲ್ಲೇ ಸಾ**ವು

Published

on

ಹಾಸನ : ಜೀಪ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ

ಎಲ್‌ಎಲ್‌ಬಿ ವಿದ್ಯಾರ್ಥಿ ಸ್ಥಳದಲ್ಲೇ ಸಾವು

ಮತ್ತೋರ್ವ ಯುವಕನಿಗೆ ಗಂಭೀರ ಗಾಯ

ಚಂದನ್ (22) ಮೃತ ಎಲ್‌ಎಲ್‌ಬಿ ವಿದ್ಯಾರ್ಥಿ

ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಹಿರಿಅಸಡೆ ಗ್ರಾಮದ ಬಳಿ ಘಟನೆ

ಪಕ್ಕದ ಮನೆಯ ಭರತ್ ಎಂಬುವವನ ಜೊತೆ KA-46-J-4594 ನಂಬರ್‌ನ ಬೈಕ್‌ನಲ್ಲಿ ಕಾಲೇಜಿಗೆ ತೆರಳುತ್ತಿದ್ದ ಚಂದನ್

ಕಾರ್ಮಿಕರನ್ನು ಕರೆದುಕೊಂಡು ಬರುತ್ತಿದ್ದ KA-13-M-2664 ನಂಬರ್‌ನ ಜೀಪ್‌ ನಡುವೆ ಸಂಭವಿಸಿದ ಅಪಘಾತ

ಸ್ಥಳದಲ್ಲೇ ಬೈಕ್‌ನಲ್ಲಿದ್ದ ಚಂದನ್ ಸಾವು

ಗಾಯಾಳು ಭರತ್ ಆಸ್ಪತ್ರೆಗೆ ರವಾನೆ

ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ

ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

Continue Reading

Crime

ಹೆತ್ತ ತಾಯಿ ಕೊಲ್ಲಲು ತಾನಿದ್ದ ಮನೆಗೆ ಬೆಂಕಿ ಇಟ್ಟ ದುಷ್ಟ

Published

on

ಮೈಸೂರು :
ಕುಡಿಯಲು ಹಣ ನೀಡದಿದ್ದಕ್ಕೆ ಮನೆಗೆ ಬೆಂಕಿ ಹಚ್ಚಿದ ಭೂಪ…!
ಬೆಂಕಿಯಿಂದ ತಾಯಿ ಬಚಾವ್, ಆರೋಪಿ ಅಂದರ್.
ಮೈಸೂರು ತಾಲೂಕಿನ ರಮ್ಮನಹಳ್ಳಿಯಲ್ಲಿ ಘಟನೆ.
ಶಿವಪ್ರಕಾಶ್ (26) ಮನೆಗೆ ಬೆಂಕಿ ಹಚ್ಚಿದ ಭೂಪ.
ರಮ್ಮನಹಳ್ಳಿಯಲ್ಲಿ ಸಣ್ಣ ಅಂಗಡಿ ಇಟ್ಟುಕೊಂಡಿರುವ ಕಲಾವತಿ.
ಕಲಾವತಿಗೆ ಇಬ್ಬರು ಮಕ್ಕಳು. ಈ ಪೈಕಿ ಎರಡನೇ ಪುತ್ರನೇ ಶಿವಪ್ರಕಾಶ್.
ಮತ್ತೊಂದು ಮದುವೆಯಾಗಿ ಪ್ರತ್ಯೇಕವಾಗಿರುವ ಪತಿ.
ಕುಡಿತದ ಚಟಕ್ಕೆ ಒಳಗಾಗಿರುವ ಶಿವಪ್ರಕಾಶ್ ನಿಂದ ಹಣಕ್ಕಾಗಿ ಕಿರುಕುಳ.
ಎರಡು ದಿನಗಳ ಹಿಂದೆ ತಾಯಿ ಬಳಿ ಹಣ ಕೇಳಿದ್ದ ಶಿವಪ್ರಕಾಶ್.
ಹಣ ಇಲ್ಲ ಎಂದಿದ್ದಕ್ಕೆ ತಾಯಿ ಮನೆ ಒಳಗೆ ಇದ್ದಾಗಲೇ ಹೊರಗಿನಿಂದ ಮನೆಗೆ ಬೆಂಕಿ ಹಚ್ಚಿರುವ ಶಿವಪ್ರಕಾಶ್.
ಈ ವೇಳೆ ಕಲಾವತಿಯನ್ನು ರಕ್ಷಿಸಿದ ಸ್ಥಳೀಯರು.
ಮನೆಯಲ್ಲಿದ್ದ 60 ಸಾವಿರ ಮೌಲ್ಯದ ಪದಾರ್ಥಗಳು ಬೆಂಕಿಗಾಹುತಿ.
ದಕ್ಷಿಣ ಠಾಣೆ ಪೊಲೀಸರಿಂದ ಆರೋಪಿ ಶಿವಪ್ರಕಾಶ್ ಬಂಧನ.

Continue Reading

Crime

ಚಿನ್ನದಂಗಡಿ ಕ್ಳಳತನ ಮಾಡಿದ್ದನ್ನು ನೋಡಿದ ಹೋಟೆಲ್ ಮಾಲೀಕ‌ನ ಹ*ತ್ಯೆ..

Published

on

ಮಂಡ್ಯ: ಚಿನ್ನದಂಗಡಿಗೆ ಕನ್ನ..ಕಳ್ಳತನ ಮಾಡಿದ್ದನ್ನು ನೋಡಿದ ಹೋಟೆಲ್ ಮಾಲೀಕ‌ನ ಹತ್ಯೆ..ಯಾಗಿರುವ ಘಟನೆ ಮಳವಳ್ಳಿ ತಾಲ್ಲೂಕಿನ

ಕಿರುಗಾವಲು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಮಹದೇಶ್ವರ ಹೋಟೆಲ್ ಮಾಲೀಕ ಮಾದಪ್ಪ (60) ಕೊಲೆಯಾದ ವ್ಯಕ್ತಿ. ಹೋಟೆಲ್ ಪಕ್ಕದಲ್ಲೆ ಇದ್ದ ಮಹಾಲಕ್ಷ್ಮಿ ಜ್ಯುವೆಲರ್ಸ್ ಗೆ ಬೆಳಗ್ಗಿನ‌ ಜಾವ 3 ಗಂಟೆ ವೇಳೆ ಕಳ್ಳರ ಗ್ಯಾಂಗ್ ಒಂದು ಎಂಟ್ರಿ ಕೊಟ್ಟು ಗ್ಯಾಸ್ ಕಟರ್ ಮೂಲಕ ಚಿನ್ನದಂಗಡಿ ಶಟರ್ ಓಪನ್ ಮಾಡಿ
ಚಿನ್ನಾಭರಣ ದೋಚಿದ್ದಾರೆ.

ಶಬ್ದ ಕೇಳಿ ಹೋಟೆಲ್ ನಿಂದ ಹೊರಬಂದ ಮಾದಪ್ಪ ಕಳ್ಳರ ಗ್ಯಾಂಗ್ ಅನ್ನು ನೋಡಿದ್ದಾರೆ.
ಈ ವೇಳೆ ಮಾದಪ್ಪನ ಕತ್ತು ಹಿಸುಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಜೊತೆಗೆ ಹಣ ದೋಚಿ ಸಿಸಿ ಕ್ಯಾಮರಾ ಡಿವಿಆರ್ ಅನ್ನು ಖಾದಿಮರು ಹೊತ್ತೊಯ್ದಿದ್ದಾರೆ

ಸ್ಥಳಕ್ಕೆ ಮಂಡ್ಯ ಎಸ್ಪಿ ಮಲ್ಲಿಕಾರ್ಜುನ್ ಬಳದಂಡಿ ಹಾಗೂ ಕಿರುಗಾವಲು ಠಾಣಾ ಪೊಲೀಸರ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಭಂದ ಕಿರುಗಾವಲು ಠಾಣೆಯಲ್ಲಿ ಪ್ರಕರಣ ದಾಖಲೂಗೊಂಡಿದ್ದು ಕಳ್ಳರಿಗಾಗಿ ಹುಡುಕಾಟ ನಡೆಸಲಾಗಿದೆ.

Continue Reading

Trending

error: Content is protected !!