Connect with us

Chikmagalur

ಅತ್ಯಾಚಾರಕ್ಕೆ ಯತ್ನ ಆರೋಪ, ವೈದ್ಯ ಎಲ್ಡೋಸ್ ಜೈಲು ಪಾಲು

Published

on

ಚಿಕ್ಕಮಗಳೂರು : ಬಾಳೆಹೊನ್ನೂರಿನಲ್ಲಿ ಅತ್ಯಾಚಾರ ಯತ್ನ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ನರಸಿಂಹರಾಜಪುರ ವೈದ್ಯಾಧಿಕಾರಿ ಡಾ .ಎಲ್ಡೋಸ್ ಜಾಮೀನು ರದ್ದಾಗಿದ್ದು ಜೈಲು ಪಾಲಾಗಿದ್ದಾನೆ.
ಸೋಮವಾರ ವಿಚಾರಣೆ ನಡೆಸಿದ ನರಸಿಂಹರಾಜಪುರ ನ್ಯಾಯಾಲಯದ ನ್ಯಾಯಾಧೀಶರು ಜಾಮೀನು ರದ್ದುಗೊಳಿಸಿ ಆದೇಶಿಸಿದ್ದಾರೆ. ಘಟನೆ ನಂತರ ಡಾ. ವರ್ಗೀಸ್ ನನ್ನು ನರಸಿಂಹರಾಜಪುರ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಹುದ್ದೆಯಿಂದ ವಜಾ ಮಾಡಲಾಗಿತ್ತು. ಡಾ. ಎಲ್ಡೋಸ್ ವಿರುದ್ಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 354 ಅನ್ವಯ ಕೇಸ್ ದಾಖಲಾಗಿತ್ತು. ಬಳಿಕ ಆರೋಪಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ವಿಚಾರಣೆ ನಡೆಸಿದ ನರಸಿಂಹರಾಜಪುರ ನ್ಯಾಯಾಲಯದ ನ್ಯಾಯಾಧೀಶರು ಜಾಮೀನು ರದ್ದುಗೊಳಿಸಿ ಆದೇಶಿಸಿದ್ದಾರೆ.
ನೊಂದ ಮಹಿಳೆಯೂ ಇಲಾಖೆಯ ಡಿ ದರ್ಜೆ ಸಿಬ್ಬಂದಿ ಆಗಿದ್ದು, ಬಾಳೆಹೊನ್ನೂರು ವಸತಿ ಗೃಹಕ್ಕೆ ಬರಲು ಹೇಳಿದ್ದನು, ಈತನ ಬಗ್ಗೆ ತಿಳಿದಿದ್ದ ಮಹಿಳೆ ತನ್ನ ಗಂಡ ಹಾಗೂ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದರು. ಬಾಳೆಹೊನ್ನೂರು ಪಟ್ಟಣದ ಸರ್ಕಾರಿ ವೈದ್ಯರ ವಸತಿ ಗೃಹದಲ್ಲಿ ಮಹಿಳೆಯೊಂದಿಗೆ ಏಕಾಂತ ಸಮಯ ಕಳೆಯಲು ತಯಾರಾಗಿದ್ದಾಗ ಮಹಿಳೆಯ ಪತಿ ಹಾಗೂ ಸಂಬಂಧಿಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದನು. ಈತನ ಘನಂದಾರಿ ಕೆಲಸಕ್ಕೆ ಸಾರ್ವಜನಿಕರು ಹಾಗೂ ಕುಟುಂಬಸ್ಥರು ಹಿಗ್ಗಾಮುಗ್ಗಾ ಥಳಿಸಿದ್ದರು.

Continue Reading
Click to comment

Leave a Reply

Your email address will not be published. Required fields are marked *

Chikmagalur

ತಾಪಂ-ಜಿಪಂ-ಜಿಬಿಎ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ ವಿಚಾರ : ಸಚಿವ ಪರಮೇಶ್ವರ್

Published

on

ಚಿಕ್ಕಮಗಳೂರು : ಚಿಕ್ಕಮಗಳೂರಿನ ಗೃಹ ಸಚಿವರಾದ ಪರಮೇಶ್ವರ್  ರವರು, ತಾಪಂ-ಜಿಪಂ-ಜಿಬಿಎ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ ವಿಚಾರವಾಗಿ , ನಿನ್ನೆ ಕ್ಯಾಬಿನೆಟ್ ನಲ್ಲಿ ತೀರ್ಮಾನ ಮಾಡಿದ್ದೇವೆ, ಎಂದರು.

ಈ ಚುನಾವಣೆಗೆ ಬ್ಯಾಲೆಡ್ ಪೇಪರ್ ಇಂಟ್ರಡ್ಯೂಸ್ ಮಾಡ್ಬೇಕು ಅಂತ ತೀರ್ಮಾನ ಮಾಡಿದ್ದೇವೆ, ತಾಪಂ-ಗ್ರಾಪಂಗೆ ಮಾಡ್ಬೇಕು ಅಂತ ತೀರ್ಮಾನ ಆಗಿದೆ.

ಬಹುಶಃ, ಜಿಬಿಎಗೂ ಅದನ್ನೇ ಅಪ್ಲೈ ಮಾಡುತ್ತಾರೆ.ಎಂದು  ಚಿಕ್ಕಮಗಳೂರಿನಲ್ಲಿ ಗೃಹ ಸಚಿವ ಪರಮೇಶ್ವರ್ ಹೇಳಿದರು.

Continue Reading

Chikmagalur

ಗಾಂಧಿ ಹೆಸರಲ್ಲಿ ಕಾಂಗ್ರೆಸ್ಸಿಗರು ನುಂಗಣ್ಣರು ಎಂದು ಬಿಜೆಪಿ ಜಾಹಿರಾತು ವಿಚಾರ : ಪರಮೇಶ್ವರ್

Published

on

ಚಿಕ್ಕಮಗಳೂರು : ಗಾಂಧಿ ಹೆಸರಲ್ಲಿ ಕಾಂಗ್ರೆಸ್ಸಿಗರು ನುಂಗಣ್ಣರು ಎಂದು ಬಿಜೆಪಿ ಜಾಹಿರಾತು ವಿಚಾರ ಎಂದು  ಚಿಕ್ಕಮಗಳೂರಿನಲ್ಲಿ ಗೃಹ ಸಚಿವ ಪರಮೇಶ್ವರ್ ಹೇಳಿದರು.

ಗಾಂಧಿ ಬಗ್ಗೆ ಅವರಿಗೆ ಯಾವ ಗೌರವ ಭಾವನೆ ಇದೆ ಎಂಬುದು ಜಗತ್ತಿಗೆ ಗೊತ್ತಿದೆ, ಈಗ ಹೊಸದಾಗಿ ಮಹಾತ್ಮ ಗಾಂಧೀಜಿ ಬಗ್ಗೆ ಮಾತನಾಡಲು ಹೊರಟಿದ್ದಾರೆ.

ಅಷ್ಟು ಗೌರವ ಇದ್ರೆ, ಉದ್ಯೋಗ ಖಾತ್ರಿ ಯೋಜನೆಗೆ ಇದ್ದ ಗಾಂಧಿ ಹೆಸರನ್ನ ಏಕೆ ತೆಗೆಯಲು ಮುಂದಾದರು, ಅದಕ್ಕೆ ಯಾವುದಾದರೂ ಕಾರಣ ಇತ್ತಾ, ಯಾರಾದರೂ ಹೋರಾಟ ಮಾಡಿದ್ದರಾ, ಕಾಂಗ್ರೆಸ್ ಹೆಸರು ಗಾಂಧಿ ಜೊತೆ ಜೋಡಣೆಯಾಗಿದೆ ಎಂದು ತೆಗೆದಿದ್ದಾರೆ.

ನರೇಗಾ ಯೋಜನೆ ವಿಶ್ವದಲ್ಲಿ ದೊಡ್ಡ ಪ್ರಮಾಣದಲ್ಲಿ ಕೆಲಸ ಕೊಡುವ ಕಾರ್ಯಕ್ರಮ ಎಂದು ವರ್ಲ್ಡ್ ಬ್ಯಾಂಕ್ ಹೇಳಿದೆ. ಅನೇಕ ಅಂತಾರಾಷ್ಟ್ರೀಯ ಸಂಸ್ಥೆಗಳು ಹೇಳಿವೆ, ಇದನ್ನೆಲ್ಲ ತಡೆಯಲು ಆಗದ ಬಿಜೆಪಿಯವರು ಹೀಗೆ ಮಾಡಿದ್ದಾರೆ ಎಂದು ಹೇಳಿದರು.

Continue Reading

Chikmagalur

ಧರ್ಮಸ್ಥಳ ಬುರುಡೆ ಕೇಸ್ ತನಿಖಾ ವರದಿ ಬಹಿರಂಗ ವಿಚಾರ

Published

on

ಚಿಕ್ಕಮಗಳೂರು : ಚಿಕ್ಕಮಗಳೂರಿನಲ್ಲಿ ಗೃಹ ಸಚಿವ ಪರಮೇಶ್ವರ್  ರವರು, ಧರ್ಮಸ್ಥಳ ಬುರುಡೆ ಕೇಸ್ ತನಿಖಾ ವರದಿ ಬಹಿರಂಗ ವಿಚಾರ  ಹೇಳಿದ್ದಾರೆ.

ಅಂತಿಮ ವರದಿ ಇನ್ನು ಕೊಟ್ಟಿಲ್ಲ, ಕೊಡಬೇಕು. ಅವರು ಎಲ್ಲೆಲ್ಲಿ ಸಾಕ್ಷಿ ಕಲೆ ಹಾಕಬೇಕಿತ್ತೋ ಅಲ್ಲಲ್ಲೇ ಹೋಗಿದ್ದಾರೆ.

ಅದನ್ನೆಲ್ಲಾ ಕ್ರೋಡೀಕರಿಸಿ ಅಂತಿಮ ವರದಿ ನೀಡುತ್ತಾರೆ, ಆಮೇಲೆ ಬಹಿರಂಗಪಡಿಸುತ್ತೀವಿ, ಕಾಲದ ಮಿತಿ ಹೇಳೋಕಾಗುತ್ತಾ, ಸ್ಯಾಟಲೈಟ್ ಲಾಂಚ್ ಮಾಡೋದಾದ್ರೆ ಕಾಲ ಹೇಳಬಹುದು ಎಂದರು.

ಕಾಲ ಹೇಳಲು ಆಗಲ್ಲ, ಆದಷ್ಟು ಬೇಗ ಮಾಡಿ ಎಂದು ಆರಂಭದಲ್ಲೇ ಹೇಳಿದ್ದೇವು,  ಅವರು ಸಂಪೂರ್ಣ ವರದಿ ಸಿದ್ಧಪಡಿಸಿ ಕೊಡ್ತಾರೆ, ಆಮೇಲೆ ಬಿಡುಗಡೆ ಮಾಡುತ್ತೇವೆ ಎಂದರು.

Continue Reading

Trending

error: Content is protected !!