Chamarajanagar
ಸಮಯಕ್ಕೆ ಬಾರದ ಬಸ್ ವಿದ್ಯಾರ್ಥಿಗಳ ಪರದಾಟ

ಮೂಡಿಗೆರೆ : ಸಕಲೇಶಪುರ ಹಾಗೂ ಮೂಡಿಗೆರೆ ಮಾರ್ಗವಾಗಿ ಸಂಚರಿಸುವ ಬಸ್ಸುಗಳು ಸರಿಯಾದ ಸಮಯಕ್ಕೆ ಬಾರದೆ ಶಾಲೆ ಮತ್ತು ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪರದಾಟ ಉಂಟಾಗುತ್ತಿದೆ ಎಂದು ಜಗತ್ ಜೆಸಿಐ ಕಾರ್ಯದರ್ಶಿ ಹೊಯ್ಸಳ ಗೋಣಿಬೀಡು ಇವರು ಪತ್ರಿಕೆಗೆ ತಿಳಿಸಿದ್ದಾರೆ.
ಬಸ್ ಗಳು ಸರಿಯಾದ ಸಮಯಕ್ಕೆ ಸಂಚರಿಸದ ಕಾರಣ ಶಾಲೆ ಮತ್ತು ಕಾಲೇಜು ತಲುಪಲು ಸಾಧ್ಯವಾಗುತ್ತಿಲ್ಲ, ಹಾಗೂ ಇಗಾಗಲೆ ಪರೀಕ್ಷೆಗಳು ನೆಡೆಯುತ್ತಿದ್ದೂ ಪರೀಕ್ಷೆ ಸಮಯ 10.30 ಕ್ಕೆ ಆದ್ದರಿಂದ ಪರೀಕ್ಷೆ ಬರೆಯಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಜಗತ್ ಜೆಸಿಐ ಕಾರ್ಯದರ್ಶಿ ಇಂದು ಚಿಕ್ಕಮಗಳೂರು ವಿಭಾಗಿಯ ಅಧಿಕಾರಿಗಳಿಗೆ ಕರೆ ಮಾಡಿ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.ಕೂಡಲೆ ಸಮಯಕ್ಕೆ ಸರಿಯಾಗಿ ಬಸ್ ಗಳು ಸಂಚರಿಸಲು ಸಂಬಂಧಪಟ್ಟ ಕೆ. ಎಸ್. ಆರ್. ಟಿ.ಸಿ ಸಂಸ್ಥೆಯ ಅಧಿಕಾರಿಗಳು ಸೂಕ್ತ ಕ್ರಮವನ್ನು ಕೈಗೊಂಡು ಸಂಬಂಧಪಟ್ಟ ಅಧಿಕಾರಿಗಳಿಗೆ ಕೂಡಲೆ ಬಸ್ ಸಂಚಾರದಲ್ಲಿ ವ್ಯಥೆಯಾಗದಂತೆ ಸೂಚನೆ ನೀಡ ಈಗಾಗಲೆ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕೆಂದು ಜಗತ್ ಜೆಸಿಐ ರವರು ಒತ್ತಾಯಿಸಿದ್ದಾರೆ.
ವರದಿ
ಸಿ. ಎಲ್. ಪೂರ್ಣೇಶ್ ಚಕ್ಕೂಡಿಗೆ
Chamarajanagar
ಚಾಮರಾಜನಗರ: ಫೆ.13ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

ಚಾಮರಾಜನಗರ: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ತಾಲೂಕಿನ ಕಾಗಲವಾಡಿ ಶಾಖಾ ವ್ಯಾಪ್ತಿಯ ಚಂದಕವಾಡಿ ಉಪಕೇಂದ್ರದ ನವೋದಯ ಎನ್.ಜೆ.ವೈ ಹಾಗೂ ಹಿರಿಕೆರೆ ಎನ್.ಜೆ.ವೈ ಫೀಡರ್ ಗಳ ತುರ್ತು ಕಾಮಗಾರಿಯನ್ನು ಫೆಬ್ರವರಿ 13 ರಂದು ಹಮ್ಮಿಕೊಂಡಿರುವುದರಿಂದ ಅಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಹೆಬ್ಬಸೂರು, ಬಸಪ್ಪನಪಾಳ್ಯ, ಸರಗೂರು, ಹುರಳಿನಂಜನಪುರ, ಕಾಗಲವಾಡಿ, ಲಿಂಗರಾಜಪುರ, ಕರಿಯನಕಟ್ಟೆ, ಮಲ್ಲುಪುರ, ಹಂಚಿತಾಳಪುರ, ಕೊಕ್ಕನಹಳ್ಳಿ, ಅಯ್ಯನಪುರ, ಹಿತ್ತಲಗುಡ್ಡ, ಕೋಟಂಬಳ್ಳಿ, ಮಲ್ಲೇದೇವನಹಳ್ಳಿ ಹಾಗೂ ನಾಗವಳ್ಳಿ, ನಲ್ಲೂರು, ದೇವರಾಜಪುರ, ಕೋಟೆತಿಟ್ಟು, ಹೊಂಡರಬಾಳು, ಚಂದಕವಾಡಿ, ಅರಳೀಪುರ ಗ್ರಾಮಗಳಲ್ಲಿವಿದ್ಯುತ್ ವ್ಯತ್ಯಯವಾಗಲಿದೆ.
ಗ್ರಾಹಕರು ಸಹಕರಿಸುವಂತೆ ನಿಗಮದ ಸಂತೇಮರಹಳ್ಳಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Chamarajanagar
ಚಿಣ್ಣರ ಕರ್ನಾಟಕ ದರ್ಶನ: ವಿದ್ಯಾರ್ಥಿಗಳಿಗೆ ವೈವಿಧ್ಯತೆ ತಿಳಿಯಲು ಸಹಕಾರಿ ಎಂದ ಮಾರಯ್ಯ

ಯಳಂದೂರು: ಪರಿಶಿಷ್ಟ ಜಾತಿ ಮತ್ತು ಪಂಗಡದ ವಿಶೇಷ ಯೋಜನೆಯಡಿ ತಾಲ್ಲೂಕಿನ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 75 ಮಕ್ಕಳಿಗೆ ಐದು ದಿನಗಳ ಚಿಣ್ಣರ ಕರ್ನಾಟಕ ದರ್ಶನಕ್ಕೆ ಮಂಗಳವಾರ (ಫೆ.11) ಕ್ಷೇತ್ರ ಶಿಕ್ಷಣಾಧಿಕಾರಿ ಮಾರಯ್ಯ ಚಾಲನೆ ನೀಡಿದರು.
ದೇಶ ಸುತ್ತು ಕೋಶ ಓದು ಎಂಬಂತೆ ಪ್ರವಾಸದ ಸದುಪಯೋಗ ಪಡೆದು ವಿವಿಧ ರೀತಿಯ ಪ್ರದೇಶಗಳ ವೈವಿಧ್ಯತೆ ತಿಳಿಯಲು ಮಾಹಿತಿ ನೀಡಿದರು.
ಈ ವೇಳೆ ನೌಕರರ ಸಂಘದ ನಿರ್ದೇಶಕ ಎಂ. ರಾಜು ಮಕ್ಕಳಿಗೆ ಸಿಹಿ ನೀಡಿ ಶುಭ ಹಾರೈಸಿದರು. ಶಿಕ್ಷಕರ ಸಂಘದ ಚಂದ್ರಮ್ಮ, ಸಲೀನಾ, ಶಿಕ್ಷಣ ಸಂಯೋಜಕರಾದ ಕುಮಾರ್, ಸಿ ಆರ್ ಪಿ ಎಸ್ ರೇಚಣ್ಣ, ತೇಜಸ್ವಿನಿ, ಶಿಕ್ಷಕರಾದ ಮಹದೇವ್, ಗಿರಿನಾಯಕ್ ಶಶಿಧರ್, ನಾಗರಾಜ್, ಸುನೀಲ್ ಇತರರು ಹಾಜರಿದ್ದರು.
Chamarajanagar
ಚಿನ್ನಾಭರಣ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

ಚಾಮರಾಜನಗರ: ಮಹಿಳೆಯೊಬ್ಬರು ಆಟೋದಲ್ಲಿ ಬಿಟ್ಟು ಹೋಗಿದ್ದ ಚಿನ್ನಾಭರಣದ ಬ್ಯಾಗ್ ಅನ್ನು ವಾಪಸ್ ನೀಡಿ ನಗರದ ಆಟೋ ಚಾಲಕ ಸಿದ್ದರಾಜು ಪ್ರಾಮಾಣಿಕತೆ ಮೆರೆದಿದ್ದಾರೆ.
ನಗರದ ಶ್ರೀ ಭುವನೇಶ್ವರಿ ವೃತ್ತದ ಬಳಿ ಹನುಮನಪುರ ನಿವಾಸಿಯಾದ ರಶ್ಮಿ ಅವರು ಬಸ್ ಹತ್ತುವ ಅವಸರದಲ್ಲಿ ಚಿನ್ನಾಭರಣವಿದ್ದ ಬ್ಯಾಗನ್ನು ಆಟೋದಲ್ಲೇ ಮರೆತು ಹೋಗಿದ್ದು, ಬಳಿಕ ಬ್ಯಾಗ್ ಅನ್ನು ಕಳೆದುಕೊಂಡ ವಿಷಯವನ್ನು ಪಟ್ಟಣ ಪೊಲೀಸ್ ಠಾಣೆಗೆ ತಿಳಿಸಿದ್ದಾರೆ.
ಅಷ್ಟರಲ್ಲೇ ನಗರದ ಆಟೋ ಚಾಲಕ ಸಿದ್ದರಾಜು ಎಂಬುವವರು ಆಟೋದಲ್ಲಿದ್ದ ಚಿನ್ನಾಭರಣದ ಬ್ಯಾಗ್ ಅನ್ನು ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದಾರೆ. ತದನಂತರ ಪೊಲೀಸರು ಬ್ಯಾಗ್ ಅನ್ನು ರಶ್ಮಿಗೆ ಒಪ್ಪಿಸಿದರು.
-
Kodagu13 hours ago
ಮಡಿಕೇರಿಯಲ್ಲಿ ಡಿ ಗ್ರೂಪ್ ಹುದ್ದೆಗಳಿಗೆ ಅರ್ಜಿ ಆಹ್ವಾನ
-
Kodagu13 hours ago
ಸ್ಪ್ರಿಂಕ್ಲರ್ ಪೈಪಿಗೆ ಕೃಷಿ ಇಲಾಖೆಯಿಂದ ಸಹಾಯಧನ
-
Kodagu16 hours ago
ಕೊಡಗು ಗೌಡ ಸಮಾಜಗಳ ಒಕ್ಕೂಟ ತೀವ್ರ ಅಸಮಾಧಾನ: ಕಾರಣವೇನು?
-
Hassan22 hours ago
HASSAN: ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟಾಟಾ ವಿಂಗರ್ ವಾಹನ ಪಲ್ಟಿ
-
Mysore22 hours ago
ಅವಹೇಳನಕಾರಿ ಚಿತ್ರವುಳ್ಳ ಪೋಸ್ಟ್ : ಆರೋಪಿ ಬಂಧನಕ್ಕೆ ರಸ್ತೆ ತಡೆದು ಪ್ರತಿಭಟನೆ
-
Hassan17 hours ago
ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಅಕ್ರಮ: ಮರು ಚುನಾವಣೆಗೆ ಒತ್ತಾಯ
-
State15 hours ago
ನಮ್ಮ ಮೆಟ್ರೋ ದರ ಏರಿಕೆ: ಸಿಎಂ ಸಿದ್ದರಾಮಯ್ಯ ಅವರ ಮಾಧ್ಯಮ ಪ್ರಕಟಣೆ
-
Hassan21 hours ago
ಶ್ರೀ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ಜಾತ್ರಾ ಮಹೋತ್ಸವ: ಜೆಡಿಎಸ್ ಹಾಗೂ ಕಾಂಗ್ರೆಸ್ನಿಂದ ಪ್ರತ್ಯೇಕವಾಗಿ ಆರ್ಕೆಸ್ಟ್ರಾ ಆಯೋಜನೆ