Connect with us

Special

ಪ್ರಕೃತಿ ಹಾಗೂ ಮನುಷ್ಯನ ವಿನಾಶಕ್ಕೆ ಕಾರಣವಾಗುತ್ತಿರುವ ಪ್ಲಾಸ್ಟಿಕ್ ಬಳಕೆ ನಿಷೇಧಿಸಬೇಕು

Published

on

ಚನ್ನರಾಯಪಟ್ಟಣ :  ಪ್ರಕೃತಿ ಹಾಗೂ ಮನುಷ್ಯನ ವಿನಾಶಕ್ಕೆ ಕಾರಣವಾಗುತ್ತಿರುವ ಪ್ಲಾಸ್ಟಿಕ್ ಬಳಕೆ ನಿಷೇಧಿಸಬೇಕು ಹಾಗೂ ಕಸ ತ್ಯಾಜ್ಯ ವಿಲೇವಾರಿಯ ಅರಿವು ಪ್ರತಿಯೊಬ್ಬ ನಾಗರೀಕರಿಗೂ ಬರಬೇಕಾಗಿದ್ದು ತಮ್ಮ ಮನೆಯಿಂದಲೇ ಹಸಿಕಸ, ಒಣಕಸ, ಇ – ತ್ಯಾಜ್ಯ ವಿಂಗಡಿಸಿ ಕಸ ಸಂಗ್ರಹಣೆಯ ವಾಹನಕ್ಕೆ ನೀಡಬೇಕಾಗಿದೆ.
ಮುಂದಿನ ದಿನಗಳಲ್ಲಿ ಪಟ್ಟಣದ ಸ್ವಚ್ಚತೆಗೆ ನೌಕರರು ಸಿಗುವುದು ವಿರಳ, ಏಕೆಂದರೆ ತಮ್ಮ ಮನೆಯಲ್ಲಿನ ಕಸವೇ ೨ ದಿನ ಕಳೆದರೆ ಗಬ್ಬು ನಾರುತ್ತದೆ. ಅದನ್ನು ಸ್ವಚ್ಚ ಮಾಡಿಕೊಳ್ಳುವುದೇ ಕಷ್ಟಕರ, ಆದ್ದರಿಂದ ಬೀದಿ ಬದಿಯ ಕಸದ ಸ್ವಚ್ಚತೆಗೆ ಯಕ್ಷ ಪ್ರಶ್ನೆಯಾಗಿ ಉಳಿಯುತ್ತದೆ. ಆದ್ದರಿಂದ ಪ್ರತಿಯೊಬ್ಬ ನಾಗರೀಕನೂ “ನನ್ನ ತ್ಯಾಜ್ಯ ನನ್ನ ಜವಬ್ದಾರಿ” ಎಂದು ಪುರಸಭೆಯೊಂದಿಗೆ ಕೈಜೋಡಿಸಬೇಕಾಗಿದೆ. “ನನ್ನ ಮನೆ, ನನ್ನ ಬೀದಿ, ನನ್ನ ಪಟ್ಟಣದ ಸ್ವಚ್ಛತೆ ದೇಶದ ಅಭಿವೃದ್ಧಿ” ಎಂದು ಅರಿತು ಬಾಳ್ಮೆ ಮಾಡಬೇಕಾಗಿದೆ.
ಈಗಾಗಲೇ ಪಟ್ಟಣದ ಜನಸಂಖ್ಯೆ ೨೩ ವಾರ್ಡುಗಳಿಂದ ೫೦ ರಿಂದ ೬೦,೦೦೦ ದಾಟಿರುವುದರಿಂದ ಹಾಸನ ಜಿಲ್ಲಾ ಕೇಂದ್ರ ಹೊರತುಪಡಿಸಿ ಅತಿ ಹೆಚ್ಚು ಜನದಟ್ಟಣೆ ಹೊಂದಿರುವ ಪಟ್ಟಣವಾಗಿದ್ದು ನಗರಸಭೆಯಾಗಿ ಮೇಲ್ದರ್ಜೆಗೇರಬೇಕಾಗಿದೆ. ತಾಲೂಕು ಮಟ್ಟದಲ್ಲಿ ಅತಿ ಹೆಚ್ಚು ವೈನ್ ಶಾಪ್, ಬಾರ್ ಮತ್ತು ರೆಸ್ಟೋರೆಂಟ್ ಸಿ. ಎಲ್. ಗಳು ಸೇರಿದಂತೆ ೩೩ ಅಬಕಾರಿ ಮಂದಿರಗಳಿವೆ. ಬೀದಿ ಬದಿಯ ಕ್ಯಾಟೀನ್‌ಗಳು ಹೋಟಲ್‌ಗಳು ಸೇರಿ ೨೦೦ ಕ್ಕೂ ಹೆಚ್ಚಾಗಿವೆ ಇವುಗಳಿಂದ ಪ್ರತಿನಿತ್ಯ ೧೮ ರಿಂದ ೨೦ ಟನ್ ಕಸ ಉತ್ಪಾದನೆಯಾಗುತ್ತಿದೆ.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ೮ ಖಾಸಗಿ ಆಸ್ಪತ್ರೆ, ೪೦ ಕ್ಲಿನಿಕ್‌ಗಳಿಂದ ಬರುವ ಬಯೋಮೆಡಿಕಲ್ ತ್ಯಾಜ್ಯವನ್ನು ಹಾಸನದಿಂದ ಸಂಗ್ರಹಿಸುವುದನ್ನು ಬಿಟ್ಟರೆ, ಇತರೆ ತ್ಯಾಜ್ಯವನ್ನು ಪ್ರತಿದಿನ ಪುರಸಭೆಯಿಂದ ಸಂಗ್ರಹಿಸಲಾಗುತ್ತದೆ. ಇದಲ್ಲದೆ ಕಲ್ಯಾಣ ಮಂಟಪಗಳಿoದ ತ್ಯಾಜ್ಯವನ್ನು ಹೊರಹಾಕುತ್ತಾರೆ.

ವೈಜ್ಞಾನಿಕ ಕಸ ವಿಲೇವಾರಿ.

ಪಟ್ಟಣದ ಜನತೆ ತಮ್ಮ ಮನೆಯಲ್ಲಿಯೇ ಪೈಪ್ ಕಾಂಪೋಸ್ಟ್ ಗೊಬ್ಬರನ್ನು ತಯಾರಿಸಬಹುದು. ಮನೆಯ ಕಾಂಪೌಡಿನ ಒಂದು ಬದಿಯಲ್ಲಿ ಪ್ಲಾಸ್ಟಿಕ್ ಪೈಪನ್ನು ಅಳವಡಿಸಿ ಅದಕ್ಕೆ ಹಸಿ ಕಸ, ಬೆಲ್ಲ ಹಾಗೂ ಸಗಣಿ, ಮಣ್ಣು ಹಾಕುವ ಮೂಲಕ ಗೊಬ್ಬರ ತಯಾರಿಸ ಬಹುದು. ತರಕಾರಿ ಹಣ್ಣಿನ ಗಿಡಗಳಿದ್ದರೂ ಕೂಡ ನೇರವಾಗಿ ಹಸಿಕಸವನ್ನು ಬಳಕೆ ಮಾಡಬಹುದು.

ಮನೆಗಳಿಂದಲೇ ಕಸ ವಿಂಗಡಣೆ ಕಡ್ಡಾಯ:

ಪ್ರತಿ ಮನೆ ಹಾಗೂ ಹೊಟೆಲ್, ಕಲ್ಯಾಣ ಮಂಟಪ, ಅಂಗಡಿಗಳಿAದಲೂ ಹಸಿ ಕಸ, ಒಣಕಸ ಹಾಗೂ ಇ ತ್ಯಾಜ್ಯವನ್ನು ಪ್ರತ್ಯೇಕ ಮಾಡಿ ಕಸ ಸಂಗ್ರಹಿಸುವ ವಾಹನಗಳಿಗೆ ನೀಡಬೇಕು. ಎಲ್ಲೆಂದರಲ್ಲಿ ಕಸ ಬಿಸಾಡುವುದನ್ನು ನಿಲ್ಲಿಸಬೇಕು. ಎಲ್ಲೆಂದರಲ್ಲಿ ಕಸ ಹಾಗೂ ಪ್ಲಾಸ್ಟಿಕ್ ತ್ಯಾಜ್ಯವನ್ನು ಬಿಸಾಡುವುದರಿಂದ ಚರಂಡಿಗಳು ಕಟ್ಟಿಕೊಳ್ಳುತ್ತವೆ ಇದರಿಂದ ಮಳೆಯ ನೀರು ಸರಾಗವಾಗಿ ಹರಿಯುವುದಿಲ್ಲ. ಚರಂಡಿ ಕಟ್ಟಿಕೊಂಡು ನೀರು ರಸ್ತೆಯ ಮೇಲೆ ಹರಿಯುವುದರಿಂದ ರಸ್ತೆ ಕೂಡ ಹಾಳಾಗುತ್ತದೆ.

ನಲ್ಲೂರು ಬಳಿ ಇರುವ ತ್ಯಾಜ್ಯ ವಿಲೇವಾರಿ ಘಟಕ.:

ಪಟ್ಟಣದಿಂದ ೧೦ ಕಿ.ಮೀ. ಅಂತರದಲ್ಲಿ ನಲ್ಲೂರು ಬಳಿ ೨೧ ಎಕರೆಯಲ್ಲಿ ತ್ಯಾಜ್ಯ ವಿಲೇವಾರಿ ಘಟಕವಿದ್ದು. ಈ ಮೊದಲೆಲ್ಲ ನೊಣದ ಕಾಟ, ನಾಯಿಗಳ ಕಾಟ ಹಾಗೂ ವಾಸನೆಯಿಂದ ಸುತ್ತಮುತ್ತಲ ಗ್ರಾಮಸ್ಥರು ಹೈರಾಣಾಗಿದ್ದರು ಆದರೆ ಇತ್ತೀಚೆಗೆ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ೩.೮೦ ಕೋಟಿ ಅನುದಾನದಲ್ಲಿ ನೂತನವಾಗಿ ಟ್ರಾಮೆಲ್, ಬೇಲಿಂಗ್, ಶೆಡ್ಡರ್ ಯಂತ್ರಗಳನ್ನು ಸುಸಜ್ಜಿತ ಕಾಂಕ್ರಿಟ್ ನೆ¯ ಹಾಸು ಹಾಗೂ ಅದಕ್ಕೆ ನೆರಳಿನÀ ವ್ಯವಸ್ಥೆ, ತೂಕದ ಯಂತ್ರ ಅಳವಡಿಕೆ ಇನ್ನಿತರೆ ಕಾಮಕಾರಿಗಳು ಪೂರ್ಣಗೊಂಡಿವೆ.
ಆಧುನಿಕ ಯಂತ್ರಗಳಿAದ ಕಸವನ್ನು ಭೇರ್ಪಡಿಸಿ ರೈತರು ಬಳಸುವಂತೆ ೧ ಕಿಲೊ ಗ್ರಾಂ ಗೆ ೧ ರೂನಂತೆ ತಯಾರಿಸಲಾಗುತ್ತಿದೆ. ಇಷ್ಟೇ ಅಲ್ಲದೆ ಎರೆಹುಳು ಗೊಬ್ಬರ ಕೂಡ ತಯಾರಿಸಲಾಗುತ್ತಿದೆ, ಪುನರ್ಬಳಕೆಗೆ ಬಾರದ ಪ್ಲಾಸ್ಟಿಕ್ ವಸ್ತುಗಳನ್ನು ಮುಂದಿನ ೧೦ ವರ್ಷಗಳ ಮುಂದಾಲೋಚನೆಯೊAದಿಗೆ ೧ ಎಕರೆ ಪ್ರದೇಶದಲ್ಲಿ ಸಂಗ್ರಹಿಸಲಾಗುತ್ತದೆ.

ಪಟ್ಟಣದ ಸ್ವಚ್ಚತೆಯಲ್ಲಿ ಪೌರ ಕಾರ್ಮಿಕರು:

ಪ್ರತಿ ನಿತ್ಯ ಪಟ್ಟಣದ ತ್ಯಾಜ್ಯ ವಿಲೇವಾರಿಗೆ ೧೦ ಆಟೋ ಟಿಪ್ಪರ್, ೨ ಟ್ರಾಕ್ಟರ್, ೧ ಕಂಪ್ಯಾಕ್ಟರ್, ಸೇರಿದಂತೆ ೧೫ ಚಾಲಕರು, ೧೫ ಜನ ಸಹಾಯಕರು ಹಾಗೂ ನಲ್ಲೂರು ತ್ಯಾಜ್ಯ ವಿಂಗಡಣೆಗೆ ೧೦ ನೌಕರರು ಬೀದಿ ಹಾಗೂ ರಸ್ತೆ ಕಸ ಗುಡಿಸುವ ಪೌರ ಕಾರ್ಮಿಕರು ಸೇರಿ ಪ್ರತಿನಿತ್ಯ ೮೫ ಜನ ತ್ಯಾಜ್ಯ ವಿಲೇವಾರಿಯ ಕೆಲಸ ನಿರ್ವಹಿಸುತ್ತಾರೆ.
ಆರೋಗ್ಯ ನಿರೀಕ್ಷಕ ಡಿ.ಪಿ. ರಾಜು ಅವರು ಈಗಾಗಲೇ ೮ ಎಕರೆ ಜಾಗದಲ್ಲಿ ಬಯಳ ವರ್ಷಗಳಿಂದ ಸಂಗ್ರಹವಾಗಿರುವ ೮೦,೦೦೦ ಟನ್ ಕಸ ವಿಲೇವಾರಿಯಾಗಬೇಕಾಗಿದ್ದು, ಈಗಿರುವ ಯಂತ್ರಗಳ ಮೂಲಕ ಪ್ರತಿ ದಿನ ೫೦ ಟನ್ ಕಸ ವಿಲೇವಾರಿ ಮಾಡಬಹುದೆಂದು ತಿಳಿಸಿದ್ದಾರೆ. ಶಾಸಕ ಸಿ.ಎನ್.ಬಾಲಕೃಷ್ಣ ಕೂಡ ಹೆಚ್ಚು ಸಾಮರ್ಥ್ಯವಿರುವ ಕಸ ವಿಂಗಡಣೆಯ ಯಂತ್ರಗಳನ್ನು ಒದಗಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

“ಪಟ್ಟಣದ ಎಲ್ಲಾ ನಾಗರೀಕ ಬಂಧುಗಳು ನಿಮ್ಮ ಪಟ್ಟಣದ ಸ್ವಚ್ಛತೆ ಹಾಗೂ ಅಭಿವೃದ್ಧಿಯ ದೃಷ್ಠಿಯಿಂದ ಹಸಿ ಕಸ, ಒಣಕಸ ಹಾಗೂ ಇ ತ್ಯಾಜ್ಯವನ್ನು ವಿಂಗಡಿಸಿ ಬೀದಿ ಬದಿ ಎಲ್ಲೆಂದರೆಲ್ಲಿ ಎಸೆಯಬೇಡಿ ಕಸ ಸಂಗ್ರಹಣೆಯ ವಾಹನಕ್ಕೆ ನೀಡಿ.”
ಕೆ.ಎನ್. ಹೇಮಂತ್, ಪುರಸಭಾ ಮುಖ್ಯಾಧಿಕಾರಿ. “ಎಲ್ಲಾ ನಾಗರೀಕರು ನಮ್ಮ ಪಟ್ಟಣ ಎಂದು ಭಾವಿಸಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಭೀರುವುದನ್ನು ತಪ್ಪಿಸುವ ಸಲುವಾಗಿ ವಾಯುವಿಹಾರ ತಾಣದ ಬದಿಯುಲ್ಲಿ ರಸ್ತೆ ಬದಿಯಲ್ಲಿ ಕಸ ಸುರಿಯಬೇಡಿ, ಅಂತವರಿಗೆ ಕಠಿಣ ದಂಢ ವಿಧಿಸಲಾಗುತ್ತದೆ.” 

ಡಾ.ಸಿ.ಎನ್.ಬಾಲಕೃಷ್ಣ ಶಾಸಕರು ಶ್ರವಣಬೆಳಗೊಳ ಕ್ಷೇತ್ರ.
“ಕ್ರಿಮಿ ನಾಶಕ ಹಾಗೂ ರಾಸಾಯನಿಕ ಬಳಕೆಯಿಂದ ಮನುಷ್ಯನ ಆರೋಗ್ಯದ ಮೇಲೆ ದುಷ್ಫರಿಣಾಮ ಉಂಟಾಗುವುದರಿAದ ರೈತರು ಪುರಸಭೆಯ ನೂತನ ಯುಂತ್ರಗಳಿAದ ವಿಂಗಡಣೆಯಾದ ಗೊಬ್ಬರ ಹಾಗೂ ಎರೆಹುಳ ಗೊಬ್ಬರವನ್ನು ಕೃಷಿಗೆ ಬಳಸಿ”

ಪುಟ್ಟೇಗೌಡ ಶೆಟ್ಟಿಹಳ್ಳಿ ಸಾವಯವ ಕೃಷಿಕ.
“ಈಗಗಲೇ ಮೈಸೂರಿನಲ್ಲಿ ಪ್ಲಾಸ್ಟಿಕ್ ಬಳಸಿ ಇಟ್ಟಿಗೆ ತಯಾರಿಸುತ್ತಿದ್ದು ನಮ್ಮ ಪಟ್ಟಣದಲ್ಲೂ ಅದನ್ನು ಪ್ರಯೋಗ ಮಾಡಿದರೆ ಪ್ಲಾಸ್ಟಿಕ್ ತ್ಯಾಜ್ಯದಿಂದ ಮುಕ್ತಿ ಪಡೆಯಬಹುದು” .
ಸಿ.ಆರ್. ಕುಮಾರ್ ಕಾಸ್ಮೆಟಿಕ್ಸ ಚನ್ನರಾಯಪಟ್ಟಣ.

ವರದಿ : ದಯಾನಂದ್ ಶೆಟ್ಟಿಹಳ್ಳಿ

 

Continue Reading
Click to comment

Leave a Reply

Your email address will not be published. Required fields are marked *

Special

ಆಸ್ತಿ ಮಾಲೀಕರಿಗೆ ಸರ್ಕಾರದಿಂದ ಮನೆ ಬಾಗಿಲಿಗೆ ಬರಲಿದೆ ಉಚಿತ ಖಾತಾ : ಸರ್ಕಾರದಿಂದ ವಿನೂತನ ವ್ಯವಸ್ಥೆ

Published

on

free Katha to at your Doorstep : ಕರ್ನಾಟಕ ರಾಜ್ಯ ಸರ್ಕಾರವು ಕಂದಾಯ ಇಲಾಖೆಯಲ್ಲಿ ಹೊಸದೊಂದು ವಿನೂತನ ವ್ಯವಸ್ಥೆಯನ್ನು ದೇಶದಲ್ಲಿಯೇ ಮೊದಲ ಬಾರಿಗೆ ಜಾರಿ ಮಾಡಿದ್ದು, ಈ ವ್ಯವಸ್ಥೆಯ ಕಾರ್ಯಕ್ರಮವನ್ನು ಡಿ. ಕೆ. ಶಿವಕುಮಾರ್ ಅವರು ಶೀಘ್ರದಲ್ಲಿಯೇ ಚಾಲನೆ ಮಾಡಲಿದ್ದಾರೆ.

ಈ ವ್ಯವಸ್ಥೆ ಸದ್ಯಕ್ಕೆ ಯಾವ ಯಾವ ನಗರಗಳಲ್ಲಿ ಜಾರಿಯಾಗಲಿದೆ? ಇದರ ಅನುಕೂಲಗಳೇನು? ಮನೆ ಬಾಗಿಲಿಗೆ ಪಡೆಯುವುದು ಹೇಗೆ ಎಂಬ ಇತ್ಯಾದಿ ಮಾಹಿತಿ ಇಲ್ಲಿದೆ..

ಯಾವ ಯಾವ ನಗರಗಳಲ್ಲಿ ಹಾಗೂ ಯಾವಾಗಿನಿಂದ ಇದು ಜಾರಿಯಾಗಲಿದೆ?

ಸದ್ಯಕ್ಕೆ ಮನೆ ಬಾಗಿಲಿಗೆ ಉಚಿತ ಇ-ಖಾತೆ ನೀಡುವ ಯೋಜನೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪ್ಲಾನ್ ಮಾಡಿಕೊಂಡಿದ್ದು, ಮನೆ ಮನೆಗೆ ಇ-ಖಾತೆಯನ್ನು ವಿತರಿಸಲಿದೆ. ಇದಕ್ಕಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಇದು ಏಪ್ರಿಲ್ ತಿಂಗಳಿನಿಂದ ಆರಂಭವಾಗಲಿದ್ದು, ಇದು ಭಾರತ ದೇಶದಲ್ಲಿಯೇ ಮೊದಲ ವಿನೂತನ ವ್ಯವಸ್ಥೆ ಎಂಬ ಹೆಗ್ಗಳಿಕೆ ಪಡೆಯಲಿದೆ.

ಈಗಾಗಲೇ ಲಕ್ಷಾಂತರ ಆಸ್ತಿ ದಾಖಲೆಗಳು ಡಿಜಿಟಲೀಕರಣಗೊಂಡಿದ್ದು, ಇದನ್ನು ಪಡೆಯಲು ನಾಗರಿಕರು ಉತ್ಸುಕದಲ್ಲಿದ್ದಾರೆ.

ಅರ್ಜಿ ಸಲ್ಲಿಕೆ ಹೇಗೆ?

ಇ-ಖಾತಾ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ನಂತರ ಇ-ಖಾತಾಗಾಗಿ ಕಾಯಿರಿ ಎಂದು ಬಿಬಿಎಂಪಿ ಕೊರಿಕೊಂಡಿದ್ದು, ಕಚೇರಿಗಳಿಗೆ ಭೇಟಿ ನೀಡಿ ಕಾಯಬೇಡಿ ಎಂದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇದ್ದಲ್ಲಿ ಈ ಕೆಳಗಿನ ಸಹಾಯವಾಣಿಗೆ ಕರೆ ಮಾಡಲು ಸೂಚಿಸಿದೆ.

ಸಹಾಯವಾಣಿ – 9480683695

Continue Reading

Program

2020ರ ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಣೆ

Published

on

ಪ್ರಜ್ವಲ್ ದೇವರಾಜ್ ಅತ್ಯುತ್ತಮ ನಟ

ಅಕ್ಷತಾ ಪಾಂಡವಪುರಅವರಿಗೆ ಅತ್ಯುತ್ತಮ ನಟಿ

ಬೆಂಗಳೂರು, ಮಾರ್ಚ್ ೧೨: ಕನ್ನಡ ಚಿತ್ರರಂಗ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರತಿ ವರ್ಷ ಕನ್ನಡ ಉತ್ತಮ ಚಿತ್ರಗಳಿಗೆ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡಿಕೊಂಡು ಬಂದಿದೆ. ಕಳೆದ ಕೊರೊನಾ ಹಿನ್ನೆಲೆಯಲ್ಲಿ ಈ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮಕ್ಕೆ ಬ್ರೇಕ್ ಆಗಿದ್ದು. ಎಲ್ಲಾ ವರ್ಷಗಳ ಪ್ರಶಸ್ತಿಗಳನ್ನು ಸರ್ಕಾರ ಘೋಷಣೆ ಮಾಡುತ್ತಿದೆ.
ಇತ್ತೀಚಿಗಷ್ಟೆ ೨೦೧೯ರ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿತ್ತು.
ಪೈಲ್ವಾನ್ ಚಿತ್ರದ ನಟನೆಗಾಗಿ ಕಿಚ್ಚ ಸುದೀಪ್ ಅತ್ಯುತ್ತಮ ನಟ ಹಾಗೂ ದಯಾಳ್ ಪದ್ಮನಾಭನ್ ನಿರ್ದೇಶನದ ತ್ರಯಂಬಕA ಚಿತ್ರದ ನಟನೆಗಾಗಿ ಅನುಪಮಾ ಗೌಡ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರಕಿತ್ತು. ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆ ನಟ ಕಿಚ್ಚ ಸುದೀಪ್ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ನಿರಾಕರಿಸಿದರು. ತಮಗಿಂತ ಅತ್ಯುತ್ತಮ ನಟರಿದ್ದಾರೆ ಅವರನ್ನು ಆರಿಸಿ ಪ್ರಶಸ್ತಿ ನೀಡುವಂತೆ ಮನವಿ ಮಾಡಿದ್ದರು. ಈ ಗೊಂದಲದ ನಡುವೆಯೇ ಇದೀಗ ೨೦೨೦ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದೆ.
ರಾಜ್ಯ ಚಲನಚಿತ್ರ ಪ್ರಶಸ್ತಿ ರಾಜ್ಯಾ ಸರ್ಕಾರ ಹಾಗೂ ಕನ್ನಡ ಚಲನಚಿತ್ರ ಮಂಡಳಿ , ನಿನ್ನೆ ಮಾರ್ಚ್ ೧೧ರದು ೨೦೨೦ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿಯನ್ನು ಪ್ರಕಟಿಸಿದೆ. ಜಂಟಲ್‌ಮ್ಯಾನ್‌ ಚಿತ್ರದ ಅಭಿನಯಕ್ಕಾಗಿ ಪ್ರಜ್ವಲ್ ದೇವರಾಜ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ.
ಇನ್ನು ಪಿಂಕಿ ಎಲ್ಲಿ ಚಿತ್ರ ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ ಆಯ್ಕೆಯಾಗಿದ್ದರೆ, ಇದೇ ಚಿತ್ರದ ನಟನೆಗಾಗಿ ನಟಿ ಅಕ್ಷತಾ ಪಾಂಡವಪುರಅವರಿಗೆ ಅತ್ಯುತ್ತಮ ನಟಿ ವಿಭಾಗದಲ್ಲಿ ಆಯ್ಕೆಯಾಗಿದ್ದಾರೆ.
ಒಟ್ಟು ೨೦ಕ್ಕೂ ವಿಭಾಗಗಳಿಗೆ ೨೦೨೦ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಿಣೆ.
ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ
* ಅತ್ಯುತ್ತಮ ನಟ: ಪ್ರಜ್ವಲ್ ದೇವರಾಜ್ (ಜಂಟಲ್‌ಮ್ಯಾನ್‌)
* ಅತ್ಯುತ್ತಮ ನಟಿ: ಅಕ್ಷತಾ ಪಾಂಡವಪುರ (ಪಿಂಕಿ ಎಲ್ಲಿ)
* ಅತ್ಯುತ್ತಮ ಚಿತ್ರ: ಪಿಂಕಿ ಎಲ್ಲಿ
* ೨ನೇ ಅತ್ಯುತ್ತಮ ಚಿತ್ರ: ವರ್ಣಪಟಲ
* ೩ನೇ ಅತ್ಯುತ್ತಮ ಚಿತ್ರ: ಹರಿವ ನದಿಗೆ ಮೈಯೆಲ್ಲಾ ಕಾಲು
* ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ: ಗಿಳಿಯು ಪಂಜರದೊಳಿಲ್ಲ ಮತ್ತು ಈ ಮಣ್ಣು
* ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ: ಫೋರ್ ವಾಲ್ಸ್
* ಅತ್ಯುತ್ತಮ ಮಕ್ಕಳ ಚಿತ್ರ: ಪದಕ
* ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ: ನೀಲಿ ಹಕ್ಕಿ( ಗಣೇಶ್ ಹೆಗ್ಡೆ)
* ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಚಿತ್ರ: ಜೀಟಿಗೆ ( ತುಳು)
* ಅತ್ಯುತ್ತಮ ಸಂಗೀತ ನಿರ್ದೇಶಕ: ಗಗನ್ ಬಡೇರಿಯಾ (ಮಾಲ್ಗುಡಿ ಡೇಸ್)
* ಅತ್ಯುತ್ತಮ ಪೋಷಕ ನಟ: ರಮೇಶ್ ಪಂಡಿತ್(ತಲೆದAಡ)
* ಅತ್ಯುತ್ತಮ ಪೋಷಕ ನಟಿ: ಮಂಜುಳಮ್ಮ (ದಂತ ಪುರಾಣ)
* ಅತ್ಯುತ್ತಮ ಕಥೆ: ಶಶಿಕಾಂತ್ ಗಟ್ಟಿ (ರಾಂಚಿ)
* ಅತ್ಯುತ್ತಮ ಚಿತ್ರಕಥೆ: ರಾಘವೇಂದ್ರ ಕುಮಾರ್ (ಚಾಂದಿನಿ ಬಾರ್)
*ಅತ್ಯುತ್ತಮ ಬಾಲ ನಟ: ಅಹಿಲ್ ಅನ್ಸಾರಿ (ದಂತ ಪುರಾಣ)
*ಅತ್ಯುತ್ತಮ ಬಾಲ ನಟಿ: ಬೇಬಿ ಹಿತೈಶಿ ಪೂಜಾರ (ಪಾರು)
*ಅತ್ಯುತ್ತಮ ಕಲಾ ನಿರ್ದೇಶನ: ಗುಣಶೇಖರ (ಬಿಚ್ಚುಗತ್ತಿ)
*ತೀರ್ಪುಗಾರರ ವಿಶೇಷ ಪ್ರಶಸ್ತಿ: ಸಂಚಾರಿ ವಿಜಯ್ (ಮರಣೋತ್ತರ ಪ್ರಶಸ್ತಿ)
ರಾಜ್ಯ ಪ್ರಶಸ್ತಿಗಳ ಆಯ್ಕೆ ಸಮಿತಿಯನ್ನು ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ ಬಿ.ಎಸ್.ಲಿಂಗದೇವರು ನೇತೃತ್ವ ವಹಿಸಿದ್ದರು.

Continue Reading

Special

ಕೇಂದ್ರೀಯ ವಿದ್ಯಾಲಯ ಶಾಲೆಗಳಲ್ಲಿ 1ನೇ ತರಗತಿ ಪ್ರವೇಶಾತಿಗೆ ಅರ್ಜಿ ಅಹ್ವಾನ : ಆನ್ಲೈನ್ ನೋಂದಣಿ ಆರಂಭ

Published

on

KVS Entrance Exam Application for Class 1 2025 : 2025 – 26 ನೇ ಸಾಲಿಗೆ ಕೇಂದ್ರೀಯ ವಿದ್ಯಾಲಯ ಶಾಲೆಗಳಲ್ಲಿ ಒಂದನೇ ತರಗತಿ ಪ್ರವೇಶಾತಿಗೆ ಮತ್ತು ಆಯ್ಕೆ ಮಾಡಿದಂತಹ ಬಾಲವಟಿಕ ಶಾಲೆಗಳಲ್ಲಿ 3 ವರ್ಷದಿಂದ 6 ವರ್ಷದ ಮಕ್ಕಳ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಯಾವ ಯಾವ ಮಕ್ಕಳು ಅರ್ಜಿ ಸಲ್ಲಿಸಬಹುದು?

ಸದ್ಯಕ್ಕೆ ಒಂದನೇ ತರಗತಿಯ ಪ್ರವೇಶಾತಿಗೆ ಹಾಗೂ ಬಾಲವಟಿಕ 1, 2, 3 ರ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಈ ಕೆಳಗಿನ ಮಕ್ಕಳ ಸಂಬಂಧಪಟ್ಟ ಪ್ರವೇಶಾತಿಗೆ ಅರ್ಜಿ ಸಲ್ಲಿಸಬಹುದು.

* 1ನೇ ತರಗತಿ ಪ್ರವೇಶಾತಿಗೆ – 6 ರಿಂದ 7 ವರ್ಷದ ಒಳಗಿನ ಮಕ್ಕಳು
* ಬಾಲವಟಿಕ 1ರ ಪ್ರವೇಶಾತಿಗೆ – 3 ರಿಂದ 4 ವರ್ಷದ ಒಳಗಿನ ಮಕ್ಕಳು
* ಬಾಲವಟಿಕ 2ರ ಪ್ರವೇಶಾತಿಗೆ – 4 ರಿಂದ 5 ವರ್ಷದ ಒಳಗಿನ ಮಕ್ಕಳು
* ಬಾಲವಟಿಕ 3ರ ಪ್ರವೇಶಾತಿಗೆ – 5 ರಿಂದ 6 ವರ್ಷದ ಒಳಗಿನ ಮಕ್ಕಳು

ಕೆಂದಯ್ಯ ವಿದ್ಯಾಲಯ ಶಾಲೆಗಳ ಪ್ರವೇಶಾತಿಗೆ ಯಾವ ವರ್ಗದವರಿಗೆ ಎಷ್ಟು ಮೀಸಲಾತಿ ಇದೆ?

* ಪರಿಶಿಷ್ಟ ಜಾತಿ ವರ್ಗದ ಮಕ್ಕಳಿಗೆ 15%
* ಪರಿಶಿಷ್ಟ ಪಂಗಡ ವರ್ಗದ ಮಕ್ಕಳಿಗೆ 7.5%
* ಇತರೆ ಹಿಂದುಳಿದ ವರ್ಗದ ಮಕ್ಕಳಿಗೆ 27%

ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹಾಗೂ ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳ ಮಾಹಿತಿ :

* ಈ ಪ್ರವೇಶಾತಿಗೆ ಅರ್ಜಿಯನ್ನು ಸಲ್ಲಿಸಲು 07ನೇ ಮಾರ್ಚ್ 2025 ರಿಂದ ಆರಂಭವಾಗಿದ್ದು 21 ಮಾರ್ಚ್ 2025 ರವರೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
* ಪ್ರಥಮ ಪ್ರವೇಶ ಪಟ್ಟಿ ಬಿಡುಗಡೆ ದಿನಾಂಕ – ಏಪ್ರಿಲ್ 17, 2025
* ಪ್ರವೇಶ ಪ್ರಕ್ರಿಯೆ ದಿನಾಂಕ – ಏಪ್ರಿಲ್ 17 ರಿಂದ ಏಪ್ರಿಲ್ 21ರವೆರೆಗೆ

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?

ಕೇಂದ್ರೀಯ ವಿದ್ಯಾಲಯದ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಹೊಸ ಬಳಕೆದಾರರ ಆಯ್ಕೆಯಲ್ಲಿ ನೋಂದಣಿ ಮಾಡಿ. ನಂತರದಲ್ಲಿ ನಿಮ್ಮ ವಯಕ್ತಿಕ ಮಾಹಿತಿ ಹಾಗೂ ಪೋಷಕರ ಮಾಹಿತಿ ವಿಳಾಸ ಸೇರಿದಂತೆ ಸಂಬಂದಿಸಿದ ದಾಖಲಾತಿಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಿ.

KVS ಜಾಲತಾಣ : https://kvsangathan.nic.in/

Continue Reading

Trending

error: Content is protected !!