Mysore
ಸಿಡಿಮದ್ದು ಸಿಡಿದು ಹಸುವಿನ ಬಾಯಿ ಛಿದ್ರ
ನಂಜನಗೂಡು: ಹಂದಿಗಳ ಬೇಟೆಗೆ ಹಾಕಿದ್ದ ಸಿಡಿಮದ್ದು ಸಿಡಿದು ಹಸುವಿನ ಬಾಯಿ ಛಿದ್ರ ಛಿದ್ರವಾಗಿರುವ ಮನಕಲಕುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಅಡಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೆಂಪಿಸಿದ್ದನಹುಂಡಿ ಗ್ರಾಮದ ರೈತ ಚನ್ನನಂಜೇಗೌಡ ಎಂಬುವರಿಗೆ ಸೇರಿದ ಹಸು ಇದಾಗಿದ್ದು, ಕೈಗಾರಿಕಾ ಪ್ರದೇಶದ ವ್ಯಾಪ್ತಿಯ ಜಮೀನಿನಲ್ಲಿ ಮೇವು ಮೇಯುತ್ತಿರುವಾಗ ಘಟನೆ ಸಂಭವಿಸಿದೆ. ಕಾಡು ಹಂದಿಗಳನ್ನು ಬೇಡೆಯಾಡಲು ಕಿಡಿಗೇಡಿಗಳು ಸಿಡಿಮದ್ದನ್ನು ಅಳವಡಿಸಿದ್ದಾರೆ ಎಂಬುದನ್ನು ತಿಳಿಯದೇ ರೈತ ಚನ್ನನಂಜೇಗೌಡ ಅವರು ಗ್ರಾಮದ ವಾಟರ್ ಟ್ಯಾಂಕ್ನ ಬಳಿ ಜಾನುವಾರುಗಳು ಮೇವು ಮೇಯಲು ಬಿಟ್ಟಿದ್ದಾರೆ. ಈ ವೇಳೆ ಸಿಡಿಮದ್ದು ಹಠಾತ್ತನೇ ಸಿಡಿದ ಪರಿಣಾಮ ಹಸುವಿನ ಬಾಯಿ ಛಿದ್ರ ಛಿದ್ರವಾಗಿದೆ. ಹಸು ಈಗ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ರೈತ ಚನ್ನನಂಜೇಗೌಡ ಕಂಗಾಲಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆ ನಡೆಯುತ್ತಿದ್ದಂತೆ ರೊಚ್ಚಿಗೆದ್ದ ಗ್ರಾಮಸ್ಥರು, ಗಂಭೀರ ಗಾಯಗೊಂಡಿರುವ ಹಸುವಿಗೆ ಸೂಕ್ತ ಪರಿಹಾರ ನೀಡಬೇಕು. ಸಿಡಿಮದ್ದನ್ನು ಅಳವಡಿಸಿದ್ದ ಕಿಡಿಗೇಡಿಗಳನ್ನು ಹಿಡಿದು ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
Mysore
ನೆರೆ ಹೊರೆಯವರ ಹಳೇ ದ್ವೇಷ : ಪಿಯುಸಿ ವಿದ್ಯಾರ್ಥಿನಿ ಭವಿಷ್ಯಕ್ಕೆ ತಣ್ಣೀರು
ನಂಜನಗೂಡು: ಹಳೇ ದ್ವೇಷ ಹಿನ್ನಲೆ ದ್ವಿತೀಯ ಪಿಯುಸಿ ವಿಧ್ಯಾರ್ಥಿನಿ ಭವಿಷ್ಯಕ್ಕೆ ಕುಟುಂಬವೊಂದು ತಣ್ಣೀರೆರೆಚಲು ಹುನ್ನಾರ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಮುಂದೆ ಓದಿದ್ರೆ ನಿನ್ನ ಮುಗಿಸುವುದಾಗಿ ಬೆದರಿಕೆ ಹಾಕಿ ಹಲ್ಲೆ ನಡೆಸಿರುವ ಘಟನೆ ನಂಜನಗೂಡು ತಾಲೂಕಿನ ಪಾಳ್ಯಾ ಗ್ರಾಮದಲ್ಲಿ ನಡೆದಿದೆ.
ಹಲ್ಲೆಗೊಳಗಾದ ದ್ವಿತೀಯ ಪಿಯು ವಿಧ್ಯಾರ್ಥಿನಿ ನಂಜನಗೂಡಿನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಪೂರ್ಣಿಮಾ ಹಲ್ಲೆಗೆ ಒಳಗಾದ ದ್ವಿತೀಯ ಪಿಯು ವಿಧ್ಯಾರ್ಥಿನಿ. ಘಟನೆ ಸಂಬಂಧ ಪಕ್ಕದ ಮನೆಯ ಸೋಮಣ್ಣ ಸೇರಿದಂತೆ 7 ಮಂದಿ ವಿರುದ್ದ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕನ್ನಡ ಪರೀಕ್ಷೆ ಮುಗಿಸಿ ಮನೆಗೆ ಹಿಂದಿರುಗಿದ ಪೂರ್ಣಿಮಾ ಪರೀಕ್ಷೆ ಬರೆದ ಕನ್ನಡ ಪ್ರಶ್ನೆ ಪತ್ರಿಕೆಯನ್ನು ಕ್ರಾಸ್ ಚೆಕ್ ಮಾಡುತ್ತಿರುವಾಗ ಏಕಾಏಕಿ ದೋಣ್ಣೆಗಳನ್ನ ಹಿಡಿದು ನುಗ್ಗಿದ ಸೋಮಣ್ಣ ಹಾಗೂ ಇತರರು ಹಳೆ ಧ್ವೇಷವನ್ನ ಮನಸ್ಸಿನಲ್ಲಿ ಇಟ್ಟುಕೊಂಡು ಮುಂದೆ ಓದಬಾರದು ಎಂದು ತಾಕೀತು ಮಾಡಿ ಹಿಗ್ಗಾಮುಗ್ಗ ಹಲ್ಲೆ ನಡೆಸಿದ್ದಾರೆ. ನೆರವಿಗೆ ಬಂದ ಕುಟುಂಬಸ್ಥರ ಮೇಲೂ ಹಲ್ಲೆ ನಡೆದಿದೆ.ಮನೆ ಕಿಟಕಿ ಗಾಜು ಪುಡಿಪುಡಿ ಮಾಡಿದ್ದಾರೆ. ತಂದೆ ತಾಯಿ ಇಲ್ಲದೆ ಸೋದರ ಮಾವನ ಆಶ್ರಯದಲ್ಲಿ ವಿದ್ಯಾರ್ಥಿನಿ ಪೂರ್ಣಿಮಾ ಬದುಕು ಕಟ್ಟಿಕೊಳ್ಳುತಿದ್ದು .

ಇದನ್ನು ಸಹಿಸದ ನೆರೆಮನೆಯವರು ನಮ್ಮ ಮಕ್ಕಳು ಓದುವುದಿಲ್ಲ ಇವಳು ಓದಿ ಏನಾದರೂ ಸಾಧಿಸುತ್ತಾಳೆ ಎಂಬ ಹೊಟ್ಟೆಕಿಚ್ಚಿನ ಹಿತ ದೃಷ್ಟಿಯಿಂದ ಪರೀಕ್ಷೆ ಬರೆಯುವ ವೇಳೆಯಲ್ಲಿ ಕ್ಯಾತೆ ತೆಗೆದು ಹಲ್ಲೆ ನಡೆಸಿದರೆಂದು ಪೂರ್ಣಿಮಾ ಆರೋಪಿಸಿದ್ದಾರೆ.
ಘಟನೆ ನಡೆದ ನಂತರ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯವರು ದೂರು ಅರ್ಜಿಯನ್ನು ಕೂಡ ಪಡೆಯದೆ ಪ್ರಕರಣ ದಾಖಲಿಸಿಕೊಳ್ಳಲು ಮೀನಾ ಮೇಷ ತೋರುತ್ತಿದ್ದಾರೆ.
ನಾವು ನೀಡಿದ ದೂರನ್ನು ಸ್ವೀಕರಿಸದೆ ಅವರೇ ಬರೆದುಕೊಂಡಿರುವ ದೂರಿನ ಪ್ರತಿ ಆಧಾರದ ಮೇಲೆ ಸೋಮಣ್ಣ ಸೇರಿದಂತೆ 7 ಮಂದಿ ವಿರುದ್ದ ಪ್ರಕರಣ ದಾಖಲಾಗಿದೆ. ಎಂದು ವಿದ್ಯಾರ್ಥಿನಿ ಪೂರ್ಣಿಮಾ ಸಂದರ್ಭದಲ್ಲಿ ಮಾತನಾಡಿದರು. ನನ್ನ ಬದುಕನ್ನು ನಾಶ ಮಾಡಲು ಮುಂದಾಗಿರುವ ವ್ಯಕ್ತಿಗಳ ಮೇಲೆ ಕಠಿಣ ಕಾನೂನು ಜಾರಿ ಮಾಡಬೇಕು ಇಲ್ಲದಿದ್ದಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಮುಂದೆ ಒಬ್ಬಂಟಿ ಪ್ರತಿಭಟನೆ ಮಾಡಲು ನಾನು ಮುಂದಾಗುತ್ತೇನೆ ಎಂದು ಸಂದರ್ಭದಲ್ಲಿ ವಿದ್ಯಾರ್ಥಿನಿ ಪೂರ್ಣಿಮಾ ಎಚ್ಚರಿಸಿದ್ದಾರೆ.
Mysore
ಮಕ್ಕಳ ಕೈಗೆ ಮೊಬೈಲ್ ನೀಡುವುದನ್ನ ಕಡಿಮೆ ಮಾಡಿ: ಪಾಲಾಕ್ಷ
ನಂಜನಗೂಡು: ಮಕ್ಕಳ ಕೈಗೆ ಮೊಬೈಲ್ ನೀಡುವುದನ್ನ ಕಡಿಮೆ ಮಾಡಿ ಇನ್ನಿತರ ಪಠ್ಯೇತರ ಚಟುವಟಿಕೆಗಳನ್ನು ಮಾಡಿಸುವುದು ಮಕ್ಕಳ ಸಮಗ್ರ ಬೆಳವಣಿಗೆ ಯಾಗುತ್ತದೆ ಎಂದು ಅಪರ ಸಿವಿಲ್ ನ್ಯಾಯಧೀಶರಾದ ಪಾಲಾಕ್ಷ ಅವರು ಅಭಿಪ್ರಾಯ ಪಟ್ಟರು.
ಸಮಾಜದಲ್ಲಿ ಬಹುತೇಕ ಜನತೆಗೆ ಕಾನೂನು ಅರಿವಿನ ಕೊರತೆ ಇರುವುದರಿಂದ ಅಪರಾದಗಳು ಹೆಚ್ಚಲು ಕಾರಣವಾಗಿದೆ ಆದ್ದರಿಂದ ಬೆಳೆಯುವ ಕೈಗಳಿಗೆ ಪೂರಕವಾದ ಜ್ಞಾನವನ್ನು ನೀಡಬೇಕು ಎಂದು ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಮತ್ತುಸ್ಪಾರ್ಕ್ ಕಿಡ್ ಮಾಸ್ಟರ್ ಬ್ರೈನ್ ಅಬಾಕಸ್ ಅಕಾಡೆಮಿ ಸಂಯಕ್ತ ಆಶ್ರಯದಲ್ಲಿ
ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಮತ್ತು ಮತ್ತು ಸ್ಪಾರ್ಕ್ಸ್ ಕಿಡ್ಸ್ ಅಕಾಡೆಮಿ ಮಕ್ಕಳ ಬಹುಮಾನ ವಿತರಣ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದರು.

ಇಂದಿನ ದಿನಗಳಲ್ಲಿ ಮಕ್ಕಳಿಗೆ ಶೈಕ್ಷಣಿಕ ವಾಗಿ ಬೆಳೆಯಲು ಮುಕ್ತ ಅವಕಾಶ ಗಳಿದ್ದು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.ವಿವಿದ ಸಾಂಸ್ಕೃತಿಕ ಕಲೆಗಳ ಬಗ್ಗೆ ಗಮನ ಹರಿಸಿಬೇಕು.ಜೊತೆಗೆ ಮಕ್ಕಳಿಗೆ ಕಾನೂನು ಅರಿವು ಮೂಡಿಸ ಬೇಕು.
ಪ್ರದಾನ ಸಿವಿಲ್ ನ್ಯಾದೀಶರಾದ ಸತೀಶ್ ಅವರು ಮಾತನಾಡಿ, ನಮ್ಮ ಸಂವಿದಾನದ ಮೂಲ ಆಶಯ , ಸರ್ವರಿಗೂ ಸಮಬಾಳು ಎಂಬುದು ನಮ್ಮೆಲ್ಲರ ಜವಾಬ್ದಾರಿ ಹೌದು, ಉಚಿತ ಕಾನೂನು ಸೌಲಭ್ಯ ವನ್ನು ಅಶಕ್ತರಿಗೆ ನೀಡುತ್ತ ಬಂದಿದೆ,ಅದಕ್ಕಾಗಿ ನ್ಯಾಯಲಾದ ಕಛೇರಿ ತೆರೆಯಲಾಗಿದೆ ಅವಶ್ಯಕತೆ ಇದ್ದವರು ಅದರ ನೆರವು ಪಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಸ್ಪಾರ್ಕ್ ಕಿಡ್ಸ್ ಅಕಾಡೆಮಿಯ ನಿರ್ದೇಶಕಿ ಉಮಾ. ಮುಖ್ಯ ಅಥಿತಿಗಳಾಗಿ ಕಾನೂನು ಸೇವಾ ಸಮಿತಿ ಅದ್ಯಕ್ಷರಾದ ಮಹದೇವಸ್ವಾಮಿ,ಉಪಾಧ್ಯಕ್ಷ ಕೆಂಪರಾಜು, ಕಾರ್ಯದರ್ಶಿ ಎಂ,ಕೆ,ಬಸವಣ್ಣ, ಅಪರ ಸರ ಕಾರಿ ವಕೀಲರಾದ ಚಿನ್ನಸ್ವಾಮಿ,ಸಹಾಯಕ ಸರಕಾರಿ ಅಭಿಯೋಜಕರು ರಾಜಣ್ಣ, ವಕೀಲರಾದ ವಸಂತ ಲಕ್ಷ್ಮಿ ಭಾಗವಹಿಸಿದ್ದರು.
ಅಬಾಕಸ್ ಬಹುಮಾನ ವಿಜೇತ ಮಕ್ಕಳುಇಂಟರ್ನ್ಯಾಷನಲ್ ಕಾಂಪಿಟೇಶನ್ ಚೆನ್ನೈ 72 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಚಾಂಪಿಯನ್s 58 ವಿನ್ನರ್ಸ್ 11 ರನ್ನರ್ 3 ಸ್ಮಾರ್ಟ್ ವಾಚ್ ವಿನ್ನರ್ ಆದ್ವಿಕಾಅಶೋಕ್ ನಂಜನಗೂಡು, ಚಾಂಪಿಯನ್ ಆಫ್ ಚಾಂಪಿಯನ್ ಅನ್ವಿಕ ಎ, ನಂಜನಗೂಡು ಚಾಂಪಿಯನ್ಸ್ ಪರಿನಿಕ ಪಿ.ಆದಿತ್ಯ ಗಿರೀಶ್ ಯುಎಸ್ಎ ತವನೀಶ್ ಅನೂರು
ಹರ್ಷಿತಾ ಪಿ ಕಿಯಾನ್ ಬರುಹ ಬೆಂಗಳೂರು ಬಿಂದುಸಿರಿ ಪುನರ್ವಿ ಸಿ ಮೈಸೂರು ಸುಹಾಸ್ ಪಿ ಆರಾಧ್ಯ ಜಸ್ಮಿತ ಚಾಮರಾಜನಗರ ಶಿಕ್ಷಕಿಯರಾದ.ಸೌಮ್ಯಮಾನಸ ಬೃಂದಾ ಲಕ್ಷ್ಮಿ ಸುಪ್ರೀತಾ ಸಾಹಿತ್ಯ ಭಾಗವಹಿಸಿದ್ದರು.
Mysore
ಒಳ ಮೀಸಲಾತಿಯಲ್ಲಿ ಅನ್ಯಾಯ ಖಂಡಿಸಿ ಪಾದಯಾತ್ರೆ
ನಂಜನಗೂಡು: ಬಲಗೈ ಸಮುದಾಯಗಳಿಗೆ ಒಳ ಮೀಸಲಾತಿಯಲ್ಲಿ ಅನ್ಯಾಯವಾಗಿದೆ ಎಂದು ಖಂಡಿಸಿ ಪರಿಶಿಷ್ಟ ಜಾತಿ ಬಲಗೈ ಸಂಘಟನೆಗಳ ಒಕ್ಕೂಟದಿಂದ ನಗರದಲ್ಲಿ ಪಾದಯಾತ್ರೆ ನಡೆಸಿ ಪ್ರತಿಭಟನೆ ನಡೆಸಿದರು.
ನಗರದ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದ ಬಳಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಬಳಿಕ ಆರ್ ಪಿ ರಸ್ತೆಯ ಮೂಲಕ ತಾಲೂಕು ಕಚೇರಿವರೆಗೆ ಸಂಘಟನೆಗಳ ಒಕ್ಕೂಟದ ಸದಸ್ಯರು ಪಾದಯಾತ್ರೆ ನಡೆಸಿ, ಬಳಿಕ ತಾಲ್ಲೂಕು ಕಚೇರಿ ಮುಂದೆ ಜಮಾವಣೆ ಗೊಂಡು ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.

ಕಳೆದ ಒಂದು ತಿಂಗಳಿನಿಂದ ಉದ್ಯೋಗದ ಆಯ್ಕೆ ಪ್ರಕ್ರಿಯೆಯಲ್ಲಿ ಒಳ ಮೀಸಲಾತಿಯಿಂದ ಬಲಗೈ ಸಮುದಾಯಗಳಿಗೆ ಗೊಂದಲ ಉಂಟಾಗುತ್ತಿದೆ. ಈ ಬಗ್ಗೆ ರಾಜ್ಯಾದ್ಯಂತ ಪ್ರತಿಭಟನೆಗಳನ್ನ ಮಾಡಿದ ನಂತರ ಸರ್ಕಾರ ಒಳ ಮೀಸಲಾತಿಯಲ್ಲಿ ಪರಿಷ್ಕರಣಿಯಾಗುವವರೆಗೆ ಹಳೆಯ ಮೀಸಲಾತಿಯನ್ನು ಮಾದರಿ ಮುಂದುವರಿಸುವುದಾಗಿ ಸಚಿವ ಸಂಪುಟ ತೆಗೆದುಕೊಂಡಿರುವ ತೀರ್ಮಾನವನ್ನು ಸ್ವಾಗತಿಸುತ್ತೇವೆ. ಆದರೆ, ಇದು ಬಲಗೈ ಸಮುದಾಯದ ಕಣ್ಣೊರೆಸುವ ತಂತ್ರವಾಗದೇ, ಸಮುದಾಯಕ್ಕೆ ನ್ಯಾಯ ಬದ್ಧವಾಗಿ ಸಿಗುವ ಶಿಕ್ಷಣ ಮತ್ತು ಉದ್ಯೋಗಕ್ಕೆ ಅನುಕೂಲವಾಗಬೇಕು. ಅವೈಜ್ಞಾನಿಕವಾದ ಒಳ ಮೀಸಲಾತಿಯನ್ನು ರದ್ದು ಮಾಡಬೇಕು. ಈಗಾಗಲೇ ನೀಡುತ್ತಿರುವ ಹೊಸ ಜಾತಿ ಪ್ರಮಾಣ ಪತ್ರವನ್ನು ನಿಲ್ಲಿಸುವಂತೆ ಒತ್ತಾಯಿಸಿದರು. ಬಳಿಕ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮಲ್ಲಹಳ್ಳಿ ನಾರಾಯಣ, ಅಭಿ ನಾಗಭೂಷಣ್, ಶಂಕರಪುರ ಸುರೇಶ್, ನಗರ್ಲೆ ವಿಜಯಕುಮಾರ್, ಬಸವಟ್ಟಿಗೆ ನಾಗೇಂದ್ರ, ಚುಂಚನಹಳ್ಳಿ ಮಲ್ಲೇಶ್, ಕಾರ್ಯ ಬಸವಣ್ಣ, ಗಟ್ಟವಾಡಿ ಮಹೇಶ, ಮುಳ್ಳೂರು ಸ್ವಾಮಿ, ಅರ್ಜುನ, ಹೆಜ್ಜೆಗೆ ಪ್ರಕಾಶ್, ಸಿದ್ದರಾಜು, ಮಂಜು ಶಂಕರ್ ಪುರ, ರಾಜಶೇಖರ್ ಸೇರಿದಂತೆ ಒಕ್ಕೂಟದ ಸದಸ್ಯರು ಹಾಜರಿದ್ದರು.
-
Chamarajanagar2 hours agoಡಾ. ಬಾಬು ಜಗಜೀವನ ರಾಮ್ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ರವರ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
-
Mandya2 hours agoಯಶಸ್ಸಿನ ಶಿಖರವನ್ನೇರಲು ಉತ್ತಮ ಚಿಂತನೆಗಳಿಂದ ಮಾತ್ರ ಸಾಧ್ಯ : ಅಂಕೇಗೌಡ
-
Mandya3 hours agoಮಾ.6 ರಂದು ರೈತರಿಗೆ ಒಂದು ದಿನದ ಕೃಷಿ ಕಾರ್ಯಾಗಾರ : ಎಂ.ಎನ್.ಮಹೇಶ್ ಕುಮಾರ್
-
Special10 hours agoರೈತರಿಗೆ ಮೊಬೈಲ್ನಲ್ಲಿಯೇ ಕಂದಾಯ ಇಲಾಖೆ ಸೇವೆಗಳು!
-
Hassan5 hours agoಶ್ರೀ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವ: ಡಿಸಿ, ಎಸಿ ವಿರುದ್ಧ ಎಚ್.ಡಿ.ರೇವಣ್ಣ ಸಿಡಿಮಿಡಿ
-
Kodagu3 hours agoಜಿಲ್ಲಾ ರೋಟರ್ಯಾಕ್ಟ್ ಪ್ರತಿನಿಧಿಯಾಗಿ ಕೊಡಗಿನ ಶ್ರೀರಕ್ಷಾ ಆಯ್ಕೆ
-
Mysore8 hours agoಶಿಕ್ಷಣದ ಜೊತೆಯಲ್ಲಿ ಕ್ರೀಡಾಸಕ್ತಿ ಬೆಳೆಸಿಕೊಳ್ಳಿ: ಪ್ರಕಾಶ್ ಪ್ರಿಯಾದರ್ಶನ್
-
Kodagu2 hours agoಮಾ.6 ರಂದು ಮಿನಿ ಉದ್ಯೋಗ ಮೇಳ
