Chamarajanagar
ಒಂದು ತಿಂಗಳಲ್ಲಿ 9 ಲಕ್ಷ ಕಾಣಿಕೆ ಪಡೆದ ಬಿಳಿಗಿರಿರಂಗನಾಥ ಸ್ವಾಮಿ
ಯಳಂದೂರು ತಾಲೂಕಿನ ಪುರಾಣ ಪ್ರಸಿದ್ಧ ಬಿಳಿಗಿರಂಗನ ಬೆಟ್ಟದ ಬಿಳಿಗಿರಿರಂಗನಾಥ ಸ್ವಾಮಿ ದೇಗುಲದಲ್ಲಿ
ಒಂದು ತಿಂಗಳ ಅವಧಿಯಲ್ಲಿನ 9.74.822 ರೂಪಾಯಿಗಳು ಹಾಗೂ 1 ಯುರೋ ಕರೆನ್ಸಿ
ಸಂಗ್ರಹವಾಗಿದೆ ಎಂದು ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್ ಕುಮಾರ್ ಮಾಹಿತಿ ನೀಡಿದರು.
ಅಲಮೇಲಮ್ಮ ದೇಗುಲ ಮುಂಭಾಗ ಹುಂಡಿ ಹಣ ಎಣಿಕೆ ಕಾರ್ಯಕ್ಕೆ ಚಾಲನೆ ದೊರೆಯಿತು, ದೇಗುಲದ ಸಿಬ್ಬಂದಿ ಕಂದಾಯ ಇಲಾಖೆಯ ಸಿಬ್ಬಂದಿ ಬ್ಯಾಂಕ್ ನೌಕರರು ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ತಹಸಲ್ದಾರ್ ಬಸವರಾಜು ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ್, , ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಸಿಬ್ಬಂದಿ ವರ್ಗದವರು ಸೇರಿದಂತೆ ಅನೇಕರು ಹಾಜರಿದ್ದರು.
Chamarajanagar
ಅಂಜುಮನ್-ಎ-ಇಸ್ಲಾಮಿಯಾ ವಕ್ಫ್ ಸಂಸ್ಥೆಯ ಮಹಾಸಭೆ ಸದಸ್ಯರ ನೊಂದಣಿಗೆ ವೇಳಾಪಟ್ಟಿ ಪ್ರಕಟ
ಚಾಮರಾಜನಗರ: ಕೊಳ್ಳೇಗಾಲ ನಗರದ ಅಂಜುಮನ್-ಎ-ಇಸ್ಲಾಮಿಯಾ ವಕ್ಸ್ ಸಂಸ್ಥೆಯ ಮಹಾಸಭೆ (ಜನರಲ್ ಬಾಡಿ) ಸದಸ್ಯರ ನೊಂದಣಿಗಾಗಿ ಅಧಿಸೂಚನೆ ಹೊರಡಿಸಲಾಗಿದ್ದು, ಸದಸ್ಯರ ನೊಂದಣಿ ಅಂತಿಮಗೊಳಿಸುವ ಸಂಬಂಧ ವೇಳಾಪಟ್ಟಿ ಪ್ರಕಟಿಸಲಾಗಿದೆ.
ಮಹಾಸಭೆಯ (ಜನರಲ್ ಬಾಡಿ) ಸದಸ್ಯರ ನೊಂದಣಿ ಅಧಿಸೂಚನೆಯನ್ನು ಡಿಸೆಂಬರ್ 10 ರಂದು ಪ್ರಕಟಿಸಲಾಗಿದೆ. ಸದಸ್ಯರ ನೋಂದಣಿಗಾಗಿ ಅರ್ಜಿಯನ್ನು ನೀಡುವ ಹಾಗೂ ಪಡೆಯುವ ದಿನಾಂಕವನ್ನು ಡಿಸೆಂಬರ್ 15 ರಿಂದ 2026ರ ಜನವರಿ 5ರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಿಗದಿ ಮಾಡಲಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಪಡೆಯುವ ಕಡೆಯ ದಿನಾಂಕ 2026ರ ಜನವರಿ 5 ಆಗಿದೆ. (ಕಡೆಯ ದಿನಾಂಕದಂದು ಅರ್ಜಿಗಳನ್ನು ವಿತರಿಸಲಾಗುವುದಿಲ್ಲ, ಭರ್ತಿ ಮಾಡಿದ ಅರ್ಜಿಯನ್ನು ಸ್ವೀಕೃತಿಗೆ ಮಾತ್ರ ಅವಕಾಶವಿರುತ್ತದೆ).
ಸದಸ್ಯರ ಕರಡು ಪಟ್ಟಿಯನ್ನು 2026ರ ಜನವರಿ 12ರಂದು ಪ್ರಕಟಿಸಲಾಗುತ್ತದೆ. ಸದಸ್ಯರ ಕರಡು ಪಟ್ಟಿಗೆ ಆಕ್ಷೇಪಣೆ ಮತ್ತು ಸಲಹೆಗಳನ್ನು ಜನವರಿ 12 ರಿಂದ 18ರವರೆಗೆ ಸಲ್ಲಿಸಬಹುದಾಗಿದೆ. ಆಕ್ಷೇಪಣೆ ಸಲಹೆಗಳಿದ್ದಲ್ಲಿ ಜನವರಿ 19ರಂದು ಪರಿಶೀಲನೆ ನಡೆಸಲಾಗುತ್ತದೆ. ಸದಸ್ಯರ ಅಂತಿಮ ಪಟ್ಟಿಯನ್ನು ಜನವರಿ 22ರಂದು ಪ್ರಕಟಿಸಲಾಗುವುದು ಎಂದು ಜಿಲ್ಲಾ ವಕ್ಫ್ ಅಧಿಕಾರಿ ಯು. ಆಸೀಫ್ ಖಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Chamarajanagar
ಡಿ.13ರಂದು ಚಾಮರಾಜನಗರ ಪಟ್ಟಣ ಸೇರಿ ವಿವಿಧೆಡೆ ವಿದ್ಯುತ್ ವ್ಯತ್ಯಯ
ಚಾಮರಾಜನಗರ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ಚಾಮರಾಜನಗರ, ಹರದನಹಳ್ಳಿ ಮತ್ತು ಬೇಗೂರು ಉಪವಿಭಾಗಗಳ ವ್ಯಾಪ್ತಿಯಲ್ಲಿ 3ನೇ ತ್ರೈಮಾಸಿಕ ನಿರ್ವಹಣೆ ಕಾಮಗಾರಿಯನ್ನು ಡಿಸೆಂಬರ್ 13 ರಂದು ಹಮ್ಮಿಕೊಂಡಿರುವುದರಿಂದ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಕೋಡಿಮೋಳೆ, ಚಾಮರಾಜನಗರ ಟೌನ್-1, ಜಿಲ್ಲಾಧಿಕಾರಿಗಳ ಕಚೇರಿ, ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣ, ರೈಲ್ವೆ ಬಡಾವಣೆ, ಕೆ.ಹೆಚ್.ಪಿ. ಕಾಲೋನಿ, ಪೊಲೀಸ್ ಕ್ವಾರ್ಟಸ್, ಜೂನಿಯರ್ ಕಾಲೇಜ್, ಗುಂಡ್ಲುಪೇಟೆ ರಸ್ತೆ, ಮಾದಾಪುರ, ದೊಡ್ಡರಾಯಪೇಟೆ, ಮಂಗಲ, ಕಾಗಲವಾಡಿ, ಹರದನಹಳ್ಳಿ, ಬೇಡರಪುರ, ಟಿ.ಕೆ ಮೋಳೆ, ಶಿವಪುರ, ರಾಮಸಮುದ್ರ, ಕರಿನಂಜನಪುರ, ಕೋರ್ಟ್ ರಸ್ತೆ, ಗೂಳಿಪುರ, ಹೊಂಗನೂರು ಹಾಗೂ ಕಬ್ಬಳ್ಳಿ, ಸೋಮಳ್ಳಿ, ಪಡಗೂರು, ಬಲಚವಾಡಿ, ನಿಟ್ರೆ, ಅಗತಗೌಡನಹಳ್ಳಿ ಮತ್ತು ಮೂಡ್ನಾಕೂಡು, ಮುಕ್ಕಡಹಳ್ಳಿ, ಉಡಿಗಾಲ, ಕಲ್ಪುರ, ದೇವಲಾಪುರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಸಾರ್ವಜನಿಕರು ನಿಗಮದ ಜೊತೆ ಸಹಕರಿಸಬೇಕು. ವಿದ್ಯುತ್ ಸಂಬಂಧಿತ ದೂರು ಮತ್ತು ಸಹಾಯಕ್ಕಾಗಿ ಗ್ರಾಹಕರು ಉಚಿತ ದೂ.ಸಂ 1912 ಗೆ ಕರೆ ಮಾಡುವಂತೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Chamarajanagar
ಡಿ.13ರಂದು ಚಾಮರಾಜನಗರ ಪಟ್ಟಣ ಸೇರಿ ವಿವಿಧೆಡೆ ವಿದ್ಯುತ್ ವ್ಯತ್ಯಯ
ಚಾಮರಾಜನಗರ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ಚಾಮರಾಜನಗರ, ಹರದನಹಳ್ಳಿ ಮತ್ತು ಬೇಗೂರು ಉಪವಿಭಾಗಗಳ ವ್ಯಾಪ್ತಿಯಲ್ಲಿ 3ನೇ ತ್ರೈಮಾಸಿಕ ನಿರ್ವಹಣೆ ಕಾಮಗಾರಿಯನ್ನು ಡಿಸೆಂಬರ್ 13 ರಂದು ಹಮ್ಮಿಕೊಂಡಿರುವುದರಿಂದ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಕೋಡಿಮೋಳೆ, ಚಾಮರಾಜನಗರ ಟೌನ್-1, ಜಿಲ್ಲಾಧಿಕಾರಿಗಳ ಕಚೇರಿ, ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣ, ರೈಲ್ವೆ ಬಡಾವಣೆ, ಕೆ.ಹೆಚ್.ಪಿ. ಕಾಲೋನಿ, ಪೊಲೀಸ್ ಕ್ವಾರ್ಟಸ್, ಜೂನಿಯರ್ ಕಾಲೇಜ್, ಗುಂಡ್ಲುಪೇಟೆ ರಸ್ತೆ, ಮಾದಾಪುರ, ದೊಡ್ಡರಾಯಪೇಟೆ, ಮಂಗಲ, ಕಾಗಲವಾಡಿ, ಹರದನಹಳ್ಳಿ, ಬೇಡರಪುರ, ಟಿ.ಕೆ ಮೋಳೆ, ಶಿವಪುರ, ರಾಮಸಮುದ್ರ, ಕರಿನಂಜನಪುರ, ಕೋರ್ಟ್ ರಸ್ತೆ, ಗೂಳಿಪುರ, ಹೊಂಗನೂರು ಹಾಗೂ ಕಬ್ಬಳ್ಳಿ, ಸೋಮಳ್ಳಿ, ಪಡಗೂರು, ಬಲಚವಾಡಿ, ನಿಟ್ರೆ, ಅಗತಗೌಡನಹಳ್ಳಿ ಮತ್ತು ಮೂಡ್ನಾಕೂಡು, ಮುಕ್ಕಡಹಳ್ಳಿ, ಉಡಿಗಾಲ, ಕಲ್ಪುರ, ದೇವಲಾಪುರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಸಾರ್ವಜನಿಕರು ನಿಗಮದ ಜೊತೆ ಸಹಕರಿಸಬೇಕು. ವಿದ್ಯುತ್ ಸಂಬಂಧಿತ ದೂರು ಮತ್ತು ಸಹಾಯಕ್ಕಾಗಿ ಗ್ರಾಹಕರು ಉಚಿತ ದೂ.ಸಂ 1912 ಗೆ ಕರೆ ಮಾಡುವಂತೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-
Kodagu19 hours agoಜಿಲ್ಲೆಯಾದ್ಯಂತ ಡಿ.21 ರಂದು ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ
-
Chamarajanagar19 hours agoಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ
-
Mysore17 hours agoಬಿಸಿಯೂಟ ಅನುದಾನ ದುರುಪಯೋಗ
-
Mysore16 hours agoನಿರ್ಧಾರ ಕೈ ಬಿಡುವಂತೆ ಅಗ್ರಹ
-
Kodagu19 hours agoಡಿ.15 ರಂದು ಮೂರ್ನಾಡು ಗ್ರಾಮದಲ್ಲಿ ಅರೆಭಾಷೆ ದಿನಾಚರಣೆ
-
Hassan24 hours agoಸುತ್ತೂರು ಜಾತ್ರಾ ಮಹೋತ್ಸವ
-
Kodagu19 hours agoರಾಷ್ಟ್ರಮಟ್ಟದ ಬಾಕ್ಸಿಂಗ್ ಸ್ಪರ್ಧೆಗೆ ಸಿ.ಐ.ಪಿ.ಯು.ವಿದ್ಯಾರ್ಥಿನಿ ಎ.ಎಸ್.ಪೊನ್ನಮ್ಮ ಆಯ್ಕೆ
-
Chamarajanagar17 hours agoಡಿ.13ರಂದು ಚಾಮರಾಜನಗರ ಪಟ್ಟಣ ಸೇರಿ ವಿವಿಧೆಡೆ ವಿದ್ಯುತ್ ವ್ಯತ್ಯಯ
