Mysore
ಮಹಿಷ ದಸರಾ ಪರ ವಿರೋಧ ವಿವಾದ ವಿಚಾರ ಮೈಸೂರು ಸಿಟಿ ಪೊಲೀಸ್ ಕಮಿಷನರ್ ರಿಂದ ಸೆಕ್ಷನ್ 144 ಜಾರಿ
ಮೈಸೂರು : ಮಹಿಷ ದಸರಾ ಪರ ವಿರೋಧ ವಿವಾದ ವಿಚಾರ ಮೈಸೂರು ಸಿಟಿ ಪೊಲೀಸ್ ಕಮಿಷನರ್ ರಿಂದ ಸೆಕ್ಷನ್ 144 ಜಾರಿ. ಚಾಮುಂಡಿ ಬೆಟ್ಟ ಸೇರಿ (ಟೌನ್ ಹಾಲ್ ಹೊರತುಪಡಿಸಿ) ಮೈಸೂರು ನಗರದ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿ.ಪೊಲೀಸ್ ಕಮೀಷನರ್ ರಮೇಶ್, ಬಿ ಆದೇಶ.
ಕಾನೂನು ಮತ್ತು ಸುವ್ಯಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಸೆಕ್ಷನ್ 144 ಜಾರಿ ಮಾಡಲಾಗಿದೆ.
12 ರಂದು ಮಧ್ಯರಾತ್ರಿ 12-00 ಗಂಟೆಯಿಂದ 14 ರ ಬೆಳಿಗ್ಗೆ 06-00 ಗಂಟೆಯವರೆಗೆ ನಿರ್ಬಂಧ.
ಯಾವುದೇ ಸಭೆ-ಸಮಾರಂಭ, ರಾಲಿ ಹಾಗೂ ಮೆರವಣಿಗೆ ನಡೆಸದಂತೆ ನಿಷೇಧ.
1) ಯಾವುದೇ ಮೆರವಣಿಗೆ, ಪ್ರತಿಭಟನೆ, ರಾಲಿ, ಬೈಕ್ ರಾಲಿ, ನಡೆಸುವುದು.
2) .ಪರ ವಿರೋಧ ಘೋಷಣೆ ಕೂಗುವುದು
3) ಪಟಾಕಿ ಸಿಡಿಸಿ ಸಂಭ್ರಮಾಚರಣೆ ಆಚರಿಸುವುದು
4) 05 ಜನರಿಗಿಂತ ಹೆಚ್ಚಿನ ಜನ ಗುಂಪು ಸೇರುವುದು.
5) ಯಾವುದೇ ಬಹಿರಂಗ ಸಭೆ ಸಮಾರಂಭಗಳನ್ನು ನಡೆಸುವುದು.
6) ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಪುಚಾರ, ಧ್ವನಿವರ್ಧಕ ಬಳಸುವುದು, ಫೆಕ್ಸ್ ಬ್ಯಾನರ್ ಅಳವಡಿಸುವುದು, ಕರಪತ್ರಗಳನ್ನು ಹಂಚುವುದು, ಮೂರ್ತಿ ಮೆರವಣಿಗೆ ಮಾಡುವುದು.
ಯಾವುದೇ ಸಂಘಟನೆ ಅಥವಾ ಸಾರ್ವಜನಿಕರು ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಹಾಗೂ ಸಭೆ-ಸಮಾರಂಭ ಮೆರವಣಿಗೆ, ಪ್ರತಿಭಟನೆ, ರಾಲಿ ನಡೆಸಲು ಪ್ರಯತ್ನಿಸಿದಲ್ಲಿ ಅಲ್ಲಿ ಸೇರಿರುವ ಜನರ ಕೂಟವನ್ನು ಅಕ್ರಮ ಕೂಟವೆಂದು ಪರಿಗಣಿಸಿ, ಆದೇಶ ಉಲ್ಲಂಘನೆ ಕುರಿತಂತೆ ಕಾನೂನು ಕ್ರಮಕೈಗೊಳ್ಳಲಾಗುವುದು.
ಈ ಆದೇಶವು ಮದುವೆ ಸಮಾರಂಭಗಳಿಗೆ ಮತ್ತು ಶವಸಂಸ್ಕಾರಗಳಿಗೆ ಹಾಗೂ ಶಾಲಾ, ಕಾಲೇಜು ಮತ್ತು ಪರೀಕ್ಷೆಗಳಿಗೆ ತೆರಳುವವರಿಗೆ ಅನ್ವಯಿಸುವುದಿಲ್ಲ.
Mysore
ಹಾವುಗಳಿದ್ದರೆ ಪರಿಸರ ಸಂರಕ್ಷಣೆ: ಮಹೇಶ್
ಮೈಸೂರು: ಪರಿಸರ ಸಮತೋಲನ ಕಾಪಾಡಲು ಹಾವುಗಳನ್ನು ರಕ್ಷಿಸಬೇಕು ಎಂದು ಉರಗ ರಕ್ಷಕ ಮತ್ತು ವನ್ಯಜೀವಿ ಸಂರಕ್ಷಕ ಎಂ.ಎಸ್.ಮಹೇಶ್ ಅಭಿಪ್ರಾಯಪಟ್ಟರು.
ಸರಸ್ವತಿಪುರಂನ ಜೆಎಸ್ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಪ್ರಾಣಿಶಾಸ್ತ್ರ ವಿಭಾಗದ ವತಿಯಿಂದ ಪ್ರಾಣಿಶಾಸ್ತ್ರ ಹಾವುಗಳ ಗುರುತಿಸುವಿಕೆ ಮತ್ತು ಸುರಕ್ಷಣಾ ಶಿಷ್ಟಾಚಾರಗಳ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಾವುಗಳು ರೈತನಿಗೆ ಮಿತ್ರನಾಗಿದ್ದು, ಕೃಷಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿವೆ. ಪ್ರಪಂಚದಲ್ಲಿ 2600 ಜಾತಿಯ ಹಾವುಗಳಿದ್ದು, ಭಾರತದಲ್ಲಿ 300 ರೀತಿಯ ಹಾವುಗಳಿವೆ ಎಂದರು.
ನಾಗರಹಾವು, ಮಂಡಲದಹಾವು ಹಾಗೂ ಕಾಳಿಂಗಸರ್ಪ ಹಾವುಗಳ ವಿಶಿಷ್ಟತೆ ವಿವರಿಸಿದ ಅವರು, ಹಾವು ಕಚ್ಚಿದಾಗ ನಿಯಂತ್ರಿಸಲು ಬಹಳಷ್ಟು ಔಷಧಿಗಳಿವೆ. ಹಾವಿನ ವಿಷದಿಂದ ಸಾಯುವುದಕ್ಕಿಂತ ಭಯದಲ್ಲೇ ಸಾಯುವ ಸಂಖ್ಯೆ ಹೆಚ್ಚಿದೆ. ಯಾವುದೇ ರೀತಿಯ ಮೂಢನಂಬಿಕೆಗಳಿಗೆ ಒಳಗಾಗದೆ ಹಾವು ಕಚ್ಚಿದಾಗ ಆಸ್ಪತ್ರೆಗೆ ತೆರಳಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.

ಪರೀಕ್ಷಾ ನಿಯಂತ್ರಣಾಧಿಕಾರಿ ಎಂ.ಎಂ.ಸ್ವಾಮಿ, ಪ್ರಾಣಿಶಾಸ್ತ್ರ ಮುಖ್ಯಸ್ಥೆ ಸಿ.ಜ್ಞಾನೇಶ್ವರಿ ಉಪಸ್ಥಿತರಿದ್ದರು. ಹರ್ಷಿತ ಮತ್ತು ಪ್ರೀತಿ ಪ್ರಾರ್ಥಿಸಿದರು. ಅವನಿ ಸ್ವಾಗತಿಸಿದರು. ಎಂ.ಜೆ. ಚಂದನ ವಂದಿಸಿದರು. ಆರ್.ಪಿ.ಸೃಷ್ಟಿ ನಿರೂಪಿಸಿದರು.
Mysore
5.55 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿದ ಕೆ.ಹರೀಶ್ ಗೌಡ
ಮೈಸೂರು: ಚಾಮರಾಜ ವಿಧಾನಸಭಾ ಕ್ಷೇತ್ರದ ಬೃಂದಾವನ ಬಡಾವಣೆ ಹಾಗೂ ಯಾದವಗಿರಿ ವ್ಯಾಪ್ತಿಯಲ್ಲಿ ಕೈಗೊಂಡಿರುವ ಅಂದಾಜು 5.55 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ.ಹರೀಶ್ ಗೌಡ ಬುಧವಾರ ಚಾಲನೆ ನೀಡಿದರು.
ಲೋಕೋಪಯೋಗಿ ಇಲಾಖೆಯಿಂದ ಮಂಜೂರಾಗಿರುವ ಚರಕ ಆಯುರ್ವೇದ ಆಸ್ಪತ್ರೆ ಮೂಲಕ ರೈಲ್ವೆ ಹಳಿ ಸೇರುವ ರಸ್ತೆ, 2ನೇ ಹಂತ, 8ನೇ ಮುಖ್ಯ ರಸ್ತೆ, ರೈಲ್ವೆ ಹಳಿ ಸಮಾನಾಂತರ ರಸ್ತೆ ದೇವಸ್ಥಾನದವರೆಗೂ, ಬೃಂದಾವನ ಬಡಾವಣೆಯ ಅಡ್ಡ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.

ಜತೆಗೆ ಗುರುದ್ವಾರ ರಸ್ತೆಯ ಹಿಂಭಾಗ 2ನೇ ಹಂತದ ಅಡ್ಡ ರಸ್ತೆಗಳು, ಆಂಜನೇಯ ಸ್ವಾಮಿ ದೇವಸ್ಥಾನ ಕೆಎಸ್ಆರ್ಟಿಸಿ ಕ್ವಾಟ್ರಸ್ ಮುಂಭಾಗದ ರಸ್ತೆ, ಬೃಂದಾವನ 2ನೇ ಹಂತ ಗುರುದ್ವಾರದ ಪಕ್ಕ ಮಂಜುನಾಥಪುರ ಸೇರುವ ರಸ್ತೆ, ಬೃಂದಾವನ ಬಡವಾಣೆಯಿಂದ ಕೆಐಎಡಿಬಿ ಕ್ಯಾಂಟೀನ್ ರಸ್ತೆ, ಕೆಐಎಬಿಡಿ 1ನೇ ಅಡ್ಡ ರಸ್ತೆ, ಕೆಐಎಬಿಡಿ 2ನೇ ಅಡ್ಡ ರಸ್ತೆ, ಕೆಐಎಬಿಡಿ 3ನೇ ಅಡ್ಡ ರಸ್ತೆ, ಕೆಐಎಬಿಡಿ 4ನೇ ಅಡ್ಡ ರಸ್ತೆ, ಕೆಐಎಬಿಡಿ 5ನೇ ಅಡ್ಡ ರಸ್ತೆಯ ಕಾಮಗಾರಿಗಳೂ ಸೇರಿವೆ.
ಇಂದಿರಾ ಗಾಂಧಿ ಬ್ಲಾಕ್ ಅಧ್ಯಕ್ಷ ರವಿ ಮಂಚೇಗೌಡನಕೊಪ್ಪಲು, ದೇವರಾಜ ಬ್ಲಾಕ್ ಅಧ್ಯಕ್ಷ ಡಿ.ನಾಗಭೂಷಣ್, ವಾರ್ಡ್ ಅಧ್ಯಕ್ಷ ದಿನೇಶ್, ಮುಖಂಡರಾದ ಟೆಂಟ್ ಶ್ರೀನಿವಾಸ್, ಪ್ರವೀಣ್ ಶೆಟ್ಟಿ, ಸುಶೀಲ ಮರಿಗೌಡ, ಗಿರಿಜಾಂಬ, ಮಂಜುನಾಥ್, ಜೀವನ್ ಪ್ರಕಾಶ್, ಮೈಸೂರು ವಿವಿ ಸಿಂಡಿಕೇಟ್ ಸದಸ್ಯರಾದ ಮಹದೇಶ್, ಆಶ್ರಯ ಸಮಿತಿ ಸದಸ್ಯರಾದ ಮಂಜುನಾಥï, ಇಬ್ರಾಹಿಂ, ಸ್ಥಳೀಯ ನಿವಾಸಿಗಳು ಭಾಗವಹಿಸಿದ್ದರು.
Mysore
ಅಖಿಲ ಭಾರತ ಅಂಚೆ ಸಾಂಸ್ಕೃತಿಕ ಸಮ್ಮೇಳನ: ಕರ್ನಾಟಕ ಅಂಚೆ ವೃತ್ತಕ್ಕೆ ಅಗ್ರಸ್ಥಾನ



-
Politics24 hours agoಪ್ರಿಯಾಂಕ್ ಖರ್ಗೆ RSS ವಿರೋಧಿ ಸಿಂಡ್ರೋಮ್ ವೈರಸ್ ಅಟ್ಯಾಕ್ ಆಗಿದೆ: ಡಾ.ಸಿ.ಟಿ.ರವಿ
-
Manglore3 hours agoಶ್ರೀನಿವಾಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕ ,ಡಾ. ಸಿ.ಎ.ರಾಘವೇಂದ್ರ ರಾವ್ ನಿಧನ
-
Hassan7 hours agoಬಡ ಮಹಿಳೆ ಮುಂದಿಟ್ಟುಕೊಂಡು ಹನಿಟ್ರ್ಯಾಪ್: ಖಾಕಿ ಬಲೆಗೆ ಬಿದ್ದ ಖತಾರ್ನಾಕ್ ಗ್ಯಾಂಗ್
-
Chamarajanagar22 hours agoSSLC ವಿದ್ಯಾರ್ಥಿಸಾಧನೆಗೆ ಉತ್ತೇಜನೆ : ಜಿಲ್ಲಾಧಿಕಾರಿ ಶ್ರೀರೂಪ
-
Hassan22 hours agoನಾಳೆ ನಗರ ಮತ್ತು ಗ್ರಾಮಾಂತರ ಪ್ರದೇಶಗಳ ವಿವಿಧೆಡೆ ವಿದ್ಯುತ್ ವ್ಯತ್ಯಯ
-
Manglore10 hours agoJEE ಮೈನ್ಸ್ ನಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿಶಾಲ್ ಪಿ. ಪುತ್ತೂರು ತಾಲೂಕಿಗೆ ಪ್ರಥಮ
-
Kodagu4 hours agoಕೊಡವ ಮಕ್ಕಡ ಕೂಟಕ್ಕೆ 13ನೇ ವಾರ್ಷಿಕೋತ್ಸವದ ಸಂಭ್ರಮ
-
Hassan21 hours agoನಾಳೆ ತಾಲೂಕಿನ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
