Connect with us

Chikmagalur

ಸಡಗರ ಮತ್ತು ಸಂಭ್ರಮದಿಂದ ಹೆಗ್ಗರವಳ್ಳಿ ಶಾಲೆಯಲ್ಲಿ ಗಣರಾಜ್ಯೋತ್ಸವ

Published

on

75 ನೇ ಗಣರಾಜ್ಯೋತ್ಸವವನ್ನು ಇಂದು ಹೆಗ್ಗರವಳ್ಳಿ ಶಾಲೆಯಲ್ಲಿ ಶಾಲೆಯ SDMC ಅಧ್ಯಕ್ಷರಾದ C R ರವಿ ಅವರ ಅಧ್ಯಕ್ಷತೆಯಲ್ಲಿ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು.

ಶಾಲೆಯ ವಿದ್ಯಾರ್ಥಿ ಪುಟಾಣಿಗಳಿಂದ ವಿವಿಧ ನೃತ್ಯ ಮತ್ತು ಗೀತೆ, ಡ್ಯಾನ್ಸ್, ಕೋಲಾಟ ಹಾಗೂ ಭಾಷಣ ಮೂಲಕ ನೆರೆದಿದ್ದ ಗ್ರಾಮಸ್ಥರನ್ನು ರಂಜಿಸಿದರು ಹಾಗೂ ಗಣರಾಜ್ಯೋತ್ಸವದ ಬಗ್ಗೆ ಸುದೀರ್ಘವಾಗಿ ಶಾಲೆಯ SDMC ಉಪಾಧ್ಯಕ್ಷರು ಅದ ಶ್ರೀಯುತ C E ಜಗದೀಶ್ ಅವರ ಭಾಷಣದ ಮೂಲಕ ತಿಳಿಸಿದರು. ವೇದಿಕೆಯಲ್ಲಿ ಶಾಲೆಯ ಮುಕ್ಯೋಪಾಧ್ಯಾಯರಾದ ವೆಂಕಟರಮಣ ಸರ್ ಅವರು ವೇದಿಕೆಯಲ್ಲಿ ನೆರಿದಿದ್ದ ಗಣ್ಯರನ್ನು ಸ್ವಾಗತಿಸಿದರು. ಹಾಗೂ ಗ್ರಾಮದ ಉತ್ಸಹಿ ಯುವಕ C M ರಚಿತ್ ಕುಮಾರ್ ಹಾಗೂ ಅತಿಥಿ ಶಿಕ್ಷಕರಾದ ಸುಜಾತ ಯೋಗೆಂದ್ರ ಅವರು ಮತ್ತು ಶಾಲೆಯ SDMC ಸದಸ್ಯರು ಹಾಗೂ ಗ್ರಾಮಸ್ಥರು ಹಾಗೂ ಅಡುಗೆ ದಾಸೋಹದ ಶ್ರೀಮತಿ ಯಶೋಧ ಸುರೇಶ್ ಅವರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನೆರೆದಿದ್ದ ಗ್ರಾಮಸ್ಥರನ್ನು ಮೆರಗು ಗೊಳಿಸಿತು. ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪೂರ್ವ ತಯಾರಿಗೊಳಿಸಿದ ಸುಜಾತಾ ಅವರು ತುಂಬಾ ಅಚ್ಚುಕಟ್ಟಾಗಿ ತಮ್ಮ ಕಾರ್ಯನಿರ್ವಾಹಿಸಿದ್ದರು.

ವರದಿ : ಸಿ .ಎಲ್. ಪೂರ್ಣೇಶ್ ಚಕ್ಕೂಡಿಗೆ

Continue Reading
Click to comment

Leave a Reply

Your email address will not be published. Required fields are marked *

Chikmagalur

ಡಿ.ಸಿ.ಸಿ ಬ್ಯಾಂಕ್‌ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಂ.ಎಸ್ ನಿರಂಜನ್‌ರನ್ನು 9 ವರ್ಷಗಳ ಕಾಲ ಉಚ್ಚಾಟಿಸಲಾಗಿದೆ : ದೇವರಾಜ್‌

Published

on

ಚಿಕ್ಕಮಗಳೂರು: ಪಕ್ಷದ ಸೂಚನೆಯನ್ನು ಧಿಕ್ಕರಿಸಿ ಇತ್ತೀಚೆಗೆ ನಡೆದ ಡಿ.ಸಿ.ಸಿ ಬ್ಯಾಂಕ್‌ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಂ.ಎಸ್ ನಿರಂಜನ್‌ರನ್ನು 9 ವರ್ಷಗಳ ಕಾಲ ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿರುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್‌ ತಿಳಿಸಿದ್ದಾರೆ.

ಬಿಜೆಪಿ ಜಿ.ಪಂಗೆ ಬಿಜೆಪಿ ಸ್ಪರ್ಧೆ ಮಾಡಲು ಅವಕಾಶ ಮಾಡಿಕೊಟ್ಟಿತ್ತು. ಡಿ.ಸಿಸಿ ನಿರ್ದೇಶಕರನ್ನಾಗಿ ಪಕ್ಷವು ಮಾಡಿದ್ದರೂ 2021  ರ ವಿಧಾನ ಪರಿಷತ್ ಚುನಾವಣೆಯ ಸಂಧರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಕೆ.ಪ್ರಾಣೇಶ್ ರವರ ವಿರುದ್ಧ ಕಾಂಗ್ರೆಸ್‌ನವರ ಪರವಾಗಿ ಮತಯಾಚನೆ ಮಾಡಿರುವುದು.2021 ರ ಡಿಸೆಂಬರ್‌ನಲ್ಲಿ ನಡೆದ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸತೀಶ್ ಕುಪ್ಪೇನಹಳ್ಳಿ ವಿರುದ್ಧ ಕಾಂಗ್ರೆಸ್‌ನ ಪರವಾಗಿ ಕೆಸ ಮಾಡಿದ್ದರೂ 2024ರಲ್ಲಿ ಜಿಲ್ಲಾ ಉಪಾಧ್ಯಕ್ಷರನ್ನಾಗಿ ನೇಮಿಸಲಾಯಿತು.


ಡಿ.ಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಪಕ್ಷಕ್ಕೆ ಮುಜುಗರ ಉಂಟುಮಾಡಿದ್ದು,ಈ ಎಲ್ಲಾ ಕಾರಣದಿಂದ ಮುಂದಿನ 9 ವರ್ಷಗಳ ಕಾಲ ಭಾರತೀಯ ಜನತಾ ಪಕ್ಷದಿಂದ ನಿರಂಜನ್ ರವರನ್ನು ಉಚ್ಛಾಟಿಸಲಾಗಿದೆ ಎಂದಿದ್ದಾರೆ.

Continue Reading

Chikmagalur

ಕೊಲೆ ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಕೊಲೆ ಆರೋಪಿಯನ್ನು ಬಂಧಿಸಿದ : ಬೀರೂರು ಪೋಲೀಸರು

Published

on

ಚಿಕ್ಕಮಗಳೂರು: ಕೊಲೆ ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಬೀರೂರು ಪೋಲೀಸರು ಕೊಲೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಫೆ.04 ರಂದು 10.30 ರ ವೇಳೆಯಲ್ಲಿ ಬೀರೂರಿನಲ್ಲಿ ರಂಗನಾಥಎಂಬವನು ಪತ್ನಿ ಮಮತಾಳ ಶೀಲಾ ಶಂಕಿಸಿ ಬೇರೆಯವರೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿರುವುದಾಗಿ ಅನುಮಾನಪಟ್ಟು ಜೋರಾಗಿ ಜಗಳವಾಡಿ ಕೈಗಳಿಂದ ಹೊಡೆದು ವೇಲ್ ನಿಂದ ಹೆಂಡತಿಯ ಕುತ್ತಿಗೆಗೆ ಬಿಗಿಯಾಗಿ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿರುವ ಬಗ್ಗೆ ರತ್ನಮ್ಮ ಎಂಬವರು ದೂರು ನೀಡಿದ್ದರು.


ಬೀರೂರು ಪಟ್ಟಣದ ರತ್ನಮ್ಮಎಂಬವರ ಮಗಳಾದ ಮಮತ 33 ವರ್ಷ, ಈಕೆಯನ್ನು 09 ವರ್ಷಗಳ ಹಿಂದೆ ಬುರುಡೆಕಟ್ಟೆ ವಾಸಿ ರಂಗನಾಥ್ ಎಂಬವರ ಮದುವೆ ಮಾಡಿಕೊಟ್ಟಿದ್ದು ಮುಂಚೆ ಸಾಂಸಾರಿಕವಾಗಿ ಅನ್ಯೋನ್ಯವಾಗಿ ಅವರಿಗೆ 8 ವರ್ಷದ ಗಂಡು ಮಗು ಮತ್ತು 3 ವರ್ಷದ ಹೆಣ್ಣು ಮಗಳಿದ್ದಳು.

ಬೀರೂರಿನ ಮಾರ್ಗದ ಕ್ಯಾಂಪ್ ಚೌಡಮ್ಮನ ಬೀದಿಯ ಪುಟ್ಟಣ್ಣ ಎಂಬುವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿರುತ್ತಾರೆ ಇಬ್ಬರೂ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಹಾಗೂ ಕೊಲೆ ಆರೋಪಿತನಾದ ರಂಗನಾಥನನ್ನು ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ವಶಕ್ಕೆ ಪಡೆದು ಸೂಕ್ತ ಕಾನೂನು ಕ್ರಮ ಜರುಗಿಸಿದ್ದಾರೆ.

Continue Reading

Chikmagalur

ತಾಪಂ-ಜಿಪಂ-ಜಿಬಿಎ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ ವಿಚಾರ : ಸಚಿವ ಪರಮೇಶ್ವರ್

Published

on

ಚಿಕ್ಕಮಗಳೂರು : ಚಿಕ್ಕಮಗಳೂರಿನ ಗೃಹ ಸಚಿವರಾದ ಪರಮೇಶ್ವರ್  ರವರು, ತಾಪಂ-ಜಿಪಂ-ಜಿಬಿಎ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ ವಿಚಾರವಾಗಿ , ನಿನ್ನೆ ಕ್ಯಾಬಿನೆಟ್ ನಲ್ಲಿ ತೀರ್ಮಾನ ಮಾಡಿದ್ದೇವೆ, ಎಂದರು.

ಈ ಚುನಾವಣೆಗೆ ಬ್ಯಾಲೆಡ್ ಪೇಪರ್ ಇಂಟ್ರಡ್ಯೂಸ್ ಮಾಡ್ಬೇಕು ಅಂತ ತೀರ್ಮಾನ ಮಾಡಿದ್ದೇವೆ, ತಾಪಂ-ಗ್ರಾಪಂಗೆ ಮಾಡ್ಬೇಕು ಅಂತ ತೀರ್ಮಾನ ಆಗಿದೆ.

ಬಹುಶಃ, ಜಿಬಿಎಗೂ ಅದನ್ನೇ ಅಪ್ಲೈ ಮಾಡುತ್ತಾರೆ.ಎಂದು  ಚಿಕ್ಕಮಗಳೂರಿನಲ್ಲಿ ಗೃಹ ಸಚಿವ ಪರಮೇಶ್ವರ್ ಹೇಳಿದರು.

Continue Reading

Trending

error: Content is protected !!