Chikmagalur
ಶ್ರೀ ಕ್ಷೇತ್ರಕ್ಕೆ ಶ್ರೀಗಳು ಪಾದಾರ್ಪಣೆ ಮಾಡಿದ ಅಮೃತಘಳಿಗೆ ಸುವರ್ಣಾಕ್ಷರದಲ್ಲಿ ಬರೆದಿಡಬೇಕು : ಗುಣನಾಥ ಸ್ವಾಮೀಜಿ

ಮಹಾಗುರುವಿನ ದ್ವಾದಶ ಸೇವೆಗಳು ಬಿಡುಗಡೆ – ಡಾ. ಬಾಲಗಂಗಾಧರನಾಥ ಮಹಾ ಸ್ವಾಮೀಜಿ ದೇಶ ಕಂಡ ಗಿರಿತುಂಗ ಭಾಸ್ಕರರಾಗಿದ್ದರು.
ಚಿಕ್ಕಮಗಳೂರು : ಶೃಂಗೇರಿ ಶ್ರೀ ಕ್ಷೇತ್ರದಲ್ಲಿ ೭೨ನೇ ಪೀಠಾಧ್ಯಕ್ಷರಾದ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಶ್ರೀಪಾದ ಶ್ರೀ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಅಮೃತಘಳಿಗೆಯನ್ನು ಸುವರ್ಣ ಅಕ್ಷರದಲ್ಲಿ ಬರೆದಿಡಬಹುದು. ಸಾಮಾಜಿಕ, ಶೈಕ್ಷಣಿಕ, ಆಧ್ಯಾತ್ಮಿಕ, ವೈಜ್ಞಾನಿಕ, ವೈಚಾರಿಕವಾಗಿ ದೇಶ-ವಿದೇಶಗಳಲ್ಲಿ ಶ್ರೀ ಕ್ಷೇತ್ರ ಮನ್ನಣೆ ಪಡೆಯಲು ಪೂಜ್ಯರು ನೀಡಿದ ಕೊಡುಗೆ ಅದ್ವಿತೀಯ ಎಂದು ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥಸ್ವಾಮೀಜಿ ತಿಳಿಸಿದರು.
ಬುಧವಾರ ಪಟ್ಟಣದ ಶ್ರೀ ಬಿ.ಜಿ.ಎಸ್.ಆವರಣದಲ್ಲಿ ಶ್ರೀ ಗುರು ಪಾದುಕಾ ೧೦೮ ಸ್ವರ್ಣ ಪುಪ್ಪಾರ್ಚನೆ, ಶಿಕ್ಷಣ ಟ್ರಸ್ಟ್ನ ಸುವರ್ಣ ಸಂಭ್ರಮ, ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಅವರ ಪಟ್ಟಾಭಿಷೇಕದ ದಶಮಾನೋತ್ಸವ ಮಹೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶ್ರೀಗಳು, ಬದುಕಿನ ಕವಲುದಾರಿಯ ನಡುವೆ ದಿಟ್ಟ ಹೆಜ್ಜೆ ಇಟ್ಟ ಅವರ ಧೀರ ನಡಿಗೆ ಸರ್ವರಿಗೂ ಮಾದರಿಯಾಗಿದೆ. ಅವರ ಜೀವನ ಯಾತ್ರೆ ಒಂದು ಪವಿತ್ರವಾದ ಯಜ್ಞ. ಪೂಜ್ಯರನ್ನು ಗ್ರಾಂತಗಳ ಮೂಲಕ ವರ್ಣನೆ ಮಾಡಲು ಸಾಧ್ಯವಿಲ್ಲ. ಕಾರಣ ಅವರೊಬ್ಬ ದೇಶ ಕಂಡ ಗಿರಿತುಂಗ ಭಾಸ್ಕರರಾಗಿದ್ದು ಅವರ ಮಹೋನ್ನತವಾದ ಹೆಜ್ಜೆ ಗುರುತು ನಮ್ಮೊಳಗೆ ಅಂತರ್ಗತವಾಗಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರು ಮಾತನಾಡಿ, ಪ್ರಾಚೀನವಾದ ಶ್ರೀ ಆದಿಚುಂಚನಗಿರಿ ಕ್ಷೇತ್ರ ಲೋಕ ಕಲ್ಯಾಣಕ್ಕಾಗಿ ಮಾಡಿದ ಸತ್ಕಾರ್ಯ ಅನನ್ಯ. ಶಿಕ್ಷಣ ಕ್ಷೇತ್ರದಲ್ಲಿ ಹಿರಿಯ ಪೂಜ್ಯರು ಮಾಡಿರುವ ಕ್ರಾಂತಿ ಅಮರ. ಯಾವುದೇ ಮಠಗಳು ಉತ್ತಮವಾಗಿ ಕೆಲಸ ಮಾಡಿದಾಗ ಸಮಾಜ ಅವರ ಜೊತೆ ಕೈಜೋಡಿಸುತ್ತದೆ.”ವಸುದೇವ ಕುಟುಂಬಂ’ ಎಂಬ ಭಾವನೆಯಿಂದ ನಾವು ಜೀವನ ಸಾಗಿಸಬೇಕು. ಯಾರು ಒಳ್ಳೆಯದು ಮಾಡುತ್ತಾರೋ ಅದು ನಿಜವಾದ ಧರ್ಮ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಟಿ.ಡಿ.ರಾಜೇಗೌಡ ವಹಿಸಿದ್ದರು. ಸಭೆಯಲ್ಲಿ ಶಾಸಕರಾದ ಕೆ.ಎಸ್.ಆನಂದ್, ಹೆಚ್.ಡಿ. ತಮ್ಮಯ್ಯ, ಆರಗ ಜ್ಞಾನೇಂದ್ರ, ಮಾಜಿ ಸಚಿವ ಡಿ.ಎನ್. ಜೀವರಾಜ್, ಎಂ.ಎಲ್.ಸಿ ಭೋಜೇಗೌಡ, ರಾಜಕೀಯ ಮುಖಂಡ ಎಚ್.ಜಿ.ವೆಂಕಟೇಶ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್, ಜಿಲ್ಲಾ ಪ್ರತಿನಿಧಿ ಪೂರ್ಣೇಶ್ ಹಾಗೂ ವಿವಿಧ ಮಠಗಳಿಂದ ಆಗಮಿಸಿದ ಸ್ವಾಮೀಜಿಗಳು ಪಾಲ್ಗೊಂಡಿದ್ದರು.
* ಮಠಾಧೀಶರು ಬೇಕಾಗಿದ್ದಾರೆ ಎಂಬ ಪ್ರಸಂಗ ಸ್ಮರಿಸಿದ ಆದಿಚುಂಚನಗಿರಿಯ ನಿರ್ಮಲಾನಂದನಾಥ ಶ್ರೀಗಳು :
ಪತ್ರಿಕಾ ಪ್ರಕಟಣೆ ಹೊರಡಿಸಿ ಆದಿಚುಂಚನಗಿರಿ ಮಠಕ್ಕೆ ಪೀಠಾಧಿಪತಿ ಆಯ್ಕೆ ಮಾಡಿದ ಪ್ರಸಂಗವನ್ನು ನಿರ್ಮಲಾನಂದನಾಥ ಶ್ರೀಗಳು ಬುಧವಾರ ಶೃಂಗೇರಿಯಲ್ಲಿ ನಡೆದ ಬಾಲಗಂಗಾಧರನಾಥ ಸ್ವಾಮೀಜಿ ಪಟ್ಟಾಭಿಷೇಕ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ನೆನಪು ಮಾಡಿಕೊಂಡಿದ್ದಾರೆ. ವಿದ್ಯಾರ್ಥಿ ಆಗಿದ್ದ ವೇಳೆ ಪತ್ರಿಕೆಯಲ್ಲಿ ಜಾಹೀರಾತು ನೋಡಿ, ಆದಿಚುಂಚನಗಿರಿ ಮಠಕ್ಕೆ ಬಂದು ಪೀಠಾಧಿಪತಿಯಾದ ವಿಷಯ ಬಾಲಗಂಗಾಧರನಾಥ ಸ್ವಾಮೀಜಿಯವರೇ ಹೇಳಿದ್ದನ್ನು ನೆನಪಿಸಿಕೊಂಡ ನಿರ್ಮಲಾನಂದನಾಥ ಶ್ರೀಗಳು ವಿದ್ಯಾರ್ಥಿ ಆಗಿದ್ದ ವೇಳೆಯಲ್ಲೇ ಧ್ಯಾನ ಮಾಡುವಾಗ ಮರ ಬಿದ್ದು ಜೀವ ಹೋಗುವುದು ತಪ್ಪಿದ್ದನ್ನು ಬಾಲಗಂಗಾಧರನಾಥ ಶ್ರೀಗಳು ಸತ್ತು ಹೋಗಿದ್ದೇನೆ ಎಂದುಕೊಂಡೇ ಬದುಕಿದ್ದೇನೆ ಎಂಬ ಮಾತನ್ನ ಸ್ಮರಿಸಿದರು.
* ಮಹಾಗುರುವಿನ ದ್ವಾದಶ ಸೇವೆಗಳು ಬಿಡುಗಡೆ :
ವಾದ್ಯ, ಚೆಂಡೆವಾದನಗಳ ಜೊತೆ ಪಲ್ಲಕ್ಕಿಯಲ್ಲಿ ಸಾಗಿ ಬಂದ ಚಿಕ್ಕಮಗಳೂರಿನ ಸದ್ಭಕ್ತರು ಸಲ್ಲಿಸಿದ ಶ್ರೀ ಗುರುಪಾದುಕೆಗೆ ೧೦೮ ಸ್ವರ್ಣ ಪುಪ್ಪಾರ್ಚನೆಯನ್ನು ಶ್ರದ್ಧಾಭಕ್ತಿಯಿಂದ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ನೆರವೇರಿಸಿದರು. ಶ್ರೀ ಗುಣನಾಥಸ್ವಾಮೀಜಿ ರಚಿಸಿದ “ಮಹಾಗುರುವಿನ ದ್ವಾದಶಸೇವೆಗಳು” ಬಿಡುಗಡೆಗೊಳಿಸಲಾಯಿತು. ಸುವರ್ಣಮಹೋತ್ಸವ ಹಾಗೂ ದಶಮಾನೋತ್ಸವದ ನಾಮಫಲಕವನ್ನು ಇದೇ ವೇದಿಕೆಯಲ್ಲಿ ಅನಾವರಣಗೊಳಿಸಲಾಯಿತು.
* ಗುರು ಎಂದರೆ ಧೃವ ನಕ್ಷತ್ರ ಇದ್ದಂತೆ :
ಒಮ್ಮೆ ಶ್ರೀಗಳು ಬೈಬಲ್ ಓದುವ ವೇಳೆ ಜೀಸಸ್ ತನ್ನ ೧೨ ಅನುಯಾಯಿಗಳಿಗೆ ಭೋದನೆ ಮುಗಿಸಿದ ನಂತರ ಜನ ಸೇವೆಗೆ ಕಳುಹಿಸುವ ವೇಳೆ ಕಾಡಿನಿಂದ ನಾಡಿಗೆ ಹೋಗುತ್ತಿದ್ದೀರಿ ಕಠಿಣವಿದೆ ಎದೆಗುಂದದೆ ಕಾರ್ಯನಿರ್ವಹಿಸಿ ಎಂದು ಹೇಳಿದ ವಿಷಯವನ್ನು ಪ್ರಸ್ತಾಪಿಸಿದ ನಿರ್ಮಲಾನಂದನಾಥ ಸ್ವಾಮೀಜಿಗಳು ಗುರು ಎಂದರೆ ಧೃವ ನಕ್ಷತ್ರ ಇದ್ದಂತೆ ಆಗಸದಲ್ಲಿ ಬೇರೆ ಎಷ್ಟೇ ತಾರೆಗಳಿದ್ದರು ಧೃವತಾರೆ ಬದುಕಿಗೆ ಸಮಗ್ರ ಮಾರ್ಗದರ್ಶನ ನೀಡುತ್ತಾರೆ ಎಂದರು. ಜ್ಞಾನಕ್ಕೆ ವಿದ್ಯಾದಾನ ಅತಿಶ್ರೇಷ್ಠ ಬಾಲಗಂಗಾಧರನಾಥ ಶ್ರೀಗಳು ಕಟ್ಟಿದ ಶಿಕ್ಷಣ ಸಂಸ್ಥೆಗಳು ಇಂದು ಅವರನ್ನು ಶಾಶ್ವತವಾಗಿರಿಸಿದೆ ಎಂದು ಅವರು ತಿಳಿಸಿದರು.
ಎಲ್ಲಾ ಧರ್ಮಕ್ಕೂ ನಾವು ಗೌರವಕೊಟ್ಟು, ಗೌರವದಿಂದ ಕಾಣಬೇಕು, ಮಧ್ಯಮವರ್ಗದ ಜನರಿಗೆ ಆದಾಯಕ್ಕಿಂತ ಖರ್ಚು ಹೆಚ್ಚಾಗಿದೆ. ಹಾಗಾಗಿ ಸರ್ಕಾರವು ಗ್ಯಾರಂಟಿಗಳನ್ನು ನೀಡಿ, ಜನಹಿತವನ್ನು ಕಾಪಾಡಿದೆ. ಎಲ್ಲಾ ಜನಾಂಗದವರು ಒಂದೇ ಎಂಬ ಭಾವದಿಂದ ಮುನ್ನಡೆಯಬೇಕು. ಎಲ್ಲಾ ಧರ್ಮದ ಹಿತಕ್ಕಾಗಿ ದುಡಿಯುವುದೇ ನಿಜವಾದ ಸೇವೆ. ಜನರ ನಂಬಿಕೆಯನ್ನು ನಾವು ಗಳಿಸಿದಾಗ ಮಾತ್ರ ಬದುಕು ಸಾರ್ಥಕ್ಯವಾಗುತ್ತದೆ.
– ಕೆ.ಜೆ ಜಾರ್ಜ್, ಇಂಧನ ಇಲಾಖೆ, ಜಿಲ್ಲಾ ಉಸ್ತುವಾರಿ ಸಚಿವರು
ಕೊಟ್ಟಿಗೆ ಕಟ್ಟಿಕೊಂಡವನಿಗೆ ಹೆಣ್ಣು ನೀಡಲು ಯಾರು ಬರುವುದಿಲ್ಲ. ಇಂತಹ ಪ್ರಸ್ತುತ ಸನ್ನಿವೇಶದಲ್ಲಿ ಕೃಷಿ ಸಂಸ್ಕೃತಿಯನ್ನು ನಾವು ಉಳಿಸಬೇಕು. ದೇಶಕ್ಕೆ ಸೈನಿಕ ಎಷ್ಟು ಮುಖ್ಯವೋ ಅನ್ನದಾತನೂ ಅಷ್ಟೇ ಪ್ರಾಮುಖ್ಯ. ಅವನ ಪ್ರಾಮಾಣಿಕ ಹಕ್ಕುಗಳನ್ನು ನ್ಯಾಯಯುತವಾಗಿ ನಾವು ನೀಡಬೇಕಿದೆ. ಇದರ ಕುರಿತು ಗಂಭೀರವಾದ ಚಿಂತನೆ ಸರ್ವರಲ್ಲೂ ಮೂಡಬೇಕು.
– ಸಿ.ಟಿ.ರವಿ, ಮಾಜಿ ಸಚಿವ
Chikmagalur
ಮೇಲಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತ ಸರ್ಕಾರಿ ಬಸ್ ಡ್ರೈವರ್ ಆತ್ಮ*ಹತ್ಯೆಗೆ ಶರಣು

ಚಿಕ್ಕಮಗಳೂರು: ಮೇಲಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಸರ್ಕಾರಿ ಬಸ್ ಚಾಲಕನೋರ್ವ ವಿಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿರುವ ಘಟನೆ ಕಡೂರು ಡಿಪೋದಲ್ಲಿ ನಡೆದಿದೆ.
ಚಂದ್ರು, ವಿಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕೆ.ಎಸ್.ಆರ್.ಟಿ.ಸಿ. ಚಾಲಕ. ರಜೆ ವಿಚಾರವಾಗಿ ಮೇಲಾಧಿಕಾರಿ ಪುಟ್ಟಸ್ವಾಮಿ ನೀಡುತ್ತಿರುವ ನೀಡುತ್ತಿರುವ ಕಿರುಕುಳಕ್ಕೆ ಬೇಸತ್ತು ಕಡೂರು ಡಿಪೋದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಆತ್ಮಹತ್ಯೆಗೆ ಯತ್ನಿಸಿದ ಚಾಲಕ ಚಂದ್ರು ನನ್ನು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಚಾಲಕ ಬರೆದಿಟ್ಟ ಡೆತ್ ನೋಟಲ್ಲಿ ‘ಹುಷಾರಿಲ್ಲದೆ ಕೆಲಸಕ್ಕೆ ಬಾರದಿದ್ದಕ್ಕೆ ಹಾಜರಾತಿಯಲ್ಲಿ ಗೈರು ಹಾಕಿದ್ದಾರೆ, ನನ್ನ ಖಾತೆಯಲ್ಲಿ ಸಾಕಷ್ಟು ರಜೆ ಇದೆ, ಆದರೂ ಗೈರು ಹಾಕಿದ್ದಾರೆ, ಹಣ ಕೊಟ್ಟರೆ ಎಷ್ಟು ದಿನ ಬೇಕಾದ್ರು ರಜೆ ನೀಡುತ್ತಾರೆ. ಪುಟ್ಟಸ್ವಾಮಿಯಿಂದ ನೌಕರರ ಮೇಲಾಗುತ್ತಿರು ದೌರ್ಜನ್ಯ ಸರಿಪಡಿಸುವಂತೆ ಮನವಿ ಮಾಡಿದ್ದಾನೆ. ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ
Chikmagalur
ಅಪ್ರಾಪ್ತನಿಂದ ದ್ವಿಚಕ್ರ ವಾಹನ ಚಾಲನೆ: ಪೋಷಕರಿಗೆ 25 ಸಾವಿರ ರೂ ದಂಡ.

ಚಿಕ್ಕಮಗಳೂರು : ಮೂಡಿಗೆರೆ ಪಟ್ಟಣದ ಬಾಪು ನಗರದಲ್ಲಿ ಅಪ್ರಾಪ್ತ ಬಾಲಕನೋರ್ವ ಸ್ಕೂಟಿ ಚಾಲನೆ ಮಾಡುತ್ತಿದ್ದಾಗ ಮೂಡಿಗೆರೆ ಪೊಲೀಸರು ದ್ವಿಚಕ್ರ KA18 EC2707 ಸಂಖ್ಯೆಯ ಸ್ಕೂಟಿಯನ್ನು ವಶಕ್ಕೆ ಪಡೆದು ದಂಡ ವಿಧಿಸಿದರು.
ಬಾಲಕನ ಪೋಷಕರಾದ ಮೊಹಮ್ಮದ್ ಸಿರಾಜ್ ಮೇಲೆ ಪ್ರಕರಣ ದಾಖಲಾಗಿದ್ದು ವಿಚಾರಣೆ ನಡೆಸಿ ಮೂಡಿಗೆರೆ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶರು ತೀರ್ಪು ನೀಡಿತು.
Chikmagalur
ಜನಿವಾರ ತೆಗೆಸಿರುವುದು ಖಂಡನೀಯ

ಜಯಪುರ : ಎರಡು ದಿನಗಳ ಹಿಂದೆ ರಾಜ್ಯದಾದ್ಯಂತ ನಡೆದ ವೃತ್ತಿಪರ ಕೋರ್ಸ್ ಗಳ ಸಿ ಇ ಟಿ ಪರೀಕ್ಷೆಯ ದಿನದಂದು ಪರೀಕ್ಷಾ ಅಧಿಕಾರಿಗಳು ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರವನ್ನು ತೆಗೆಸಿದ್ದಲ್ಲದೆ ತೆಗೆಯಲು ಒಪ್ಪದ ವಿದ್ಯಾರ್ಥಿಯೊಬ್ಬನಿಗೆ ಪರೀಕ್ಷೆಯಲ್ಲಿ ಕುಳಿತುಕೊಳ್ಳಲು ಅವಕಾಶವನ್ನೇ ನೀಡದ ಘಟನೆ ನಡೆದಿರುತ್ತದೆ. ಕೆಲವು ವಿದ್ಯಾರ್ಥಿಗಳ ಜನಿವಾರವನ್ನು ಕತ್ತರಿಸಿ ಹಾಕಿದ ಕೃತ್ಯವೂ ನಡೆದಿರುತ್ತದೆ. ಇಂತಹ ಅಮಾನವೀಯ ಕೃತ್ಯವನ್ನು ನಮ್ಮ ಸಮಾಜ ವಿರೋಧಿಸುತ್ತದೆ ಎಂದು ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಮಹಾಸಭಾ (ರಿ.)ದ ಕೇಂದ್ರೀಯ ಆಡಳಿತ ಮಂಡಳಿ ಅಧ್ಯಕ್ಷರಾದ ವಿಜಯರಂಗ ಕೋಟೆತೋಟ ಪತ್ರಿಕೆಗೆ ತಿಳಿಸಿದರು.
ನಮ್ಮ ದೇಶದಲ್ಲಿ ಪ್ರತಿಯೊಬ್ಬರಿಗೂ ಧಾರ್ಮಿಕ ಸ್ವಾತಂತ್ರ್ಯ ಇರುತ್ತದೆ, ಬ್ರಾಹ್ಮಣ್ಯದ ಸಂಕೇತವಾಗಿರುವ ಜನಿವಾರವನ್ನು ಉಪನಯನದ ಸಂದರ್ಭದಲ್ಲಿ ಧರಿಸಿದ ನಂತರ ಸಾಯುವವರೆಗೂ ಇಟ್ಟುಕೊಳ್ಳಬೇಕಾಗುತ್ತದೆ. ಬೇರೆ ಬೇರೆ ಕಾರಣಗಳಿಗೆ ಮಧ್ಯದಲ್ಲಿ ಬದಲಾಯಿಸಬಹುದು ಅಷ್ಟೇ, ಜನಿವಾರವನ್ನು ತೆಗೆಸಿರುವ ಈ ಕೃತ್ಯ ಅತ್ಯಂತ ಹೀನಾಯ ಮತ್ತು ಬ್ರಾಹ್ಮಣರ ಮೇಲೆ ನಡೆದಿರುವ ದೌರ್ಜನ್ಯ ಎಂದೇ ಪರಿಗಣಿಸಬೇಕಾಗುತ್ತದೆ.
ಸರಕಾರ ಮತ್ತು ಸಂಬಂಧಪಟ್ಟ ಇಲಾಖೆ ಈ ಕೂಡಲೇ ಇಂತಹ ದೌರ್ಜನ್ಯವನ್ನು ಎಸಗಿದ ಅಧಿಕಾರಿಗಳನ್ನು ಅಮಾನತು ಮಾಡುವುದಲ್ಲದೆ ಶಿಕ್ಷಣ ಇಲಾಖೆಯು ಬ್ರಾಹ್ಮಣ ಸಮಾಜದ ಕ್ಷಮಾಪಣೆಯನ್ನು ಕೇಳಬೇಕಾಗಿ ಆಗ್ರಹಿಸುತ್ತೇವೆ. ಇಂತಹ ಕೃತ್ಯ ಮುಂದೆ ಯಾವತ್ತೂ ನಡೆಯದಂತೆ ಬಂದೋಬಸ್ತ್ ಮಾಡಬೇಕಾಗಿ ಕೇಳಿಕೊಳ್ಳುತ್ತೇವೆ ಎಂದು ತಿಳಿಸಿದರು.
ವರದಿ :-ಎಂ.ಪಿ.ಪ್ರದೀಪ್ ಹೆಬ್ಬಾರ್, ಜಯಪುರ.
-
Chamarajanagar22 hours ago
ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ
-
Mysore19 hours ago
12 ವರ್ಷದ ಬಾಲಕಿ ಮೇಲೆ ಅತ್ಯಾಚಾರ : ಆರೋಪಿ ಬಂಧನ
-
Hassan23 hours ago
ಬಗರ್ ಹುಕುಂ ಸಾಗುವಳಿ ಮಂಜೂರಾತಿಯ ಸಭೆ
-
Kodagu19 hours ago
ಹುಲಿ ದಾಳಿಗೆ ಕರು ಬಲಿ
-
Kodagu22 hours ago
ಬಿರುನಾಣಿ ವ್ಯಾಪ್ತಿಯಲ್ಲಿ ಹುಲಿ ಸೆರೆಗೆ ಕಾರ್ಯಚರಣೆ
-
Chikmagalur24 hours ago
ಅಪ್ರಾಪ್ತನಿಂದ ದ್ವಿಚಕ್ರ ವಾಹನ ಚಾಲನೆ: ಪೋಷಕರಿಗೆ 25 ಸಾವಿರ ರೂ ದಂಡ.
-
Hassan24 hours ago
ಜನಿವಾರ, ಕಾಶೀ ದಾರ ತೆಗೆಸಿರುವುದು ಖಂಡನೀಯ
-
Mysore21 hours ago
ಆರ್. ರಘು ಅವರ ಎರಡು ಕೃತಿಗಳ ಲೋಕಾರ್ಪಣೆ