Connect with us

Chamarajanagar

ವಕೀಲರೊಬ್ಬರ ಮೇಲೆ ದುವರ್ತನೆ ಖಂಡಿಸಿ ಕಾನೂನು ಕ್ರಮ ಜರುಗಿಸಬೇಕೆಂದು ತಹಸೀಲ್ದಾರ್‍ಗೆ ಕರವೇ ದೂರು ನೀಡಿದೆ

Published

on

ಕೊಳ್ಳೇಗಾಲ: ಜನನ ಮರಣ ಪತ್ರ ವಿಭಾಗದ ಗುಮಾಸ್ತ ಕೆ.ವಿ.ಶ್ರೀಧರ್ ವಕೀಲರೊಬ್ಬರ ಮೇಲೆ ದುವರ್ತನೆ ಖಂಡಿಸಿ ಕಾನೂನು ಕ್ರಮ ಜರುಗಿಸಬೇಕೆಂದು ತಹಸೀಲ್ದಾರ್‍ಗೆ ಕರವೇ ದೂರು ನೀಡಿದೆ.
ವಕೀಲ ಚಂದ್ರಶೇಖರ್ ಅವರು ಜನನ ಮರಣ ಪತ್ರದ ವಿಭಾಗದ ಗುಮಾಸ್ತ ಕೆ.ವಿ.ಶ್ರೀಧರ್ ಅವರಿಂದ ಹಿಂಬರಹ ಪತ್ರ ಕೇಳಿದಾಗ 500 ರೂ. ನೀಡಬೇಕು ಎಂದು ಬೇಡಿಕೆ ಇಟ್ಟಾಗ ವಕೀಲರು 500 ರೂ. ಕೊಡಬೇಕೆಂದರೆ ನನಗೆ ರಶೀದಿ ಕೊಡಿ
ಹಣ ಕೊಡುತ್ತೇನೆ ಎಂದಿದ್ದಾರೆ. ಆಗ ಗುಮಾಸ್ತ ಶ್ರೀಧರ್ ವಕೀಲರೊಂದಿಗೆ ಅಸಭ್ಯದಿಂದ ವರ್ತಿಸಿದ್ದಾರೆ ಎಂದು ತಹಶಿಲ್ದಾರ್ ಅವರಿಗೆ ನೀಡಿರುವ ದೂರಿನಲ್ಲಿ  ತಿಳಿಸಲಾಗಿದೆ.
ದೂರು ಸ್ವೀಕರಿಸಿದ ತಹಶಿಲ್ದಾರ್ ಮಂಜುಳಾ, ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ವಕೀಲ ಚಂದ್ರಶೇಖರ್, ಹಿಂಬರ ಕೇಳಲು ಕಾನೂನು ಪ್ರಕಾರ 10 ರೂ. ಮಾತ್ರ ಕಟ್ಟಬೇಕು. ಆದರೆ ಗುಮಾಸ್ತರು 200 ರೂ. ಬೇಡಿಕೆ ಇಟ್ಟಿದ್ದನ್ನು ಕಾರಣ ಕೇಳಿದಾಗ
ಬೇರೆಯವರಿಂದ 500 ರೂ. ತೆಗೆದುಕೊಳ್ಳುತ್ತಿದೆ. ವಕೀಲರೆಂದು 200 ರೂ. ಕೊಡಿ ಎಂದು ಮರು ಬೇಡಿಕೆ ಇಟ್ಟಾಗ, ಈ ರೀತಿ ಅದರೆ ನಿಮ್ಮ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸುವುದಾಗಿ ಕೇಳಿದಾಗ ವಕೀಲರು ಏನು ಸಜಾನಾ ನೀವು ಲಂಚ
ತೆಗೆದುಕೊಳ್ಳುವುದಿಲ್ಲವ ಎಂದು ಅವಹೇಳನಕಾರಿಯಾಗಿ ಮಾತನಾಡಿ ಅವಮಾನ ಮಾಡಿದ್ದಾರೆ.
ನಮ್ಮಂತ ವಕೀಲರ ಬಳಿ ಈ ರೀತಿಯ ಲಂಚ ಕೇಳುವ ಈತ ಸಾರ್ವಜನಿಕರ ಬಳಿ ಯಾವ ರೀತಿ ವರ್ತಿಸಿರಬಹುದು ಎನ್ನುವುದು ಊಹೆ ಮಾಡುವುದು ಅಸಾಧ್ಯ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗುಮಾಸ್ತನ ಮೇಲೆ ಶಿಸ್ತಿನ ಕ್ರಮ
ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕರವೇ ಜಿಲ್ಲಾಧ್ಯಕ್ಷ ಆರ್.ಮೋಹನ್ ಪತ್ರಿಕೆ ಹೇಳಿಕೆ ನೀಡಿ, ಇಂತಹ ಭ್ರಷ್ಟ ನೌಕರರನ್ನು ಕೂಡಲೇ ವಜಾಗೊಳಿಸಬೇಕು. ಇಲ್ಲದಿದ್ದರೆ ನಮ್ಮ ಸಂಘಟನೆಯವರು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂಧರ್ಭದಲ್ಲಿ ಕರವೇ(ಪ್ರವೀಣ್ ಶೆಟ್ಟಿ ಬಣ) ಕಾರ್ಯದರ್ಶಿ ರಿಯಾಜ್ ಪಾಷ್, ಉಪಾಧ್ಯಕ್ಷ ನಾಗೇಶ್ ನಾಯ್ಕ, ಕಾರ್ಯಾಧ್ಯಕ್ಷ ಅಯಾಜ್, ಕೊಳ್ಳೇಗಾಲ ತಾಲೂಕು ಸಂಚಾಲಕ ಅಫೆÇ್ರೀಜ್ ಪಾಷ, ಹಿಮಾದದ್, ಅಬ್ಜಲ್, ಪ್ರಜ್ವಲ್, ನವೀನ,
ಮಧು, ಭಗತ್ ಸತ್ಯ ಸೇರಿದಂತೆ ಇತರರು ಇದ್ದರು.

Continue Reading
Click to comment

Leave a Reply

Your email address will not be published. Required fields are marked *

Chamarajanagar

ಸುಗಮ್ಯ ಯಾತ್ರಾ ಸಮೀಕ್ಷೆ-ಜಾಥಾಗೆ ಜಿ.ಪಂ ಸಿ.ಇ.ಒ ಮೋನಾ ರೋತ್ ಚಾಲನೆ

Published

on

ಚಾಮರಾಜನಗರ:- ಸರ್ಕಾರಿ ಕಚೇರಿ, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ವಿಶೇಷಚೇತನರಿಗೆ ಅಡೆ-ತಡೆರಹಿತ ವಾತಾವರಣ ನಿರ್ಮಿಸುವ ಸಂಬಂಧ ಸುಗಮ್ಯ ಯಾತ್ರಾ ಸಮೀಕ್ಷೆ ಜಾಥಾಗೆ ನಗರದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಚಾಲನೆ ನೀಡಿದರು.

ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ಹಾಗೂ ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ದುಡಿಯುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ‘ಸುಗಮ್ಯ ಯಾತ್ರೆಯ ಪ್ರತಿ ಹೆಜ್ಜೆ ಸಮಾನತೆಯ ಕಡೆಗೆ’ ಘೋಷವಾಕ್ಯದಡಿ ಹಮ್ಮಿಕೊಳ್ಳಲಾಗಿದ್ದ ಸಮೀಕ್ಷೆ ಹಾಗೂ ಜಾಥಾಗೆ ಹಸಿರು ನಿಶಾನೆ ತೋರಿದರು.

ಇದೇ ವೇಳೆ ಸಮೀಕ್ಷೆ ಹಾಗೂ ಜಾಥಾ ಉದ್ದೇಶಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಮಾತನಾಡಿ, ವಿಶೇಷ ಚೇತನ ವ್ಯಕ್ತಿಗಳ ಹಕ್ಕುಗಳನ್ನು ಸಂರಕ್ಷಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಸಲುವಾಗಿ ಸರ್ಕಾರವು ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ -2016ನ್ನು ಜಾರಿಗೊಳಿಸಿದೆ. ಅದರನ್ವಯ ಸರ್ಕಾರಿ ಕಚೇರಿಗಳು, ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ವಿಶೇಷಚೇತನರಿಗೆ ಅವಶ್ಯವಿರುವ ಮೂಲಸೌಲಭ್ಯ ಒದಗಿಸಿ ಅಡೆ-ತಡೆರಹಿತ ವಾತಾವರಣ ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಸರ್ಕಾರಿ ಹಾಗೂ ಸಾರ್ವಜನಿಕ ಕಟ್ಟಡಗಳಲ್ಲಿ ರ್ಯಾಂಪ್ ವ್ಯವಸ್ಥೆ, ಮನರಂಜನೆ ಸ್ಥಳಗಳು, ಉದ್ಯಾನವನಗಳು, ಗ್ರಂಥಾಲಯಗಳು, ಮಾರುಕಟ್ಟೆಗಳು, ಪ್ರವಾಸಿ ತಾಣಗಳು, ಸಾರ್ವಜನಿಕ ಶೌಚಾಲಯಗಳು ಸೇರಿದಂತೆ ಇತರೆ ಸ್ಥಳಗಳಲ್ಲಿ ವಿಶೇಷಚೇತನರಿಗೆ ಮೂಲಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಿ ಯಾವುದೇ ಅಡೆ-ತಡೆರಹಿತ ವಾತಾವರಣ ಸೃಷ್ಠಿಸಿ ಅನುಕೂಲ ಮಾಡಿಕೊಡಬೇಕಾಗಿದೆ. ಈ ಸಂಬಂಧ ಭಾರತ ಸರ್ಕಾರದ ಎಂ.ಎಸ್.ಜೆ ಮತ್ತು ಇ ಮಂತ್ರಾಲಯವು ಸುಗಮ್ಯ ಯಾತ್ರಾ ಅಭಿಯಾನದಡಿ ಸಾರ್ವಜನಿಕ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ತಿಳಿಸಿದರು.

ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಮೀನಾಕ್ಷಿ ಮಾತನಾಡಿ, ವಿಶೇಷಚೇತನರಿಗೆ ಮೂಲಸೌಕರ್ಯಗಳನ್ನು ಒದಗಿಸಿ ಸರ್ಕಾರಿ ಕಚೇರಿ, ಎಲ್ಲಾ ಸಾರ್ವಜನಿಕ ಸ್ಥಳಗಳನ್ನು ವಿಕಲಚೇತನ ವ್ಯಕ್ತಿಗಳ ಸ್ನೇಹಮಯಿ ವ್ಯವಸ್ಥೆಯನ್ನಾಗಿ ರೂಪಿಸಿರುವ ಬಗ್ಗೆ ಗ್ರಾಮೀಣ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರಿಂದ ಮಾಹಿತಿ ಕ್ರೋಢಿಕರಿಸಲು ಸಮೀಕ್ಷೆಯನ್ನು ಇಂದಿನಿಂದ ಹಮ್ಮಿಕೊಳ್ಳಲಾಗಿದೆ. ಸರ್ಕಾರವು ಬೆಂಗಳೂರಿನ ಎ.ಪಿ.ಡಿ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಮಾಹಿತಿ ಸಂಗ್ರಹಣೆ ಬಗ್ಗೆ ಸಂಸ್ಥೆಯು ವಿ.ಆರ್.ಡಬ್ಲ್ಯೂ, ಎಂ.ಆರ್.ಡಬ್ಲ್ಯೂ ಪುನರ್ವಸತಿ ಕಾರ್ಯಕರ್ತರಿಗೆ ತರಬೇತಿ ನೀಡಲಿದೆ. ಇದಕ್ಕಾಗಿ ಎಸ್ ಟು ಎಕ್ಸೆಸ್ (ಥಿes ಣo ಚಿಛಿಛಿess) ಆಪ್ ಅನ್ನು ಸಹ ಸಂಸ್ಥೆ ಸಿದ್ದಪಡಿಸಿದೆ ಎಂದರು.

ಇದೇ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ. ಸುರೇಶ್, ವಿ.ಆರ್.ಡಬ್ಲ್ಯೂ, ಎಂ.ಆರ್.ಡಬ್ಲ್ಯೂ ಪುನರ್ವಸತಿ ಕಾರ್ಯಕರ್ತರು, ಇತರರು ಇದ್ದರು.

ಜಾಥಾ ಬಳಿಕ ನಗರದ ತಾಲೂಕು ಪಂಚಾಯಿತಿ ಸಾಮಥ್ರ್ಯ ಸೌಧದಲ್ಲಿರುವ ಸಭಾಂಗಣದಲ್ಲಿ ಸರ್ಕಾರಿ ಕಚೇರಿ, ಎಲ್ಲಾ ಸಾರ್ವಜನಿಕ ಸ್ಥಳಗಳನ್ನು ವಿಕಲಚೇತನ ವ್ಯಕ್ತಿಗಳ ಸ್ನೇಹಮಯಿ ವ್ಯವಸ್ಥೆಯನ್ನಾಗಿ ರೂಪಿಸುವ ಬಗ್ಗೆ ಮಾಹಿತಿ ಸಂಗ್ರಹಿಸುವ ಕುರಿತು ಗ್ರಾಮೀಣ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರಿಗೆ ತರಬೇತಿ ನಡೆಯಿತು.

Continue Reading

Chamarajanagar

ರಾಷ್ಟ್ರೀಯ ಸೇವಾ ಯೋಜನೆಯ ಪ್ರಶಸ್ತಿ ಪ್ರದಾನ ಸಮಾರಂಭ

Published

on

ಯಳಂದೂರು : ಪಟ್ಟಣದ ಶ್ರೀ ವೈಎಂ ಮಲ್ಲಿಕಾರ್ಜುನ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು, 2024 25 ನೇ ಸಾಲಿನಲ್ಲಿ ವಿಶೇಷ ವಾರ್ಷಿಕ ಶಿಬಿರ ಮತ್ತು ದೈನಂದಿನ ಚಟುವಟಿಕೆಗಳನ್ನು ಯಶಸ್ವಿಯಾಗಿ ಕೈಗೊಳ್ಳಲಾಗಿತ್ತು. ಈ ಅವಧಿಯಲ್ಲಿ ಕಾಲೇಜಿನಲ್ಲಿ ಶ್ರಮದಾನ, ಸ್ವಚ್ಛತೆ, ಆರೋಗ್ಯ ಅರಿವು, ಮತದಾನದ ಜಾಗೃತಿ, ಸಂವಿಧಾನದ ಪೂರ್ವ ಪೀಠಿಕೆ, ಭ್ರಷ್ಟಾಚಾರ ಜಾಗೃತಿ, ಮಕ್ಕಳ ಹಕ್ಕುಗಳ ಅರಿವು , ಗಿಡ ನೆಡುವ ಕಾರ್ಯಕ್ರಮ, ಹದಿಹರೆಯದ ಸಮಸ್ಯೆಗಳು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಮುಂತಾದ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು.

ಇದೇ ಅವಧಿಯಲ್ಲಿ ವಿಶೇಷ ವಾರ್ಷಿಕ ಶಿಬಿರವನ್ನು ದುಗಹಟ್ಟಿ ಗ್ರಾಮದಲ್ಲಿ ಯಶಸ್ವಿಯಾಗಿ ನಡೆಸಲಾಯಿತು. ಈ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಶಿಬಿರದ ಉತ್ತಮ ಸ್ವಯಂಸೇವಕರಾಗಿ ನಾಗೇಂದ್ರ ದ್ವಿತೀಯ ಬಿಎ, ಅನನ್ಯ ಪ್ರಥಮ ಬಿಕಾಂ, ಹಾಗೂ ವರ್ಷದ ಉತ್ತಮ ಶಿಬಿರಾರ್ಥಿಗಳಾಗಿ ರಾಜು, ನಾಗರಾಜು, ಆನಂದ, ಶಂಕರ, ಸೈಯದ್ ಸಾಕಿಬ್, ಅಭಿ, ನಾಗೇಂದ್ರ, ಪಾತಿಮ ಬೀಬಿ ಇವರನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ವಿಜಯ್ ವಹಿಸಿ ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ನಾಯಕತ್ವ, ಶಿಸ್ತು, ಸಮಯ ಪಾಲನೆ, ಗುರಿ ನಿರ್ಧಾರ, ಜೀವನದಲ್ಲಿ ಏನನ್ನಾದರೂ ಸಾಧಿಸುವ ಸಾಧನವಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಂಚಾಲಕರಾದ ಮಹಾಂತೇಶ್, ವಿಕಾಸ್, ಅರುಣ್, ವಾಸು ಮತ್ತು ಎಲ್ಲಾ ಅಧ್ಯಾಪಕ ವೃಂದದವರು ಭಾಗವಹಿಸಿದ್ದರು.

Continue Reading

Chamarajanagar

ಮಕ್ಕಳಿಗೆ ಸಂಗೀತ ಕಲಿಸಲು ಪೋಷಕರು ಮುಂದಾಗಬೇಕು: ಡಾ.ಮಳವಳ್ಳಿ ಮಹದೇವಸ್ವಾಮಿ*

Published

on

ವರದಿ: ಉಲ್ಲಾಸ್ ಎಂ. ನಾಗವಳ್ಳಿ

ಚಾಮರಾಜನಗರ: ಮಕ್ಕಳಿಗೆ ಸಂಗೀತವನ್ನು ಅಭ್ಯಾಸ ಮಾಡಿಸಿ ಅವರ ಭವಿಷ್ಯ ಉಜ್ವಲವಾಗುತ್ತದೆ. ಪೋಷಕರು ಮಕ್ಕಳಿಗೆ ಸಂಗೀತ ಕಲಿಸಲು ಮುಂದಾಗಬೇಕು ಎಂದು ಜನಪದ ಗಾಯಕ ಡಾ.ಮಳವಳ್ಳಿ ಮಹದೇವಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಅಭ್ಯಾಸಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಹಟ್ಟಿಹೈಕಳ ಜಗುಲಿ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಚಿಕ್ಕವಯಸ್ಸಿನಲ್ಲೇ ಶೃತಿ ಬದ್ಧವಾಗಿ ಹಾಡಿರುವುದನ್ನು ನೋಡಿ ಬಹಳ ಸಂತೋಷವಾಯಿತು. ಸಂಗೀತ ಎಂಬುದು ಜ್ಞಾನ, ಇದನ್ನು ಮಕ್ಕಳಿಗೆ ಕಲಿಸುವ ಕಾಳಜಿ ಪೋಷಕರಿಗೆ ಬರಬೇಕು ಎಂದು ಹೇಳಿದರು.

ಸಂಗೀತ ಎಲ್ಲರಿಗೂ ಸುಲಭವಾಗಿ ದಕ್ಕುವ ಕಲೆಯಲ್ಲ. ಅದು ಆಸಕ್ತರಿಗೆ ಮಾತ್ರ ಒಲಿಯುತ್ತದೆ. ಇಂದಿನ ಮೊಬೈಲ್ ಭರಾಟೆಯಲ್ಲಿ ಎಲ್ಲ ಮಕ್ಕಳನ್ನು ಒಂದುಗೂಡಿಸಿ, ಬೇಸಿಗೆ ಶಿಬಿರ ಆಯೋಜಿಸಿ, ಅವರಿಗೆ ಕರಕುಶಲತೆ ನಾಟಕ ಪ್ರದರ್ಶನ ಮಾಡುವ ನಾನಾಕಲೆಗಳನ್ನು ಕಲಿಸಿರುವ ಅಭ್ಯಾಸಿ ಟ್ರಸ್ಟ್ ಸಂಸ್ಥಾಪಕರ ಕಾರ್ಯ ಪ್ರಶಂಸನೀಯ ಎಂದು ಹೇಳಿದರು.

ಜಾನಪದ ಕಲೆಗಳಿಗೆ ದೇಶಿಯವಾಗಿ ಅಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆಯಿದೆ. ಹೊಟ್ಟೆಪಾಡಿಗಾಗಿ ನಾನು ಜೋಳಿಗೆ ಹಿಡಿದುಕೊಂಡು ಮನೆಮನೆಗೆ ತೆರಳಿ ಹಾಡಿದೆ. ಕಲಿತ ಹಾಡೇ ಇಂದು ನಾನು ಜಾನಪದಗಾಯಕರಾಗಿ ಗುರ್ತಿಸಲು ಸಾಧ್ಯವಾಯಿತು. ಆಮೇರಿಕಾ, ಸಿಂಗಾಪೂರ್. ದುಬೈ ನಂತಹ ಹೊರ ದೇಶಗಳಿಗೂ ಸರ್ಕಾರ ಜಾನಪದ ಹಾಡು ಹಾಡಲು ಕಳುಹಿಸಿಕೊಟ್ಟಿತ್ತು. ಮಕ್ಕಳ ಮುಂದಿನ ಭವಿಷ್ಯದ ದೃಷ್ಟಿಯಿಂದ ಇಂತಹ ಶಿಬಿರಗಳ ಆಯೋಜನೆ ಅವಶ್ಯಕವಾಗಿದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾಹುಡೇದ ಮಾತನಾಡಿ, ಪೋಷಕರು ತಮ್ಮ ಮಕ್ಕಳಲ್ಲಿ ಇರುವಂತಹ ಪ್ರತಿಭೆಯನ್ನು ಹೊರ ತರಲು ಇಂತಹ ಬೇಸಿಗೆ ಶಿಬಿರಕ್ಕೆ ಮಕ್ಕಳನ್ನು ಕಳುಹಿಸಬೇಕು. ಶಿಬಿರದಲ್ಲಿ ಜನಪದ, ನಾಟಕ, ನೃತ್ಯ, ಸಂಗೀತ ಸೇರಿದಂತೆ ಹಲವು ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಹಲವಾರು ಕಲೆಗಳನ್ನು ಕಲಿಯಲು ಮುಂದಾಗುತ್ತಾರೆ. ಪೋಷಕರು ಮಕ್ಕಳನ್ನು ಕೇವಲ ಅಂಕಗಳಿಸುವುದಕ್ಕೆ ಮಾತ್ರ ಸೀಮಿತಗೊಳಿಸಬಾರದು. ವ್ಯವಹಾರ ಜ್ಞಾನ ವೃದ್ಧಿಸಿಕೊಳ್ಳಲು, ತಮ್ಮಲ್ಲಿರುವ ವ್ಯಕ್ತಿತ್ವವನ್ನು ಪರಿಪೂರ್ಣವಾಗಿಸಿಕೊಳ್ಳಲು ಇಂತಹ ಬೇಸಿಗೆ ಶಿಬಿರಗಳು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಈ ವೇಳೆ ಶಿಬಿರಾರ್ಥಿಗಳು ಗೀತಾಗಾಯನ ಪ್ರಸ್ತುತಪಡಿಸಿದರು. ನಂತರ ಕೋಟಿಗಾನಹಳ್ಳಿ ರಾಮಯ್ಯ ರಚನೆಯ “ಒಗಟಿನ ರಾಣಿ” ನಾಟಕ ನೋಡುಗರ ಗಮನ ಸೆಳೆಯುತ್ತಿದೆ.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಂಜುಂಡಯ್ಯ, ಮೈಸೂರು ಅರಿವು ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಡಾ. ಎಂ.ಸಿ.ಮನೋಹರ್, ಪತ್ರಕರ್ತ ನಾಗೇಶ್ ಸೋಸ್ಲೆ, ಸಂತ ಜೋಸೆಪರ ಮಹಿಳಾ ಅಭಿವೃದ್ಧಿ ಕೇಂದ್ರದ ಆಡಳಿತಾಧಿಕಾರಿ ಸಿಸ್ಟರ್ ಮರಿಯಾ ಸೇರಿದಂತೆ ಮಕ್ಕಳ ಪೋಷಕರು ಹಾಜರಿದ್ದರು.

“ಹಟ್ಟಿ ಹೈಕಳ ಜಗುಲಿ ಮಕ್ಕಳ ಬೇಸಿಗೆ ಶಿಬಿರ”ವು ನಮ್ಮ ಅಭ್ಯಾಸಿ ಟ್ರಸ್ಟ್ ಸಂಸ್ಥೆಯ ಬಹುಮುಖ್ಯ ಯೋಜನೆ. ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಪೋಷಕರ ಬೆಂಬಲವೇ ಶಿಬಿರದ ಯಶಸ್ಸಿಗೆ ಕಾರಣವಾಗಿದೆ.
ಕಿರಣ್ ಗಿರ್ಗಿ
ರಂಗ ನಿರ್ದೇಶಕ, ಅಧ್ಯಕ್ಷ
ಅಭ್ಯಾಸಿ ಟ್ರಸ್ಟ್
ಚಾಮರಾಜನಗರ.

ಒಂದು ತಿಂಗಳ ಶಿಬಿರದಲ್ಲಿ ನಾಟಕ, ಸಂಗೀತ, ಹೊರ ಸಂಚಾರ, ಯೋಗ ನಾನಾ ಚಟುವಟಿಕೆಗಳ ಮೂಲಕ ಮೊಬೈಲ್ ಗಳಿಂದ ಮಕ್ಕಳನ್ನು ದೂರವಿರಿಸಿದ್ದಲ್ಲದೇ ನಮ್ಮ ಮಕ್ಕಳ ವ್ಯಕ್ತಿತ್ವದಲ್ಲಿ, ಸಮಯ ಪ್ರಜ್ಞೆ, ಶಿಸ್ತಿನಲ್ಲಿ ಬದಲಾವಣೆಯನ್ನು ಗಮನಿಸಿದ್ದೇವೆ. ಸಂಸ್ಥೆಯು ಹೆಮ್ಮರವಾಗಿ ಬೆಳೆಯಲಿ.
-ಯಂಕನಾಯಕ ವಿ
ಹಿರಿಯ ಮುಖ್ಯ ಲಿಫೀಕಾಧಿಕಾರಿಗಳು,
ನ್ಯಾಯಾಂಗ ಇಲಾಖೆ, ಚಾಮರಾಜನಗರ.

ಹಳ್ಳಿ ಸಂಸ್ಕೃತಿಯನ್ನು ಜ್ಞಾಪಿಸಿದ ಒಗಟಿನ ರಾಣಿ ಮಕ್ಕಳ ನಾಟಕ:
ಒಗಟುಗಳನ್ನೇ ಆಧರಿಸಿ ರಚಿಸಿರುವ ಕೋಟಿಗಾನಹಳ್ಳಿ ರಾಮಯ್ಯನವರ ಒಗಟಿನ ರಾಣಿ ನಾಟಕವನ್ನು ನಿರ್ದೇಶಕ ಕಿರಣ್ ಗಿರ್ಗಿ ಸಮರ್ಥವಾಗಿ ರಂಗದಲ್ಲಿ ಪ್ರಯೋಗಿಸಿದರು. ನಾಟಕದ ಅಷ್ಟೂ ಒಗಟುಗಳಿಗೆ ಸಂಗೀತ ಸಂಯೋಜಿಸಿ ಮಕ್ಕಳಿಂದಲೇ ಹಾಡಿಸಿರುವುದು ಗಿರ್ಗಿಯವರ ಮತ್ತು ಶಿಬಿರದ ಯಶಸ್ಸಾಗಿದೆ. ವಸ್ತ್ರಾಲಂಕಾರದಲ್ಲಿ ನಂದಿನಿ ರವಿಕುಮಾರ್ ಮತ್ತು ಜ್ಯೋತಿ, ಮುಖವರ್ಣಿಕೆಯಲ್ಲಿ ರಂಗನಾಥ್, ಪರಿಕರ ಸೃಷ್ಟಿಸಿದ ಮಧುಸೂದನ್ ಹೊಸೂರು, ತಬಲ ಬಾಬು ಅವರ ನೇಪಥ್ಯ ಕೆಲಸಗಳು ನಾಟಕವನ್ನು ವರ್ಣಮಯವಾಗಿಸಿದೆ. ಶಿಬಿರದ ಸಮಾರೋಪ ಸಮಾರಂಭದಲ್ಲಿ ಐವತ್ತು ಮಕ್ಕಳೂ ಬಲು ಉತ್ಸಾಹದಿಂದ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆ ಪಡೆದರು.

Continue Reading

Trending

error: Content is protected !!