Connect with us

Mysore

ಫೆಬ್ರವರಿ 12 ರಂದು ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ

Published

on

ಮೈಸೂರು:ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಫೆಬ್ರವರಿ 12 ರಂದು ಕಿರು ರಂಗಮಂದಿರದಲ್ಲಿ ಅರ್ಥಪೂರ್ಣವಾಗಿ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಆರ್. ಲೋಕನಾಥ್ ಅವರು ತಿಳಿಸಿದರು.

ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಿದ್ಧರಾಮೇಶ್ವರ ಜಯಂತಿ ಆಚರಣೆ ಸಂಬಂಧ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಸರ್ಕಾರದ ಶಿಷ್ಟಾಚಾರದಂತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಜಿಲ್ಲೆಗೆ ಕಾರ್ಯಕ್ರಮ ಮಾಡಲು 50 ಸಾವಿರ ಅನುದಾನ ಬಿಡುಗಡೆ ಮಾಡಲಾಗಿದೆ. ಈ ಸಂಬಂಧ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಮಾಡಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದರು.

ಜಯಂತಿ ಕಾರ್ಯಕ್ರಮ ನಡೆಯುವ ಸ್ಥಳದ ಸ್ವಚ್ಚತೆ. ಕುಡಿಯುವ ನೀರಿನ ವ್ಯವಸ್ಥೆ, ಶಾಮಿಯಾನ ವ್ಯವಸ್ಥೆ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಸೂಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಎಂ.ಡಿ. ಸುದರ್ಶನ್ ಅವರು ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕಲಾತಂಡಗಳಿಂದ ಪ್ರದರ್ಶನ ಏರ್ಪಡಿಸಲಾಗುವುದು. ಆಹ್ವಾನ ಪತ್ರಿಕೆಯ ಮುದ್ರಣ ಮಾಡಿ ಸರ್ಕಾರದ ಶಿಷ್ಟಾಚಾರದಂತೆ ಜನ ಪ್ರತಿನಿಧಿಗಳನ್ನು ಆಹ್ವಾನಿಸಲಾಗುವುದು‌. ಈ ಸಂಬಂಧ ಸಮಿತಿಯವರು ಸಹಕರಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಭೋವಿ ಸಮುದಾಯದ ಅಧ್ಯಕ್ಷರಾದ ಜಿ. ನಾಗರಾಜ್, ಉಪಾಧ್ಯಕ್ಷರಾದ ಚಿನ್ನಸ್ವಾಮಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Mysore

ಗ್ರಾಮ‌ಮಟ್ಟದಲ್ಲಿ ಈ-ಪೌತಿ ಆಂದೋಲನ ನಡೆಸಿ ರೈತರಿಗೆ ಅನುಕೂಲ ಮಾಡಿಕೊಡಿ: ಡಾ.ಪಿ.ಶಿವರಾಜು

Published

on

ಮೈಸೂರು: ಇ-ಪೌತಿ ಆಂದೋಲನವನ್ನು ಕಡ್ಡಾಯವಾಗಿ ತಾಲೂಕು ಮತ್ತು ಗ್ರಾಮ ಪಂಚಾಯಿತಿ ಹಾಗೂ ಗ್ರಾಮಮಟ್ಟದಲ್ಲಿ ಅದಾಲತ್ ನಡೆಸಿ ಪ್ರತಿದಿನವೂ ಪ್ರಗತಿ ಸಾಧಿಸುವಂತೆ ಅಪರ ಜಿಲ್ಲಾಧಿಕಾರಿ ಡಾ:ಪಿ ಶಿವರಾಜು ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಕಂದಾಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಜಿಲ್ಲೆಯ ಎಲ್ಲಾ ತಹಶೀಲ್ದಾರರು ಹಾಗೂ ಉಪ ವಿಭಾಗಾಧಿಕಾರಿಗಳಿಗೆ ಸೂಚನೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆಯಾದ ಹಾಗೂ ರೈತರಿಗೆ ಅನುಕೂಲಕರವಾದ ಈ ಪೌತಿ-ಆಂದೋಲನವನ್ನು ಇನ್ನುಮುಂದೆ ಕಡ್ಡಾಯವಾಗಿ ಉಪವಿಭಾಗಾಧಿಕಾರಿಗಳು, ತಹಶೀಲ್ದಾರರು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಪ್ರತಿ ಗ್ರಾಮಗಳಿಗೂ ಭೇಟಿ ನೀಡಿ ಅರ್ಜಿಗಳನ್ನು ಪಡೆದು ರೈತರ ಮನವೊಲಿಸಿ ಪೌತಿ ಖಾತೆಯನ್ನು ನಿಯಮಾನುಸಾರ ಮಾಡಿಕೊಡುವಂತೆ ತಿಳಿಸಿದರು.

ಈ ತಿಂಗಳು ಪ್ರತಿ ದಿನವೂ ಸಹ ಗ್ರಾಮಮಟ್ಟದಲ್ಲಿ ನಿಯಮಿತವಾಗಿ ಅದಾಲತ್ ಗಳನ್ನು ನಡೆಸಿ ಕಡ್ಡಾಯವಾಗಿ ಪ್ರತಿ ಗ್ರಾಮ ಆಡಳಿತಾಧಿಕಾರಿಗಳು ಕನಿಷ್ಠ ನೂರು ಈ-ಪೌತಿ ಮಾಡಿ ಕೊಡುವಂತೆ ಹಾಗು ರೈತರಿಗೆ ಅನುಕೂಲ ಮಾಡಿಕೊಡುವಂತೆ ತಿಳಿಸಿದರು.

ಮರಣ ಹೊಂದಿರುವ ರೈತರ ಹೆಸರಿನಲ್ಲಿಯೇ ಇರುವ ಪಹಣಿಗಳಲ್ಲಿ ಪೌತಿಖಾತೆಯನ್ನು ನಿರ್ವಹಿಸಿ ಅವರ ಕುಟುಂಬದವರ ಹೆಸರಿನಲ್ಲಿ ಜಂಟಿ ಖಾತೆ ಇಡುವ ಮೂಲಕ ಜೀವಂತವಿರುವ ಉತ್ತರಾಧಿಕಾರಿಗಳ ಹೆಸರನ್ನು ಪಹಣಿಗಳಲ್ಲಿ ನಮೂದಿಸಿ ಕಾಲೋಚಿತಗೊಳಿಸುವ ಸದರಿ ಯೋಜನೆಯು ರೈತರಿಗೆ ಅನುಕೂಲಕರವಾದ ಯೋಜನೆಯಾಗಿರುತ್ತದೆ .

ಈ ಹಿಂದೆ ಆಧಾರ್ ಸೀಡಿಂಗ್ ಮಾಡುವ ವೇಳೆ ಗ್ರಾಮಆಡಳಿತ ಅಧಿಕಾರಿಗಳು ಗುರುತಿಸಿರುವ ಮರಣ ಹೊಂದಿರುವ ಭೂಮಾಲೀಕರ ಪಹಣಿಗಳನ್ನು ಕಾಲೋಚಿತಗೊಳಿಸುವ ಬಗ್ಗೆ ಸದರಿ ಅದಾಲತ್ ಗಳು ಸಹಕಾರಿಯಾಗುತ್ತವೆ ಆದ್ದರಿಂದ ಕಡ್ದಾಯವಾಗಿ ಪ್ರತಿದಿನ ರೈತರ ಬಳಿಗೆ ಹೋಗಿ, ಗ್ರಾಮ ಮಟ್ಟದಲ್ಲಿ ಅದಾಲತ್ ನಡೆಸುವಂತೆ ನಿರ್ದೇಶನ ನೀಡಿದರು.

ಸದರಿ ಸಭೆಯಲ್ಲಿ ಜಿಲ್ಲೆಯ ಉಪವಿಭಾಗಾಧಿಕಾರಿಗಳು, ತಹಶೀಲ್ದಾರರುಗಳು , ಡಿಡಿಎಲ್ ಆರ್, ಹಾಗೂ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

Continue Reading

Mysore

ಬಸವಣ್ಣನವರ ವಚನ ಸಾಹಿತ್ಯವನ್ನು ಯುವ ಜನತೆಗೆ ತಿಳಿಸಬೇಕಿದೆ: ಶಾಸಕ ಜಿಟಿಡಿ

Published

on

ಮೈಸೂರು: ಸಾಮಾಜಿಕ ಅನಿಷ್ಠ,ಮೌಢ್ಯತೆ ದೂರ ಮಾಡಿ ಸಾಮಾಜಿಕ ನ್ಯಾಯ, ಸಮಾನತೆಯ ಬೆಳಕು ಹರಿಸಿದ ಬಸವಣ್ಣನವರ ವಚನ ಸಾಹಿತ್ಯವನ್ನು ಯುವ ಜನತೆಗೆ ತಿಳಿಸಬೇಕು. ಜಾತೀಯತೆ ನಿರ್ಮೂಲನೆ ಕುರಿತು ಗಂಟೆಗಟ್ಟಲೆ ಭಾಷಣ ಮಾಡುವವರಿಂದಲೇ ಜಾತೀಯತೆ ಹೆಚ್ಚಾಗಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ವಿಜಯನಗರ ಮೂರನೇ ಹಂತದ ವಿ.ಕೆ.ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಆಯೋಜಿಸಿದ್ದ ವಿಜಯನಗರ 3 ಮತ್ತು 4ನೇ ಹಂತ, ಹಿನಕಲ್‌, ವಿಜಯಶ್ರೀಪುರದ ವೀರಶೈವ ಲಿಂಗಾಯತ ಬಸವ ಬಳಗದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಬಸವಣ್ಣ, ಬುದ್ಧ, ವಿವೇಕಾನಂದ, ಡಾ.ಬಿ.ಆರ್. ಅಂಬೇಡ್ಕರ್ ಅವರು ಸಾಮಾಜಿಕ ನ್ಯಾಯ, ಸಮಾನತೆಯನ್ನು ನೀಡಿದ್ದಾರೆ. ಬಸವಣ್ಣ ಅವರು ದಯವೇ ಧರ್ಮದ ಮೂಲವಯ್ಯ ಎಂದಿದ್ದರು. ಬಡವರ ಬಗ್ಗೆ, ಅಬಲರ ಬಗ್ಗೆ ಪ್ರೀತಿ,ಕರುಣೆ,ಮಾನವೀಯ ಮೌಲ್ಯದಿಂದ ನೋಡುವುದನ್ನು ಹೇಳಿಕೊಟ್ಟರು. ಆದರೆ,ಇಂದಿಗೂ ಸಮಾಜದಲ್ಲಿ ಜಾತೀಯತೆ ನಿರ್ಮೂಲನೆಯಾಗಿಲ್ಲ ಎಂದು ಬೇಸರಿಸಿದರು.

12ನೇ ಶತಮಾನದಲ್ಲಿ ಬಸವಣ್ಣ ನಡೆಸಿದ ಕ್ರಾಂತಿ ಇಂದಿಗೂ ಮರೆಯಲಾಗದ ಕ್ಷಣವಾಗಿದೆ. ಉತ್ತರ ಕಲ್ಯಾಣ ಪ್ರವಾಸಕ್ಕೆ ಹೋದಾಗಲೆಲ್ಲಾ ಬಸವ ಕಲ್ಯಾಣ, ಕೂಡಲ ಸಂಗಮಕ್ಕೆ ಹೋಗಿಯೇ ಬರುತ್ತೇನೆ. ಬಸವಣ್ಣ, ಅಲ್ಲಮಪ್ರಭು ಸೇರಿದಂತೆ ಅನೇಕ ಶರಣರ ವಚನಸಾಹಿತ್ಯವನ್ನು ಪೂರ್ಣವಾಗಿ ಅಧ್ಯಯನ ಮಾಡಲು ಸಾಧ್ಯವಾಗಿಲ್ಲ. ವಚನ ಸಾಹಿತ್ಯವನ್ನು ನಿರಂತರವಾಗಿ ಅಧ್ಯಯನ ಮಾಡುತ್ತಾ ಹೋದರೆ ದಾರ್ಶನಿಕರುಗಳ ಕೊಡುಗೆ ಗೊತ್ತಾಗುತ್ತದೆ. ಬಸವಣ್ಣನವರ ಉತ್ಸವವನ್ನು ರಾಜ್ಯಾದ್ಯಂತ ಮಾಡಲಾಗುತ್ತಿದೆ. ಬಸವ ಕಲ್ಯಾಣದಿಂದ ಆರಂಭವಾಗಿ ಕರ್ನಾಟಕದ ಮೂಲೆ ಮೂಲೆಗಳಲ್ಲೂ ಬಸವಣ್ಣನವರ ಜಯಂತಿ ಆಚರಿಸಿ ಸುಮ್ಮನಾಗುವ ಜತೆಗೆ, ಇಂದಿನ ಯುವಜನತೆಗೆ ವಚನಸಾಹಿತ್ಯದಲ್ಲಿರುವ ಸಾರವನ್ನು ತಿಳಿಸಿಕೊಡುವ ಕೆಲಸ ಆಗಬೇಕಿದೆ ಎಂದು ಸಲಹೆ ನೀಡಿದರು.

ಜಾತೀಯತೆಯನ್ನು ತೊಲಗಿಸಿ ಸಮಾನತೆಯ ಸಮಾಜ ನಿರ್ಮಾಣ ಮಾಡಬೇಕೆಂದು ಹೇಳುತ್ತಾರೆ. ಆದರೆ, ಜಾತಿಗೆ ಮತ್ತೊಂದು ಜಾತಿಯನ್ನು ಎತ್ತಿಕಟ್ಟುವ ಕೆಲಸ ಮಾಡಲಾಗುತ್ತದೆ. ಅದರಲ್ಲೂ ರಾಜಕಾರಣಿಗಳು ಹೊರತಾಗಿಲ್ಲ. ನಮ್ಮಜಾತಿ ಅಂದರೆ ಜನರ ಕೆಲಸ ಮಾಡಬೇಕಿಲ್ಲ. ಜಾತಿ ಅಷ್ಟೇ ಸಾಕು ಎನ್ನುವುದಾಗಿದೆ. ಅದಕ್ಕಾಗಿಯೇ ಜನರ ಸೇವೆ ಮಾಡುವುದಕ್ಕಿಂತಲೂ ಜಾತೀಯತೆ ಗಟ್ಟಿಯಾಗಿದೆ ಎಂದರು.

ಇಂದು ಬಸವಣ್ಣನವರನ್ನು ಮೀರಿಸಿ ಮಾತನಾಡುತ್ತಾರೆ. ಜಾತಿ ಬಿಟ್ಟು ರಾಜಕಾರಣ ಮಾಡಲ್ಲ ಎಂದು ನುಡಿದರು. ಬಸವ ಬಳಗದ ಮೂಲಕ ಅರಿವು,ಸಂಸ್ಕೃತಿ,ಜ್ಞಾನದ ಪ್ರಸಾರ ಮಾಡುವ ಕೆಲಸ ಮಾಡಬೇಕು. ಯುವಜನತೆಗೆ ಚಂಚಲ ಮನಸ್ಸು ಹೆಚ್ಚಾಗುತ್ತಿರುವುದರಿಂದ ವಚನ ಸಾಹಿತ್ಯಗಳ ಮೂಲಕ ಮನಸ್ಸನ್ನು ಬದಲಿಸಬೇಕು. ಮನೆಯ ಕಡೆ ಚಂಚಲ, ಇಲ್ಲಿ ಕುಳತಿದ್ದರೂ ಚಂಚಲ ಎನ್ನುವಂತಾಗಿದೆ. ಜನರಿಗೆ ಬಸವಣ್ಣನವರ ವಚನ ಸಾಹಿತ್ಯವನ್ನು ತಿಳಿಸಬೇಕು.ಮಕ್ಕಳಿಗೆ ಕೊಡುವ ಸಂಸ್ಕಾರ ಬೆಳವಣಿಗೆಗೆ ಪೂರಕವಾಗಲಿದೆ ಎಂದು ಹೇಳಿದರು.

ಆರು ತಿಂಗಳಲ್ಲಿ ನೀರು: ಮುಂದಿನ ಆರುತಿಂಗಳಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಹಳ್ಳಿಗಳಿಗೆ ದಿನದ 24ಗಂಟೆಗಳ ಕಾಲ ನೀರು ಹರಿಯಲಿದೆ. ವಿಜಯನಗರ ಮೂರನೇ ಹಂತವನ್ನು ನಗರಪಾಲಿಕೆಗೆ ಸೇರಿಸಲು ಪ್ರಯತ್ನ ಮಾಡಿದೆ. ವಿಜಯನಗರ ನಾಲ್ಕನೇ ಹಂತ, ಹಿನಕಲ್‌ನಲ್ಲಿ ಅನೇಕ ಕೆಲಸಗಳನ್ನು ಮಾಡಿಸಿದ್ದೇನೆ. ಯುಜಿಡಿ ವ್ಯವಸ್ಥೆ,ಚರಂಡಿ ಮಾಡಿಸುವ ಜತೆಗೆ ಸುಂದರವಾದ ರಸ್ತೆಗಳನ್ನು ಮಾಡಿಸಿದ್ದೇನೆ ಎಂದರು.

ಕಳೆದ ಎರಡು ವರ್ಷಗಳ ಹಿಂದೆ ವಿಜಯನಗರ ಮೂರು,ನಾಲ್ಕನೇ ಹಂತವನ್ನು ನಗರಪಾಲಿಕೆಗೆ ಸೇರಿಸಲು ಯತ್ನಿಸಿದಾಗ ಬಿಜೆಪಿ,ದಳ,ಕಾಂಗ್ರೆಸ್ ಸೇರಿದಂತೆ ಎಲ್ಲರೂ ವಿರೋಧ ಮಾಡಿದರು. ನಂತರ, ಪ್ರತಾಪ್‌ಸಿಂಹ, ಎಸ್.ಟಿ.ಸೋಮಶೇಖರ್ ಎಲ್ಲರೊಂದಿಗೆ ಹದಿನೈದು ದಿನಗಳ ಕಾಲ ನಿರಂತರವಾದ ಒತ್ತಡದಿಂದಾಗಿ ನಗರಸಭೆಯನ್ನಾಗಿ ಮಾಡಲಾಯಿತು. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರಿ ಮನವೊಲಿಸಿದ ಮೇಲೆ ಹೂಟಗಳ್ಳಿ ನಗರಸಭೆಯನ್ನು ಗ್ರೇಡ್-1 ಮೈಸೂರು ಪಾಲಿಕೆಗೆ ಸೇರಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ನನ್ನ ಹೋರಾಟದ ಶ್ರಮದ ಫಲವಾಗಿ ಗ್ರೇಡ್-1 ಮೈಸೂರು ರಚನೆಯಾಗಿದೆ ಎಂದು ನುಡಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ 26 ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ,ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದೆ. ಮುಂದಿನ ಆರು ತಿಂಗಳಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಪ್ರತಿ ಗ್ರಾಮಗಳು,ಬಡಾವಣೆಗಳಿಗೆ ದಿನದ ೨೪ಗಂಟೆಗಳ ಕಾಲ ಕುಡಿಯುವ ನೀರು ಒದಗಿಸಲಾಗುವುದು. ನಾನು ಚುನಾವಣೆಯಲ್ಲಿ ಎರಡು ಬಾರಿ ಪ್ರತಾಪ್ ಸಿಂಹ, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಗೆಲುವಿಗೆ ಹದಿನೈದು ದಿನಗಳ ಕಾಲ ಕೆಲಸ ಮಾಡಿರುವೆ. ಬಿಜೆಪಿಗೆ ಮಹಾಪೌರ-ಉಪ ಮಹಾಪೌರ ಸ್ಥಾನ ಸಿಗಲು ನಾನೇ ಸಹಾಯ ಮಾಡಿದ್ದೆ.ಆದರೆ,ನನ್ನ ಚುನಾವಣೆಯಲ್ಲಿ ಪಕ್ಷವೆಂದು ದೂರ ಸರಿದು ಸಹಾಯ ಮಾಡಲ್ಲ ಎಂದು ಬೇಸರಿಸಿದರು.

ಬಳಗವನ್ನು ಸುತ್ತೂರುಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ವಿಜಯನಗರ ಮೂರನೇ ಹಂತದ ವೀರಶೈವ ಲಿಂಗಾಯತ ಬಸವ ಬಳಗ ಅಧ್ಯಕ್ಷ ಡಿ.ಎಂ.ಶಿವಪ್ರಸಾದ್ ವಹಿಸಿದ್ದರು. ಜೆಎಸ್‌ಎಸ್ ಮಹಾವಿದ್ಯಾಪೀಠದಪ್ರಕಟಣಾ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ ವಿಶೇಷ ಉಪನ್ಯಾಸ ನೀಡಿದರು. ಶ್ರೀಬಸವೇಶ್ವರ ಪಟ್ಟದ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ, ಮೈಮುಲ್ ಮಾಜಿ ನಿರ್ದೇಶಕ ಎಸ್.ಸಿ.ಅಶೋಕ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎಚ್.ವಿ.ಬಸವರಾಜು, ಮೈಸೂರು ನಗರ ಅಧ್ಯಕ್ಷ ಎಂ.ಎಚ್.ಚಂದ್ರಶೇಖರ್, ವಿಶ್ರಾಂತ ಪ್ರಾಧ್ಯಾಪಕ ಡಾ.ಕೆ.ಸಿ.ಬಸವರಾಜು, ನಿರ್ದೇಶಕಿ ಡಾ.ಶೈಲಾ ನಾಗರಾಜ್, ಬಸವಜಯಂತಿ ಉತ್ಸವದ ಅಧ್ಯಕ್ಷ ಬಿ.ಕೆ.ನಾಗರಾಜು, ಕೆ.ಎಸ್.ಮಹಾಲಕ್ಷ್ಮೀ, ಕೆ.ಎಸ್.ಮಂಜುನಾಥ, ಎನ್.ಮಂಜುನಾಥ್, ಎಚ್.ಎಸ್.ಪ್ರಕಾಶ್, ಎಸ್.ಶಿವಕುಮಾರ್, ಗಂಗಾಧರ್ ವಿ.ಹಟ್ಟಿಹೊಳಿ, ಬಿ.ಕಾರ್ತಿಕ್, ಮಲ್ಲಿಕಾರ್ಜುನಸ್ವಾಮಿ, ಜಿ.ರತ್ನ, ಡಾ.ಎಚ್.ಎಸ್.ಸನತ್ ಕುಮಾರ್, ಎಸ್.ವೀರಣ್ಣ ಮತ್ತಿತರರು ಹಾಜರಿದ್ದರು.

Continue Reading

Mysore

ಯೂನಿಟಿ ಮಾಲ್‌ಗೆ ಪ್ರಮೋದಾದೇವಿ ಒಡೆಯರ್ ತಡೆಯಾಜ್ಞೆ

Published

on

ಮೈಸೂರು: ಕೇಂದ್ರ ಸರ್ಕಾರ ಮೈಸೂರಿನಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ‘ಯೂನಿಟಿ ಮಾಲ್’ ಕಾಮಗಾರಿಗೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ತಡೆಯಾಜ್ಞೆ ತಂದಿದ್ದಾರೆ.  ಆದರೆ ಅವರ ಪುತ್ರ, ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸದರಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ್ದರು.

ಮೈಸೂರಿನ ಅರಮನೆ ಎದುರಿನ ದಸರಾ ವಸ್ತು ಪ್ರದರ್ಶನ ಆವರಣ (ಮೈಸೂರು ಸರ್ವೇ ನಂ.1)ದ ಮಹಾತ್ಮ ಗಾಂಧಿ ರಸ್ತೆಗೆ ಹೊಂದಿಕೊಂಡ 6.5 ಎಕರೆ ಜಾಗದಲ್ಲಿ ಯೂನಿಟಿ ಮಾಲ್ ನಿರ್ಮಿಸಲು ಇತ್ತೀಚೆಗೆ ಚಾಲನೆ ನೀಡಲಾಗಿತ್ತು. ಇದರ ವಿರುದ್ಧ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಹೈಕೋರ್ಟ್ ಮೆಟ್ಟಿಲು ಏರಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದು, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದೆ.

ಏನಿದು ಯೂನಿಟಿ ಮಾಲ್?: ಕೇಂದ್ರ ಸರ್ಕಾರ ದೇಶಾದ್ಯಂತ ಯೂನಿಟಿ ಮಾಲ್ ಹೆಸರಿನಲ್ಲಿ ದೇಶಿ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಚಿಂತನೆ ನಡೆಸಿದೆ. ರಾಜ್ಯದ ಮೊದಲ ಹಾಗೂ ಏಕೈಕ ಯೂನಿಟಿ ಮಾಲ್ ಮೈಸೂರಿಗೆ ಮಂಜೂರಾಗಿತ್ತು.

ದೇಶಿಯ ಉತ್ಪನ್ನಗಳ ಮಾರಾಟಕ್ಕೆ ಮಾರುಕಟ್ಟೆ ಹಾಗೂ ಕರಕುಶಲ ಕರ್ಮಿಗಳಿಗೆ ಉದ್ಯೋಗ ನೀಡುವ ಉದ್ದೇಶ ಹೊಂದಿರುವ ಕೇಂದ್ರ ಸರ್ಕಾರದ ಯೋಜನೆಗೆ ರಾಜ್ಯ ಸರ್ಕಾರ ಜಾಗ ಗುರುತಿಸಿತ್ತು. ವಸ್ತು ಪ್ರದರ್ಶನ ಪ್ರಾಧಿಕಾರದ ಜಾಗದಲ್ಲಿ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಭೂಮಿ ಪೂಜೆ ನೆರವೇರಿಸಿದ್ದರು.

ಪಿಪಿಪಿ ಮಾದರಿಯಲ್ಲಿ ಒಟ್ಟು 193 ಕೋಟಿ ರೂ. ವೆಚ್ಚದಲ್ಲಿ ಯೂನಿಟಿ ಮಾಲ್ ತಲೆ ಎತ್ತಲಿದೆ. 2027ರ ವೇಳೆಗೆ ಯೋಜನೆ ಪೂರ್ಣಗೊಳ್ಳಲಿದೆ. ಮೈಸೂರು ರೇಷ್ಮೆ, ಜಿಐ ಟ್ಯಾಗ್ ಹೊಂದಿರುವ ಉತ್ಪನ್ನಗಳು ಹಾಗೂ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಗುರುತಿಸಿರುವ ವಸ್ತುಗಳು ಸೇರಿದಂತೆ ಒಟ್ಟು 36 ವಾಣಿಜ್ಯ ಮಳಿಗೆಗಳನ್ನು ಯೂನಿಟಿ ಮಾಲ್ ಒಳಗೊಂಡಿರಲಿದೆ ಎಂದು ಮಾಹಿತಿ ನೀಡಿದ್ದರು.


ಇದೀಗ ಸದರಿ ಯೋಜನೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಕಾಮಗಾರಿಗೆ ಹಿನ್ನೆಡೆ ಉಂಟಾಗಿದೆ. ತಡೆಯಾಜ್ಞೆ ತೆರವುಗೊಳಿಸಲು ಜಿಲ್ಲಾಡಳಿತ ಕಾನೂನು ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Continue Reading

Trending

error: Content is protected !!