State
ನಾವು ದ್ವೇಷ ರಾಜಕಾರಣ ಮಾಡುತ್ತಿಲ್ಲ, ಕಾನೂನು ಸುವ್ಯವಸ್ಥೆ ಕಾಪಾಡುತ್ತಿದ್ದೇವೆ: ಡಿಸಿಎಂ ಡಿ.ಕೆ. ಶಿವಕುಮಾರ್
“ನಾವು ದ್ವೇಷ ರಾಜಕಾರಣ ಮಾಡುತ್ತಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸ ಮಾಡುತ್ತಿದ್ದೇವೆ. ನಮ್ಮದು ಶಾಂತಿಪ್ರಿಯ ರಾಜ್ಯ. ಇಲ್ಲಿ ದುಷ್ಕೃತ್ಯಕ್ಕೆ ಅವಕಾಶವಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಬುಧವಾರ ಪ್ರತಿಕ್ರಿಯೆ ನೀಡಿದರು.
ಹುಬ್ಬಳ್ಳಿಯಲ್ಲಿ ಕರಸೇವಕರ ಬಂಧನ ವಿಚಾರವಾಗಿ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದ್ದು ಹೀಗೆ;

“ಬಿಜೆಪಿ ಈ ವಿಚಾರದಲ್ಲಿ ರಾಜಕೀಯ ಸ್ಟಂಟ್ ಮಾಡುತ್ತಿದೆ. ಬಾಕಿ ಪ್ರಕರಣಗಳ ವಿಲೇವಾರಿಗೆ ಸರ್ಕಾರ ಮುಂದಾಗಿರುವುದಾಗಿ ಗೃಹ ಸಚಿವರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಯಾರು ರಾಜ್ಯಕ್ಕೆ ಅಗೌರವ ನೀಡಿದ್ದಾರೆ, ಯಾರು ಕಾನೂನು ಉಲ್ಲಂಘಿಸಿದ್ದಾರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.
ಬಿಜೆಪಿ ಅವರಿಗೆ 7 ತಿಂಗಳ ಕಾಲ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲು ಸಾಧ್ಯವಾಗಿರಲಿಲ್ಲ. ಈಗ ಚುನಾವಣೆ ಸಮೀಪಿಸುತ್ತಿದೆ. ಹೀಗಾಗಿ ತಾವು ರಾಜಕೀಯವಾಗಿ ಬದುಕಿದ್ದೇವೆ ಎಂದು ತೋರಿಸಿಕೊಳ್ಳಲು ಹೀಗೆ ಮಾತನಾಡುತ್ತಿದ್ದಾರೆ. ಅವರು ಏನಾದರೂ ಮಾಡಿಕೊಳ್ಳಲಿ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಹಾಗೂ ಜನ ಇದಕ್ಕೆ ಉತ್ತರ ನೀಡುತ್ತೇವೆ. ನಾವು ಅವರಂತೆ ಅಧಿಕಾರ ದುರ್ಬಳಕೆ ಮಾಡಿಕೊಂಡು, ಅನ್ಯ ಪಕ್ಷದ ಕಾರ್ಯಕರ್ತರ ಮೇಲೆ ಕೇಸ್ ಹಾಕುತ್ತಿಲ್ಲ. ಬಿಜೆಪಿ ಸರ್ಕಾರ ಇದ್ದಾಗ ಹುಬ್ಬಳ್ಳಿ, ಬೆಂಗಳೂರಿನಲ್ಲಿ ಎಷ್ಟು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕೇಸ್ ದಾಖಲಿಸಿದೆ ಎಂಬುದನ್ನು ನೋಡಿ. ನಾವು ಇದುವರೆಗೂ ಆ ರೀತಿ ಮಾಡಿಲ್ಲ. ಮುಂದೆಯೂ ಮಾಡಲ್ಲ.”

ಪೊಲೀಸ್ ಠಾಣೆ ಮುತ್ತಿಗೆ ಹಾಕಲು ವಿರೋಧ ಪಕ್ಷದ ನಾಯಕರು ಹುಬ್ಬಳ್ಳಿಗೆ ತೆರಳಿರುವ ಬಗ್ಗೆ ಕೇಳಿದಾಗ, “ಅವರು ಹೋಗಿ ಕಟ್ಟಿ ಹಾಕಿಕೊಳ್ಳಲಿ. ಅವರ ಸರ್ಕಾರದಲ್ಲಿ ಏನೆಲ್ಲಾ ಮಾಡಿದ್ದರು ಎಂದು ನೋಡಿಕೊಳ್ಳಲಿ. ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಮವಸ್ತ್ರ ಬದಲು ಕೇಸರಿ ಬಟ್ಟೆ ಹಾಕಿಸಿದರು. ಅಂತಹ ಕೆಲಸ ನಾವು ಮಾಡಿಲ್ಲ” ಎಂದು ತಿರುಗೇಟು ನೀಡಿದರು.
ನಿಮ್ಮ ವಿರುದ್ಧದ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ನೀಡಿದ್ದು, ತನಿಖೆ ಆರಂಭವಾಗಿರುವ ಬಗ್ಗೆ ಕೇಳಿದಾಗ, “ನನಗೆ ಯಾವುದೇ ರೀತಿಯ ನೊಟೀಸ್ ಬಂದಿಲ್ಲ. ಬಂದ ನಂತರ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ” ಎಂದು ತಿಳಿಸಿದರು.
Special
14.21 ಲಕ್ಷ ರೈತರಿಗೆ ಬೆಳೆ ಹಾನಿ ಪರಿಹಾರ ವಿತರಣೆ: ರಾಜ್ಯ ಸರ್ಕಾರದ ಮಹತ್ವದ ಘೋಷಣೆ
ರಾಜ್ಯದಲ್ಲಿ ಹಲವಾರು ಜಿಲ್ಲೆಗಳಲ್ಲಿ ಸಂಭವಿಸಿದ ಅತಿಯಾದ ಮಳೆ ಬಿರುಗಾಳಿ ಬರ ಪರಿಸ್ಥಿತಿಯಿಂದಾಗಿ ರೈತರು ಎದುರಿಸಿದ ಆರ್ಥಿಕ ನಷ್ಟಕ್ಕೆ ಪರಿಹಾರ ನೀಡಲು ಸರ್ಕಾರ ದೊಡ್ಡ ಮಟ್ಟದ ಕ್ರಮ ಕೈಗೊಂಡಿದೆ. ಕೃಷಿ ಮತ್ತು ಆದಾಯ ನಷ್ಟಕ್ಕೆ ಒಳಗಾದ 14.21 ಲಕ್ಷ ರೈತರಿಗೆ ಪರಿಹಾರ ಮೊತ್ತ ಬಿಡುಗಡೆ ಮಾಡಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಪರಿಹಾರಕ್ಕೆ ಮುಖ್ಯ ಕಾರಣ:
* ಬೆಳೆ ನಾಶ
* ಮಣ್ಣು ಕೊಚ್ಚಿ ಹೋಗುವುದು
* ನೀರಿನ ಕೊರತೆ
* ಅತಿಯಾದ ಮಳೆಯ ಪರಿಣಾಮದ ಹಾವಳಿ
ಇವುಗಳಿಂದ ರೈತರಿಗೆ ದೊಡ್ಡ ಮಟ್ಟದ ಹಾನಿ ಸಂಭವಿಸಿತ್ತು.

ಪರಿಹಾರ ಪಡೆಯಲು ಅರ್ಹರು:
•ಸಂಬಂಧಿತ ತಾಲೂಕಿನಲ್ಲಿ ನೈಜವಾಗಿ ಬೆಳೆ ಹಾನಿ ದೃಢಪಟ್ಟ ರೈತರು
•FRUITS / e-Kshana / Parihara ಪೋರ್ಟ್ಲಲ್ಲಿ ನೋಂದಣಿ ಹೊಂದಿರುವವರು
•ಭೂಮಿ ಹೊಂದಿರುವ ರೈತರು
ಸಚಿವರ ಹೇಳಿಕೆ:
ಕಂದಾಯ ಸಚಿವರು ತಿಳಿಸಿದಂತೆ “ರೈತರು ಸಂಕಷ್ಟದಲ್ಲಿರುವಾಗ ಸರ್ಕಾರ ಕೈಕಟ್ಟಿ ಕೂತಿರುವುದಿಲ್ಲ. ಶೀಘ್ರವಾದ ಪರಿಹಾರ ವಿತರಣೆಯ ಮೂಲಕ ಕೃಷಿಕ ಕುಟುಂಬಗಳಿಗೆ ನೆರವಾಗಿ ಅವರ ಜೀವನೋಪಾಯವನ್ನು ಬಲಪಡಿಸುವುದು ನಮ್ಮ ಧ್ಯೇಯ.”
ಯಾವ ದಾಖಲೆಗಳನ್ನು ಪರಿಶೀಲಿಸಲಾಗುವುದು?
•RTC / ಭೂ ಹಕ್ಕಿನ ದಾಖಲೆ
•ಬೆಳೆ ನಾಶದ ಪಂಚನಾಮಾ
•FRUITS ID
•ಬ್ಯಾಂಕ್ ಖಾತೆ ಮಾಹಿತಿಗಳು

ಪರಿಹಾರ ಪಡೆಯಲು ರೈತರು ಏನು ಮಾಡಬೇಕು?
•ರೈತರು ಯಾವುದೇ ಹೊಸ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ.
* ತಮ್ಮ FRUITS ಪೋರ್ಟಲ್ ವಿವರಗಳನ್ನು ಪರಿಶೀಲಿಸಬೇಕು
* ಬ್ಯಾಂಕ್ ಖಾತೆ ಆಧಾರ್–DBT ಲಿಂಕ್ ಇದ್ದರೆ ಹಣ ನೇರವಾಗಿ ಜಮೆಯಾಗುತ್ತದೆ
* ಮೊತ್ತ ಜಮೆಯಾದ ನಂತರ SMS ಮೂಲಕ ಮಾಹಿತಿ ಬರುತ್ತದೆ
ಅಧಿಕೃತ ವೆಬ್ಸೈಟ್:
•FRUITS ಪೋರ್ಟಲ್:
https://fruits.karnataka.gov.in
•ಕೃಷಿ ಸಂಬಂಧಿತ ಮಾಹಿತಿ: https://raitamitra.karnataka.gov.in
ರಾಜ್ಯ ಸರ್ಕಾರದ ಈ ಹೆಜ್ಜೆ ಬೆಳೆ ನಷ್ಟದಿಂದ ಬೇಸತ್ತುಬಿಟ್ಟ ರೈತರಿಗೆ ಧೈರ್ಯ ತುಂಬುವಂತದ್ದಾಗಿದೆ. ರೈತ ಕುಟುಂಬಗಳು ಸಂಕಷ್ಟದಿಂದ ಹೊರಬರಲು ಇದು ಪ್ರಮುಖ ನೆರವಿನ ಕೈ ಆಗಿದೆ ಎಂದು ಹೇಳಬಹುದು.
State
ದ್ವೇಷ ಭಾಷಣ, ದ್ವೇಷ ಅಪರಾಧಗಳ ವಿಧೇಯಕ ಮಂಡಿಸಿದ ಡಾ.ಜಿ.ಪರಮೇಶ್ವರ್
ಬೆಳಗಾವಿ: ವಿಧಾನಸಭೆಯಲ್ಲಿ ಇಂದು ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕವನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಬೆಳಗಾವಿಯ ಸುವರ್ಣಸೌಧದಲ್ಲಿ ಇಂದು ವಿಧೇಯಕ ಮಂಡಿಸಿದ ಅವರು, ದ್ವೇಷ ಭಾಷಣ, ದ್ವೇಷ ಅಪರಾಧಗಳಿಗೆ ಕನಿಷ್ಠ 1 ವರ್ಷ, ಗರಿಷ್ಠ 7 ವರ್ಷದವರೆಗೆ ಜೈಲು, 50 ಸಾವಿರ ರೂ. ದಂಡ ಹಾಕುವ ವಿಧೇಯಕ ಇದಾಗಿದ್ದು, ದ್ವೇಷ ಭಾಷಣಗಳಿಗೆ ನೋಂದಾಯಿತ ಅಥವಾ ನೋಂದಾಯಿತವಲ್ಲದ ಸಂಘ ಸಂಸ್ಥೆಗಳೂ ಹೊಣೆಗಾರರಾಗಿರುತ್ತಾರೆ ಎಂದು ವಿಧೇಯಕದಲ್ಲಿ ಕಾನೂನು ತರಲಾಗಿದೆ ಎಂದು ಮಾಹಿತಿ ನೀಡಿದರು.

ಆದರೆ ಬಿಜೆಪಿ ಅದನ್ನು ವಿರೋಧಿಸಿದೆ. ಈಗಾಗಲೇ ಸಾಕಷ್ಟು ವಿವಾದ ಸೃಷ್ಟಿಸಿರುವ ವಿಧೇಯಕ ಬೇಡವೇ ಬೇಡ, ಅಂಗೀಕಾರ ಪ್ರಕ್ರಿಯೆ ವೇಳೆ ಮತಕ್ಕೆ ಹಾಕಬೇಕೆಂದು ಬಿಜೆಪಿ ಶಾಸಕ ಸುನಿಲ್ ಕುಮಾರ್ ಆಗ್ರಹಿಸಿದರು.
ಇನ್ನು ದ್ವೇಷ ಭಾಷಣ ನಿಯಂತ್ರಣ ವಿಧೇಯಕ ಮಂಡನೆ ವೇಳೆ ವಿಧಾನಸಭೆಯಲ್ಲಿ ಮೈಕ್ ಕೈ ಕೊಟ್ಟು ಕಲಾಪ ಮುಂದೂಡಿದ ಘಟನೆಯೂ ನಡೆಯಿತು. ನಂತರ ಮೈಕ್ ಸರಿಪಡಿಸಿ ಕಲಾಪ ಪುನಃ ಪ್ರಾರಂಭಿಸಿ ಪರಮೇಶ್ವರ್ ವಿಧೇಯಕ ಮಂಡಿಸಿದರು.

ವಿಧೇಯಕದಲ್ಲಿ ಏನಿದೆ?
1. ದ್ವೇಷ ಭಾಷಣ ಪ್ರಸರಣೆ, ಪ್ರಕಟಣೆ, ಪ್ರಚಾರ ತಡೆಯಲು ವಿಧೇಯಕ.
2. ನಿರ್ದಿಷ್ಟ ವ್ಯಕ್ತಿ, ಸಮೂಹ, ಸಂಸ್ಥೆಗಳ ವಿರುದ್ಧ ದ್ವೇಷ ಹುಟ್ಟಿಸುವ ಅಪರಾಧಗಳ ತಡೆಗೆ ವಿಧೇಯಕ.
3. ಮೊದಲ ಬಾರಿಗೆ ದ್ವೇಷ ಭಾಷಣ, ದ್ವೇಷ ಅಪರಾಧಗಳಿಗೆ ಕನಿಷ್ಠ 1 ವರ್ಷ, ಗರಿಷ್ಠ 7 ವರ್ಷದವರೆಗೆ ಜೈಲು, 50 ಸಾವಿರ ರೂ. ದಂಡ.
4. ಅಪರಾಧ ಪುನರಾವರ್ತನೆ ಆದರೆ ಕನಿಷ್ಠ 2 ವರ್ಷದಿಂದ ಗರಿಷ್ಠ 10 ವರ್ಷದವರೆಗೆ ಜೈಲು ಶಿಕ್ಷೆ, 1 ಲಕ್ಷ ರೂ. ದಂಡ.
5. ದ್ವೇಷ ಭಾಷಣ ಮಾಡಿ ಕೇಸ್ ಬಿದ್ದರೆ ಅದು ಜಾಮೀನು ರಹಿತ ಪ್ರಕರಣ.
6. ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟ್ ಮೂಲಕ ದ್ವೇಷ ಭಾಷಣಗಳ ವಿಚಾರಣೆ ಮಾಡಬೇಕು.
7. ದ್ವೇಷ ಭಾಷಣಗಳ ಪ್ರಕರಣಗಳನ್ನು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅಥವಾ ಉಪಪೊಲೀಸ್ ವರಿಷ್ಠಾಧಿಕಾರಿ ದರ್ಜೆಗಿಂತ ಕಡಿಮೆ ಇಲ್ಲದ ಯಾರೇ ಪೊಲೀಸ್ ಅಧಿಕಾರಿಯು ಮಾಹಿತಿ ಸ್ವೀಕರಿಸಿದರೆ ವಿಚಾರಣೆ ಮಾಡಿ ಕಾಯ್ದೆಯಡಿ ಕ್ರಮ ಕೈಗೊಳ್ಳಬಹುದು.
8. ಈ ಕಾಯ್ದೆಯಡಿ ದ್ವೇಷ ಭಾಷಣಗಳಿಗೆ ನೋಂದಾಯಿತ ಅಥವಾ ನೋಂದಾಯಿತವಲ್ಲದ ಸಂಘ ಸಂಸ್ಥೆಗಳೂ ಹೊಣೆಗಾರರಾಗಿರುತ್ತಾರೆ.
9. ದ್ವೇಷ ಭಾಷಣಗಳ ಕಂಟೆಂಟ್ಗಳನ್ನು ಡೊಮೈನ್ನಿಂದ ಬ್ಲಾಕ್ ಮಾಡುವ ಅಥವಾ ತೆಗೆದು ಹಾಕುವ ಅಧಿಕಾರವೂ ಗೊತ್ತುಪಡಿಸಿದ ಅಧಿಕಾರಿಗಳಿಗೆ ವಿಧೇಯಕ ನೀಡಿದೆ.
Manglore
ಧರ್ಮಸ್ಥಳ ಪ್ರಕರಣ: ಬುರುಡೆ ಗ್ಯಾಂಗ್ ವಿರುದ್ಧ ಸೆಕ್ಷನ್ಗಳ ಸುರಿಮಳೆ
ಬೆಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದವರೇ ಆರೋಪಿಗಳಾಗಿದ್ದಾರೆ ಎಂದು ವಿಶೇಷ ತನಿಖಾ ತಂಡದ (SIT) ವರದಿಯಲ್ಲಿ ಬುರುಡೆ ಗ್ಯಾಂಗ್ ಷಡ್ಯಂತ್ರ್ಯ ಬಯಲಿಗೆ ಬಂದಿದೆ.
ಈ ಪ್ರಕರಣಕ್ಕ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸಿ ನ.20 ರಂದು ಬೆಳ್ತಂಗಡಿಯ ಜೆಎಂಎಫ್ಸಿ ನ್ಯಾಯಾಲಯಕ್ಕೆ ತನಿಖಾ ಪ್ರಾಥಮಿಕ ವರದಿ ಸಲ್ಲಿಸಿತ್ತು. ಈ ತನಿಖಾ ವರದಿಯಲ್ಲಿ 6 ಮಂದಿ ಯಾವ ರೀತಿ ನ್ಯಾಯಾಲಯದ ದಾರಿ ತಪ್ಪಿಸಿದ್ದಾರೆ ಎಂಬುದನ್ನು ಎಳೆ ಎಳೆಯಾಗಿ ಉಲ್ಲೇಖಿಸಲಾಗಿದೆ. ಹೀಗಾಗಿ ಬುರುಡೆ ಗ್ಯಾಂಗ್ ಸದಸ್ಯರ ಮೇಲೆ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ ಗಳ ಸುರಿಮಳೆ ಹೊರಿಸಲಾಗಿದೆ.
ಈ ಕೃತ್ಯದ ಆರೋಪಿಗಳು ಯಾರು ಯಾರು?
1. ಎ1 – ಚಿನ್ನಯ್ಯ
2. ಎ2 – ಮಹೇಶ್ ಶೆಟ್ಟಿ ತಿಮರೋಡಿ
3. ಎ3 – ಗಿರೀಶ್ ಮಟ್ಟಣ್ಣನವರ್
4. ಎ4 – ವಿಠಲ ಗೌಡ
5. ಎ5 – ಜಯಂತ್ ಟಿ
6. ಎ6 – ಸುಜಾತ ಭಟ್

ಯಾವ ಸೆಕ್ಷನ್ ಹಾಕಲಾಗಿದೆ?
1. BNS 211(ಎ) – Criminal Intimidation / ಅಪರಾಧಿಕ ಬೆದರಿಕೆ
ಯಾರಾದರೂ ಮತ್ತೊಬ್ಬ ವ್ಯಕ್ತಿಗೆ ಹಾನಿ ಮಾಡುವುದಾಗಿ, ಸಾವು, ಗಾಯ, ಆಸ್ತಿ ನಾಶ, ಮಾನಹಾನಿ, ಅಥವಾ ಯಾವುದೇ ಅನಿಷ್ಟ ಪರಿಣಾಮ ಉಂಟುಮಾಡುವುದಾಗಿ ಉದ್ದೇಶಪೂರ್ವಕವಾಗಿ ಬೆದರಿಸುವುದು.
2.BNS 230 – Wrongful Restraint / ಅನ್ಯಾಯವಾದ ನಿರ್ಬಂಧ
ಯಾವ ವ್ಯಕ್ತಿಯೂ ತನ್ನ ಇಚ್ಚೆಯಂತೆ ತೆರಳಬೇಕಾದ ದಾರಿಗೆ ಅಡ್ಡಿ ಉಂಟುಮಾಡಿ, ಆ ವ್ಯಕ್ತಿಯನ್ನು ಉದ್ದೇಶಪೂರ್ವಕ ತಡೆಯುವುದು.
3. BNS 231 – Wrongful Confinement / ಅನ್ಯಾಯವಾದ ಬಂಧನ
ವ್ಯಕ್ತಿಯ ಚಲನವಲನವನ್ನು ಸಂಪೂರ್ಣವಾಗಿ ನಿಯಂತ್ರಿಸಿ, ಒಬ್ಬರನ್ನು ನಿಯಂತ್ರಿತ ಸ್ಥಳದಲ್ಲಿ ಬಲವಂತವಾಗಿ ಇರಿಸುವುದು.
4. BNS 229 – Force / ಬಲ ಪ್ರಯೋಗ
ಯಾವ ವ್ಯಕ್ತಿಗೆ ಅವನ ಇಚ್ಛೆಗೆ ವಿರುದ್ಧವಾಗಿ ಯಾವುದಾದರೂ ವಸ್ತು, ಬಲ, ಒತ್ತಡ, ದಬ್ಬಾಳಿಕೆ ನಡೆಸುವುದು.
5. BNS 227 – Assault / ದಾಳಿ
ಯಾರಿಗಾದರೂ ಶಾರೀರಿಕ ಹಾನಿ ಮಾಡುವ ಉದ್ದೇಶದ ಸೂಚನೆ ನೀಡುವುದು.
6. BNS 228 – Criminal Force / ಅಪರಾಧಿಕ ಬಲ ಬಳಕೆ
ಉದ್ದೇಶಪೂರ್ವಕವಾಗಿ,ಅಪಮಾನ / ಹಾನಿ / ಭಯ ಹುಟ್ಟಿಸುವುದು.
7. BNS 240 – Extortion / ದಬ್ಬಾಳಿಕೆ ಮೂಲಕ ಹಣ/ಆಸ್ತಿ ಪಡೆಯುವುದು
ಹಾನಿ ಮಾಡುವುದಾಗಿ, ಭಯ ಹುಟ್ಟಿಸಿ ಹಣ/ಆಸ್ತಿ/ಕಾಗದ/ಮೌಲ್ಯಾವಸ್ತು ನೀಡುವಂತೆ ಬೆದರಿಸುವುದು.
8. BNS 236 – False Declaration / ತಪ್ಪು ಘೋಷಣೆ ಸಲ್ಲಿಸುವುದು
ಕೋರ್ಟ್ ಅಥವಾ ಅಧಿಕಾರಿಗಳ ಮುಂದೆ ತಿಳಿದಿದ್ದೂ ತಪ್ಪು ಮಾಹಿತಿ ನೀಡಿ ನಂಬಲರ್ಹ ಮಾಹಿತಿಯನ್ನು ಘೋಷಣೆ ಮೂಲಕ ಉಲ್ಲೇಖಿಸುವುದು.
9. BNS 233 – Cheating / ಮೋಸ
ಒಬ್ಬರನ್ನು ತಪ್ಪಾಗಿ ನಂಬಿಸಿ, ಮತಿಭ್ರಮೆಯಲ್ಲಿ, ವಂಚನೆ ಮಾಡಿ, ಆಸ್ತಿ/ಹಣ/ಲಾಭ ಮಾಡುವುದು.
10. BNS 248 – Criminal Breach of Trust / ನಂಬಿಕೆ ದ್ರೋಹ
ನಂಬಿಸಿ ದುರುಪಯೋಗಪಡಿಸಿಕೊಳ್ಳುವುದು.
11. BNS 336(4) – Public Nuisance endangering public life ಸಾರ್ವಜನಿಕ ಜೀವನವನ್ನ ಅಪಾಯಕ್ಕೆ ಸಿಲುಕಿಸುವ ಕಿರಿಕಿರಿ
ಸಾರ್ವಜನಿಕ ಸ್ಥಳದಲ್ಲಿ,ಸಾರ್ವಜನಿಕರ ಜೀವ/ಆರೋಗ್ಯ/ಸುರಕ್ಷತೆಗೆ ಹಾನಿ ಉಂಟುಮಾಡುವ ಯಾವುದೇ ಕೃತ್ಯ.
12. BNS 61(2) – Common Intention / ಸಹ ಉದ್ದೇಶ
ಎರಡು ಅಥವಾ ಹೆಚ್ಚು ಜನರು ಒಂದು ಸಾಮೂಹಿಕ ಉದ್ದೇಶದಿಂದ ಒಂದೇ ಅಪರಾಧವನ್ನು ಸೇರಿ ಮಾಡಿದರೆ,ಪ್ರತಿಯೊಬ್ಬರೂ ಪೂರ್ಣ ಅಪರಾಧಕ್ಕೆ ಜವಾಬ್ದಾರರು.
-
State21 hours agoIPL, ಟಿ-20 ವಿಶ್ವಕಪ್ ಕ್ರಿಕೆಟ್ ಸಂಬಂಧ ಸಿಎಂ, ಡಿಸಿಎಂರನ್ನು ಭೇಟಿ ಮಾಡಿದ ವೆಂಕಟೇಶ್ ಪ್ರಸಾದ್
-
Mandya23 hours agoಜಿಲ್ಲಾಧಿಕಾರಿಗಳಿಂದ ಗುತ್ತಲು ಕೆರೆಗೆ ಭೇಟಿ ಮತ್ತು ಪರಿಶೀಲನೆ
-
Mandya21 hours agoಕಾಳೇನಹಳ್ಳಿ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಡಿಸಿ ಭೇಟಿ
-
Chamarajanagar15 hours agoಮ.ಮ.ಬೆಟ್ಟದಲ್ಲಿ ಹುಂಡಿ ಹಣ ಎಣಿಕೆ: 28 ದಿನಗಳ ಅವಧಿಯಲ್ಲಿ 2.53 ಕೋಟಿ ರೂ. ಸಂಗ್ರಹ
-
State15 hours agoದ್ವೇಷ ಭಾಷಣ, ದ್ವೇಷ ಅಪರಾಧಗಳ ವಿಧೇಯಕ ಮಂಡಿಸಿದ ಡಾ.ಜಿ.ಪರಮೇಶ್ವರ್
-
Kodagu14 hours agoಪ್ರಧಾನಿ ಬಗ್ಗೆ ಅವಹೇಳನ – ಮಡಿಕೇರಿಯ ಮೂವರ ಬಂಧನ
-
Hassan17 hours agoಗಾಂಜಾ ಅಮಲಿನಲ್ಲಿ ಯುವಕನೋರ್ವನ ಹ*ತ್ಯೆ: ಆರೋಪಿಯನ್ನು ಬಂಧಿಸಿದ ಪೊಲೀಸರು
-
Hassan18 hours agoಡಿ. 11ರಿಂದ 14 ರವರೆಗೆ ಶ್ರೀ ಮೆಳೆಯಮ್ಮದೇವಿ, ಚಿಕ್ಕಮ್ಮದೇವಿ ಅದ್ದೂರಿ ಜಾತ್ರಾ ಮಹೋತ್ಸವ
