Hassan
ತನಿಖೆ ನಡೆಸಿ ಸಿದ್ದಯ್ಯನಿಗೆ ಸೂಕ್ತ ನ್ಯಾಯ ದೊರಕಿಸಿಕೊಡದಿದ್ರೆ ಹೋರಾಟ ಆರ್.ಪಿ.ಐ. ಸತೀಶ್ ಎಚ್ಚರಿಕೆ

ಹಾಸನ: ರಂಗನ ಕೊಪ್ಪಲು ಗ್ರಾಮದ ನಿವಾಸಿ ಸಿದ್ದಯ್ಯ ರವರಿಗೆ ಬರಬೇಕಾದ ೪ ಲಕ್ಷ ಹಣ ಮತ್ತು ಮಾತು ಕೊಟ್ಟಂತೆ ಜಮೀನು ಕೇಳಿದರೇ ಒಂದಲ್ಲ ಒಂದು ಸಬೂಬು ಹೇಳಿ ದೌರ್ಜನ್ಯ ಎಸಗಿದ್ದು, ಈ ಬಗ್ಗೆ ತನಿಖೆ ನಡೆಸಿ ಸೂಕ್ತ ನ್ಯಾಯ ದೊರಕಿಸಿಕೊಡಬೇಕು. ಇಲ್ಲವಾದರೇ ತೀವ್ರತರವಾದ ಹೋರಾಟ ಮಾಡುವುದಾಗಿ ಆರ್.ಪಿ.ಐ. ರಾಜ್ಯಾಧ್ಯಕ್ಷ ಸತೀಶ್ ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಹಾಸನ ಜಿಲ್ಲೆ ಬೇಲೂರು ತಾಲ್ಲೂಕು, ಮಾದಿಹಳ್ಳಿ ಹೋಬಳಿ ರಂಗನ ಕೊಪ್ಪಲು ಗ್ರಾಮದ ವಾಸಿಯಾದ ಸಿದ್ದಯ್ಯನವರಿಗೆ, ಇದೇ ಬೇಲೂರು ತಾಲ್ಲೂಕು. ಮಾದಿಹಳ್ಳಿ ಹೋಬಳಿ ರಾಮಚಂದ್ರಾಪುರ ಗ್ರಾಮದ ಸ.ನಂ.೧೨೯ ರಲ್ಲಿ ೪ ಎಕರೆ ಜಮೀನು ಇವರ ತಂದೆ ಸಣ್ಣಯ್ಯನವರ ಹೆಸರಿಗೆ ಸರ್ಕಾರದಿಂದ ಸುಮಾರು ವರ್ಷಗಳ ಹಿಂದೆ ಮಂಜೂರಾಗಿದ್ದು, ಸುಮಾರು ೪೦ ವರ್ಷಗಳಿಂದ ಸಿದ್ದಯ್ಯರವರು ಸಾಗುವಳಿ ಮಡುತ್ತಾ ಬಂದಿರುತ್ತಾರೆ. ಈಗ್ಗೆ ಸುಮಾರು ೫ ವರ್ಷಗಳ ಹಿಂದೆ ಹಾಸನದ ಶಿವಗಂಗಾ ಗ್ರಾನೈಟ್ ಮಾಲೀಕರಾದ ಗ್ರಾನೈಟ್ ರಾಜಶೇಖರ್ (ಕಲ್ಲು ರಾಜಣ್ಣ) ಎಂಬುವ ವ್ಯಕ್ತಿ ಸಿದ್ದಯ್ಯರವರು ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದು ನಿನ್ನ ಈ ನಾಲ್ಕು ಎಕರೆ ಜಮೀನನ್ನು ನನಗೆ ಕೊಡು ಇದರ ಬದಲಿಗೆ ಒಳ್ಳೆ ಫಲವತ್ತಾದ ಜಮೀನನ್ನು ನಿನಗೆ ಕೊಡಿಸುತ್ತೇನೆ. ಜೊತೆಗೆ ೧೪ ಲಕ್ಷ ಹಣವನ್ನು ಸಹ ಕೊಡುತ್ತೇನೆ. ಇದರಲ್ಲಿರುವ ಬಂಡೆಕಲ್ಲುಗಳನ್ನು ಸರಕಾರದ ಅನುಮತಿ ಪಡೆದು ಮಾರಾಟ ಮಾಡಿಕೊಳ್ಳುತ್ತೇನೆ ಎಂದು ಮಾತುಕತೆ ನಡೆಸಲಾಗಿತ್ತು. ಇವರ ಹಿಂಬಾಲಕರಾದ ಚಂದ್ರಯ್ಯ ಎಂಬುವವರ ಹೆಸರಿಗೆ ೪ ಎಕರೆ ಪೈಕಿ ೧ ಎಕರೆ ೨೦ ಗುಂಟೆ ಮಾತ್ರ ಕರಾರು ಪತ್ರವನ್ನು ಮಾಡಿಸಿಕೊಂಡಿದ್ದು, ಉಳಿದ ೨ ಎಕರೆ ೨೦ ಗುಂಟೆಗೆ ಯಾವುದೇ ಕರಾರು ಪತ್ರ ಮಾಡಿಸಿಕೊಂಡಿರುವುದಿಲ್ಲ. ನಂತರ ೬ ಲಕ್ಷ ನಗದು ಹಾಗೂ ೪ ಲಕ್ಷ ರೂಗಳನ್ನು ಚೆಕ್ ಮೂಲಕ ಕೊಟ್ಟಿರುತ್ತಾರೆ. ಪುನಃ ಇನ್ನುಳಿದ ನಾಲ್ಕು ಲಕ್ಷ ರೂಗಳಿಗೆ ಚೆಕ್ನ್ನು ನೀಡಿರುತ್ತಾರೆ. ನಂತರ ನಾಲ್ಕು ಲಕ್ಷ ಚೆಕ್ನ್ನು ನಗಧೀಕರಿಸಲು ಬ್ಯಾಂಕಿಗೆ ಹೋಗಿ ಕೇಳಿದಾಗ ಈ ಖಾತೆಯಲ್ಲಿ ಯಾವುದೇ ಹಣ ಇಲ್ಲ. ಬೌನ್ಸ್ ಆಗಿದ್ದು, ಆದ್ದರಿಂದ ತಾವು ನನಗೆ ೪ ಲಕ್ಷ ನಗದು ಹಣ ಹಾಗೂ ನನಗೆ ಮಾತು ಕೊಟ್ಟಂತೆ ನಮ್ಮ ಜಮೀನನ್ನು ನಿಮ್ಮ ಹೆಸರಿಗೆ ಮಾಡಿಸಿಕೊಂಡು ನಮಗೆ ಬದಲಿ ೪.೦೦ ಎಕರೆ ಜಮೀನು ಕೊಡಿಸಿಕೊಡಿ ಎಂದು ಕೇಳಿದರೆ ಒಂದಲ್ಲ ಒಂದು ಸಬೂಬು ಹೇಳುತ್ತಾ ಕಾಲ ದೂಡುತ್ತ ಬಂದಿರುವುದಾಗಿ ಆರೋಪಿಸಿದರು.
ನಾಲ್ಕು ವರ್ಷಗಳ ಹಿಂದೆ ಸಿದ್ದಯ್ಯರವರ ಕುಟುಂಬದವರೆಲ್ಲಾ ಅವರ ಊರಿನಿಂದ ಆಸ್ಪತ್ರೆಗೆಂದು ಆಟೋದಲ್ಲಿ ಹಗರೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಮುಂದುಗಡೆಯಿಂದ ಸರ್ಕಾರಿ ಬಸ್ ಅವರು ಕುಳಿತಿದ್ದ ಆಟೋಕ್ಕೆ ಡಿಕ್ಕಿ ಹೊಡೆದು ಅಪಘಾತವಾಗಿ ಸಿದ್ದಯ್ಯರವರ ಹೆಂಡತಿ, ಸಿದ್ದಯ್ಯರವರ ಮಗಳು ಹಾಗೂ ಇಬ್ಬರು ಮೊಮ್ಮಕ್ಕಳು ಸೇರಿ ನಾಲ್ಕು ಜನ ನಿಧನರಾದರು. ಸಿದ್ದಯ್ಯರವರಿಗೂ ಹಾಗೂ ಅವರ ಮಗನಿಗೆ ಕೈಕಾಲು ಮುರಿದು ಗಂಭೀರ ಸ್ವರೂಪದ ಹಾನಿಯಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಉಷಾರಾಗಿ ಮನೆಗೆ ಬಂದು ನಡೆದಾಡದಂತಾಗಿ ಮನೆಯಲ್ಲಿ ಇದ್ದರು. ಅವರಿಗೆ ಸ್ವಲ್ಪ ಉಷಾರಾದ ನಂತರ ಅವರ ಜಮೀನಿನಲ್ಲಿ ತುಂಬ ಆಳವಾಗಿ ಬಗೆದು ಕಲ್ಲು ಬಂಡೆಗಳನ್ನು ತೆಗೆದು ಗ್ರಾನೈಟ್ ರಾಜಶೇಖರ್ರವರು ಕೋಟ್ಯಾಂತರ ರೂಪಾಯಿಗಳಿಗೆ ಮಾರಾಟ ಮಾಡಿರುತ್ತಾರೆ ಎಂದು ತಿಳಿದು ಸಿದ್ದಯ್ಯರವರು ಇದಕ್ಕೆ ಬೇಸತ್ತು ರಾಜಶೇಖರ್ ಅವರ ಜಮೀನಿನ ಪಕ್ಕ ಇರುವ ಜಮೀನಿಗೆ ಬಂದಾಗ ಅವರಲ್ಲಿ ಹೊಗಿ ಹಿಂದಿನ ಕರಾರಿನಂತೆ ನೀವು ನಮಗೆ ಇನ್ನೂ ಕೂಡ ನಾಲ್ಕು ಲಕ್ಷ ಹಣ ಕೊಟ್ಟಿರುವುದಿಲ್ಲ. ೪.೦೦ ಎಕರೆ ಬದಲಿ ಭೂಮಿಯನ್ನು ನೀಡಿರುವುದಿಲ್ಲ ಅಲ್ಲದೆ ನನ್ನ ಹೆಸರಿನ ಜಮೀನು ಕೂಡ ನಿಮ್ಮ ಹೆಸರಿಗೆ ಕ್ರಯ ವಾಗಿರುವುದಿಲ್ಲ ಸರ್ಕಾರದ ಅನುಮತಿಯನ್ನು ಪಡೆಯದೆ ನನ್ನ ಜಮೀನಿನಲ್ಲಿ ಏಕಾಏಕಿ ಏಕೆ ನಮ್ಮ ಜಮೀನಿನಲ್ಲಿರುವ ಕಲ್ಲನ್ನು ತೆಗೆದು ಮಾರಾಟ ಮಾಡಿದ್ದೀರಿ ಎಂದು ಪದೇ ಪದೇ ಹೋಗಿ ಕೇಳಿದ್ದಕ್ಕೆ ಸಭೂಬು ಹೇಳಿ ಕಳುಹಿಸಲಾಗಿತ್ತು ಎಂದರು.
ಆನವರಿ ೧೮ ರಂದು ಸಿದ್ದಯ್ಯರವರ ಪಕ್ಕದ ಜಮೀನಿನಲ್ಲೇ ಇರುವ ರಾಜಶೇಖರ್ರವರು ಅವರ ಜಮೀನಿನ ಹತ್ತಿರ ಬಂದಿರುವುದು ತಿಳಿದು ಅವರು ಅಲ್ಲಿಗೆ ಹೋಗಿ ಮತ್ತೆ ವಿಷಯವನ್ನು ಪ್ರಸ್ತಾಪಮಾಡಿ ಕೇಳಿದ್ದಕ್ಕೆ ಅಂದಿನ ಕರಾರನ್ನು ತೆಗೆದುಕೊಂಡು ಬಾ ಎಂದು ಹೇಳಿದರು ಅದರಂತೆ ಸಿದ್ದಯ್ಯರವರು ಮನೆಗೆ ಬಂದು ಕರಾರು ಪತ್ರವನ್ನು ತೆಗೆದುಕೊಂಡು ಹೋಗಿ ರಾಜಶೇಖರ್ರವರಿಗೆ ತೋರಿಸಿದಾಗ ಅದನ್ನು ಕಿತ್ತುಕೊಂಡ ರಾಜಶೇಖರ್ರವರು ಸಿದ್ದಯ್ಯರವ ಮೇಲೆ ದೌರ್ಜನ್ಯ ವೆಸಗಿದ್ದು ಈ ಸಂಬಂಧ ಸಿದ್ದಯ್ಯ ನವರು ಹಳೇಬೀಡು ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಯಿತು. ಆದರೆ ಇದುವರೆಗೂ ಕೂಡ ದೂರು ದಾಖಲು ಮಾಡಿರುವುದಿಲ್ಲ.ಅದ್ದರಿಂದ ಕೂಡಲೇ ದೂರರು ದಾಖಲಿಸಿ ಕೊಂಡು ಸಂಬಂಧಪಟ್ಟ ಅಧಿಕಾರಿಗಳು ಇವರ ವಿರುದ್ಧ ತನಿಖೆ ನಡೆಸಿ ರವಿನ್ಯೂ ಇಲಾಖೆ, ಪೊಲೀಸ್ ಇಲಾಖೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರ ಮೇಲೂ ಕೂಡ ತನಿಖೆ ನಡೆಸಿ ಸೂಕ್ತವಾದ ನ್ಯಾಯ ದೊರಕಿಸಿ ಕೊಡಬೇಕಾಗಿ ಮನವಿ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರವಾದ ಹೋರಾಟ ಮಾಡಲಾಗುವುದೆಂದು ತಮ್ಮ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂತ್ರಸ್ತ ಸಿದ್ದಯ್ಯ, ಜಿಲ್ಲಾ ಮಾದಿಗ ದಂಡೋರ ಅಧ್ಯಕ್ಷ ಟಿ.ಆರ್. ವಿಜಯಕುಮಾರ್, ಜೈಭೀಮ್ ಬ್ರಿಗೇಡ್ ಜಿಲ್ಲಾಧ್ಯಕ್ಷ ರಾಜೇಶ್, ಆರ್.ಪಿ.ಐ. ಜಿಲ್ಲಾ ಕಾರ್ಯಾಧ್ಯಕ್ಷ ಹರೀಶ್ ಜೋಡಿಕೃಷ್ಣಾಪುರ, ತಾಲೂಕು ಅಧ್ಯಕ್ಷ ರಂಜಿತ್ ಕುಮಾರ್ ಇತರರು ಉಪಸ್ಥಿತರಿದ್ದರು.
Hassan
ಎದುರು ಮನೆಯ ಚಂದ್ರಕಲಾ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಗಂಗಮ್ಮ ಮನವಿ

ಹಾಸನ: ಆಲೂರು ತಾಲೂಕಿನಲ್ಲಿರುವ ಆಶಾ ಬಡಾವಣೆಯ ಎದುರು ಮನೆಯಾಕೆ ಚಂದ್ರಕಲಾ ಎಂಬುವರಿಂದ ಪ್ರತಿನಿತ್ಯ ಕಿರುಕುಳ ಕೊಡಲಾಗುತ್ತಿದೆ ಎಂದು ನಿವಾಸಿ ಗಂಗಮ್ಮ ಗಂಭೀರವಾಗಿ ಆರೋಪಿಸಿದರು. ಇದೆ ವೇಳೆ ಕಾಂಗ್ರೆಸ್ ಮುಖಂಡ ಸಿದ್ದಪ್ಪ ಮಾತನಾಡಿ ಆಕೆಯ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ತಮ್ಮ ಅಳಲು ತೋಡಿಕೊಂಡ ಅವರು, ನಾನು ಆಶಾ ಬಡಾವಣೆಯ ನಿವಾಸಿಯಾಗಿದ್ದು, ನಮ್ಮ ಮನೆಯ ಎದುರೇ ಕಳೆದ ಒಂದು ವರ್ಷಗಳ ಹಿಂದೆ ಬಾಡಿಗೆಗೆ ಬಂದಿದ್ದು, ದಲಿತ ವರ್ಗದವರಿಗೆ ಸೇರಿದವರಾಗಿದ್ದಾರೆ. ಇತರೆ ಜನಾಂಗದಿಂದ ಹಣ ವಸೂಲಿ ಮಾಡುವುದು, ಕೊಡದೆ ಇದ್ದರೇ ಅವರ ಮೇಲೆ ದೂರು ನೀಡುವುದಾಗಿದೆ. ಜೊತೆಗೆ ಜಗಳ ಮಾಡಿ ದಬ್ಬಾಳಿಕೆ ಮಾಡಿದ್ದಾರೆಂದು ಜಾತಿ ಧ್ವೇಷವನಿಟ್ಟುಕೊಂಡು ಅಲ್ಲಿಯ ಬಡಾವಣೆಯವರಿಗೆ ಕಿರುಕುಳ ಕೊಡಲಾಗುತ್ತಿದೆ ಎಂದು ದೂರಿದರು.
ಚಂದ್ರಕಲಾ ಎಂಬುವರು ದಲಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಆದರೂ ನಾವು ಯಾವುದೇ ಜಾತಿಭೇದ ಮಾಡುವುದಿಲ್ಲ. ಚಂದ್ರಕಲಾ ಅವರ ಮನೆ ನಮ್ಮ ಮನೆಯ ಎದುರೆ ಇದ್ದು ನಾವು ಒಕ್ಕಲಿಗ ಸಮುದಾಯಕ್ಕೆ ಸೇರಿದ್ದು, ವಿನಾಕಾರಣ ನಮ್ಮ ವಿರುದ್ದ ಇಲ್ಲಸಲ್ಲದ ಆರೋಪ ಮಾಡಿ ಪ್ರತಿದಿನ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಚಂದ್ರಕಲಾ ಅವರು ಪ್ರತಿದಿನ ಮಾನಸಿಕ ಹಾಗೂ ದೈಹಿಕವಾಗಿ ತೊಂದರೆ ನೀಡುತ್ತಿದ್ದು ಹಲವಾರು ಬಾರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ಬೆಳಗ್ಗೆಯಿಂದ ಸಂಜೆಯವರೆಗೂ ಬಾಯಿಗೆ ಬಂದಂತೆ ಬೈಯುವುದು ಮನೆಯ ಮೇಲೆ ಮಣ್ಣು ಎಸೆಯುವುದು ಸಾಮಾನ್ಯವಾಗಿದೆ ಎಂದರು.
ನಾವು ಯಾವುದೇ ತಂಟೆತಕರಾರು ಮಾಡದಿದ್ದರೂ ಇಲ್ಲಸಲ್ಲದ ನೆಪವೊಡ್ಡಿ ಜಗಳಕ್ಕೆ ಬರುತ್ತಿದ್ದಾರೆ. ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ನ್ಯಾಯ ಒದಗಿಸಬೇಕು ಎಂದು ಗಂಗಮ್ಮ ಇದೆ ವೇಳೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ದಲಿತ ಮುಖಂಡರಾದ ಸಿದ್ದಪ್ಪ, ಮೋಹನ್, ಚಂದ್ರು, ಚಂದ್ರಶೇಖರ್, ಧರ್ಮ ಇತರರು ಉಪಸ್ಥಿತರಿದ್ದರು.
Hassan
ದಲಿತ ಅಧಿಕಾರಿ ವಿರುದ್ಧ ದೌರ್ಜನ್ಯ ನಿಲ್ಲಿಸದಿದ್ದರೆ ವ್ಯವಸ್ಥೆ ವಿರುದ್ಧ ಹೋರಾಟ: ಎಂ.ಆರ್.ವೆಂಕಟೇಶ್

ಹಾಸನ: ಶೋಷಿತ ಸಮಾಜದ ಸರ್ಕಾರಿ ಅಧಿಕಾರಿ ರಾಮಚಂದ್ರ ಅವರ ಮೇಲೆ ದೌರ್ಜನ್ಯ ಮತ್ತು ಮಾನಸಿಕ ಕಿರುಕುಳ ನೀಡುತ್ತಿರುವ ಸೂಕ್ಷ್ಮವಾದ ವಿಚಾರವಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಹಿಂಸೆ ಕೊಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಫಾಯಿ ಕರ್ಮಚಾರಿ ಆಯೋಗದ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಎಂ.ಆರ್. ವೆಂಕಟೇಶ್ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಬೇಲೂರು ಶಾಸಕರ ಹಿಂಬಾಲಕರಾದ ವಿನಯ್ ಎಂಬುವರಿಂದ ಹಿಂಸೆ ಮಾಡಲಾಗುತ್ತಿದೆ ಎಂಬುದು ಆಡಿಯೋದಲ್ಲಿ ಹೇಳಿದೆ. ರಾಮಚಂದ್ರ ಅವರು ದಲಿತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಅವರಿಗೆ ಮಾನಸಿಕವಾಗಿ ಹಿಂಸೆ ನೀಡಲಾಗುತ್ತಿದೆ. ಲ್ಲೆಯಲ್ಲಿ ದಲಿತ ಅಧಿಕಾರಿಗಳಿಗೆ ಕಿರುಕುಳ ಕೊಡುವುದು ಹೊಸದೇನಲ್ಲ. ಬೇಲೂರಿನ ಶಾಸಕರು ಹಾಗೂ ಕೆಲ ಹಿರಿಯ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದು, ರಾಮಚಂದ್ರ ಅವರೆ ವರ್ಗಾವಣೆ ಮಾಡಿಕೊಂಡು ಹೋಗಲಿ ಎನ್ನುವ ಉದ್ದೇಶದಿಂದ ಇದರಲ್ಲಿ ದೊಡ್ಡ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.
ಈ ಜಿಲ್ಲೆಯಲ್ಲಿ ದಲಿತ ಯಾವ ಅಧಿಕಾರಿಗಳಿಗೂ ರಕ್ಷಣೆ ಇಲ್ಲ. ಶಾಸಕರು ಮತ್ತು ಮಂತ್ರಿಗಳು ಯಾರು ಬೇಕಾದರೂ ಆಗಬಹುದು. ಆದರೇ ಕಷ್ಟುಪಟ್ಟು ಓದಿದವರು ಮಾತ್ರ ಅಧಿಕಾರಿಗಳು ಆಗಲು ಸಾಧ್ಯ. ಅಧಿಕಾರಿಗಳಿಗೆ ನಾವುಗಳು ಗೌರವ ಕೊಡಬೇಕು. ಯಾವ ಅಧಿಕಾರಿಗಳು ಭ್ರಷ್ಠಾಚಾರ ಮಾಡುತ್ತಾರೆ ಅವರನ್ನ ಶಿಕ್ಷಸಲಿ. ನ್ಮಮ ಸಮುದಾಯದ ಅಧಿಕಾರಿಗಳ ಪರ ನಾವು ನಿಲ್ಲಲೇಬೇಕು. ಇಂತಹ ಪ್ರಕರಣಗಳು ಮತ್ತೆ ನಡೆಯಬಾರದು ಎಂದರು.
ಪೊಲೀಸ್ ಇಲಾಖೆ ವ್ಯವಸ್ಥಿತವಾದಂತಹ ಕೆಲಸ ಮಾಡುತ್ತಿದೆ ಎಂದು ನನಗೆ ಅನಿಸುತ್ತಿಲ್ಲ. ಸಿಸಿ ಕ್ಯಾಮಾರ, ಸಾಕ್ಷಿ ಆಧರಿಸಿ ಆರೋಪಿಗಳನ್ನು ಬಂಧಿಸಬೇಕು. ಉದ್ದೇಶ ಪೂರ್ವಕವಾಗಿ ದಲಿತ ಅಧಿಕಾರಿಗಳಿಗೆ ತೊಂದರೆ ಕೊಟ್ಟಂತಹ ವೇಳೆ ಜಿಲ್ಲಾಡಳಿತ ಆಗಲಿ ಸರಕಾರಿ ಆಗಲಿ ತನಿಖೆ ಮಾಡಿ ಕ್ರಮ ಜರುಗಿಸಲು ಮುಂದಾಗಬೇಕು. ಇದರಲ್ಲಿ ಯಾವ ದುರುದ್ದೇಶವಿಲ್ಲ. ದಲಿತ ಅಧಿಕಾರಿ ಎಂದು ಈ ರೀತಿ ಮಾಡಬಾರದು ಎಂದು ಸಲಹೆ ನೀಡಿದರು.
ಮುಂದಿನ ದಿನಗಳಲ್ಲಿ ನಮ್ಮ ಸಂಘಟನೆ ಜೊತೆ ಚರ್ಚೆ ಮಾಡಿ ಶಾಸಕರ ಮತ್ತು ಈ ವ್ಯವಸ್ಥೆ ವಿರುದ್ಧ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದರು. ಜಿಲ್ಲೆಯಲ್ಲಿ ಯಾವುದೇ ಸಮುದಾಯದ ಸರ್ಕಾರಿ ಅಧಿಕಾರಿಗಳಿಗೆ ಭದ್ರತೆ ಇಲ್ಲದಾಗಿದೆ. ಬೇಲೂರಿನ ಶಾಸಕ ಸುರೇಶ್ ಅವರು ತಮ್ಮ ನಡವಳಿಕೆಯನ್ನು ತಿದ್ದಿಕೊಳ್ಳಬೇಕು ಎಂದರು.
Hassan
ಸಮಾಜದಲ್ಲಿ ಹೆಣ್ಣಿನ ಸ್ಥಾನಮಾನ ದೊಡ್ಡದು: ಫಾದರ್ ಆಲ್ಡಿನ್ ಡಿಸೋಜಾ

ವರದಿ: ಸತೀಶ್ ಚಿಕ್ಕಕಣಗಾಲು
ಆಲೂರು : ಸಮಾಜದಲ್ಲಿ ಹೆಣ್ಣಿನ ಸ್ಥಾನಮಾನ ದೊಡ್ಡದು. ಎಲ್ಲಾ ಸ್ತರಗಳಲ್ಲೂ ಕೆಲಸ ಮಾಡುತ್ತಿರುವ ಹೆಣ್ಣು ಅಬಲೆಯಾಗಿ ಉಳಿದಿಲ್ಲ ಎಂದು ಸಿಎಂಎಸ್ಎಸ್ಎಸ್ ನ ನಿಯೋಜಿತ ನಿರ್ದೇಶಕ ಫಾದರ್ ಆಲ್ಡಿನ್ ಡಿಸೋಜಾ ಹೇಳಿದರು.
ತಾಲೂಕಿನ ಮಗ್ಗೆ ಗ್ರಾಮದಲ್ಲಿ ಗ್ರಾಮ ಪಂಚಾಯಿತಿಗೆ ಸೇರಿದ ಸಮುದಾಯ ಭವನದಲ್ಲಿ ಸಿ.ಎಂ.ಎಸ್.ಎಸ್.ಎಸ್ ಸಂಸ್ಥೆ, ಅಮರ ಜ್ಯೋತಿ ಮಹಾಸಂಘ ಮತ್ತು ಸ್ನೇಹಾಜ್ಯೋತಿ ಮಹಾಸಂಘಗಳ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ತಾಯಿ, ಪತ್ನಿ, ಸಹೋದರಿ ಸೇರಿದಂತೆ ವಿವಿಧ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸುವ ಮಹಿಳೆಗೆ ನಮ್ಮ ವಿಶೇಷ ಸ್ಥಾನವಿದೆ. ಆಕೆಯ ತ್ಯಾಗ ಮತ್ತು ಹೋರಾಟದ ಮನೋಭಾವ ಎಲ್ಲರಿಗೂ ಮಾದರಿಯಾದುದು ಎಂದು ಹೇಳಿದರು.
ಫಾದರ್ ರಾಜೇಂದ್ರ ಮಾತನಾಡಿ, ಹೆಣ್ಣು ಸಮಾಜದ ಕಣ್ಣಾಗುವ ಮೂಲಕ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಿದ್ದಾರೆ. ಎಲ್ಲಾ ರಂಗಗಳಲ್ಲೂ ಮಹಿಳೆಯರಿಂದು ಭಾಗವಹಿಸುತ್ತಿರುವುದನ್ನು ನಾವು ಕಾಣಬಹುದಾಗಿದೆ ಎಂದರು.
ಸಿಎಂಎಸ್ಎಸ್ಎಸ್ ನ ಪಿ.ಆರ್. ಒ ನಿರೀಕ್ಷ ಮಾತನಾಡಿ, ಮಹಿಳೆಯರು ಸಾಮಾಜಿಕ ಆರ್ಥಿಕ, ರಾಜಕೀಯ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಶಕ್ತರಾಗಬೇಕೆಂಬ ಉದ್ದೇಶದಿಂದ ಸಿ.ಎಂ.ಎಸ್.ಎಸ್.ಎಸ್ ಸಂಸ್ಥೆಯು ಹಮ್ಮಿಕೊಂಡಿರುವ ಕಾರ್ಯಕ್ರಮಗಳಾದ ಮಹಿಳಾ ಸಬಲೀಕರಣ, ವಿಕಲ ಚೇತರನ್ನು ಮುಖ್ಯವಾಹಿನಿಗೆ ತರುವುದು, ಆರೋಗ್ಯ ಮತ್ತು ಶಿಕ್ಷಣ, ಕೌಶಲ್ಯ ಅಭಿವೃದ್ದಿ ಮತ್ತು ಪರಿಸರ ಸಂರಕ್ಷಣೆಗಳಿಗೆ ಸಂಬಂಧಿಸದಂತೆ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಪ್ರತಿಯೊಬ್ಬ ಮಹಿಳೆಯು ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಗ್ರಾಮದ ಲಕ್ಷ್ಮಿ, ಆಶ್ವಿನಿ, ರೂಪ, ಪಾಲಾಕ್ಷ, ನಸ್ತೀನ್ ಅಕ್ತರ್, ಸಿಸ್ಟರ್. ಮೇರಿ ಜೆರಾಲ್ಡಿನ್, ಪರಮೇಶ್, ಜೀವನ್ ಜೋಯಲ್, ಜಯಮ್ಮ ಸೇರಿದಂತೆ ಇನ್ನಿತರರು ಹಾಜರಿದ್ದರು.
-
Mandya6 hours ago
ಜನಮಿತ್ರ ಫಲಶೃತಿ: ಹೆಬ್ಬಾಡಿಹುಂಡಿ ಗ್ರಾಮದ ಸ್ಮಶಾನ ಜಾಗದ ರಸ್ತೆ ಬೇಲಿಗೆ ಸಿಗ್ತು ಉತ್ತರ
-
Hassan14 hours ago
ಹಾಸನದಲ್ಲಿ ಭಾರೀ ಮಳೆ: ಅಪಾರ ಪ್ರಮಾಣದ ಬೆಳೆ ಹಾನಿ
-
Mandya10 hours ago
ಜೆಎಸ್ಎಸ್ ಕಾಲೇಜಿನಲ್ಲಿ ಪತ್ರಿಕಾ ಬರಹ ಕುರಿತು ಕಾರ್ಯಾಗಾರ
-
Kodagu11 hours ago
ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ
-
Mandya8 hours ago
ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕರೆ ಕೂಡಲೇ ತಿಳಿಸಿ
-
Hassan13 hours ago
ಕ್ಷಯ ಮುಕ್ತ ಭಾರತವನ್ನಾಗಿ ಮಾಡಲು ಎಲ್ಲಾರೂ ಕೈಜೋಡಿಸಿ: ಡಿಸಿ ಸಿ. ಸತ್ಯಭಾಮ
-
Kodagu9 hours ago
ನಿವೃತ್ತ ಶಿಕ್ಷಕಿಯಿಂದ ಕಕ್ಕಬ್ಬೆ ಯುವಕಪಾಡಿ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಚಾರಣ ಭಾಗ್ಯ
-
Kodagu7 hours ago
ಮಡಿಕೇರಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ಲೈಬಸ್ ಸಂಚಾರ