Hassan
ಜ.೫ ರಿಂದ ಮೂರು ದಿನಗಳ ಕಾಲ ಬಿಲ್ಡ್ ಟೆಕ್-೨೦೨೪ ಪ್ರದರ್ಶನ
ಹಾಸನ: ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಉತ್ಪಾದಕರಿಂದ ನಗರದಲ್ಲಿ ಅತೀ ದೊಡ್ಡ ಬಿಲ್ಡ್ ಟೆಕ್-೨೦೨೪ “ಪ್ರದರ್ಶನವನ್ನು ಇದೆ ಜನವರಿ ೫ ರಿಂದ ೭ರ ವರೆಗೂ ನಗರದ ಬಿ.ಎಂ. ರಸ್ತೆ, ಜ್ಞಾನಾಕ್ಷಿ ಕನ್ವೆನ್ನನ್ ಹಾಲ್ ನಲ್ಲಿ ಏರ್ಪಡಿಸಲಾಗಿದೆ ಎಂದು ಹಾಸನ್ ಜಿಲ್ಲಾ ಕನ್ಸಲ್ಟಿಂಗ್ ಸಿವಿಲ್ ಇಂಜೀನಿಯರ್ಸ್ ಅಂಡ್ ಆರ್ಕಿಟೆಕ್ಟ್ ಅಸೋಸಿಯೇಷನ್ ಅಧ್ಯಕ್ಷ ಹೆಚ್. ಮುರುಳಿಧರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಹಾಸನ್ ಜಿಲ್ಲಾ ಕನ್ನರ್ಟಿ?ಗ್ ಸಿವಿಲ್ ಇಂಜಿನಿಯರ್ಸ್, ಆರ್ಕಿಟೆಕ್ಟ್ ಅಸೋಸಿಯೇಷನ್ ಮತ್ತು ಯು ಎಸ್ ಕಮ್ಯೂನಿಕೇಶನ್ ವತಿಯಿಂದ ಬಿಲ್ ಟೆಕ್-೨೦೨೪, ಎಂಬ ಹೆಸರಿನ ಕಟ್ಟಡ ಸಾಮಗ್ರಿಗಳ ವಸ್ತು ಪ್ರದರ್ಶನವನ್ನು ದಿನಾಂಕ ೫, ೬, ಮತ್ತು ೭ ಜನವರಿ ೨೦೨೪ ಮೂರು ದಿನಗಳ ಕಾಲ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಉತ್ಪಾದಕರಿಂದ ಕಟ್ಟಡ ಸಾಮಗ್ರಿಗಳು ಇಂಟೀರಿಯರ್ಸ್ ಎಕ್ಟಿರಿಯರ್ಸ್ ಉತ್ಪಾದನೆಗಳು ನೇರವಾಗಿ ಗ್ರಾಹಕರಿಗೆ ತಲುಪುವಂತೆ ಒಂದೇ ಸೂರಿನಡಿಯಲ್ಲಿ ಬರುವಂತೆ ವ್ಯವಸ್ಥೆ ಮಾಡಲಾಗಿದೆ. ವಿವಿಧ ಕಂಪನಿಗಳ ಡೋರ್ಸ್, ವಿಂಡೋಸ್ ಬಾತೂಮ್ ಫಿಟ್ಟಿಂಗ್ಸ್, ಗ್ಲಾಸ್ ಆಂಡ್ ಗ್ಲಾಸ್ ಫಿಟ್ಟಿಂಗ್ ಟೈಲ್ಸ್ ಸೆನೆಟರಿ ಅಂಡ್ ಪ್ಲಂಬಿಂಗ್, ಸ್ವಿಚ್ಚಿಸ್ ಅಂಡ್ ಎಲೆಕ್ನಿಕಲ್ ಫಿಟ್ಟಿಂಗ್ಸ್, ಕನ್ನಕ್ಷನ್ ಟೆಕ್ನಾಲಜೀಸ್, ಸೋಲಾರ್ ಪ್ರಾಡಕ್ಟ್, ಫ್ಲೋರಿಂಗ್ ಮತ್ತು ರೂಫಿಂಗ್ಗೆ ಸಂಬಂಧಿಸಿದ ಉತ್ಪನ್ನಗಳು, ಪೇಂಟ್ಸ್ ಮತ್ತು ವಾಟರ್ ಪೂಫ್ ಕೆಮಿಕಲ್ಸ್, ಸ್ಟೀಲ್ ಸಿಮೆಂಟ್ ಪೈವುಡ್, ಸೇಫ್ಟಿ ಮತ್ತು ಮಶಿನರಿ ಎಕ್ಸಿಪೈಂಟ್, ಎಲಿವೇಟರ್ಸ್ ಮುಂತಾದ ಕಂಪನಿಗಳು ಅಪಾರವಾದ ಮಾಹಿತಿ ಕಣಜವನ್ನು ಹೊತ್ತುಕೊಂಡು ಈ ಪ್ರದರ್ಶನದಲ್ಲಿ ಭಾಗವಹಿಸುತ್ತಿವೆ. ಹೋಂ ಲೋನಗಳ ಬಗ್ಗೆ ನಿಖರವಾದ ಮಾಹಿತಿ ನೀಡಲು ಪ್ರತಿಷ್ಠಿತ ಬ್ಯಾಂಕ್ಗಳು ಕೂಡ ಇಲ್ಲಿ ಪಾಲ್ಗೊಳ್ಳುತ್ತಿವೆ ಎಂದರು.

ನಗರದ ಇಂಜಿನಿಯರ್ಸ್ ಮತ್ತು ಆರ್ಕಿಟೆಕ್ಸ್ ಗಳು ಮನೆ ಕಟ್ಟಿಸಬೇಕೆನ್ನುವರು, ಈಗಾಗಲೇ ಕಟ್ಟಿಸಲಿಕ್ಕೆ ಪ್ರಾರಂಭಿಸಿದವರು ಮುಕ್ತಾಯದ ಹಂತದಲ್ಲಿರುವವರು ಇವತ್ತು ಪ್ರದರ್ಶಕ್ಕೆ ಭೇಟಿ ನೀಡಿ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಸಾರ್ವಜನಿಕರಿಗೆ ಉಚಿತವಾಗಿ ಪ್ರವೇಶ ಇರುತ್ತದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದರ ಜೊತೆ ಸದೃಢ ಸುಂದರ ಮನೆ ಕಟ್ಟುವ ಕನಸನ್ನು ನನಸಾಗಿಸಿ ಕೊಳ್ಳಬಹುದು. ಜನವರಿ ೫ ರಂದು ಮಧ್ಯಾಹ್ನ ೧೨ ಗಂಟೆಗೆ ಶಾಸಕ ಹೆಚ್.ಪಿ. ಸ್ವರೂಪ ಪ್ರಕಾಶ್ ಇವರು ಉದ್ಘಾಟನೆ ಮಾಡಲಿದ್ದಾರೆ.
ಈ ಪ್ರದರ್ಶನವು ಸಾರ್ವಜನಿಕರಿಗೆ ಉಚಿತ ಪ್ರವೇಶ ಒಳಗೊಂಡಿದ್ದು, ಕೇವಲ ೩ ದಿನ ಮಾತ್ರ ಆಗಿರುತ್ತದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಹೆಚ್.ಆರ್. ದೀಪಕ್, ಜಂಟಿ ಕಾರ್ಯದರ್ಶಿ ಆರ್. ಬಾಬು, ಖಜಾಂಚಿ ಹೆಚ್.ಎಸ್. ಯೋಗನಾಥ್, ಬಿ.ಆರ್. ಲೋಕೇಶ್ ಇತರರು ಉಪಸ್ಥಿತರಿದ್ದರು.
Hassan
ತಾತನ ಜೊತೆ ಮೊಮ್ಮಕ್ಕಳು ಬೈಕ್ನಲ್ಲಿ ಕುಳಿತಿದ್ದ ವೇಳೆ ಗೂಡ್ಸ್ ವಾಹನ ಡಿಕ್ಕಿ : ಓರ್ವ ಬಾಲಕ ಸ್ಥಳದಲ್ಲೇ ಸಾವು
ಹಾಸನ : ಕಾನ್ವೆಂಟ್ ಮುಗಿಸಿಕೊಂಡು ತಾತನ ಜೊತೆ ಮೊಮ್ಮಕ್ಕಳು ಬೈಕ್ನಲ್ಲಿ ಕುಳಿತಿದ್ದ ವೇಳೆ ಗೂಡ್ಸ್ ವಾಹನ ಡಿಕ್ಕಿ
ಓರ್ವ ಬಾಲಕ ಸ್ಥಳದಲ್ಲೇ ಸಾವು, ಮತ್ತೋರ್ವ ಬಾಲಕನಿಗೆ ಗಂಭೀರ ಗಾಯ
ದೀಕ್ಷಿತ್ಗೌಡ (4) ಮೃತ ಬಾಲಕ
ಸಾರ್ಥಕ್ (4) ಗಂಭೀರವಾಗಿ ಗಾಯಗೊಂಡಿರುವ ಬಾಲಕ

ಹಾಸನ ಜಿಲ್ಲೆ, ಚನ್ನರಾಯಪಟ್ಟಣದ ಮಂಡಿಕೊಪ್ಪಲು ಗೇಟ್ ಬಳಿ ನಿನ್ನೆ ಸಂಜೆ ಘಟನೆ
ಮಂಡಿಕೊಪ್ಪಲು ಗೇಟ್ನಲ್ಲಿರುವ ಗಾರ್ಡವಿನ್ ಕಾನ್ವೆಂಟ್ನಲ್ಲಿ ಎಲ್ಕೆಜಿ ಓದುತ್ತಿರುವ ದೀಕ್ಷಿತ್ಗೌಡ ಹಾಗೂ ಸಾರ್ಥಕ್
ಕಾನ್ವೆಂಟ್ ಮುಗಿದ ಮೇಲೆ ಮೊಮ್ಮಕ್ಕಳನ್ನು ಕರೆದುಕೊಂಡು ಬರಲು ಬೈಕ್ನಲ್ಲಿ ಕೂರಿಸಿಕೊಂಡಿದ್ದ ತಾತ ಚೋಳರಾಜು
ಎರಡು ಕಡೆ ರಸ್ತೆಯಲ್ಲಿ ವಾಹನಗಳು ಬರುತ್ತಿವೆಯಾ ಎಂದು ನೋಡುತ್ತಿದ್ದ ಚೋಳರಾಜು
KA-02-HM-9313 ನಂಬರ್ನ ಬೈಕ್ನಲ್ಲಿ ಮೊಮ್ಮಕ್ಕಳೊಂದಿಗೆ ಕುಳಿತಿದ್ದ ಚೋಳರಾಜು

ಈ ವೇಳೆ ವೇಗವಾಗಿ ಬಂದು ಬೈಕ್ಗೆ ಡಿಕ್ಕಿ ಹೊಡೆದ KA-54-8690 ನಂಬರ್ ಗೂಡ್ಸ್ ವಾಹನ
ಸ್ಥಳದಲ್ಲೇ ಮೃತಪಟ್ಟ ದೀಕ್ಷಿತ್ಗೌಡ
ಗಂಭೀರವಾಗಿ ಗಾಯಗೊಂಡಿರುವ ಸಾರ್ಥಕ್
ಸಾರ್ಥಕ್ಗೆ ಚನ್ನರಾಯಪಟ್ಟಣದ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ

ಚೋಳರಾಜುಗೂ ಕೈ ಮುರಿತ, ಸಣ್ಣ-ಪುಟ್ಟ ಗಾಯ
ನವೀನ್ ಹಾಗೂ ಬಾಬು ಸಹೋದರರು
ನವೀನ್ ಪುತ್ರ ದೀಕ್ಷಿತ್ಗೌಡ, ಬಾಬು ಪುತ್ರ ಸಾರ್ಥಕ್
ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ
ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಘಟನೆ
Hassan
ಅಪ್ರಾಪ್ತ ಯುವಕನ ವಾಹನ ಚಾಲನೆ ಪೋಷಕರಿಗೆ ದಂಡ ವಿಧಿಸಿದ ನ್ಯಾಯ ಧೀಶೆ ಎಂ ಎಸ್ ಶಶಿಕಲಾ
ಬೇಲೂರು: ದಿನಾಂಕ 14-12 -2025 ರಂದು ಮದ್ಯಾಹ್ನ 1 ಗಂಟೆ ಸಮಯದಲ್ಲಿ ಬೇಲೂರು ಪಿಐ ರೇವಣ್ಣನವರು ಗಸ್ತಿನಲ್ಲಿದ್ದ ಸಂದರ್ಭದಲ್ಲಿ ಮಾದಿಹಳ್ಳಿ ಹೋಬಳಿ ಇ ಹೊಸಳ್ಳಿ ಗ್ರಾಮದ ಯೋಗಿನ್ ಬಿನ್ ಜಯಣ್ಣ 15 ವರ್ಷ ಅಪ್ರಾಪ್ತ ಯುವಕ ತನ್ನ ತಂದೆಗೆ ಸೇರಿದ ವಾಹನ ಕೆ ಎ 46 ಎಂ 2081 ನಂಬರಿನ ಮಾರುತಿ ಆಲ್ಟೋ ಕಾರ್ ಚಲಾಯಿಸಿಕೊಂಡು ಬರುತ್ತಿದ್ದಾಗ ಗಸ್ತ್ ನಲ್ಲಿದ್ದ ಪಿಐ ರೇವಣ್ಣನವರು ಪರಿಶೀಲಿಸಿ ಅಪ್ರಾಪ್ತ ಬಾಲಕನಿಗೆ ವಾಹನ ಕೊಟ್ಟಿರುವುದು ತಪ್ಪು ಎಂದು ತಿಳಿದಿದ್ದರು ಕೂಡ ಆತನಿಗೆ ವಾಹನ ಚಲಾಯಿಸಲು ನೀಡಿದ ಪೋಷಕರಾದ ಜಯಣ್ಣ ಬಿನ್ ಜೋಗಯ್ಯ 41 ವರ್ಷ ಇವರಿಗೆ ಸಿಸಿ 564/2025 ನೊಟಿಸ್ ನೀಡಿ 25 ಸಾವಿರ ದಂಡವನ್ನು ಬೇಲೂರಿನ ಜೆಎಂಎಫ್ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಎಂ ಎಸ್ ಶಶಿಕಲಾ ದಂಡ ವಿಧಿಸಿದ್ದಾರೆ.

Hassan
ಅಪ್ರಾಪ್ತ ಯುವಕನ ವಾಹನ ಚಾಲನೆ ಪೋಷಕರಿಗೆ ದಂಡ ವಿಧಿಸಿದ ನ್ಯಾಯಧೀಶೆ ಎಂ ಎಸ್ ಶಶಿಕಲಾ.
ಬೇಲೂರು : ದಿನಾಂಕ ೧೪-೧೨ -೨೦೨೫ ರಂದು ಮದ್ಯಾಹ್ನ ೧ ಗಂಟೆ ಸಮಯದಲ್ಲಿ ಬೇಲೂರು ಪಿಐ ರೇವಣ್ಣನವರು ಗಸ್ತಿನಲ್ಲಿದ್ದ ಸಂದರ್ಭದಲ್ಲಿ ಮಾದಿಹಳ್ಳಿ ಹೋಬಳಿ ಇ ಹೊಸಳ್ಳಿ ಗ್ರಾಮದ ಯೋಗಿನ್ ಬಿನ್ ಜಯಣ್ಣ ೧೫ ವರ್ಷ ಅಪ್ರಾಪ್ತ ಯುವಕ ತನ್ನ ತಂದೆಗೆ ಸೇರಿದ ವಾಹನ ಕೆ ಎ ೪೬ ಎಂ ೨೦೮೧ ನಂಬರಿನ ಮಾರುತಿ ಆಲ್ಟೋ ಕಾರ್ ಚಲಾಯಿಸಿಕೊಂಡು ಬರುತ್ತಿದ್ದಾಗ ಗಸ್ತ್ ನಲ್ಲಿದ್ದ ಪಿಐ ರೇವಣ್ಣನವರು ಪರಿಶೀಲಿಸಿ ಅಪ್ರಾಪ್ತ ಬಾಲಕನಿಗೆ ವಾಹನ ಕೊಟ್ಟಿರುವುದು ತಪ್ಪು ಎಂದು ತಿಳಿದಿದ್ದರು

ಕೂಡ ಆತನಿಗೆ ವಾಹನ ಚಲಾಯಿಸಲು ನೀಡಿದ ಪೋಷಕರಾದ ಜಯಣ್ಣ ಬಿನ್ ಜೋಗಯ್ಯ ೪೧ ವರ್ಷ ಇವರಿಗೆ ಸಿಸಿ ೫೬೪/೨೦೨೫ ನೊಟಿಸ್ ನೀಡಿ ೨೫ ಸಾವಿರ ದಂಡವನ್ನು ಬೇಲೂರಿನ ಜೆಎಂಎಫ್ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಎಂ ಎಸ್ ಶಶಿಕಲಾ ದಂಡ ವಿಧಿಸಿದ್ದಾರೆ.
-
Hassan10 hours agoರೌಡಿಶೀಟರ್ ಜೆಸಿಬಿ ಮಂಜನ ಮೇಲೆ ಮಾರಕಾಸ್ತ್ರಗಳಿಂದ ಅಟ್ಯಾಕ್
-
Mysore7 hours agoಗೃಹಲಕ್ಷ್ಮೀ ಯೋಜನೆ ಬಗ್ಗೆ ಸದನಕ್ಕೆ ತಪ್ಪು ಮಾಹಿತಿ: ಲಕ್ಷ್ಮೀ ಹೆಬ್ಬಾಳ್ಕರ್ ವಜಾಗೆ ಹೇಮಾ ನಂದೀಶ್ ಆಗ್ರಹ
-
Hassan23 hours agoಪೊಲೀಸರ ಭರ್ಜರಿ ಕಾರ್ಯಚರಣೆ: ಮಟ್ಕಾ ಆಡುತ್ತಿದ್ದ 17 ಮಂದಿ ಬಂಧನ
-
Special9 hours ago994 ಪಿಡಿಒ ಹುದ್ದೆಗಳ ನೇಮಕಾತಿ 2026: ಪದವೀಧರರಿಗೆ ಭರ್ಜರಿ ಸರ್ಕಾರಿ ಉದ್ಯೋಗ ಅವಕಾಶ
-
Manglore23 hours agoಮಂಗಳೂರು: ಅಪಘಾತಪಡಿಸಿ ಮಹಿಳೆಯ ಸಾವಿಗೆ ಕಾರಣನಾದ ಬಸ್ ಚಾಲಕನಿಗೆ 6 ತಿಂಗಳು ಜೈಲು ಶಿಕ್ಷೆ
-
Hassan8 hours agoಕರ್ನಾಟಕ ಮಾದಾರ ಮಹಾಸಭಾ ಸದಸ್ಯತ್ವ ನೋಂದಣಿ ಹಾಗೂ ತಾಲ್ಲೂಕು ಘಟಕಗಳ ಆಯ್ಕೆ
-
Mysore4 hours agoಡಿ. 21 ರಂದು ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕಪಿಲಾ ಆರತಿ ಹಾಗೂ ಲಕ್ಷ ದೀಪೋತ್ಸವ ಕಾರ್ಯಕ್ರಮ
-
Kodagu5 hours agoಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯಿಂದ ಡಿ.21 ರಂದು ಮಡಿಕೇರಿಯಲ್ಲಿ ತಾಲೂಕು ಮಟ್ಟದ ಒಳಾಂಗಣ ಕ್ರೀಡೆ
