Connect with us

National - International

ಅರಗಿನ ಅರಮನೆಯ ಜಾಗ ಹಿಂದೂಗಳದ್ದು!!! ನ್ಯಾಯಾಲಯದ ಮಹತ್ವದ ತೀರ್ಪು

Published

on

ಹಿಂದೂಗಳಿಗೆ ತಮ್ಮ ಪವಿತ್ರ ಸ್ಥಳಗಳಾದ ಅಯೋಧ್ಯೆ ರಾಮಮಂದಿರ, ಕಾಶಿಯ ಜ್ಞಾನವಾಪಿ ಮಸೀದಿಯ ಪುರಾತನ ಶೃಂಗಾರ ಗೌರಿ ದೇಗುಲದ ಪ್ರಕರಣಗಳು ಇತ್ಯರ್ಥವಾಗಿ ಗೆಲವು ಸಿಗುತ್ತಿರುವುದರ ಜೊತೆಗೆ ಮಹಾಭಾರತದ ಪ್ರಕರಣದಲ್ಲಿ ಸಹ ಹಿಂದೂಗಳಿಗೆ ಜಯವಾಗಿದೆ .

ಬರ್ನಾವಾ: ಅಯೋಧ್ಯೆ ರಾಮಮಂದಿರ, ಕಾಶಿಯ ಜ್ಞಾನವಾಪಿ ಮಸೀದಿಯ ಪುರಾತನ ಶೃಂಗಾರ ಗೌರಿ ದೇಗುಲದ ಪ್ರಕರಣಗಳು ಇತ್ಯರ್ಥವಾಗಿ ಗೆಲವು ಸಿಗುತ್ತಿರುವುದರ ಜೊತೆಗೆ ಮಹಾಭಾರತದ ಪ್ರಕರಣದಲ್ಲಿ ಸಹ ಹಿಂದೂಗಳಿಗೆ ಜಯವಾಗಿದೆ. ದೇಶದ ಉತ್ತರಪ್ರದೇಶದ ಬರ್ನಾವಾ ದಲ್ಲಿರುವ ಬದ್ರುದ್ದೀನ್ ಗೋರಿ ಜಾಗವು ಮಹಾಭಾರತದ ಅರಗಿನ ಅರಮನೆಯ ಸ್ಥಳವಾಗಿದೆ ಎಂಬ ಅರ್ಜಿದಾರ ವಾದನವನ್ನು ಜಿಲ್ಲಾ ನ್ಯಾಯಾಲಯ ಎತ್ತಿ ಹಿಡಿದಿದೆ. ಈ ಮೂಲಕ ಹಿಂದೂ ಮುಸ್ಲಿಂ 53 ವರ್ಷಗಳಿಂದ ನಡೆಯುತ್ತಿದ್ದ ಜಗಳಕ್ಕೆ ತಾತ್ಕಾಲಿಕವಾಗಿ ಬ್ರೇಕ್ ಬಿದ್ದಿದೆ.

ಏನಿದು ಪ್ರಕರಣವೆಂದರೆ, ಉತ್ತರ ಪ್ರದೇಶದ ಬರ್ನಾವಾದಲ್ಲಿ ಇರುವ ಬದ್ರುದ್ದೀನ್ ಗೋರಿ ಯ 36 ಎಕರೆ ಭೂಮಿ ಇದೆ. ಈ ವಿವಾದಿತ ಜಾಗದಲ್ಲಿ ಗುರುಕುಲ ಮಾಡಲು ಬೀಡಿ ಎಂದೂ ಹಿಂದೂಗಳು , ಇದು ಶೇಕ್ ಬದ್ರುದ್ದೀನ್ ಗೋರಿ ಎಂದು ಮುಸ್ಲಿಂ ಪರ ವಕೀಲರು ವಾದ ಮಾಡುತ್ತಾರೆ. ಈ ಅರ್ಜಿಯನ್ನು ತಿರಸ್ಕರಿಸಿ ಬ್ರಹ್ಮಚಾರಿ ಕೃಷ್ಣದತ್ತ, ಇದು ಮಹಾಭಾರತ ಕಾಲದ ಸ್ಥಳ. ದುರ್ಯೋಧನ ಪಾಂಡವರನ್ನು ಕೊಲ್ಲಲು ಕಟ್ಟಿದ ಅರಮನೆ ಎಂದು, ಸ್ಥಳ ಬಿಟ್ಟು ಕೊಡಿ ಎಂದು ವಾದ ಮಾಡಿದ್ದಾರೆ.

1952 ಸರಕಾರ ಪುರಾತತ್ತ್ವ ಇಲಾಖೆಯ ಸಂಶೋಧನೆಗೆ ತಿಳಿಸಿತು. 2018 ರಲ್ಲಿ ಶುರುಕು ಸಿಕ್ಕಿತ್ತು. ಬೆಂಕಿ ಬಿದ್ದಾಗ ಬಳಸಿದ ಸುರಂಗ, 4500 ವರ್ಷಗಳ ಹಳೆಯ ಮಣ್ಣಿನ ಪಾತ್ರೆಗಳು, ಮಾನವನ ಅಸ್ಥಿಪಂಜರದ ಕುರುಹುಗಳು ಸಂಶೋಧಕರಿಗೆ ಸಿಕ್ಕವು. ಈ ವರದಿಯ ಅನ್ವಯ ಕೋರ್ಟ್ ಈ ಜಾಗ ಹಿಂದೂಗಳಿಗೆ ಸೇರಿದ್ದು ಎಂದು ತೀರ್ಪು ನೀಡಿದೆ. ಆದರೆ ಅರ್ಜಿದಾರರಾದ ಕೃಷ್ಣದತ್ತ ಮಹಾರಾಜ್, ಮುಕೀಂ ಖಾನ್ ಇಬ್ಬರೂ ನಿಧನರಾಗಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

National - International

ಒಂದೇ ದಿನ ಜನ್ಮದಿನ ಆಚರಿಸಿಕೊಂಡ ಮಾಜಿ ಪ್ರಧಾನಿ ಎಚ್‌ಡಿಡಿ, ಜಗದೀಪ್‌ ಧನಕರ್‌

Published

on

ನವದೆಹಲಿ:  ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ಒಂದೇ ದಿನ ಜನ್ಮದಿನ ಆಚರಿಸಿಕೊಂಡು ಪರಸ್ಪರ ಶುಭಾಶಯ ಕೋರಿದ್ದಾರೆ.

ಉಪ ರಾಷ್ಟ್ರಪತಿ ಜಗದೀಪ ಧನಕರ್ ಮತ್ತು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರುಗಳಿಬ್ಬರ ಹುಟ್ಟುಹಬ್ಬದ ದಿನ ಮೇ 18. ನಿನ್ನೆಯ ದಿನ (ಸೋಮವಾರ) ಈ ಇಬ್ಬರೂ ನಾಯಕರು ತಮ್ಮ ಜನ್ಮದಿನವನ್ನು ಆಚರಿಸಿಕೊಂಡರು ಹಾಗೂ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡಿದ್ದರು.

ಮಂಗಳವಾರ ಬೆಳಗ್ಗೆ ನವದೆಹಲಿಯಲ್ಲಿ ಸಪ್ತರ್ ಜಂಗ್ ಲೇನ್ ರಸ್ತೆಯಲ್ಲಿರುವ ಮಾಜಿ ಪ್ರಧಾನಮಂತ್ರಿಗಳ ನಿವಾಸಕ್ಕೆ ತಮ್ಮ ಧರ್ಮಪತ್ನಿ ಶ್ರೀಮತಿ ಸುದೇಶ್ ಧನಕರ್ ಅವರೊಂದಿಗೆ ಭೇಟಿ ನೀಡಿದ ಉಪ ರಾಷ್ಟ್ರಪತಿಗಳು, ಮಾಜಿ ಪ್ರಧಾನಿಗಳಿಗೆ ಜನ್ಮದಿನದ ಶುಭಾಶಯ ಕೋರಿದರು.

ಇದೇ ವೇಳೆ ಮಾಜಿ ಪ್ರಧಾನಿಗಳು ಕೂಡ ಉಪ ರಾಷ್ಟ್ರಪತಿಗಳಿಗೆ ಜನ್ಮದಿನದ ಶುಭಾಶಯ ಕೋರಿದರು.

ಈ ಸಂದರ್ಭದಲ್ಲಿ ರಾಷ್ಟ್ರದ ಅನೇಕ ವಿಷಯಗಳ ಬಗ್ಗೆ ಚರ್ಚೆ ನಡೆಸಿದ ಉಭಯ ನಾಯಕರು, ಮುಖ್ಯವಾಗಿ ರೈತರ ಸಮಸ್ಯೆಗಳು, ಅವರಿಗಾಗಿ ನರೇಂದ್ರ ಮೋದಿ ಅವರ ಸರಕಾರ ರೂಪಿಸಿ ಜಾರಿಗೆ ತಂದಿರುವ ಕೃಷಿಪರ ಯೋಜನೆಗಳ ಬಗ್ಗೆ ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡರು.

ತಮ್ಮ ಹಾಗೂ ಮಾಜಿ ಪ್ರಧಾನಿಗಳ ನಡುವಿನ ಬಾಂಧವ್ಯವನ್ನು ಉಪ ರಾಷ್ಟ್ರಪತಿಗಳು ಸ್ಮರಿಸಿಕೊಂಡರು.  ರಾಜ್ಯಸಭೆಯಲ್ಲಿ ರೈತರು ಹಾಗೂ ರಾಷ್ಟ್ರ ಹಿತಾಸಕ್ತಿಯ ಅನೇಕ ವಿಷಯಗಳ ಬಗ್ಗೆ ಪ್ರಸ್ತಾಪಿಸಿ ಚರ್ಚೆ ನಡೆಸಲು ಅವಕಾಶ ಕಲ್ಪಿಸುತ್ತಿರುವ ಉಪ ರಾಷ್ಟ್ರಪತಿಗಳಿಗೆ ವಿಶೇಷವಾಗಿ ಮಾಜಿ ಪ್ರಧಾನಿಗಳು ಕೃತಜ್ಞತೆ ಸಲ್ಲಿಸಿದರು.

ತಮ್ಮ ನಿವಾಸಕ್ಕೆ ಆಗಮಿಸಿ ಜನ್ಮದಿನ ಶುಭ ಕೋರಿದ ಉಪ ರಾಷ್ಟ್ರಪತಿ ದಂಪತಿಗೆ ಮಾಜಿ ಪ್ರಧಾನಿಗಳು ಅಭಿವಂದನೆ ಅರ್ಪಿಸಿದರು.

ಈ ವೇಳೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಮಾತನಾಡಿ, ನನ್ನ ಜನ್ಮದಿನ ಮತ್ತು ಮಾನ್ಯ ಉಪ ರಾಷ್ಟ್ರಪತಿಗಳು ಜನ್ಮದಿನ ಮೇ 18. ನನ್ನ ಜನ್ಮದಿನಕ್ಕೆ ಅವರು ಮೊದಲೇ ದೂರವಾಣಿ ಕರೆ ಮಾಡಿ ಶುಭಾಶಯ ಹೇಳಿದ್ದರು ಹಾಗೂ ಎಕ್ಸ್ ಖಾತೆಯಲ್ಲಿ ಶುಭಾಶಯವನ್ನೂ ಕೋರಿದ್ದರು. ಮಂಗಳವಾರ ಬೆಳಗ್ಗೆ ಉಪ ರಾಷ್ಟ್ರಪತಿಗಳು ನವದೆಹಲಿಯಲ್ಲಿರುವ ನನ್ನ ನಿವಾಸಕ್ಕೆ ತಮ್ಮ ಧರ್ಮಪತ್ನಿಯವರ ಸಮೇತ ಆಗಮಿಸಿದ್ದು ನನಗೆ ಬಹಳ ಸಂತೋಷ ಉಂಟು ಮಾಡಿದೆ ಎಂದು ಹೇಳಿದರು.

Continue Reading

National - International

ಜಮ್ಮು-ಕಾಶ್ಮೀರ| ಪುಲ್ವಾಮಾದಲ್ಲಿ ಭದ್ರತಾ ಪಡೆ, ಉಗ್ರರ ಮಧ್ಯೆ ಗುಂಡಿನ ಚಕಮಕಿ

Published

on

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಭದ್ರತಾ ಪಡೆಗಳು ಹಾಗೂ ಭಯೋತ್ಪಾದಕರ ಮಧ್ಯೆ ಇಂದು ಬೆಳಿಗ್ಗೆ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸ್‌ ಮೂಲಗಳಿಂದ ತಿಳಿದು ಬಂದಿದೆ.

ಭದ್ರತಾ ಪಡೆಗಳು ಇಂದು(ಮೇ.15) ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪೋರ ಪ್ರದೇಶದ ನಾದರ್‌ ಪ್ರದೇಶದಲ್ಲಿ ಉಗ್ರರು ಅಡಗಿರುವ ಮಾಹಿತ ಪಡೆದ ಬಳಿಕ ಶೋಧ ಕಾರ್ಯಾಚರಣೆ ನಡೆಸಿದ್ದವು.

ಈ ಸಂದರ್ಭದಲ್ಲಿ ಉಗ್ರರು, ಭದ್ರತಾಪಡೆಗಳ ಮೇಲೆ ಪ್ರತಿ ದಾಳಿ ನಡೆಸಿದ್ದಾರೆ. ಹೀಗಾಗಿ ಕಾರ್ಯಾಚರಣೆ ಮುಂದುವರೆಯುತ್ತಿದೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.

ಇನ್ನೂ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ಮಾಡಿ ಮಾಹಿತಿ ಪಡೆಯಲಿದ್ದಾರೆ.

Continue Reading

National

‘ಉಗ್ರವಾದ – ಶಾಂತಿ ಮಾತುಕತೆ,’ ‘ರಕ್ತ – ನೀರು’ ಒಟ್ಟಿಗೇ ಸಾಗವು: ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ

Published

on

ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ನಂತರ ಇದೇ ಮೊದಲ ಬಾರಿಗೆ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ಆಪರೇಷನ್ ಸಿಂಧೂರ್ ಕೇವಲ ಒಂದು ಕಾರ್ಯಾಚರಣೆಯಲ್ಲ ಅದು ನಮ್ಮ ಕೋಟ್ಯಂತರ ಭಾರತೀಯರ ಭಾವನೆಗಳ ಪ್ರತೀಕ. ಇನ್ನು ನಾವು ಪಾಕಿಸ್ತಾನವನ್ನು ಹಾಗೂ ಭಯೋತ್ಪಾದನೆಯನ್ನು ಪ್ರತ್ಯೇಕವಾಗಿ ನೋಡುವುದಿಲ್ಲ. ಅವೆರಡೂ ನಮಗೆ ಒಂದೇ ಆಗಿರುತ್ತದೆ. ಹಾಗಾಗಿ, ಇನ್ನು ಮುಂದೆ ಉಗ್ರವಾದ – ಮಾತುಕತೆ, ಉಗ್ರವಾದ – ವ್ಯಾಪಾರ ಹಾಗೂ ರಕ್ತ ಮತ್ತು ನೀರು ಒಟ್ಟೊಟ್ಟಿಗೆ ಸಾಗುವುದಿಲ್ಲ. ಪಾಕಿಸ್ತಾನದ ಜೊತೆ ಮಾತುಕಥೆಯಾದರೆ ಅದು ಪಾಕ್ ಆಕ್ರಮಿತ ಕಾಶ್ಮೀರ ( POK) ಮತ್ತು ಭಯೋತ್ಪಾದನೆ ಬಗ್ಗೆ ಮಾತ್ರ ಎಂದು ಪ್ರಧಾನಿ ಮೋದಿ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

Continue Reading

Trending

error: Content is protected !!